in

ನಗರವನ್ನು ಆಳುತಿದ್ದ ರಾಜನ ಹೆಸರಿನಿಂದ ಬಂದಿದ್ದು ಚನ್ನರಾಯಪಟ್ಟಣ

ಚನ್ನರಾಯಪಟ್ಟಣ
ಚನ್ನರಾಯಪಟ್ಟಣ

ಚನ್ನರಾಯಪಟ್ಟಣ ಹಾಸನ ಜಿಲ್ಲೆಯ ಒಂದು ತಾಲೂಕು ಕೇಂದ್ರ, ಅದರ ಆಡಳಿತ ಕೇಂದ್ರ ಇದು ಬೆಂಗಳೂರಿನಿಂದ ೧೪೭ ಕಿ.ಮೀ ದೂರದಲ್ಲಿದೆ. ಇದಕ್ಕೆ ಕೊಳತ್ತೂರು/ಅಮೃತಪುರ ಎಂಬ ಹೆಸರುಗಳಿವೆ. ಈ ನಗರದ ಹೆಸರು ಚೆನ್ನಿಗರಾಯಪಟ್ಟಣ – ನಗರವನ್ನು ಆಳುತಿದ್ದ ರಾಜನ ಹೆಸರಿನಿಂದ ಬಂದಿದ್ದುದು. ಚನ್ನರಾಯಪಟ್ಟಣದಲ್ಲಿ ಆರು ಹೋಬಳಿಗಳಿವೆ. ೧. ನುಗ್ಗೇಹಳ್ಳಿ ೨. ಹಿರಿಸಾವೆ ೩. ಬಾಗೂರು ೪.ಶ್ರವಣಬೆಳಗೊಳ ೫. ದಂಡಿಗನಹಳ್ಳಿ ೬.ಕಸಬಾ

ಉತ್ತರದಲ್ಲಿ ಅರಸೀಕೆರೆ ತಾಲ್ಲೂಕು ಮತ್ತು ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕು, ಪೂರ್ವದಲ್ಲಿ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕು ಮತ್ತು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕು, ದಕ್ಷಿಣದಲ್ಲಿ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕು, ನೈಋತ್ಯ ಮತ್ತು ಪಶ್ಚಿಮದಲ್ಲಿ ಹೊಳೆನರಸೀಪುರ ಮತ್ತು ಹಾಸನ ತಾಲ್ಲೂಕುಗಳು ಚೆನ್ನರಾಯಪಟ್ಟಣ ತಾಲ್ಲೂಕನ್ನು ಸುತ್ತುವರಿದಿವೆ. ವಿಸ್ತೀರ್ಣ 1,042.26ಚ.ಕಿ.ಮೀ., ಜನಸಂಖ್ಯೆ 2,78,112 (2001), ಜನವಸತಿಯಿರುವ ಗ್ರಾಮಗಳ ಸಂಖ್ಯೆ 365. ಚನ್ನರಾಯಪಟ್ಟಣದಲ್ಲಿ 1918ರಲ್ಲಿ ಪುರಸಭೆ ಸ್ಥಾಪಿತವಾಯಿತು. ಪಟ್ಟಣದ ಜನಸಂಖ್ಯೆ 34,502 (2001).

