ಪಾಂಡವರು ಮಹಾಭಾರತದ ಮಹಾಕಾವ್ಯದ ಪ್ರಮುಖ ಪಾತ್ರಗಳಾದ ಯುಧಿಷ್ಠಿರ, ಭೀಮ, ಅರ್ಜುನ, ನಕುಲ ಮತ್ತು ಸಹದೇವ ಎಂಬ ಐದು ಸಹೋದರರು, ಅವರನ್ನು ಕುರು ರಾಜ ಪಾಂಡುವಿನ ಪುತ್ರರೆಂದು ಪರಿಗಣಿಸಲಾಗುತ್ತಿತ್ತು, ಆದರೆ ಪಾಂಡುವಿನ ಮಕ್ಕಳನ್ನು ಹೊಂದಲು ಅಸಮರ್ಥತೆಯಿಂದಾಗಿ ಕುಂತಿ-ಮಾದ್ರಿಯರು ಬೇರೆ ಬೇರೆ ದೇವರುಗಳಿಂದ ಪಾಂಡವರನ್ನು ಪಡೆದರು. ಪಾಂಡವರು ದ್ರೌಪದಿ ಎಂಬ ಹೆಂಡತಿಯನ್ನು ಹಂಚಿಕೊಂಡರು. ಪಾಂಡವರು ತಮ್ಮ ಸೋದರಸಂಬಂಧಿಗಳಾದ ಕೌರವರ ವಿರುದ್ಧ (ದುರ್ಯೋಧನ ಮತ್ತು ಆತನ ಸಹೋದರರು) ಯುದ್ಧ ಮಾಡಿದರು. ಇದನ್ನು ಕುರುಕ್ಷೇತ್ರ ಯುದ್ಧ ಎಂದು ಕರೆಯಲಾಯಿತು. ಯುದ್ಧದಲ್ಲಿ ಪಾಂಡವರು ಗೆದ್ದರು ಮತ್ತು ಕೌರವರು ಸೋತರು.
ಪಾಂಡವರನ್ನು ಕುರು ರಾಜ ಪಾಂಡು ಮತ್ತು ಕುಂತಿಯವರ ಪುತ್ರರೆಂದು ಪರಿಗಣಿಸಲಾಗುತ್ತದೆ ಆದರೆ ಪಾಂಡುವಿನಿಂದ ಸ್ವಾಭಾವಿಕವಾಗಿ ಮಕ್ಕಳನ್ನು ಗರ್ಭಧರಿಸಲು ಅಸಮರ್ಥತೆಯಿಂದಾಗಿ ಬೇರೆ ಬೇರೆ ದೇವತೆಗಳಿಂದ ಜನಿಸಿದರು. ಪಾಂಡುವಿಗೆ ಋಷಿಯು ನೀಡಿದ ಶಾಪದಿಂದಾಗಿ ಮಕ್ಕಳನ್ನು ಪಡೆಯಲು ಸಾಧ್ಯವಾಗಲಿಲ್ಲ, ಆದ್ದರಿಂದ ಪಾಂಡವರು ಕುಂತಿಗೆ ನೀಡಿದ ಮಂತ್ರವನ್ನು ವರದಾನವಾಗಿ ಬಳಸಿ ಜನಿಸಿದರು. ಯುಧಿಷ್ಠಿರನು ಧರ್ಮ ಮತ್ತು ಸಾವಿನ ದೇವರು ಯಮ, ಗಾಳಿ ಮತ್ತು ಶಕ್ತಿಯ ದೇವರು ವಾಯುವಿನಿಂದ ಭೀಮ, ಬೆಳಕಿನ ದೇವರು ಮತ್ತು ದೇವತೆಗಳ ರಾಜನಾದ ಇಂದ್ರನಿಂದ ಅರ್ಜುನ, ಮತ್ತು ನಕುಲ ಮತ್ತು ಸಹದೇವರು ಅಶ್ವಿನೀ ದೇವತೆಗಳಿಂದ ಜನಿಸಿದರು. ಹೆಚ್ಚುವರಿಯಾಗಿ, ಕುಂತಿ ಕರ್ಣನನ್ನು ತನ್ನ ಮೊದಲ ಮಗುವಾಗಿ ಜನ್ಮ ನೀಡಿದಳು, ಅವನಿಗೆ ಸೂರ್ಯದೇವನು ತಂದೆಯಾದನು. ಕುಂತಿಯು ವರನ ಸಿಂಧುತ್ವವನ್ನು ಪರೀಕ್ಷಿಸುವಾಗ ಮದುವೆಗೆ ಮುಂಚೆ ಕರ್ಣನನ್ನು ಗರ್ಭಧರಿಸಿದಳು ಮತ್ತು ವಿವಾಹದ ಮೊದಲೇ ಹುಟ್ಟಿದ ಕಾರಣ ಕರ್ಣನನ್ನು ಕೈಬಿಟ್ಟಳು. ಇದು ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಮತ್ತಷ್ಟು ಸಂಘರ್ಷವನ್ನು ಸೃಷ್ಟಿಸಿತು, ಏಕೆಂದರೆ ಕರ್ಣನು ನಂತರ ಪಾಂಡವರ ವಿರುದ್ಧ ಕೌರವರ ಸೈನ್ಯವನ್ನು ಮುನ್ನಡೆಸಿದನು.

