in ,

ನವಿಲುಕೋಸು ಬೆಳೆ

ನವಿಲುಕೋಸು ಬೆಳೆ
ನವಿಲುಕೋಸು ಬೆಳೆ

ನವಿಲುಕೋಸು ಒಂದು ಬಹುವಾರ್ಷಿಕ ತರಕಾರಿ, ಮತ್ತು ಅದು ಎಲೆಕೋಸಿನ ಒಂದು ತಗ್ಗಾದ, ದಪ್ಪನೆಯ ತಳಿ. ನವಿಲುಕೋಸನ್ನು ಹಸಿಯಾಗಿ ಅಥವಾ ಬೇಯಿಸಿ ತಿನ್ನಬಹುದು. ನವಿಲುಕೋಸನ್ನು ಪಾರ್ಶ್ವ ವರ್ಧನೋತಕ ಬೆಳವಣಿಗೆಗಾಗಿ ಕೃತಕ ಆಯ್ಕೆಯಿಂದ ಸೃಷ್ಟಿಸಲಾಗಿದೆ ಪ್ರಕೃತಿಯಲ್ಲಿ ಅದರ ಮೂಲ ಎಲೆಕೋಸು, ಬ್ರಾಕಲಿ, ಹೂಕೋಸು, ಕೇಲ್, ಕಾಲರ್ಡ್ ಸೊಪ್ಪು, ಮತ್ತು ಬ್ರಸಲ್ಸ್ ಮೊಳಕೆಯಂತಹದ್ದೆ : ಅವೆಲ್ಲವನ್ನು ಕಾಡು ಕೋಸು ಸಸ್ಯದಿಂದ ಬೆಳೆಸಲಾಗಿದೆ ಮತ್ತು ಅದೇ ಜಾತಿ. ಶೇಷವಾಗಿ ಬಳಕೆಯಲ್ಲಿರುವ ಒಂದು ಜನಪ್ರಿಯ ತರಕಾರಿ ಸಸ್ಯ. ನವಿಲು ಕೋಸು ಪರ್ಯಾಯ ನಾಮ. ಬ್ರ್ಯಾಸಿಕೇಸೀ ಕುಟುಂಬಕ್ಕೆ ಸೇರಿದೆ. ಇದರ ಇಂಗ್ಲಿಷ್ ಹೆಸರು ಕೊಹ್ಲ್ ರಬಿ. ವೈಜ್ಞಾನಿಕ ಹೆಸರು ಬ್ರ್ಯಾಸಿಕ ಓಲರೇಸಿಯ ವೆರೈಟಿ ಗಾಂಗೈಲಾಯಿಡಿಸ್ ಅಥವಾ ಬ್ರ್ಯಾಸಿಕ ಕಾಲರೇಪ. ಇದರಲ್ಲಿ ಸುಮಾರು ನೂರೈವತ್ತು ಬಗೆಗಳಿವೆ. ಇವುಗಳಲ್ಲಿ ಕೆಲವು ಬಗೆಗಳು ಏಕವಾರ್ಷಿಕಗಳಾದರೆ ಇನ್ನು ಕೆಲವು ದ್ವೈವಾರ್ಷಿಕಗಳು. ಕೆಲವನ್ನು ಎಣ್ಣೆಬೀಜಗಳಿಗಾಗಿಯೂ ಇನ್ನು ಕೆಲವನ್ನು ಕಾಯಿಪಲ್ಯಗಳಿಗಾಗಿಯೂ ಬೆಳೆಸುತ್ತಾರೆ. ಬ್ರ್ಯಾಸಿಕ ಓಲರೇಸಿಯ ಎಂಬ ಪ್ರಭೇದದಲ್ಲಿಯೇ ಹಲವಾರು ಬಗೆಗಳಿವೆ. ಉದಾಹರಣೆಗೆ ಎಲೆಕೋಸು ಮತ್ತು ಹೂಕೋಸು ಮುಂತಾದವು. ಇವು ತಮ್ಮ ಕಾಂಡ ಎಲೆ ಮತ್ತು ಹೂಗೊಂಚಲುಗಳ ಗುಣಲಕ್ಷಣಗಳಲ್ಲಿ ವ್ಯತ್ಯಾಸವನ್ನು ತೋರಿಸುತ್ತವೆ.

