ಹೋಮಿಯೋಪತಿಯನ್ನು 19 ನೇ ಶತಮಾನದ ಆರಂಭದಲ್ಲಿ ಭಾರತದಲ್ಲಿ ಪರಿಚಯಿಸಲಾಯಿತು. ಇದು ಮೊದಲು ಬಂಗಾಳದಲ್ಲಿ ಪ್ರವರ್ಧಮಾನಕ್ಕೆ ಬಂದಿತು ಮತ್ತು ನಂತರ ಭಾರತದಾದ್ಯಂತ ಹರಡಿತು. ಆರಂಭದಲ್ಲಿ, ಸಿವಿಲ್ ಮತ್ತು ಮಿಲಿಟರಿ ಸೇವೆಗಳಲ್ಲಿ ಹವ್ಯಾಸಿಗಳು ಮತ್ತು ಇತರರಿಂದ ಈ ವ್ಯವಸ್ಥೆಯನ್ನು ವ್ಯಾಪಕವಾಗಿ ಅಭ್ಯಾಸ ಮಾಡಲಾಯಿತು. ಮಹೇಂದ್ರ ಲಾಲ್ ಸಿರ್ಕಾರ್ ಹೋಮಿಯೋಪತಿ ವೈದ್ಯರಾದ ಮೊದಲ ಭಾರತೀಯ.
ಸಿರ್ಕಾರ್ ಅವರ ಮುಂದಾಳತ್ವವನ್ನು ಅನುಸರಿಸಿ ಹಲವಾರು ಅಲೋಪತಿ ವೈದ್ಯರು ಹೋಮಿಯೋಪತಿ ಅಭ್ಯಾಸವನ್ನು ಪ್ರಾರಂಭಿಸಿದರು. ‘ಕಲ್ಕತ್ತಾ ಹೋಮಿಯೋಪತಿ ಮೆಡಿಕಲ್ ಕಾಲೇಜ್’, ಮೊದಲ ಹೋಮಿಯೋಪತಿ ವೈದ್ಯಕೀಯ ಕಾಲೇಜು 1881 ರಲ್ಲಿ ಸ್ಥಾಪಿಸಲಾಯಿತು.
ಬ್ಯಾಚುಲರ್ ಆಫ್ ಹೋಮಿಯೋಪತಿಕ್ ಮೆಡಿಸಿನ್ ಮತ್ತು ಸರ್ಜರಿ ಮತ್ತು ಹೋಮಿಯೋಪತಿ ಕೋರ್ಸ್ಗಳನ್ನು ನೀಡುತ್ತದೆ. ಈ ಕಾಲೇಜನ್ನು ಆಯುಷ್ ಸಚಿವಾಲಯದ ರಾಷ್ಟ್ರೀಯ ಹೋಮಿಯೋಪತಿ ಆಯೋಗ ಗುರುತಿಸಿದೆ ಮತ್ತು ಪಶ್ಚಿಮ ಬಂಗಾಳದ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದೊಂದಿಗೆ ಸಂಯೋಜಿತವಾಗಿದೆ.