ಚನ್ನರಾಯಪಟ್ಟಣ ಮುಖ್ಯವಾದ ವ್ಯಾಪಾರಿ ಕೇಂದ್ರವಾಗಿದೆ. ಇಲ್ಲಿ ಮಾರಾಟವಾಗುವ ವಸ್ತುಗಳಲ್ಲಿ ತೆಂಗು ಮತ್ತು ಬೆಲ್ಲ ಮುಖ್ಯವಾದವುಗಳು. ಪ್ರತಿ ಶನಿವಾರ ಇಲ್ಲಿ “ಸಂತೆ” ನಡೆಯುತ್ತದೆ. ಸಂತೆ ಸುತ್ತ ಮುತ್ತಲಿನ ಎಲ್ಲಾ ಹಳ್ಳಿ ಮತ್ತು ಸಾಗತವಳ್ಳೀ ಯಿಂದ ಹೆಚ್ಚು ಜನರು ಸಂತೆಗೆ ಬಂದು ವ್ಯಾಪಾರ ಮಾಡುತ್ತಾರೆ. ಬಹುಮುಖ್ಯವಾದ ಜಾತ್ರಾ ಸಮಾರಂಭ ೭ ದಿನಗಳ ಕಾಲ ನಡೆಯುತ್ತದೆ. ಇಲ್ಲಿಗೆ ರಾಜ್ಯದ ವಿವಿಧ ಜಿಲ್ಲೆಗಳಂದ ಬಂದು ದೇವರ ಕೃಪೆಗೆ ಪಾತ್ರರಾಗುತ್ತಾರೆ. ಆನೆಕೆರೆಯಮ್ಮ ಮತ್ತು ಕುಂದೂರು ಮಠದ ಮೆಳಿಯಮ್ಮ ದೇವಿ ಇಲ್ಲಿಯ ಬಹು ಮುಖ್ಯವಾದ ದೇವಾಲಯಗಳು.

ಶ್ರವಣಬೆಳಗೊಳ‌ : ಶ್ರವಣಬೆಳಗೊಳ ಈ ತಾಲ್ಲೂಕಿನ ಅತ್ಯಂತ ಪ್ರಸಿದ್ದ ಸ್ಥಳ. ಇದು ಜೈನರ ಮುಖ್ಯ ಯಾತ್ರಸ್ಥಳ. ಚನ್ನರಾಯಪಟ್ಟಣಕ್ಕೆ 13 ಕಿ.ಮೀ. ದೂರದಲ್ಲಿದೆ. ಶಾಸನಗಳಲ್ಲಿ ಇದನ್ನು ವೆಳಗೊಳ, ದೇವರಬೆಳಗೂಳ, ಶ್ವೇತಸರೊವರ, ಧವಳಸರೋವರ, ಗೋಮ್ಮಟಪುರ-ಎಂದು ಮುಂತಾಗಿಯೂ ಕರೆಯಲಾಗಿದೆ.ಜೈನಮುನಿ ಭದ್ರಬಾಹುವೂ ಚಂದ್ರಗುಪ್ತ ಮೌರ್ಯರೂ ಇಲ್ಲಿಗೆ ಬಂದಿದ್ದರೆಂದು ಹೇಳಲಾಗಿದೆ. ಶ್ರವಣಬೆಳಗೊಳ ಊರು ಇಂದ್ರಗಿರಿ ಅಥವಾ ವಿಂದ್ಯಗಿರಿ ಮತ್ತು ಚಂದ್ರಗಿರಿ ಎಂಬ ಎರಡು ಬೆಟ್ಟಗಳನ್ನು ಹೊಂದಿದೆ. ೧೨ ವರ್ಷಗಳಿಗೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕ ಇಲ್ಲಿನ ವಿಷೇಷ ಸಂಭ್ರಮಾಚರಣೆಯಾಗಿದೆ. ಹಾಗೆಯೇ ಶ್ರವಣಬೆಳಗೊಳದಲ್ಲಿ ಅನೇಕ ಜೈನ ಮಸೀದಿಗಳಿವೆ ಮತ್ತು ಬಹುದೊಡ್ಡದಾದ ಕಳಸವಿದೆ.