ಗೆಡ್ಡೆಕೋಸು ಪ್ರಧಾನವಾಗಿ ಉತ್ತರ ಸಮಶೀತೋಷ್ಣವಲಯದ ಬೆಳೆ. ಉತ್ತರ ಯುರೋಪಿನ ಕರಾವಳಿ ಪ್ರದೇಶಗಳು ಇದರ ತವರು ಎಂದು ಅಭಿಪ್ರಾಯ ಪಡಲಾಗಿದೆ. ಆದರೆ ಚಳಿಗಾಲದ ಬೆಳೆಯಾಗಿ ಉಷ್ಣವಲಯದಲ್ಲೂ ಬೆಳೆಸಬಹುದು. ಭಾರತದಲ್ಲಿ ಇದನ್ನು ಮುಂಬಯಿ, ಬರೋಡ, ಅಸ್ಸಾಂ, ಉತ್ತರ ಪ್ರದೇಶ ಮತ್ತು ಪಂಜಾಬುಗಳಲ್ಲಿ ಅಧಿಕವಾಗಿ ಬೆಳೆಸುತ್ತಾರೆ.

ಗೆಡ್ಡೆಕೋಸಿನ ಕೃಷಿಗೆ ತಂಪಾದ ಹಾಗೂ ತೇವಾಂಶವಿರುವ ಹವೆ ಅಗತ್ಯ. ಆದ್ದರಿಂದ ಭಾರತದಲ್ಲಿ ಇದನ್ನು ಚಳಿಗಾಲದ ಬೆಳೆಯನ್ನಾಗಿ ಬೆಳೆಸುವುದೇ ಹೆಚ್ಚು. ಅದರಲ್ಲೂ ಉತ್ತರ ಭಾರತದಲ್ಲಿ ಇದರ ಕೃಷಿ ಬಹಳವಾಗಿದೆ. ಬೆಟ್ಟಪ್ರದೇಶಗಳಲ್ಲಿ ಇದನ್ನು ವಸಂತ ಋತುವಿನಲ್ಲಿ ಅಥವಾ ಬೇಸಗೆ ಕಾಲದ ಆರಂಭದಲ್ಲಿ ಬೆಳೆಸಲಾಗುತ್ತದೆ. ಕೆಲವು ಕಡೆಗಳಲ್ಲಿ ವರ್ಷಕ್ಕೆ ಎರಡು ಬೆಳೆಗಳನ್ನೂ ತೆಗೆಯುವುದುಂಟು. ಮಣ್ಣಿನ ಲಕ್ಷಣದಲ್ಲಿ ಸ್ವಲ್ಪ ಬದಲಾವಣೆಯಾದರೂ ಇದು ಹೊಂದಿಕೊಂಡು ಬೆಳೆಯಬಲ್ಲುದು. ಮರಳು ಮಿಶ್ರಿತ ಜೇಡಿಮಣ್ಣಿದ್ದಲ್ಲಿ ಬೇಗನೆ ಬೆಳೆ ತೆಗೆಯಬಹುದಾದರೂ ಮೆಕ್ಕಲು ಮಣ್ಣು ಒಳ್ಳೆಯ ಫಸಲನ್ನು ಕೊಡುತ್ತದೆ. ಆಮ್ಲೀಯ ಮಣ್ಣಿನಲ್ಲಿ ಇದು ಚೆನ್ನಾಗಿ ಬೆಳೆಯಲಾರದು. ಮಣ್ಣಿನಲ್ಲಿ ಇತರ ಸಾವಯವ ವಸ್ತುಗಳು ಬೆರೆತಿದ್ದರೆ ಉತ್ತಮ. ಆಗಾಗ್ಗೆ ಮಣ್ಣನ್ನು ಸಡಿಲಿಸಿ ಕಳೆ ಕೀಳುವುದು ಒಳ್ಳೆಯದು. ಗೆಡ್ಡೆಕೋಸಿನ ಬೆಳೆಗೆ ಅಧಿಕ ಗೊಬ್ಬರದ ಪುರೈಕೆಯೂ ಅಗತ್ಯ. ಹಾಕಿದ ಗೊಬ್ಬರ ಮಣ್ಣಿನಲ್ಲಿ ಸರಿಯಾಗಿ ಬೆರೆಯುವಂತೆ ಮೂರು ನಾಲ್ಕು ಸಲವಾದರೂ ಚೆನ್ನಾಗಿ ಉಳಬೇಕು. ಅಮೋನಿಯಂ ಸಲ್ಫೇಟ್, ಸೂಪರ್ ಫಾಸ್ಫೇಟ್ ಮತ್ತು ಹಸಿರು ಗೊಬ್ಬರಗಳನ್ನು ಮಿಶ್ರ ಮಾಡಿ ಅಥವಾ ಬೇರೆ ಬೇರೆಯಾಗಿ ಉಪಯೋಗಿಸ ಬಹುದು. ಬೀಜ ಬಿತ್ತುವ ಪಾತಿಯಲ್ಲಿನ ಮಣ್ಣಿನ ಹೊರಪದರ ಗಡುಸಾಗಿರದೆ ಪುಡಿಯಾಗು ವಂತಿರಬೇಕು. ಬೀಜ ಬಿತ್ತುವ ಸ್ಥಳ ಅಶುಚಿಯಾಗಿದ್ದಲ್ಲಿ ಫಾರ್ಮಾಲ್ಡಿಹೈಡ್ ದ್ರಾವಣವನ್ನು ಅಥವಾ ಬಿಸಿನೀರನ್ನು ಚಿಮುಕಿಸಬೇಕು. ಗೆಡ್ಡೆಕೋಸಿಗೆ ನೀರಿನ ಸರಬರಾಜು ಯಥೇಚ್ಛವಾಗಿರಬೇಕು.