ಧೃತರಾಷ್ಟ್ರನ ಆಜ್ಞೆಯಿಂದಾಗಿ, ಪಾಂಡವರನ್ನು ಗಡಿಪಾರು ಮಾಡಲಾಯಿತು. ಅವರನ್ನು ಬರಡು ಭೂಮಿಗೆ ಓಡಿಸಲಾಯಿತು, ಆದರೆ ಅವರು ಅದನ್ನು ಭವ್ಯವಾದ ಇಂದ್ರಪ್ರಸ್ಥ ನಗರವಾಗಿ ಪರಿವರ್ತಿಸಿದರು. ಹಗೆತನದ ದುರ್ಯೋಧನನು ಯುಧಿಷ್ಠಿರನನ್ನು ದಾಳ ಆಟದಲ್ಲಿ ಜೂಜು ಆಡಲು ಆಹ್ವಾನಿಸಿದನು. ಇದು ಮಹಾಕಾವ್ಯದ ಮಹತ್ವದ ತಿರುವುಗಳಲ್ಲಿ ಒಂದಾಗಿದೆ. ಯುಧಿಷ್ಠಿರನು ತನ್ನ ಜೂಜಿನ ಚಟದಿಂದಾಗಿ ತನ್ನ ಸಂಪತ್ತು, ಸಾಮ್ರಾಜ್ಯ ಮತ್ತು ಆಸ್ತಿಗಳನ್ನು ಕಳೆದುಕೊಂಡನು, ಇದು ಶಕುನಿಯು ದಾಳದ ಆಟದಲ್ಲಿ ಮೋಸ ಮಾಡಿದ್ದು ಕಾರಣವಾಯಿತು. ಆದ್ದರಿಂದ, ಪಾಂಡವರನ್ನು ಹದಿಮೂರು ವರ್ಷಗಳ ಕಾಲ ವನವಾಸಕ್ಕೆ ಕಳುಹಿಸಲಾಯಿತು. ಹನ್ನೆರಡು ವರ್ಷಗಳ ವನವಾಸವನ್ನು ಕಳೆದ ನಂತರ, ಅವರು ಮತ್ಸ್ಯ ಸಾಮ್ರಾಜ್ಯದಲ್ಲಿ ಅಜ್ಞಾತ ವಾಸದಲ್ಲಿ ವಾಸಿಸುತ್ತಿದ್ದರು. ಅನಂತರ ಪಾಂಡವರು ಸೈನ್ಯವನ್ನು ಸಂಗ್ರಹಿಸಿ ಮತ್ತು ಕೌರವರನ್ನು ಎದುರಿಸಲು ಮತ್ತು ಅಂತಿಮವಾಗಿ ಸೋಲಿಸಲು ಕೃಷ್ಣನ ಮಾರ್ಗದರ್ಶನವನ್ನು ಪಡೆದರು. ಪಾಂಡವರು ಹಸ್ತಿನಾಪುರ ಮತ್ತು ಕುರು ಸಾಮ್ರಾಜ್ಯದ ರಾಜನ ಸ್ಥಾನಮಾನವನ್ನು ಮರಳಿ ಪಡೆದರು. ಆದಾಗ್ಯೂ, ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಅವರು ಮಾಡಿದ ತ್ಯಾಗದಿಂದಾಗಿ, ಮತ್ತು ತಮ್ಮ ಅಂತಿಮ ತಪಸ್ಸನ್ನು ಬಳಿಸಿಕೊಳ್ಳುವ ಮೂಲಕ ಮತ್ತು ಅಂತಿಮವಾಗಿ ಹಿಮಾಲಯಕ್ಕೆ ನಡೆದರು.
ಪಾಂಡವರು ಮಹಾಭಾರತದಲ್ಲಿ ಕಂಡುಬರುವ ಪಾತ್ರಗಳು – ಪಾಂಡು ಹಾಗೂ ಕುಂತಿ-ಮಾದ್ರಿಯರ ಮಕ್ಕಳು. ಪಾಂಡುವಿನ ಮಕ್ಕಳಾದ್ದರಿಂದ ಪಾಂಡವರೆಂದು ಕರೆಯಲ್ಪಟ್ಟರು.ಪಾಂಡವರು ಐದು ಜನ. ಐದು ಜನಕ್ಕೂ ಒಬ್ಬಳೇ ಪತ್ನಿ ದ್ರೌಪದಿ.