ಇತಿಹಾಸದಲ್ಲಿ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿದೆ. ಭರತ ಮತ್ತು ಬಾಹುಬಲಿಯ ಸಂಕೇತವಾಗಿ ಎರಡು ಬೆಟ್ಟಗಳಿವೆ. ಅದನ್ನು ಚಂದ್ರಗಿರಿ ಬೆಟ್ಟ ಮತ್ತು ಇಂದ್ರಗಿರಿ ಬೆಟ್ಟ ಎಂದು ಕರೆಯಲಾಗುತ್ತಿದೆ. ೧೨ ವರ್ಷಗಳಿಗೊಮ್ಮೆ ನಡುವೆಯುವ ಮಹಾಮಸ್ತಕಾಭಿಷೇಕ ಇಲ್ಲಿನ ವಿಶೇಷ ಸಂಭ್ರಮಾಚರಣೆಯಾಗಿದೆ. ಹಾಗೆಯೇ ಶ್ರವಣಬೆಳಗೊಳದಲ್ಲಿ ಅನೇಕ ಜೈನ ಮಸೀದಿಗಳಿವೆ, ಮತ್ತು ಬಹು ದೊಡ್ಡದಾದ ಕಳಸವಿದೆ. ಶ್ರವಣಬೆಳಗೊಳವು ಪ್ರವಾಸಿಗರ ತಾಣವಾಗಿದೆ. ಹಲವಾರು ಪ್ರವಾಸಿಗರು ಭೇಟಿ ನೀಡುವ ಪ್ರೇಕ್ಷಣೀಯ ಸ್ಥಳವೇ ಶ್ರವಣಬೆಳಗೊಳ.