ಹೋಮಿಯೋಪತಿ ಎನ್ನುವ ಪದವು ಗ್ರೀಕ್ ಭಾಷೆಯ ಎರಡು ಪದಗಳಿಂದ ಮಾಡಲ್ಪಟ್ಟಿದೆ. “ಹೊಮೋಯ್ಸ್” ಅಂದರೆ, “ಸಮನಾದ”; “ಪ್ಯಾತೋಸ್” ಅಂದರೆ “ನರಳುವಿಕೆ”. ಹೋಮಿಯೋಪತಿ ಎಂದರೆ, ಸರಳವಾಗಿ ಹೇಳುವುದಾದರೆ, ಆರೋಗ್ಯಕರ ವ್ಯಕ್ತಿಗಳು ಸೇವಿಸಿದಲ್ಲಿ ಅವರಲ್ಲಿ ಅದೇ ಖಾಯಿಲೆಯನ್ನು ತರುವ ಸಾಮರ್ಥ್ಯವುಳ್ಳ ಔಷಧಗಳನ್ನು ಅತ್ಯಲ್ಪ ಪ್ರಮಾಣದಲ್ಲಿ ನೀಡುವುದರ ಮೂಲಕ ಚಿಕಿತ್ಸೆ ಮಾಡುವುದು ಎಂದು ಅರ್ಥ. ಅದು ಗುಣಪಡಿಸುವ ಸ್ವಾಭಾವಿಕ ನಿಯಮದ ಮೇಲೆ ಆಧಾರಿತವಾಗಿದೆ- “ಸಿಮಿಲಿಯಾ ಸಿಮಿಲಿಬಸ್ ಕ್ಯುರೇನ್ಟರ್” ಅಂದರೆ, “ಸಮಾನವಾದುದು ಸಮಾನವಾದುದರಿಂದಲೇ ಗುಣಮುಖವಾಗುತ್ತದೆ”.
ಭಾರತದಲ್ಲಿ ಹೋಮಿಯೋಪತಿ ವೈದ್ಯಕೀಯ ಪದ್ಧತಿಯು ಜಾರಿಗೆ ಬಂದು ನೂರ ಐವತ್ತು ವರುಷಗಳೇ ಸಂದಿವೆ. ಅದು ಎಷ್ಟು ಚೆನ್ನಾಗಿ ಭಾರತೀಯ ಸಂಸ್ಕೃತಿಯ ಬೇರು ಹಾಗೂ ಸಂಪ್ರದಾಯಗಳೊಳಗೆ ಅಂತರ್ಗತಗೊಳಿಸಲ್ಪಟ್ಟಿದೆಯೆಂದರೆ, ಅದನ್ನು ಭಾರತದ ರಾಷ್ಟ್ರೀಯ ವೈದ್ಯಕೀಯ ಪದ್ಧತಿಯೆಂದು ಗುರುತಿಸಲಾಗಿದೆ. ಜೊತೆಗೆ ಅದು ದೇಶದ ಹಲವಾರು ಜನರ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಅದರ ಪ್ರಮುಖ ಶಕ್ತಿಯೆಂದರೆ, ಅದು ವ್ಯಕ್ತಿಯ ಆರೋಗ್ಯ ಸಮಸ್ಯೆಗಳ ಪರಹಾರಕ್ಕೆ ಮಾನಸಿಕ, ಆಧ್ಯಾತ್ಮಿಕ, ಭಾವನಾತ್ಮಕ, ಭೌತಿಕ ಕಾಯದ ಮಟ್ಟದ ಎಲ್ಲವನ್ನೂ ಸಮಗ್ರವಾಗಿ ಪರಿಶೀಲಿಸಿ ಪರಿಹಾರೋಪಾಯದ ಮಾರ್ಗವನ್ನು ಸೂಚಿಸುತ್ತದೆ.
ಹೋಮಿಯೋಪತಿಯು ಹಲವಾರು ಪ್ರಾಣಿ, ಸಸ್ಯ, ಖನಿಜ ಮತ್ತು ಕೃತಕ ವಸ್ತುಗಳನ್ನು ಔಷಧಿಯಲ್ಲಿ ಬಳಸಲಾಗುತ್ತದೆ. ಉದಾಹರಣೆಗೆ, ಆರ್ಸೆನಿಕಮ್ ಆಲ್ಬಮ್, ನೇಟ್ರಮ್ ಮ್ಯುರಿಯಾಟಿಕಮ್ , ಲಕೇಸಿಸ್ ಮ್ಯೂಟಾ ಅಫೀಮು ಮತ್ತು ಥೈರಾಯ್ಡಿನಮ್. ಹೋಮಿಯೋಪತಿಯ ವೈದ್ಯರು ನೋಸೋಡಸ್, ಎನ್ನುವ ಚಿಕಿತ್ಸೆಯನ್ನೂ ಬಳಸುತ್ತಾರೆ. ಇದರಲ್ಲಿ, ರೋಗಕಾರಕ ಉತ್ಪನ್ನಗಳಾದ ಮಲ, ಮೂತ್ರ ಮತ್ತು ಉಸಿರಾಟದ ತ್ಯಾಜ್ಯಗಳು, ರಕ್ತ, ಮತ್ತು ಅಂಗಾಂಶಗಳನ್ನು ಬಳಸುತ್ತಾರೆ. ಆರೋಗ್ಯವಂತ ಮಾದರಿಗಳಿಂದ ತಯಾರಿಸಿದ ಹೋಮಿಯೋಪತಿಯ ಔಷಧಿಗಳನ್ನು ಸಾರ್ಕೋಡಸ್ ಎನ್ನುತ್ತಾರೆ.