ಮಹಾಭಾರತದ ಕಥೆಯಂತೆ, ಪಾಂಡವರು ಮತ್ತು ಅವರ ದಾಯಾದಿಗಳಾದ ಕೌರವರ ನಡುವೆ ಹಸ್ತಿನಾಪುರದ ಸಿಂಹಾಸನದ ಬಗೆಗಿನ ವಿವಾದ ಏಳುತ್ತದೆ. ಪಗಡೆಯಾಟವೊಂದರಲ್ಲಿ ಸೋತ ನಂತರ ಪಾಂಡವರು ಹನ್ನೆರಡು ವರ್ಷ ವನವಾಸ ಮತ್ತು ಒಂದು ವರ್ಷ ಅಜ್ಞಾತವಾಸ ಅನುಭವಿಸುತ್ತಾರೆ. ಇದರ ನಂತರ ರಾಜ್ಯದ ತಮ್ಮ ಹಕ್ಕನ್ನು ಪಡೆಯಲು ಕುರುಕ್ಷೇತ್ರ ಯುದ್ಧ ಆರಂಭವಾಗಿ ಕೊನೆಗೆ ಕೃಷ್ಣನ ಸಹಾಯದಿಂದ ಪಾಂಡವರು ಗೆಲ್ಲುತ್ತಾರೆ. ಪಾಂಡವರು ಚಂದ್ರವಂಶದ ರಾಜ ಪಾಂಡುವಿನ ಪುತ್ರರೇ ಪಾಂಡವರೆಂದು ಪ್ರಖ್ಯಾತರು. ಇವರು ಐವರು. ಅಜಾತಶತ್ರುವೆಂದು ಹೆಸರುಗಳಿಸಿದ ಧರ್ಮರಾಜ (ಯುಧಿಷ್ಠಿರ) ಮಹಾಸಾಹಸಿಯಾದ ಭೀಮ, ಅಪ್ರತಿಮ ಬಿಲ್ಗಾರನಾದ ಅರ್ಜುನ ಈ ಮೂವರು ಅನುಕ್ರಮವಾಗಿ ಯಮಧರ್ಮ, ವಾಯುದೇವ, ದೇವೇಂದ್ರ ಈ ದೇವತೆಗಳ ವರದಿಂದ ಹಿರಿಯರಾಣಿ ಕುಂತಿಗೆ ಕುಮಾರರಾಗಿ ಜನಿಸಿದರೆ, ನಕುಲ ಮತ್ತು ದಿವ್ಯಜ್ಞಾನಿ ಸಹದೇವರು ಅಶ್ವಿನಿದೇವತೆಗಳ ಕೃಪೆಯಿಂದ ಕಿರಿಯರಾಣಿ ಮಾದ್ರಿಯ ಪುತ್ರರಾಗಿ ಹುಟ್ಟಿದರು. ತಂದೆ ಪಾಂಡುರಾಜ, ಶತಶೃಂಗ ಪರ್ವತದಲ್ಲಿ ವಿರಕ್ತ ಜೀವನ ಸಾಗಿಸುತ್ತಿದ್ದಾಗಲೇ ಇವರು ಶುಕ್ರಮುನಿಯ ಶಿಷ್ಯರಾಗಿ ಧನುರ್ವಿದ್ಯೆಯ ಅಧ್ಯಯನ ನಡೆಸಿದರು. ತಂದೆ ಮರಣ ಹೊಂದಿದ ಮೇಲೆ ಹಸ್ತಿನಾಪುರಕ್ಕೆ ಬಂದು ಭೀಷ್ಮಾಚಾರ್ಯರ ಆಳ್ವಿಕೆಗೆ ಒಳಗಾಗಿ, ದ್ರೋಣಾಚಾರ್ಯರಲ್ಲಿ ಅಸ್ತ್ರವಿದ್ಯೆಯ ವ್ಯಾಸಂಗ ನಡೆಸಿ ಪಾರಂಗತರಾದರು.
ಪಾಂಡವರ ತಂದೆ ಪಾಂಡು ವಿಚಿತ್ರವೀರ್ಯನ ಹಿರಿಯ ಮಗನಲ್ಲ. ಆತನಿಗೂ ಹಿರಿಯನಾಗಿದ್ದ ಧೃತರಾಷ್ಟ್ರ ಹುಟ್ಟು ಕುರುಡನಾಗಿದ್ದರಿಂದ, ಆತನಿಗೆ ಸಿಕ್ಕಬೇಕಿದ್ದ ರಾಜ್ಯಾಧಿಕಾರ ಪಾಂಡುವಿಗೆ ದಕ್ಕಿತು. ಆದರೆ ಕುರುವಿನ ಹಿರಿಯ ವಂಶ ಶಾಖೆಯಲ್ಲಿ ಕೌರವನೆನಿಸಿದ ಧೃತರಾಷ್ಟ್ರನ ದುರ್ಯೋಧನಾದಿ ನೂರುಜನ ಮಕ್ಕಳಲ್ಲಿ ದಾಯಾದಿತನದ ದ್ವೇಷ-ಮಾತ್ಸರ್ಯಗಳು ಕಿಡಿಗೊಂಡವು. ಪಾಂಡವರ ಅಸೀಮ ಶಕ್ತಿ-ಸಾಹಸಗಳನ್ನು ಕಂಡು ಧೃತರಾಷ್ಟ್ರನಿಗೂ ಹೆದರಿಕೆ ಉಂಟಾಯಿತು. ಪರಿಣಾಮವಾಗಿ ಧೃತರಾಷ್ಟ್ರ ರಾಜ್ಯವನ್ನು ಎರಡಾಗಿ ವಿಭಜಿಸಿ ತನ್ನ ಮಕ್ಕಳನ್ನು ಹಸ್ತಿನಾವತಿಯಲ್ಲಿಯೇ ಇರಿಸಿಕೊಂಡು ಪಾಂಡವರನ್ನು ವಾರಾಣಾವತಕ್ಕೆ ಕಳುಹಿಸಿದ. ಪಾಂಡವರ ಹಿರಿಯಣ್ಣ ಧರ್ಮರಾಜ ಇಂದ್ರಪ್ರಸ್ಥವನ್ನು ತನ್ನ ರಾಜಧಾನಿಯನ್ನಾಗಿಸಿಕೊಂಡು, ತನ್ನ ಶಾಸನವನ್ನು ಮುಂದುವರಿಸಿ, ಸಂಪದಭಿವೃದ್ಧಿಯನ್ನು ಸಾದಿಸಿದ. ಇದನ್ನು ಕಂಡು ಕರುಬಿದ ದುರ್ಯೋಧನ ಇವರನ್ನು ನಾಶಪಡಿಸಲು ಅನೇಕ ಹೊಂಚು-ಸಂಚುಗಳನ್ನು ಮಾಡಿದನಾದರೂ ಪಾಂಡವರೂ ತಮ್ಮ ಶಕ್ತಿ ಸಾಹಸಗಳಿಂದಲೂ ದೈವೀಕೃಪೆಯಿಂದಲೂ ಅವುಗಳಿಂದ ಪಾರಾಗುತ್ತಲೇ ಹೋದರು.
