in ,

ಒಣ ದ್ರಾಕ್ಷಿಯನ್ನು ನೆನೆಸಿಟ್ಟು ಆ ನೀರನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಪ್ರಯೋಜನ ಇದೆ

ಒಣ ದ್ರಾಕ್ಷಿಯನ್ನು ನೆನೆಸಿಟ್ಟು ಆ ನೀರನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಪ್ರಯೋಜನ
ಒಣ ದ್ರಾಕ್ಷಿಯನ್ನು ನೆನೆಸಿಟ್ಟು ಆ ನೀರನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಪ್ರಯೋಜನ

ಒಣದ್ರಾಕ್ಷಿಯು ಒಣಗಿಸಿದ ದ್ರಾಕ್ಷಿ. ಒಣದ್ರಾಕ್ಷಿಯನ್ನು ವಿಶ್ವದ ಹಲವು ಪ್ರದೇಶಗಳಲ್ಲಿ ಉತ್ಪಾದಿಸಲಾಗುತ್ತದೆ ಮತ್ತು ಇದನ್ನು ಹಸಿಯಾಗಿ ತಿನ್ನಬಹುದು ಅಥವಾ ಅಡುಗೆ, ಬೇಕಿಂಗ್ ಮತ್ತು ಮದ್ಯ ತಯಾರಿಕೆಯಲ್ಲಿ ಬಳಸಬಹುದು. ಒಣದ್ರಾಕ್ಷಿಯಲ್ಲಿ ಹಲವು ವಿಧಗಳಿವೆ ಸುಲ್ತಾನ, ಕರಂಟ್ ಇತ್ಯಾದಿ.

ಪ್ರತೀದಿನ ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನೆ ಹಾಕಿ ಆ ನೀರನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಒಳ್ಳೆಯದು.

ಒಣ ದ್ರಾಕ್ಷಿಯನ್ನು ನೀರಿಗೆ ಹಾಕಿ ತಿಂದರೆ ಎಷ್ಟು ಒಳ್ಳೆಯದು ಎಂದು ಹೇಳುವುದನ್ನು ಕೇಳಿರಬಹುದು. ಇನ್ನು ಒಣದ್ರಾಕ್ಷಿಯನ್ನು ಹಾಗೇ ತಿನ್ನಲು ಚೆಂದ, ಡೆಸರ್ಟ್‌ಗಳಿಗೆ ಹಾಕಿದರೂ ಅಂತೂ ಅದರ ಟೇಸ್ಟ್‌ ಇನ್ನೂ ಚೆನ್ನಾಗಿರುತ್ತೆ.

ಒಣ ದ್ರಾಕ್ಷಿಯನ್ನು ನೆನೆಸಿಟ್ಟು ಆ ನೀರನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಪ್ರಯೋಜನ ಇದೆ
ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನೆ ಹಾಕಿ

ಒಣ ದ್ರಾಕ್ಷಿಯನ್ನು ನೆನೆಯಲು ಹಾಕಿಟ್ಟು ಅದರ ನೀರನ್ನು ಕುಡಿದರೆ ಅದು ಜೀರ್ಣಕ್ರಿಯೆಗೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಅದೇ ರೀತಿಯಲ್ಲಿ ಇನ್ನಿತರ ಹಲವಾರು ಲಾಭಗಳು ಇದರಿಂದ ಸಿಗುವುದು. ಹೃದಯದ ಆರೋಗ್ಯ ಸುಧಾರಣೆ ಮಾಡುವ ಜತೆಗೆ ಇದು ಪ್ರತಿರೋಧಕ ಶಕ್ತಿ ವೃದ್ಧಿಸುವುದು.