ಕೋಲ್ಕತ್ತಾ ಸಂಸ್ಥೆಯು ಭಾರತದಲ್ಲಿ ಹೋಮಿಯೋಪತಿಯನ್ನು ಜನಪ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. 1973 ರಲ್ಲಿ, ಭಾರತ ಸರ್ಕಾರವು ಹೋಮಿಯೋಪತಿಯನ್ನು ರಾಷ್ಟ್ರೀಯ ವೈದ್ಯಕೀಯ ವ್ಯವಸ್ಥೆಗಳಲ್ಲಿ ಒಂದೆಂದು ಗುರುತಿಸಿತು ಮತ್ತು ಅದರ ಶಿಕ್ಷಣ ಮತ್ತು ಅಭ್ಯಾಸವನ್ನು ನಿಯಂತ್ರಿಸಲು ಸೆಂಟ್ರಲ್ ಕೌನ್ಸಿಲ್ ಆಫ್ ಹೋಮಿಯೋಪತಿ ಅನ್ನು ಸ್ಥಾಪಿಸಿತು. ಈಗ, ಅರ್ಹ ನೋಂದಾಯಿತ ಹೋಮಿಯೋಪತಿಗಳು ಮಾತ್ರ ಭಾರತದಲ್ಲಿ ಹೋಮಿಯೋಪತಿಯನ್ನು ಅಭ್ಯಾಸ ಮಾಡಬಹುದು. ಪ್ರಸ್ತುತ, ಭಾರತದಲ್ಲಿ, ಅಲೋಪತಿ ಮತ್ತು ಆಯುರ್ವೇದದ ನಂತರ ಹೋಮಿಯೋಪತಿ ವೈದ್ಯಕೀಯ ಚಿಕಿತ್ಸೆಯ ಮೂರನೇ ಅತ್ಯಂತ ಜನಪ್ರಿಯ ವಿಧಾನವಾಗಿದೆ. ಪ್ರಸ್ತುತ 200,000 ಕ್ಕೂ ಹೆಚ್ಚು ನೋಂದಾಯಿತ ಹೋಮಿಯೋಪತಿ ವೈದ್ಯರು ಇದ್ದಾರೆ, ಪ್ರತಿ ವರ್ಷ ಸರಿಸುಮಾರು 12,000 ಹೆಚ್ಚು ಸೇರಿಸಲಾಗುತ್ತದೆ.