ಈ ಮಧ್ಯೆ ಧರ್ಮರಾಜ ರಾಜಸೂಯ ಯಜ್ಞ ಮಾಡಲನುವಾದ. ಆ ಸಂದರ್ಭದಲ್ಲಿ ಕೃಷ್ಣನಿಗೆ ಸಂದ ಪ್ರಮುಖರೂಪದ ಮಹಾಮನ್ನಣೆಯನ್ನು ನೋಡಿ ದುರ್ಯೋಧನನಿಗೆ ಸಹಿಸಲಾಗಲಿಲ್ಲ. ಪಾಂಡವರ ಸಭೆಯನ್ನು ಕಂಡ ಮೇಲಂತೂ ಆತನ ದ್ವೇಷಾಸೂಯೆ ಇನ್ನೂ ಹೆಚ್ಚು ಉಲ್ಬಣಿಸಿತು. ಕೇಡಾಳಿತನ ಮಸೆದಿತು. ಹೇಗಾದರೂ ಸರಿಯೇ ಪಾಂಡವರನ್ನು ಮುಗಿಸಿಯೇ ಬಿಡಬೇಕೆಂದು ಆತ ಮನಸ್ಸುಮಾಡಿದ. ತನ್ನ ಮಾವ ಶಕುನಿಯ ಸಲಹೆಯಂತೆ ದ್ಯೂತದಲ್ಲಿ ಧರ್ಮರಾಜನನ್ನು ಎರಡು ಬಾರಿ ಸೋಲಿಸಿದ. ಮೊದಲ ಸೋಲಿನ ಪರಿಣಾಮವಾಗಿ ಪಾಂಡವರ ಪತ್ನಿ ದ್ರೌಪದಿ ದುರ್ಯೋಧನನ ರಾಜಸಭೆಯಲ್ಲಿ ಅನ್ಯಾಯದ ಅಪಮಾನಕ್ಕೀಡಾದಳು. ಅದನ್ನು ಕಂಡು ಕ್ರುದ್ಧನಾದ ಭೀಮ ದುರ್ಯೋಧನನ ತೊಡೆಮುರಿವ, ದುಶ್ಯಾಸನನ ನೆತ್ತರು ಕುಡಿಯುವ ಭೀಕರ ಪ್ರತಿಜ್ಞೆ ಮಾಡಿ ಮುಂಬರುವ ಮಹಾಭಾರತದ ಮಾರಣಹೋಮಕ್ಕೆ ನಾಂದಿ ಹಾಡಿದ. ಜೂಜಾಟದಲ್ಲಿಯ ಎರಡನೆಯ ಸೋಲಿನ ಫಲಸ್ವರೂಪವಾಗಿ ಪಾಂಡವರು ಪತ್ನಿ ದ್ರೌಪದಿಯೊಂದಿಗೆ ಹನ್ನೆರಡು ವರ್ಷ ವನವಾಸ ಅನುಭವಿಸಿದ ಮೇಲೆ, ಒಂದು ವರ್ಷ ಅಜ್ಞಾತವಾಸವನ್ನೂ ವಿರಾಟನ ರಾಜಧಾನಿಯಲ್ಲಿ ಕಳೆದರು. ಆಗ ಧರ್ಮರಾಜ ಕಂಕಭಟ್ಟನಾದರೆ, ಭೀಮ ಬಾಣಸಿಗ, ವಲಲನಾದ ಅರ್ಜುನ ಬೃಹನ್ನಳೆಯಾಗಿ ನೃತ್ಯ ಶಿಕ್ಷಕನಾದರೆ ನಕುಲ ಸಹದೇವರು ಅನುಕ್ರಮವಾಗಿ ಅಶ್ವಪಾಲಕ-ಗೋಪಾಲಕರಾದರು. ದ್ರೌಪದಿ ಸೈರಂಧ್ರಿಯಾಗಿ ವಿರಾಟಪತ್ನಿಯ ಸೇವೆಯಲ್ಲಿ ನಿಂತಳು