ನಾಗೇಶ್ವರ ಸ್ವಾಮಿ ದೇವಾಲಯ, ನವಿಲೆಚೆನ್ನಕೇಶವ ದೇವಾಲಯ, ನುಗ್ಗೇಹಳ್ಳಿಶ್ರವಣಬೆಳಗೊಳ, ಚೌಡೇಶ್ವರಿ ದೇವಸ್ಥಾನ, ದಸರಿಘಟ್ಟಮೆಳಿಯಮ್ಮ ದೇವಾಲಯ, ಕುಂದೂರು ಮಠನುಗ್ಗೆಹಳ್ಳಿ ಹೊಯ್ಸಳ ರಾಜವಂಶದ ಸೋಮೇಶ್ವರ ರಾಜನ ಮುಖ್ಯಸ್ಥ ಬೊಮ್ಮಣ್ಣ ದಂಡ ನಾಯಕರಿಂದ ನಿರ್ಮಿಸಲ್ಪಟ್ಟ ಹಳೆಯ ನುಗ್ಗೆಹಳ್ಳಿ ಜಯಗೋಂಡೇಶ್ವರ ದೇವಸ್ಥಾನಕ್ಕೆ ನುಗ್ಗೆಹಳ್ಳಿಯು ಪ್ರಸಿದ್ಧವಾಗಿದೆ. ಈ ಗ್ರಾಮವು ಪ್ರಾಚೀನ ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾದ ಲಕ್ಷ್ಮಿ ನರಸಿಂಹ ದೇವಸ್ಥಾನ ಮತ್ತು ಸದಾಶಿವ ದೇವಸ್ಥಾನದಂತಹ ಪ್ರಾಚೀನ ದೇವಾಲಯಗಳನ್ನು ಹೊಂದಿದೆ. ನುಗ್ಗೆಹಳ್ಳಿ ಕರ್ನಾಟಕ ರಾಜ್ಯ, ಹಾಸನ ಜಿಲ್ಲೆಯ ಚನ್ನಾರಾಯಪಟ್ಟಣ ತಾಲ್ಲೂಕಿನ ಒಂದು ಗ್ರಾಮ. ಇದು ಮೈಸೂರು ವಿಭಾಗಕ್ಕೆ ಸೇರಿದ್ದು. ಇದು ಜಿಲ್ಲಾ ಕೇಂದ್ರದ ಹಾಸನದಿಂದ ಪೂರ್ವಕ್ಕೆ 47 ಕಿಮೀ ದೂರದಲ್ಲಿದೆ. ಚೆನ್ನರಾಯಪಟ್ಟಣದಿಂದ 7 ಕಿ.ಮೀ. ರಾಜ್ಯ ರಾಜಧಾನಿ ಬೆಂಗಳೂರಿನಿಂದ 141 ಕಿ.ಮೀ.ನುಗ್ಗೆಹಳ್ಳಿ ಪಿನ್ ಕೋಡ್ 573131 ಮತ್ತು ಪೋಸ್ಟಲ್ ಹೆಡ್ ಆಫೀಸ್ ನುಗ್ಗೇಹಳ್ಳಿ. ಅಕ್ಕನಹಳ್ಳಿ (6 ಕೆ.ಎಂ), ಕಲ್ಕೆರೆ (7 ಕೆಎಂ), ಟ್ಯಾಗದುರ್ (7 ಕೆಎಂ), ಎಸ್.ಶಿವಾರಾ (8 ಕೆಎಂ), ಮಟ್ಟನವಿಲೆ (9 ಕೆ.ಎಂ) ನುಗ್ಗೆಹಳ್ಳಿಗೆ ಹತ್ತಿರದ ಹಳ್ಳಿಗಳು. ನುಗ್ಗೆ ಲಕ್ಷ್ಮಿ ನರಸಿಂಹ ದೇವಾಲಯ, ನುಗ್ಗೆಹಳ್ಳಿ – ಒಂದು ಅವಲೋಕನ 1246 ರಲ್ಲಿ ಹೊಯ್ಸಳ ಸೈನ್ಯದ ಕಮಾಂಡರ್ ಬೊಮ್ಮಣ್ಣ ದಂಡನಾಯಕ ದೇವಸ್ಥಾನವನ್ನು ನೇಮಿಸಲಾಯಿತು. ಇದು ರಾಜ ವೀರಾ ಸೋಮೇಶ್ವರ ಆಳ್ವಿಕೆಯಲ್ಲಿತ್ತು. ಈ ದೇವಸ್ಥಾನವು ನರಸಿಂಹನಿಗೆ ಸಮರ್ಪಿತವಾಗಿದೆ ಆದರೆ ಇತರ ದೇವತೆಗಳ ಮತ್ತು ದೇವತೆಗಳ ಪ್ರತಿಮೆಯನ್ನು ಹೊಂದಿದೆ. ಈ ದೇವಾಲಯವನ್ನು ತ್ರಿಕುಚಲ ಎಂದು ನಿರ್ಮಿಸಲಾಗಿದೆ ಅಂದರೆ ಇದು ಮೂರು ಪವಿತ್ರಗಳನ್ನು ಹೊಂದಿದೆ. ಮುಖ್ಯ ದೇವಸ್ಥಾನವು ಉತ್ತರ ಪವಿತ್ರದಲ್ಲಿರುವ ನರಸಿಂಹದ ಪ್ರತಿಮೆಯೊಂದಿಗೆ, ಪಶ್ಚಿಮ ಗರ್ಭಗುಡಿಯಲ್ಲಿ ಕೆಸಾವದ ಮೂರ್ತಿಗಳಿಂದ ಉತ್ತುಂಗಕ್ಕೇರಿತು.