ಇದರಲ್ಲಿ ಔಷಧೀಯ ಗುಣಗಳನ್ನು ಕೂಡ ಹೊಂದಿದೆ. ಆಯುರ್ವೇದದಲ್ಲಿ ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಇದನ್ನು ‘ಡ್ರಾಕ್ಮಾ’ ಎಂದೂ ಕರೆಯುತ್ತಾರೆ. ಇದರ ಸೇವನೆಯಿಂದ ದೇಹದ ಅನೇಕ ರೋಗಗಳಿಂದ ದೂರವಿರಬಹುದು. ಇದರಲ್ಲಿ ಫೈಬರ್, ಫೈಟೊ ಪೋಷಕಾಂಶಗಳು ಮತ್ತು ಆಂಟಿ-ಆಕ್ಸಿಡೆಂಟ್‌ಗಳಾದ ವಿಟಮಿನ್ ಇ ಮತ್ತು ಸೆಲೆನಿಯಮ್ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತವೆ. ದಿನದಲ್ಲಿ 5 ಕ್ಕಿಂತ ಹೆಚ್ಚು ಒಣದ್ರಾಕ್ಷಿಗಳನ್ನು ತಿನ್ನಬಾರದು. ಒಣದ್ರಾಕ್ಷಿ ನೆನೆಸಿದ ನೀರನ್ನು ಕುಡಿಯುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು.

ರಾತ್ರಿ ಮಲಗುವ ಮುನ್ನ 4-5 ಒಣ ದ್ರಾಕ್ಷಿಯನ್ನು ತೊಳೆಯಿರಿ. ನಂತರ ಅದನ್ನು ಒಂದು ಲೋಟ ನೀರಿನಲ್ಲಿ ನೆನೆಸಿ. ಬೆಳಿಗ್ಗೆ ಎರಡನೇ ದಿನ, ಆ ನೀರನ್ನು ಫಿಲ್ಟರ್ ಮಾಡಿ, ಅದರಲ್ಲಿರುವ ದ್ರಾಕ್ಷಿಗಳನ್ನು ಬೇರ್ಪಡಿಸಿ. ಖಾಲಿ ಹೊಟ್ಟೆಯಲ್ಲಿ ಆ ನೀರನ್ನು ಕುಡಿಯಿರಿ. ನೀವು ಬಯಸಿದರೆ, ನೀವು 15 ನಿಮಿಷಗಳ ನಂತರ ನೆನೆಸಿದ ಒಣದ್ರಾಕ್ಷಿಗಳನ್ನು ಸಹ ಸೇವಿಸಬಹುದು.

ಇದರಿಂದ ಏನು ಪ್ರಯೋಜನ?

ಒಣದ್ರಾಕ್ಷಿ ನೀರು ನಿಮ್ಮ ಕೂದಲನ್ನು ಗಟ್ಟಿಯಾಗಿಸಲು ಸಹಾಯಕಾರಿಯಾಗಿದೆ ಹಾಗು ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ. ಕೂದಲು ಚಂದವಾಗಿ ದಪ್ಪನೆ ಉದ್ದಗೆ ಬೆಳೆಯುತ್ತದೆ.

ಅನೇಕ ಆರೋಗ್ಯ ಸಮಸ್ಯೆಗಳನ್ನು ದೂರವಿಡುವ ಸಾಮರ್ಥ್ಯ ಒಣ ದ್ರಾಕ್ಷಿ ನೆನೆ ಹಾಕಿದ ನೀರಿಗಿದೆ. ಲಿವರ್‌ ಸಂಬಂಧಿತ ಸಮಸ್ಯೆಯನ್ನು ನಿವಾರಿಸಲು ಇದನ್ನು ಹಿಂದಿನ ಕಾಲದಿಂದಲೂ ಬಳಸುತ್ತಾ ಬರುತ್ತಿದೆ. ಲಿವರ್‌ ಸಮಸ್ಯೆ ಇದು ಅದ್ಭುತವಾದ ಮನೆಮದ್ದಾಗಿದೆ.