ಹೀಗೆ ವಚನ ಪರಿಪಾಲನೆಗಾಗಿ ಪಾಂಡವರು ಅಜ್ಞಾತವಾಸದ ಅಗ್ನಿಪರೀಕ್ಷೆಯಲ್ಲಿ ತೇರ್ಗಡೆಯಾಗಿ, ತಮ್ಮ ರಾಜ್ಯವನ್ನು ತಮಗೆ ಹಿಂದಿರುಗಿಸಬೇಕೆಂದು ದುರ್ಯೋಧನನಿಗೆ ಹೇಳಿಕಳಿಸಿದರು. ಆದರೆ ದುರ್ಯೋಧನ ಯುದ್ಧವಿಲ್ಲದೆಯೆ ಒಂದು ಸೂಜಿಯ ಮೊನೆಯಷ್ಟು ಭೂಮಿಯನ್ನು ಕೊಡೆನೆಂದು ಉತ್ತರಿಸಿದ. ಇದರ ಫಲವಾಗಿ ಭೀಕರವಾದ ಮಹಾಭಾರತಸಮರ ಹದಿನೆಂಟು ದಿನಗಳ ಕಾಲ ಕುರುಕ್ಷೇತ್ರದಲ್ಲಿ ನಡೆಯಿತು. ಸಮಕಾಲೀನ ಭರತವರ್ಷದ ಅರಸರೆಲ್ಲರೂ ಬಹುಶಃ ಆ ಯುದ್ಧದಲ್ಲಿ ಒಂದಿಲ್ಲೊಂದು ಪಕ್ಷದ ಪರವಾಗಿ ಪಾಲ್ಗೊಂಡಿದ್ದರು. ಅದರಲ್ಲಿ ಕೌರವರೆಲ್ಲ ಸತ್ತು, ಪಾಂಡವರು ಗೆದ್ದರು. ಆಮೇಲೆ ಪಾಂಡವರ ಹಿರಿಯಣ್ಣ ಧರ್ಮರಾಜ ಹಸ್ತಿನಾವತಿಯ ಗದ್ದುಗೆ ಏರಿ ಅಶ್ವಮೇಧ ಯಾಗಮಾಡಿ ಮೂವತ್ತಾರು ವರ್ಷ ರಾಜ್ಯಭಾರ ನಡೆಸಿದ. ಕೊನೆಗೆ ರಾಜ್ಯಾಧಿಕಾರವನ್ನು ಮೊಮ್ಮಗನಾದ ಪರೀಕ್ಷಿತನಿಗೆ ಒಪ್ಪಿಸಿ, ತಮ್ಮಂದಿರೊಡನೆ ಮಹಾಪ್ರಸ್ಥಾನ ಕೈಗೊಂಡು, ಸ್ವರ್ಗಕ್ಕೆ ಹೋದ.
ಕುರುಕ್ಷೇತ್ರ ಯುದ್ಧದ ಬಳಿಕ ಪಾಂಡವರ ಸಾವು ಹೇಗಾಯಿತು ಎಂಬುದೇ ಕುತೂಹಲಕಾರಿಯಾಗಿದೆ. ಹೌದು, ಪಾಂಡವರ ಪರಾಕ್ರಮಕ್ಕೆ ಸರಿಸಾಟಿಯೇ ಇರಲಿಲ್ಲ. ಅಶ್ವಿನಿ ದೇವತೆಗಳ ವರಪ್ರಸಾದವಾದ ನಕುಲ ಸಹದೇವರು ಅಪ್ರತಿಮ ರೂಪವಂತರು ಹಾಗೂ ಶಸ್ತ್ರ ಪಾಂಡಿತ್ಯಗಳಲ್ಲಿ ಅಗಾಧವಾದ ಪಾಂಡಿತ್ಯವನ್ನು ಹೊಂದ್ದಿದವರು ಆಗಿದ್ದರು. ದೇವೇಂದ್ರನ ವರಪ್ರಸಾದವಾದ ಮಧ್ಯಮ ಪಾಂಡವ ಅರ್ಜುನ ಧನುರ್ಧಾರಿಗಳಲ್ಲಿ ಶ್ರೇಷ್ಠನಾಗಿದ್ದ. ಇನ್ನು ಸ್ವಯಂ ವಾಯುದೇವರ ವರಪ್ರಸಾದವಾಗಿದ್ದ ಬಾಹುಬಲಿ ಭೀಮನ ಭುಜ ಬಲ ಪರಾಕ್ರಮಕ್ಕೆ ಯಾರೂ ಸರಿಸಾಟಿ ಇರಲಿಲ್ಲ. ಧರ್ಮರಾಜ ಯಮರಾಜನ ಅಂಶರೂಪವಾಗಿದ್ದ ಯುಧಿಷ್ಠಿರನ ಧರ್ಮವು ಕೂಡ ಶ್ರೇಷ್ಠವಾಗಿತ್ತು.