ನವಿಲುಕೋಸು ಬೆಳೆ
ನವಿಲುಕೋಸು ಬೆಳೆ

ಗೆಡ್ಡೆಕೋಸಿನಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ. ಒಂದು ನಸುಹಸಿರು ಬಣ್ಣದ್ದು. ಇದು ಗುಂಡಾಗಿಯೂ ನುಣುಪಾಗಿಯೂ ಇರುವ ಮಧ್ಯಮ ಗಾತ್ರದ ಕೋಸು. ಇದರ ವಾಣಿಜ್ಯನಾಮ ವೈಟ್ ವಿಯನ. ಇನ್ನೊಂದು ನೇರಳೆ ವರ್ಣದ್ದು. ಇದರ ಹೆಸರು ಪರ್ಪಲ್ ವಿಯನ. ಇದನ್ನು ತರಕಾರಿಯಂತೆ ಉಪಯೋಗಿಸುವುದಲ್ಲದೆ ಉಪ್ಪಿನಕಾಯಿ ಹಾಕುವುದಕ್ಕೂ ಬಳಸುತ್ತಾರೆ.

ಬೆಳೆಗೆ ಬರುವ ರೋಗಗಳು :

ಬ್ಲಾಕ್ ರಾಟ್ ಕ್ಸ್ಯಾಂತೊಮೊನಾಸ್ ಕಂಪೆಸ್ಟ್ರಿಸ್ ಎಂಬ ಬ್ಯಾಕ್ಟೀರಿಯ ಈ ರೋಗಕ್ಕೆ ಮೂಲ ಕಾರಣ. ಇದರಿಂದ ಎಲೆಗಳು ಹಳದಿಬಣ್ಣಕ್ಕೆ ತಿರುಗುವುದಲ್ಲದೆ ನರಗಳು ಕಪ್ಪಾಗುತ್ತವೆ. ಚಿಕ್ಕ ಚಿಕ್ಕ ಸಸಿಗಳಿಗೆ ಈ ರೋಗ ಬಂದರೆ ಅವು ಸತ್ತುಹೋಗುತ್ತವೆ. ಬೆಟ್ಟ ಪ್ರದೇಶಗಳಲ್ಲಿ ಈ ರೋಗ ಬಹು ಸಾಮಾನ್ಯ. ಇದು ಬೀಜಗಳ ಮೂಲಕ ಹರಡುವುದರಿಂದ ಇಂಥ ಬೀಜಗಳನ್ನು ಬಿತ್ತುವ ಮೊದಲು 500 ಸೆಂ. ಉಷ್ಣತೆಯ ನೀರಿನಲ್ಲಿ 25-30 ಮಿನಿಟುಗಳ ತನಕ ಮುಳುಗಿಸಬೇಕು. ಬೆಳೆಗಳ ಪರ್ಯಾಯವೂ ಈ ರೋಗವನ್ನು ಹತೋಟಿಗೆ ತರುವ ಇನ್ನೊಂದು ಉಪಾಯ.

ಕ್ಲಬ್ರೂಟ್ ಈ ರೋಗ ಆಮ್ಲೀಯ ಮಣ್ಣಿನಲ್ಲಿ ಬೆಳೆಯುವ ಸಸ್ಯಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದಕ್ಕೆ ಪ್ಲಾಸ್ಮೊಡಿಯೋಫೊರ ಬ್ರ್ಯಾಸಿಕೆ ಎಂಬ ಶಿಲೀಂಧ್ರ ಕಾರಣ. ಇದು ಮಣ್ಣಿನಲ್ಲಿ ವಾಸವಾಗಿದ್ದು ಬೇರನ್ನು ಆಕ್ರಮಿಸಿಕೊಳ್ಳುತ್ತದೆ. ಬೇರಿನಿಂದ ಒಳಹೊಕ್ಕ ಮೇಲೆ ನೀರಿನ ಸಾಗಣೆಗೆ ಅಡ್ಡಿಯನ್ನು ಉಂಟುಮಾಡುವುದರಿಂದ ಸಸ್ಯದ ಬೆಳೆವಣಿಗೆಯನ್ನು ಕುಂಠಿಸುತ್ತದೆ. ತತ್ಪರಿಣಾಮವಾಗಿ ಎಲೆಗಳು ಬಾಡಿಹೋಗುತ್ತವೆ. ಬೆಳೆಯ ಪರ್ಯಾಯ ಕಾಲವನ್ನು ಹೆಚ್ಚಿಸುವುದರಿಂದ ಮತ್ತು ಮಣ್ಣನ್ನು ಕ್ಷಾರೀಯ ಸ್ಥಿತಿಗೆ ತರುವುದರಿಂದ ಈ ರೋಗವನ್ನು ತಡೆಗಟ್ಟಬಹುದು.

ಬ್ಲ್ಯಾಕ್ ಲೆಗ್ ಫೋಮ ಲಿಂಗಮ್ ಎಂಬ ಶಿಲೀಂಧ್ರದಿಂದ ಈ ರೋಗ ಬರುತ್ತದೆ. ರೋಗ ಅಂಟಿದಾಗ ಕಾಂಡದ ತಳಭಾಗ ಮತ್ತು ಬೇರುಗಳು ಸತ್ತುಹೋಗುವುದರಿಂದ ಗಿಡ ಬಾಡಿ ಬಿದ್ದುಹೋಗುತ್ತದೆ. ಎಳೆಯ ಸಸಿಗಳು ಇದಕ್ಕೆ ಬಹುಬೇಗನೆ ತುತ್ತಾಗುತ್ತವೆ. ಇದನ್ನು ಹತೋಟಿಗೆ ತರುವ ಮುಖ್ಯ ವಿಧಾನಗಳೆಂದರೆ ಬೆಳೆಗಳ ಪರ್ಯಾಯ ಕಾಲವನ್ನು ಹೆಚ್ಚಿಸುವುದು ಮತ್ತು ಬೀಜಗಳನ್ನು ಬಿತ್ತುವ ಮೊದಲು ಅವನ್ನು ಸುಮಾರು 1220. ಸೆಂ. ಉಷ್ಣತೆಯಿರುವ ನೀರಿನಲ್ಲಿ 25 ಮಿನಿಟುಗಳ ಕಾಲ ಮುಳುಗಿಸಿಟ್ಟಿದ್ದು ಅನಂತರ ಒಣಗಿಸುವುದು.