ಅಸಿಡಿಟಿಗೆ ಅತ್ಯುತ್ತಮವಾದ ಮನೆಮದ್ದು. ತುಂಬಾ ಅಸಿಡಿಟಿ ಸಮಸ್ಯೆ ಇದ್ದರೆ ಇದನ್ನು ಟ್ರೈ ಮಾಡಿ ನೋಡಿ, ಉತ್ತಮ ಪರಿಹಾರ ಸಿಗುವುದು. ಇದು ಹೊಟ್ಟೆಯಲ್ಲಿರುವ ಆಮ್ಲವನ್ನು ನಿಯಂತ್ರಿಸಲು ಸಹಕಾರಿ. ಆದ್ದರಿಂದ ಆಮ್ಲೀಯ ಸಮಸ್ಯೆ ತಡೆಗಟ್ಟುತ್ತದೆ.

ದೇಹದಲ್ಲಿ ಇರುವ ಹಾನಿಕಾರಕ ವಿಷಕಾರಿ ಅಂಶಗಳನ್ನು ದೂರ ಮಾಡುವುದು. ಈ ನೀರು ಯಕೃತ್ ನ ಬಯೋಕೆಮಿಕಲ್ ಪ್ರಕ್ರಿಯೆಯನ್ನು ಸುಧಾರಣೆ ಮಾಡುವುದು ಮತ್ತು ರಕ್ತವನ್ನು ಶುದ್ಧೀಕರಿಸುವುದು. ಇದು ಯಕೃತ್ ನ್ನು ನಿರ್ವಿಷಗೊಳಿಸಲು ತುಂಬಾ ಒಳ್ಳೆಯದು.

ಒಣ ದ್ರಾಕ್ಷಿಯನ್ನು ನೆನೆಸಿಟ್ಟು ಆ ನೀರನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಪ್ರಯೋಜನ ಇದೆ
ಒಣದ್ರಾಕ್ಷಿ

ಒಣದ್ರಾಕ್ಷಿಯಲ್ಲಿ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಕಂಡುಬರುತ್ತವೆ, ಇದರ ಸೇವನೆಯು ಅನೇಕ ಚರ್ಮದ ಸಮಸ್ಯೆಗಳಿಂದ ತ್ವಚೆಯನ್ನು ಕಾಪಾಡಿಕೊಳ್ಳುತ್ತದೆ. ಅಷ್ಟೇ ಅಲ್ಲದೆ ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ.

ಒಣ ದ್ರಾಕ್ಷಿ ನೀರು ದೇಹದಲ್ಲಿರುವ ಬೇಡದ ಕಶ್ಮಲವನ್ನು ಹೊರ ಹಾಕಲು ಸಹಕಾರಿಯಾಗಿದೆ. ಇದು ಲಿವರ್‌ನ ಕಾರ್ಯ ಚಟುವಟಿಕೆ ವೃದ್ಧಿಸುವುದರ ಜೊತೆಗೆ ರಕ್ತವನ್ನೂ ಕೂಡ ಶುದ್ಧೀಕರಿಸುವುದು.

ದ್ರಾಕ್ಷಿ ನೀರಿನಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಅಂಶವು ಪ್ರತಿರೋಧಕ ಶಕ್ತಿ ವೃದ್ಧಿ ಮಾಡುವುದು. ಕೊರೊನಾವು ಮತ್ತೆ ಕೇಕೆ ಹಾಕಲು ಆರಂಭಿಸಿರುವ ಕಾರಣದಿಂದಾಗಿ ಪ್ರತಿರೋಧಕ ಶಕ್ತಿಯು ಪ್ರಬಲವಾಗಿ ಇರಬೇಕು. ನಿಮ್ಮ ಆಹಾರ ಕ್ರಮದಲ್ಲಿ ದ್ರಾಕ್ಷಿ ನೀರನ್ನು ಸೇರಿಸಿಕೊಂಡರೆ ಆಗ ವೈರಸ್ ನ್ನು ದೂರ ಮಾಡಬಹುದು.