ಪಂಚ ಪಾಂಡವರು ಎಂದಿಗೂ ಶ್ರೀ ಕೃಷ್ಣನ ಆಜ್ಞೆಗಳನ್ನ ಮೀರಿದವರಲ್ಲ. ವಾಸುದೇವನ ಆರಾಧಕರಾಗಿದ್ದರು. ಅವರ ಜೀವನವೇ ಕೃಷ್ಣನ ಮೇಲೆ ಅವಲಂಬಿತವಾಗಿತ್ತು. ಇನ್ನು ವಾಸುದೇವನ ಕೂಡ ಅಷ್ಟೇ ಧರ್ಮವಂತರಾಗಿದ್ದ ಪಾಂಡವರ ಜೊತೆ ಸೇರಿ ಪಾಪಿಗಳಿಂದಲೇ ತುಂಬಿದ್ದ ಭೂಭಾರವನ್ನ ಕಡಿಮೆ ಮಾಡುತ್ತಾನೆ. ಇನ್ನು ಅಲ್ಲಿಗೇ ಭೂಮಿಗೆ ಬಂದ ಶ್ರೀಕೃಷ್ಣನ ಅವತಾರದ ಕೆಲಸ ಸಮಾಪ್ತವಾಗಿದ್ದು ಬೇಡನೊಬ್ಬ ಬಿಟ್ಟ ಬಾಣದ ಮೂಲಕ ಕೃಷ್ಣನ ಅಂ’ತ್ಯವಾಗುತ್ತದೆ. ಇನ್ನು ಶ್ರೀಕೃಷ್ಣ ತಮ್ಮೆಲ್ಲರನ್ನು ಬಿಟ್ಟು ಹೋದ ಎಂಬ ವಿಷಯ ತಿಳಿದ ಮೇಲಂತೂ ಅವರಿಗೆ ಜೀವನವೇ ಬೇಡ ಎನಿಸಿಬಿಡುತ್ತದೆ. ಅದಾಗಲೇ ವಾಸುದೇವ ಸೇರಿದಂತೆ ಎಲ್ಲರನ್ನೂ ಕಳೆದುಕೊಂಡಿದ್ದ ಪಾಂಡವರಿಗೆ ಜೀವನ ಬರೀ ಶೂನ್ಯ ಎನಿಸಿಬಿಡುತ್ತದೆ.
ಬಳಿಕ ಅವರು ಮಹಾಪ್ರಸ್ಥಾನ ಮಾಡಲು ನಿರ್ಧಾರ ಮಾಡುತ್ತಾರೆ. ಮಹಾಪ್ರಸ್ಥಾನ ಎಂದರೆ ತಮ್ಮ ಮನಸನ್ನ ಆ ಭಗವಂತನಲ್ಲಿ ಕೇಂದ್ರೀಕರಿಸಿ ಅನ್ನ ಆಹಾರಾದಿಗಳನ್ನ ಬಿಟ್ಟು ದೇಹವು ಕುಸಿದು ಬೀಳುವ ತನಕ ಬಾರದ ಲೋಕಕ್ಕೆ ಪ್ರಯಾಣ ಮಾಡುವುದು ಎಂದು. ಇನ್ನು ಇದಕ್ಕೆ ಸಿದ್ದರಾದ ಪಾಂಡವರು ರಾಜ್ಯವನ್ನೆಲ್ಲಾ ತ್ಯಜಿಸಿ ಹಸ್ತಿನಾವತಿಯನ್ನ ಬಿಟ್ಟು ಮುಕ್ತಿಯ ಕಡೆಗೆ ಸಾಗುತ್ತಾರೆ. ಇನ್ನು ಇವರನ್ನ ಒಂದು ನಾಯಿಯು ಸಹ ಹಿಂಬಾಲಿಸುತ್ತದೆ. ಹೀಗೆ ಅನ್ನ ಆಹಾರಗಳನ್ನ ಬಿಟ್ಟು ಸುತ್ತುತ್ತಾ ಸುತ್ತುತ್ತಾ ಕೊನೆಗೆ ಹಿಮಾಲಯ ಪರ್ವತ ಏರಲು ಶುರು ಮಾಡುತ್ತಾರೆ. ಹಿಮಾಲಯ ಪರ್ವತವನ್ನ ಏರುತ್ತಿದ್ದಾಗಲೇ ಪಂಚ ಪಾಂಡವರ ಮಡದಿ ದ್ರೌಪದಿ ಕುಸಿದು ಬಿದ್ದು ಇಹಲೋಕ ತ್ಯಜಿಸುತ್ತಾಳೆ. ಆಗ ಭೀಮನು ತನ್ನ ಜೇಷ್ಠನನ್ನ ಕೇಳುತ್ತಾನೆ..ಅಣ್ಣಾ ದ್ರೌಪದಿ ಏಕೆ ಇಷ್ಟು ಬೇಗ ಕುಸಿದು ಬಿದ್ದು ಅ’ಸುನೀಗಿದಳು ಅಂತ. ಆಗ ಯುಧಿಷ್ಠಿರನು ದ್ರೌಪದಿಯು ಐವರು ಪತಿಯರನ್ನ ಸಮನಾಗಿ ಪ್ರೀತಿಸುವ ಬದಲು ಯಾರಿಗೂ ತಿಳಿಯದಂತೆ ಅರ್ಜುನನಿಗೆ ಹೆಚ್ಚು ಪ್ರೀತಿ ತೋರುತ್ತಿದ್ದಳು..ಆ ಕಾರಣದಿಂದಲೇ ದ್ರೌಪದಿ ಕುಸಿದುಬಿದ್ದದ್ದು ಅಂತ ಧರ್ಮರಾಯ ಹೇಳುತ್ತಾನೆ.