ಖಾಯಿಲೆಗಳಿಗೆ ಔಷಧಿಯನ್ನು ತಯಾರಿಸುವಾಗ, ಹೋಮಿಯೋಪತಿ ಚಿಕಿತ್ಸಕರು ಡೈನಮೈಸೇಶನ್ ಅಥವಾ ಪೋಟೆಂಟೈಸೇಶನ್ ಎನ್ನುವ ಪ್ರಕ್ರಿಯೆಯನ್ನು ಬಳಸುತ್ತಾರೆ. ಇಲ್ಲಿ ಒಂದು ದ್ರವ್ಯವನ್ನು ಆಲ್ಕೋಹಾಲ್ ಅಥವಾ ಆಸವಿತ ನೀರನ್ನು ಬಳಸಿ ದುರ್ಬಲಗೊಳಿಸಲಾಗುತ್ತದೆ ಮತ್ತು ಒಂದು ಸ್ಥಿತಿಸ್ಥಾಪಕತ್ವದ ಕಾಯಕ್ಕೆ ಹತ್ತು ಬಾರಿ ಗಾಢವಾಗಿ ತಗಲಿಸಿ ಬಲವಾಗಿ ಅಲುಗಾಡಿಸಲಾಗುತ್ತದೆ. ಈ ಪ್ರಕ್ರಿಯೆಯನ್ನು ಸಕ್ಯೂಶನ್ ಎಂದು ಕರೆಯುತ್ತಾರೆ. ಹಾನ್ಮನ್ನನು ಚಿಕಿತ್ಸೆ ನೀಡುತ್ತಿರುವ ಖಾಯಿಲೆಗಳು ತೋರಿಸುವ ಲಕ್ಷಣಗಳನ್ನೇ ಉಂಟುಮಾಡುವ ಪದಾರ್ಥಗಳನ್ನು ಬಳಸುವುದನ್ನು ಸಮರ್ಥಿಸಿದ್ದನು. ಆದರೆ, ಪದಾರ್ಥದ ಪ್ರಮಾಣವು ಕೆಲವೊಮ್ಮೆ ಲಕ್ಷಣಗಳನ್ನು ತೀವ್ರಗೊಳಿಸುತ್ತದೆ, ಮತ್ತು ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ ಹಾಗೂ ಕೆಲವೊಮ್ಮೆ ವಿಷಕಾರಕ ಪ್ರತಿಕ್ರಿಯೆಯನ್ನು ಹುಟ್ಟುಹಾಕುತ್ತದೆ ಎಂಬುದನ್ನು ಆತ ಕಂಡುಕೊಂಡನು. ಆದುದರಿಂದ ಆತ ದ್ರವ್ಯವನ್ನು ಬಳಕೆಗೆ ಮುನ್ನ ದುರ್ಬಲಗೊಳಿಸಬೇಕೆಂದು ಸಲಹೆ ನೀಡಿದನು. ಸಕ್ಯೂಶನ್ ಕ್ರಿಯೆಯು ದ್ರವ್ಯದ ಜೀವತತ್ವವನ್ನು ಕ್ರಿಯಾಶೀಲವನ್ನಾಗಿಸಿ ಪ್ರಬಲಗೊಳಿಸುತ್ತದೆ ಎಂದು ಹಾನ್ಮನ್ನನು ನಂಬಿದ್ದನು. ಸಕ್ಯೂಶನ್ ಪ್ರಕ್ರಿಯೆಯನ್ನು ಸುಗಮಗೊಳಿಸಲು ಒಂದು ಬದಿಯಲ್ಲಿ ಚರ್ಮದಿಂದ ಆವೃತವಾದ ಮತ್ತು ಕುದುರೆಯ ಕೂದಲಿನಿಂದ ತುಂಬಲ್ಪಟ್ಟ ಹೊಡೆಯುವ ಮರದ ಹಲಗೆಯನ್ನು ಒಬ್ಬ ತಡಿ ಮಾಡುವಾತನಿಂದ ರಚಿಸಿಕೊಂಡಿದ್ದನು. ಕರಗದ, ವಿಲಯನವಾಗದ ಘನಪದಾರ್ಥಗಳಾದ ಸ್ಫಟಿಕದ ಶಿಲ್, ಸಿಂಪಿ ಚಿಪ್ಪು ಮೊದಲಾದುವುಗಳನ್ನು ಲಾಕ್ಟೋಸ್ ಜೊತೆಗೆ ಅರೆಯುವುದರ ಮೂಲಕ ದುರ್ಬಲಗೊಳಿಸಲಾಗುತ್ತದೆ.