ಒಣ ದ್ರಾಕ್ಷಿಯಲ್ಲಿ ಕ್ಯಾಲ್ಸಿಯಂ ಅಂಶವಿದೆ, ಇದು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದನ್ನು ಪ್ರತಿದಿನ ಸೇವಿಸುವುದರಿಂದ ಸಂಧಿವಾತ ಮತ್ತು ಸಂಧಿವಾತದಂತಹ ಅನೇಕ ಕಾಯಿಲೆಗಳನ್ನು ದೂರವಿಡಬಹುದು.

ಒಣದ್ರಾಕ್ಷಿ ನೆನಸಿಟ್ಟ ನೀರಿನಲ್ಲಿ ಕಬ್ಬಿಣಾಂಶ ಹೇರಳವಾಗಿರುತ್ತದೆ. ವ್ಯಕ್ತಿಯ ದೇಹದಲ್ಲಿ ಕಬ್ಬಿಣದ ಕೊರತೆ ಕಂಡುಬಂದರೆ , ಆ ವ್ಯಕ್ತಿಯು ರಕ್ತಹೀನತೆಯಂತಹ ಗಂಭೀರ ಕಾಯಿಲೆಗಳಿಂದ ಬಳಲುತಿರಬಹುದು. ಹಾಗಾಗಿ ರಕ್ತದ ಕೊರತೆಯಂತ ಸಮಸ್ಯೆ ಇದ್ದವರು ಒಣದ್ರಾಕ್ಷಿಯ ನೀರನ್ನು ದಿನನಿತ್ಯ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.

ಒಣ ದ್ರಾಕ್ಷಿಯ ನೀರು ರಕ್ತವನ್ನು ಶುದ್ಧೀಕರಿಸುವುದರಿಂದ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಅಲ್ಲದೆ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ ನಿಮ್ಮ ಹೃದಯದ ಸ್ವಾಸ್ಥ್ಯ ಹೆಚ್ಚಿಸುತ್ತದೆ.

ದ್ರಾಕ್ಷಿಯಲ್ಲಿ ಇರುವ ಆಂಟಿಆಕ್ಸಿಡೆಂಟ್ ಅಂಶವು ದೇಹವನ್ನು ಫ್ರೀ ರ್ಯಾಡಿಕಲ್ ನಿಂದ ತಡೆಯುವುದು ಹಾಗೂ ಕ್ಯಾನ್ಸರ್ ನಿಂದ ರಕ್ಷಣೆ ನೀಡುವುದು.

ಬಿಕ್ಕಳಿಕೆ ಅನುಭವ ಆಗಿರುತ್ತದೆ ಆ ಸಮಯದಲ್ಲಿ ಒಂದೆರಡು ಒಣ ದ್ರಾಕ್ಷಿಯನ್ನು ಬಾಯಿಯಲ್ಲಿ ಹಾಕಿಕೊಂಡರೆ ಬಿಕ್ಕಳಿಕೆ ಕಡಿಮೆಯಾಗುತ್ತದೆ.

ದಿನಾ ಈ ನೀರು ಕುಡಿಯುತ್ತಿದ್ದರೆ ಅಜೀರ್ಣ, ಮಲಬದ್ಧತೆ ಈ ಸಮಸ್ಯೆ ಇರಲ್ಲ. ಇದು ಜೀರ್ನಕ್ರಿಯೆಗೆ ತುಂಬಾನೇ ಸಹಕಾರಿಯಾಗಿರುವುದರಿಂದ ಮಲಬದ್ಧತೆ ಸಮಸ್ಯೆ ತಡೆಗಟ್ಟುವುದು.