ಬಳಿಕ ನಕುಲ ಹಾಗೂ ಸಹದೇವ ಇಬ್ಬರು ಒಬ್ಬರ ಬಳಿಕ ಒಬ್ಬರು ಕುಸಿದು ಬಿದ್ದು ಪ್ರಾ’ಣ ಕಳೆದುಕೊಳ್ಳುತ್ತಾರೆ. ಮತ್ತೆ ಯುಧಿಷ್ಠಿರನನ್ನ ಅದೇ ಪ್ರಶ್ನೆ ಕೇಳಿದ ಭೀಮನಿಗೆ ಧರ್ಮರಾಜ ಹೇಳುತ್ತಾನೆ..ತಾವು ರೂಪವಂತರೂ ಹಾಗೂ ಮೇಧಾವಿಗಳು, ಹಾಗೂ ಅಗಾದವಾದ ಪಾಂಡಿತ್ಯವನ್ನ ಪಡೆದಿದ್ದೇವೆ ಎಂಬ ಗರ್ವ ನಕುಲ ಸಹದೇವರಲ್ಲಿ ಇತ್ತು ಹಾಗಾಗಿ ಅವರು ಕುಸಿದು ಬಿದ್ದರು ಎಂದು ಹೇಳುತ್ತಾನೆ ಧರ್ಮಜ. ಬಳಿಕ ಜಗತ್ತಿನ ಶ್ರೇಷ್ಠ ಧನುರ್ಧಾರಿ ಅರ್ಜುನ ಕೂಡ ಕುಸಿದುಬಿದ್ದು ಸ್ವರ್ಗಸ್ತನಾಗಿರುತ್ತಾನೆ. ಮತ್ತೆ ಅದೇ ಪ್ರಶ್ನೆ ಭೀಮ ತನ್ನ ಅಣ್ಣನಲ್ಲಿ ಕೇಳುತ್ತಾನೆ. ಸ್ವತಃ ವಾಸುದೇವನ ಪ್ರಿಯ ಸಖ, ಕೃಷ್ಣನ ವಿಶ್ವರೂಪವನ್ನ ಕಣ್ಣಾರೆ ಕಂಡಿದ್ದ, ಶ್ರೇಷ್ಠ ಧನುರ್ಧಾರಿಯಾಗಿದ್ದ ಪಾರ್ಥನಲ್ಲಿಯೂ ಕೂಡ ದೋಷವಿತ್ತೇ ಎಂದು ಪ್ರಶ್ನೆ ಮಾಡುತ್ತಾನೆ. ಇದಕ್ಕೆ ಧರ್ಮಜ ಹೇಳುತ್ತಾನೆ..ಭೀಮ ಅರ್ಜುನನಿಗೆ ಜಗತ್ತಿನಲ್ಲಿಯೇ ನನ್ನಂತಹ ಪರಾಕ್ರಮಿ ಬೇರೊಬ್ಬರಿಲ್ಲ ಎಂಬ ಗರ್ವ ಆವರಿಸಿತ್ತು. ಇನ್ನು ಇದೆ ಗರ್ವದ ಕಾರಣದಿಂದಲೇ ತಾನು ಜಗತ್ತಿನಲ್ಲಿರುವ ಎಲ್ಲಾ ರಾಜರನ್ನ ಸೋಲಿಸುತ್ತೇನೆ ಎಂದು ಹೇಳಿದ್ದ. ಆದರೆ ಅದು ಸಾಧ್ಯವಾಗಿರಲಿಲ್ಲ. ಹಾಗಾಗಿ ಅವನಲ್ಲಿ ತುಂಬಿದ್ದ ಅಹಂಕಾರ ಹಾಗೂ ತಾನು ತೆಗೆದುಕೊಂಡಿದ್ದ ವಚನವನ್ನ ಪಾಲಿಸದ ಕಾರಣ ವಚನ ಭ್ರಷ್ಟನಾಗಿದ್ದು ಅವನು ಕುಸಿದು ಬೀಳಲು ಕಾರಣವಾಯಿತು ಎಂದು ಹೇಳುತ್ತಾನೆ
ಇನ್ನು ಮುಂದೆ ಮುಂದೆ ಸಾಗುತ್ತಿದ್ದಂತೆ ವಾಯುಪುತ್ರ ಭೀಮ ಸಹ ಕುಸಿದು ಬೀಳುತ್ತಾನೆ. ಇದೆ ವೇಳೆ ಕೊನೆ ಕ್ಷಣಗಳಲ್ಲಿ ತಾನು ಮಾಡಿದ ತಪ್ಪುಗಳೇನು ಎಂಬುದರ ಬಗ್ಗೆ ಧರ್ಮರಾಯನಿಂದ ತಿಳಿಯುತ್ತಾನೆ..ಹೌದು, ಭೀಮನಿಗೆ ತಾನು ಅತೀ ಬಲಶಾಲಿ ಎಂಬ ಅಹಂಕಾರ ಆವರಿಸಿರುತ್ತದೆ. ಜೊತೆಗೆ ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವಿಸಿರುವುದು ಸಹ ಅವನ ತಪ್ಪಾಗಿ ಪರಿಣಮಿಸಿರುತ್ತದೆ. ಮನುಷ್ಯರು ಆರೋಗ್ಯವಾಗಿರಲು ಎಷ್ಟು ಬೇಕೋ ಅಷ್ಟೇ ಆಹಾರ ಮಾತ್ರ ಸೇವಿಸಬೇಕು. ಆದರೆ ಅಗತ್ಯಕ್ಕಿಂತ ಹೆಚ್ಚು ಸೇವಿಸುವುದು ಅನ್ನಕ್ಕೆ ಮಾಡುವ ಅಪಮಾನ ಹಾಗೂ ಬೇರೆ ಜೀವಿಗಳಿಗೆ ಮಾಡಿದ ಅನ್ಯಾಯ ಎಂದು ಭೀಮನು ತನ್ನ ಜೀವನದಲ್ಲಿ ಮಾಡಿದ ತಪ್ಪನ್ನ ಯುಧಿಷ್ಠಿರ ಹೇಳುತ್ತಾನೆ. ಹೀಗೆ ಎಲ್ಲರೂ ಸ್ವರ್ಗಸ್ಥರಾದ ಬಳಿಕ ಯುಧಿಷ್ಠಿರನ ಜೊತೆ ಉಳಿದಿದ್ದು ಅವರನ್ನೇ ಹಿಂಬಾಲಿಸಿ ಬರುತ್ತಿದ್ದ ನಾಯಿ ಮಾತ್ರ. ಹೀಗೆ ಹಿಮಾಲಯ ಏರುತ್ತಿದಂತೆ ಸ್ವರ್ಗಾಧಿಪತಿ ಇಂದ್ರ ಪ್ರತ್ಯಕ್ಷನಾಗಿ ಸ್ವಶರೀರನಾಗಿ ಸ್ವರ್ಗಕ್ಕೆ ಬರುವಂತೆ ಆಹ್ವಾನ ಕೊಡುತ್ತಾನೆ. ಇನ್ನು ಆದಾಗಲೇ ತನ್ನ ಮಡದಿ ಹಾಗೂ ನಾಲ್ವರು ತಮ್ಮಂದಿರು ಸ್ವರ್ಗಸ್ತರಾಗಿರುತ್ತಾರೆ. ಇನ್ನು ತನ್ನನ್ನೇ ಹಿಂಬಾಲಿಸಿ ಬಂದಿರುವ ನಾಯಿಗೂ ಸಹ ಸ್ವರ್ಗಕ್ಕೆ ಪ್ರವೇಶ ನೀಡಬೇಕು ಎಂದು ಧರ್ಮರಾಯ ದೇವೇಂದ್ರನಲ್ಲಿ ವಿನಂತಿ ಮಾಡಿಕೊಳ್ಳುತ್ತಾನೆ.
ಆದರೆ ಇದಕ್ಕೆ ಉತ್ತರಿಸಿದ ಇಂದ್ರದೇವ ನಾಯಿಗಳಿಗೆ ಸ್ವರ್ಗಕ್ಕೆ ಪ್ರವೇಶವಿಲ್ಲ..ನೀವು ಮಾತ್ರ ಬನ್ನಿ ಎಂದು ಹೇಳುತ್ತಾನೆ. ಆದರೆ ಇದನ್ನ ಕೇಳಿದ ಯುಧಿಷ್ಠಿರ ನನ್ನನ್ನೇ ನಂಬಿಕೊಂಡು ನನ್ನ ಹಿಂದೆಯೇ ಬಂದ ನಾಯಿಗೆ ಸ್ವರ್ಗಕ್ಕೆ ಪ್ರವೇಶ ಇಲ್ಲವೆಂದಮೇಲೆ ಅಂತಹ ಸ್ವರ್ಗ ನನಗೂ ಬೇಡ ಎಂದು ಹೇಳುತ್ತಾನೆ. ಇದಾದ ಬಳಿಕ ನಾಯಿಯ ಕಡೆ ತಿರುಗಿ ನೋಡಿದಾಗ ಅಲ್ಲಿಯವರೆಗೂ ಧರ್ಮರಾಯನನ್ನೇ ಹಿಂಬಾಲಿಸಿ ಬಂದಿದ್ದ ನಾಯಿಯೇ ಇರುವುದಿಲ್ಲ. ಮಾಯವಾಗಿರುತ್ತದೆ. ಆದರೆ ಯುಧಿಷ್ಠಿರನ ಧರ್ಮವನ್ನ ಪರೀಕ್ಷೆ ಮಾಡುವ ಸಲುವಾಗಿ ನಾಯಿಯ ರೂಪದಲ್ಲಿ ನರಕಾಧಿಪತಿ ಯಮರಾಜನೇ ಬಂದಿರುತ್ತಾನೆ. ಯುಧಿಷ್ಠಿರನ ಧರ್ಮ ಪಾರಾಯಣತೆಗೆ ಮೆಚ್ಚುತ್ತಾನೆ. ಇಡೀ ಜೀವನದ ಉದ್ದಕ್ಕೂ ಧರ್ಮವನ್ನೇ ಉಸಿರಾಗಿಟ್ಟುಕೊಂಡು ಬಂದಿದ್ದ ಧರ್ಮರಾಯ ಶರೀರ ಸಮೇತನಾಗಿ ಸ್ವರ್ಗ ಪ್ರವೇಶ ಮಾಡುತ್ತಾನೆ.
ಹೀಗೆ ಪಾಂಡವರ ವಂಶ ಯಾವುದು ಮುಂದೆ ಬೆಳೆಯಲಿಲ್ಲ ಆದರೂ ಅಭಿಮನ್ಯುವಿನ ಸಂತಾನ ಮುಂದೆ ಉಳಿಯಿತು.
ಧನ್ಯವಾದಗಳು.
GIPHY App Key not set. Please check settings