ತಾಲ್ಲೂಕು ಉತ್ತರದಿಂದ ದಕ್ಷಿಣದ ಕಡೆಗೆ ಸಾಮಾನ್ಯವಾಗಿ ಇಳಿಜಾರಾಗಿದೆ. ಹೇಮಾವತಿಯ ಕಡೆಗೆ ಹರಿಯುವ ನೀರಿಗೆ ಅಡ್ಡಲಾಗಿ ಅಲ್ಲಲ್ಲಿ ದೊಡ್ಡ ದೊಡ್ಡ ಕೆರೆಗಳನ್ನು ಕಟ್ಟಲಾಗಿದೆ. ಉತ್ತರದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಎತ್ತರದ ಬೆಟ್ಟದ ಶ್ರೇಣಿಯೊಂದು ಹಬ್ಬಿದೆ. ಆದರಿಂದ ಕೆಲವು ತೊರೆಗಳು ಉತ್ತರಕ್ಕೂ ಪೂರ್ವಕ್ಕೂ ಹರಿದು ಶಿಂಷಾನದಿಯನ್ನು ಸೇರುತ್ತವೆ. ತಾಲ್ಲೂಕಿನ ಪಶ್ಚಿಮದ ಎಲ್ಲೆಯ ಬಳಿ ತಗ್ಗಿನಬೆಟ್ಟವೊಂದಿದೆ. ಶ್ರವಣಬೆಳಗೊಳದಲ್ಲಿ ತಕ್ಕಮಟ್ಟಿನದ ಎತ್ತರದ ಬೆಟ್ಟಗಳು ಒಂಟೊಂಟಿಯಾಗಿ ನಿಂತಿವೆ. ಅವುಗಳ ಪೈಕಿ ಇಂದ್ರಗಿರಿಯ ಎತ್ತರ 3,347′ (1,020 ಮೀ.) ಜಗತ್ಪ್ರಸಿದ್ದವಾದ ಗೊಮ್ಮಟ್ಟ ವಿಗ್ರಹ ಇರುವುದು ಇದರ ಮೇಲೆಯೇ. ಮಿಕ್ಕಂತೆ ಈ ತಾಲ್ಲೂಕು ಅಷ್ಟೇನೂ ಎತ್ತರವಾಗಿಲ್ಲ. ಅಲೆಯಂತೆ ನೆಲ ಏರಿಳಿದು ಸಾಗಿದೆ.ಚನ್ನರಾಯಪಟ್ಟಣ ತಾಲ್ಲೂಕಿನ ಮಣ್ಣು ಸಾಮಾನ್ಯವಾಗಿ ಫಲವತ್ತಾದ್ದು. ತರಿ ಮತ್ತು ಖುಷ್ಕಿ ಬೆಳೆಗಳನ್ನು ಸಾಮಾನ್ಯವಾಗಿ ಬೆಳೆಯಬಹುದು. ಪಶ್ಚಿಮದ ಎಲ್ಲೆಯ ಬಳಿಯ ನೆಲದ ಮಣ್ಣು ಆಳವಾಗಿಲ್ಲ. ಅಲ್ಲದೆ ಕಲ್ಲು ಮಿಶ್ರಿತ ಉಳಿದೆಡೆ ಮರಳಿನಿಂದ ಕೂಡಿದ ತೆಳುಕೆಂಪು ಮಣ್ಣು ಸಾಮಾನ್ಯ. ಅದರಲ್ಲಿ ಹೆಚ್ಚಿನ ವೈವಿಧ್ಯವೇನೂ ಇಲ್ಲ ನುಗ್ಗೇಹಳ್ಳಿಯ ಬಳಿ ಮಾತ್ರ ಕಪ್ಪುಮಣ್ಣು