ಒಣ ದ್ರಾಕ್ಷಿಯನ್ನು ನೆನೆಸಿಟ್ಟು ಆ ನೀರನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಪ್ರಯೋಜನ ಇದೆ
ಕಪ್ಪು ಒಣದ್ರಾಕ್ಷಿ ಕೂಡ ಒಳ್ಳೆಯದೆ

ದೇಹದ ತೂಕವನ್ನು ಇಳಿಸುವುದರಲ್ಲೂ ಹಾಗು ದಣಿದು ಬಂದಾಗ ದಾಹ ನೀಗಿಸಿ ನಿದ್ರಾಹೀನತೆಯಾಗದಂತೆ ಒಳ್ಳೆ ನಿದ್ದೆ ಕೊಡುವುದರಲ್ಲೂ ಪ್ರಮುಖ ಪತ್ರ ವಯಿಸುತ್ತವೆ. ರಕ್ತ ಹೀನತೆಯಿಂದಲೂ ದೂರವಿಡುತ್ತದೆ. ಒಣ ದ್ರಾಕ್ಷಿಯಲ್ಲಿ ಫ್ರಕ್ಟೋಸ್‌, ಗ್ಲುಕೋಸ್‌ ಹೆಚ್ಚಾಗಿದ್ದು ದೇಹಕ್ಕೆ ಶಕ್ತಿಯನ್ನು ತುಂಬುವುದು ಹಾಗೂ ನಾರಿನಂಶ ಇರುವುದರಿಂದ ಜೀರ್ಣಕ್ರಿಯೆಗೂ ಸಹಕಾರಿ. ತೂಕ ಇಳಿಕೆಗೆ ಈ ಎಲ್ಲಾ ಅಂಶಗಳು ಅವಶ್ಯಕವಾಗಿದೆ.

ದೇಹದಲ್ಲಿ ಕಶ್ಮಲ ಹೆಚ್ಚಾದರೆ ಕ್ಯಾನ್ಸರ್‌ ಕಣಗಳ ಉತ್ಪತ್ತಿಯಾಗುವುದು. ಒಣ ದ್ರಾಕ್ಷಿಯ ನೀರು ದೇಹದಲ್ಲಿರುವ ಕಶ್ಮಲ ಹೊರ ಹಾಕುವುದರಿಂದ ಕ್ಯಾನ್ಸರ್‌ನಂಥ ಮಾರಕ ರೋಗ ತಡೆಗಟ್ಟಲು ಸಹಕಾರಿಯಾಗಿದೆ.

ದ್ರಾಕ್ಷಿಯಲ್ಲಿ ಉತ್ತಮ ಪ್ರಮಾಣದ ಫ್ರಾಕ್ಟೋಸ್ ಮತ್ತು ಗ್ಲುಕೋಸ್ ಅಂಶವಿದ್ದು, ಇದು ದೇಹಕ್ಕೆ ಶಕ್ತಿ ಒದಗಿಸುವುದು. ಇದರಲ್ಲಿ ಇರುವಂತಹ ನಾರಿನಾಂಶವು ಹೊಟ್ಟೆ ತುಂಬಿರುವಂತೆ ಮಾಡುವುದು.

ಬೆನ್ನು ಮೂಳೆಯ ಆರೋಗ್ಯಕ್ಕೂ ಒಳ್ಳೆಯದು. ಒಣದ್ರಾಕ್ಷಿಯಲ್ಲಿ ಬೋರೋನ್ ಅಂಶವಿದೆ, ಅಲ್ಲದೆ ಕ್ಯಾಲ್ಸಿಯಂ ಅಂಶವೂ ಇದೆ.ಈ ನೀರು ಕುಡಿಯುವುದರಿಂದ ಮೂಳೆಯ ಆರೋಗ್ಯಕ್ಕೆ ಒಳ್ಳೆಯದು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ವಿಶ್ವ ತೇವಭೂಮಿ ದಿನ

ಫೆಬ್ರವರಿ ೨ರಂದು, ವಿಶ್ವ ತೇವಭೂಮಿ ದಿನ

ಗಣೇಶನು ಇಲಿಯನ್ನೇರಿ ಸವಾರಿ ಮಾಡುವುದರ ಹಿಂದಿನ ದಂತಕಥೆ

ಗಣೇಶನು ಇಲಿಯನ್ನೇರಿ ಸವಾರಿ ಮಾಡುವುದರ ಹಿಂದಿನ ದಂತಕಥೆ