ಹೋಮಿಯೋಪತಿಯಿಂದ ಪಡೆದ ಒಂದು ಪದ್ಧತಿಯೇ ಐಸೋಪತಿ. 1830ರ ಅವಧಿಯಲ್ಲಿ ಇದನ್ನು ಹುಟ್ಟುಹಾಕಿದವರು ಜೊಹಾನ್ ಜಾಸೆಫ್ ವಿಲ್ಹೆಮ್ ಲಕ್ಸ್. ಐಸೋಪತಿಯು ಹೋಮಿಯೋಪತಿಯಿಂದ ಸಾಮಾನ್ಯವಾಗಿ ಭಿನ್ನವಾಗಿರುವುದು, “ನೋಸೋಡ್ಸ್”ಗಳಿಂದ. ಇಲ್ಲಿ “ನೋಸೋಡ್ಸ್”ಗಳು ರೋಗಕಾರಕ ವಸ್ತುಗಳಿಂದ ಅಥವಾ ರೋಗಗಳ ಉತ್ಪನ್ನಗಳಿಂದ, ಉದಾಹರಣೆ ಸೋಂಕು ದ್ರವ ಇವೇ ಮೊದಲಾದುವುಗಳಿಂದ ಹಲವಾರು “ಹೋಮಿಯೋಪತಿ ಲಸಿಕೆ”ಗಳು ವಿವಿಧ ಬಗೆಯ ಐಸೋಪತಿಯಾಗಿದೆ.
ಪುಷ್ಪ ಔಷಧಿಯನ್ನು ಹೂವುಗಳನ್ನು ನೀರಿನಲ್ಲಿಟ್ಟು ಅವುಗಳನ್ನು ಸೂರ್ಯನ ಬಿಸಿಲಿಗೆ ಒಡ್ಡುವುದರ ಮೂಲಕ ಪಡೆಯಬಹುದಾಗಿದೆ. ಇವುಗಳಲ್ಲಿ ಅತ್ಯಂತ ಪ್ರಖ್ಯಾತವಾದವುಗಳೆಂದರೆ ಬಾಕ್ ಹೂವುಗಳ ಔಷಧಿ ರೆಮೆಡಿ, ಇವುಗಳನ್ನು ವೃದ್ಧಿಪಡಿಸಿದವರು ಶಸ್ತ್ರಚಿಕಿತ್ಸಕರೂ ಹೋಮಿಯೋಪತಿಯ ವೈದ್ಯರೂ ಆಗಿದ್ದ ಎಡ್ವರ್ಡ್ ಬಾಕ್ ಅನ್ನುವವರು. ಈ ಪದ್ಧತಿಯನ್ನು ಸೂಚಿಸುವವರೂ ಹೋಮಿಯೋಪತಿಯ ವೈದ್ಯರಂತೆಯೇ ನಮ್ಮಲ್ಲಿರುವ ಒಂದು ಜೀವತತ್ವದ ಕುರಿತು ಹೇಳುತ್ತಾರಾದರೂ, ಔಷಧಿಗಳು ಅದೇ ಜೀವತತ್ವದ ಮೂಲಕ ಕೆಲಸಮಾಡುತ್ತದೆ.
ಎಲೆಕ್ಟ್ರೋಹೋಮಿಯೋಪತಿಯು 19ನೇ ಶತಮಾನದಲ್ಲಿ ಚಾಲ್ತಿಯಲ್ಲಿದ್ದ ಪದ್ಧತಿಯಾಗಿದ್ದು, ಇಲ್ಲಿ ಹೋಮಿಯೋಪತಿ ಚಿಕಿತ್ಸೆ ಹಾಗೂ ವಿದ್ಯುತ್ ಚಿಕಿತ್ಸೆಯನ್ನು ಜೊತೆಯಾಗಿ ನೀಡಲಾಗುತ್ತಿತ್ತು.
ಧನ್ಯವಾದಗಳು.
GIPHY App Key not set. Please check settings