ಇದೆ. ಹೊಳೆನರಸೀಪುರದ ಬಳಿ ಹೇಮಾವತಿಗೆ ಕಟ್ಟಿರುವ ಶ್ರೀರಾಮದೇವರ ಅಣೆಕಟ್ಟಿನ ಉತ್ತರ ನಾಲೆಯಿಂದ ಚನ್ನರಾಯನಪಟ್ಟಣ ತಾಲ್ಲೂಕಿಗೆ ಸ್ವಲ್ಪ ನೀರಾವರಿ ಸೌಲಭ್ಯ ಒದಗಿದೆ. ಈ ನಾಲೆ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿ ಮುಂದುವರಿಯುತ್ತದೆ. ಚನ್ನರಾಯನಪಟ್ಟಣ ತಾಲ್ಲೂಕಿನಲ್ಲಿ 49 ದೊಡ್ಡ ಕೆರೆಗಳೂ 170 ಸಣ್ಣ ಕೆರೆಗಳೂ 11 ಇತರ ಕೆರೆಗಳೂ ಇವೆ. ಇವಗಳು ಒಟ್ಟು ಅಚ್ಚುಕಟ್ಟು, 13,936.37 ಎಕರೆ. ತಾಲ್ಲೂಕಿನಲ್ಲಿ 362 ಎಕರೆಗಳಿಗೆ ನೀರೋದಿಸುವ 247 ಬಾವಿಗಳಿವೆ. ತಾಲ್ಲೂಕಿನಲ್ಲಿರುವ ಅನಾದಿ ಕೆರೆ ಹಾಸನ ಜಿಲ್ಲೆಯ ಎರಡು ಅತ್ಯಂತ ದೊಡ್ಡ ಕೆರೆಗಳ ಪೈಕಿ ಒಂದು. ಇದರ ಅಚ್ಚುಕಟ್ಟಿನ ಪ್ರದೇಶದ ವಿಸ್ತೀರ್ಣ 690.38 ಎಕರೆ. ತಾಲ್ಲೂಕಿನಲ್ಲಿ ಸಾಗುವಳಿಗೆ ಒಳಪಟ್ಟಿರುವ ಒಟ್ಟು ನೆಲ 1,63200 ಎಕರೆ. ಇದರಲ್ಲಿ 23,958 ಎಕರೆಗಳು (ಸಾಗುವಳಿ ನೆಲದ ಸೇ. 8.56) ನೀರಾವರಿಗೆ ಒಳಪಟ್ಟಿವೆ. ತಾಲ್ಲೂಕಿನ ಮುಖ್ಯ ಬೆಳೆಗಳು ರಾಗಿ (22.715 ಹೆಕ್ಟೇರುಗಳಲ್ಲಿ), ಬತ್ತ (10,530 ಎಕರೆಗಳಲ್ಲಿ), ಜೋಳ (1,192 ಹೇಕ್ಟೇರುಗಳಲ್ಲಿ), ನೆಲಗಡಲೆ (3,857 ಎಕರೆಗಳಲ್ಲಿ), ಕಬ್ಬು (1,412 ಹೆಕ್ಟೇರುಗಳಲ್ಲಿ). ಇತರ ಬೆಲೆಗಳು ಮೆಣಸಿನಕಾಯಿ, ಹರಳು, ಎಳ್ಳು, ಹತ್ತಿ , ತೆಂಗು, ಅಡಕೆ, ಆಲೂಗೆಡ್ಡೆ.

ನಗರವನ್ನು ಆಳುತಿದ್ದ ರಾಜನ ಹೆಸರಿನಿಂದ ಬಂದಿದ್ದು ಚನ್ನರಾಯಪಟ್ಟಣ
ನ್ಯಾಯಾಲಯಗಳು

ಚನ್ನರಾಯನಪಟ್ಟಣ ತಾಲ್ಲೂಕು ಹಾಸನ ಜಿಲ್ಲೆ ಮತ್ತು ಸೆಷನ್ಸ್ ನ್ಯಾಯಾಲಯ ಮತ್ತು ಸಿವಿಲ್ ನ್ಯಾಯಾಲಯಗಳ ಅಧಿಕಾರವ್ಯಾಪ್ತಿಗೆ ಒಳಪಟ್ಟಿದೆ. ಚನ್ನರಾಯಪಟ್ಟಣದಲ್ಲಿ ಮುನ್ಸಿಫ್ ಮ್ಯಾಜಿಸ್ಟ್ರೇಟರು ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದೆಮೆಗಳನ್ನು ವಿಚಾರಿಸುತ್ತಾರೆ. 1959ರ ಗ್ರಾಮಪಂಚಾಯಿತಿ ಮತ್ತು ಸ್ಥಳೀಯ ಮಂಡಳಿಗಳ ಅಧಿನಿಯಮದ ಪ್ರಕಾರ ಗ್ರಾಮಪಂಚಾಯಿತಿಗಳಿವೆ. ತಾಲ್ಲೂಕು ಅಭಿವೃದ್ಧಿ ಮಂಡಲಿ ಚನ್ನರಾಯನಪಟ್ಟಣದಲ್ಲಿದೆ. 1970ರಲ್ಲಿ ತಾಲ್ಲೂಕಿನಲ್ಲಿದ್ದ ಜೂನಿಯರ್ ಪ್ರಾಥಮಿಕ ಶಾಲೆಗಳು (1 ರಿಂದ 4ನೆಯ ತರಗತಿ) 217, ಉನ್ನತ ಪ್ರಾಥಮಿಕ ಶಾಲೆಗಳು 16, ಹೊಸ ಮಾದರಿ ಮಾಧ್ಯಮಿಕ ಶಾಲೆಗಳು 11, ಜಿಲ್ಲಾ ಮತ್ತು ತಾಲ್ಲೂಕು ಮಂಡಲಿ ಪ್ರೌಢಶಾಲೆಗಳು ಬಾಗೂರು, ನುಗ್ಗೇಹಳ್ಳಿ, ಶ್ರವಣಬೆಳಗೊಳ, ಉದಯಪುರಗಳಲ್ಲಿವೆ. ಚನ್ನರಾಯನಪಟ್ಟಣದಲ್ಲಿ ಪ್ರೌಢಶಾಲೆಯೂ ಶ್ರವಣಬೆಳಗೊಳದಲ್ಲಿ ಗೋಮ್ಮಟೇಶ್ವರ ಕಾಲೇಜೂ ಉಂಟು. ಇದರ ಹಿಂದಿನ ಹೆಸರು ಕೊಲತೂರು. ಆಗ ಇಲ್ಲಿ ಒಂದು ಅಗ್ರಹಾರ ಮಾತ್ರ ಇತ್ತು. ಮಾಚಲದೇವಿ ಮತ್ತು ಶಾಂತಲದೇವಿ ಎಂಬ ಇಬ್ಬರು ಇದರ ಈಶಾನ್ಯದಲ್ಲಿರುವ ವಿಶಾಲವಾದ ಕೆರೆಯನ್ನು ಕಟ್ಟಿಸಿದರೆಂದು ಹೇಳಲಾಗಿದೆ.

ಸು. 1600ರಲ್ಲಿ ಹೊಳೆನರಸೀಪುರದ ಪಾಳೆಯಗಾರ ಲಕ್ಷ್ಮಪ್ಪನಾಯಕ ಇದನ್ನು ಪಟ್ಟಗಿರಿ ರಾಜನಿಂದ ಪಡೆದುಕೊಂಡ ತನ್ನ ಮಗ ಚನ್ನರಾಯನಿಗೆ ಜಹಗೀರಾಗಿ ಕೊಟ್ಟ. ಚನ್ನಿಗರಾಯ ದೇವಾಲಯದಿಂದ ಊರಿಗೆ ಚನ್ನರಾಯಪಟ್ಟಣ ಎಂಬ ಹೆಸರು ಬಂತು. ಇಲ್ಲಿ ದೊಡ್ಡ ಬಸವಯ್ಯನೆಂಬ ಪಾಳೆಯಗಾರ ಕಟ್ಟಿಸಿದ ಹಳೆಯ ಕೋಟೆಯನ್ನು ಹೈದರ್ ಆಲಿ ಪುನರ್ನಿಮಿಸಿದ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಅರಸೀಕೆರೆ ಶಿವಾಲಯ

ಹಾಸನ ಜಿಲ್ಲೆಯ ಅರಸೀಕೆರೆ ಶಿವಾಲಯ

ಈ ಸಲದ ರಾಜ್ಯೋತ್ಸವ ಪ್ರಶಸ್ತಿ

ಈ ಸಲದ ರಾಜ್ಯೋತ್ಸವ ಪ್ರಶಸ್ತಿಯ ಪಟ್ಟಿ