ನವಿಲುಕೋಸು ಬೆಳೆ
ನವಿಲುಕೋಸು

ಹಳದಿರೋಗ ಫ್ಯೂಸೇರಿಯಂ ಕೊಂಗ್ಲುಟಿನೆನ್ಸ್‌ ಎಂಬ ಶಿಲೀಂಧ್ರ ಈ ರೋಗವನ್ನು ಉಂಟುಮಾಡುತ್ತದೆ. ಇದು ಸಸ್ಯ ದೇಹದಲ್ಲಿ ನೀರು ಮತ್ತು ಆಹಾರ ಸಾಗಣೆಗೆ ತೊಂದರೆಯನ್ನು ಉಂಟುಮಾಡುವುದರಿಂದ ಗಿಡದ ಬೆಳೆವಣಿಗೆ ಕುಂಠಿತಗೊಳ್ಳುತ್ತದೆ. ಇಡೀ ಗಿಡ ಹಳದಿಬಣ್ಣಕ್ಕೆ ತಿರುಗಿ ಎಲೆಗಳು ಉದುರಲು ಪ್ರಾರಂಭವಾಗುವುದು ಈ ಜಾಡ್ಯದ ಮುಖ್ಯ ಚಿಹ್ನೆ. ರೋಗವನ್ನು ತಡೆಗಟ್ಟಲು ಬೀಜ ನೆಡುವ ಪಾತಿಗಳನ್ನು ಚೊಕ್ಕಟವಾಗಿರಿಸಬೇಕು. ನಿರೋಧ ಶಕ್ತಿಯುಳ್ಳ ಬಗೆಗಳನ್ನು ಮಾತ್ರ ಬೆಳೆಯುವುದು ರೋಗ ನಿವಾರಣೆಯ ಉತ್ತಮ ವಿಧಾನ. ಹಾನಿಕಾರಕ ಕೀಟಗಳಲ್ಲಿ ಮುಖ್ಯವಾದವು ಇವು: ಹೈಲೆಮಿಯ ಬ್ರ್ಯಾಸಿಕೆ ಎಂಬ ಕೀಟ ಮೊದಲು ಎಳೆಯ ಬೇರುಗಳನ್ನು ಆಕ್ರಮಿಸಿಕೊಂಡು ಅನಂತರ ಪ್ರಮುಖ ಬೇರಿನೊಳಕ್ಕೆ ಹಾಗೂ ಕಾಂಡದೊಳಕ್ಕೆ ಕೊರೆದುಕೊಂಡು ಹೋಗುತ್ತದೆ. ತತ್ಫಲವಾಗಿ ಗಿಡ ಹಳದಿಬಣ್ಣಕ್ಕೆ ತಿರುಗಿ ಬಾಡುತ್ತ ಬರುತ್ತದೆ. ರಸಕರ್ಪುರದ (ಕ್ಯಾಲೊಮೆಲ್) ದ್ರಾವಣ, ಪಾದರಸದ ಕ್ಲೋರೈಡ್, ಆಲ್ಡ್ರಿನ್ ಮೊದಲಾದ ರಾಸಾಯನಿಕ ವಸ್ತುಗಳನ್ನು ಸಿಂಪಡಿಸುವುದರಿಂದ ಈ ಕೀಟಗಳನ್ನು ನಾಶಪಡಿಸಬಹುದು.

ಏಸಿಯ ರೇಪ ಎಂಬ ಕೀಟ ಗೆಡ್ಡೆಕೋಸಿನ ಎಲೆಗಳನ್ನು ತಿಂದು ಜೀವಿಸುತ್ತದೆ. ಡಿ ಡಿ ಟಿ ಮತ್ತು ಎಂಡ್ರೆಕ್ಸ್‌ ಎಂಬ ಕೀಟನಾಶಕ ವಸ್ತುಗಳನ್ನು ಚಿಮುಕಿಸುವುದರಿಂದ ಈ ಕೀಟವನ್ನು ನಾಶಪಡಿಸಬಹುದು.

ಏಫಿಡ ಬ್ರಾಸಿಕೆ ಎಂಬ ಕೀಟ ಇನ್ನೊಂದು ಮುಖ್ಯ ಪಿಡುಗು. ಎಲೆಗಳು ಸುರುಟಿಕೊಂಡು ಬೆಳೆವಣಿಗೆ ಕುಂಠಿತವಾಗುವುದು ಈ ರೋಗದ ಮುಖ್ಯ ಲಕ್ಷಣ. ಫಾಲಿಡಾಲನ್ನು ಚಿಮುಕಿಸುವುದರಿಂದ ಇದನ್ನು ನಿವಾರಿಸಬಹುದು.

ಮುರ್ಗೆನ್ಶಿಯ ಹಿಸ್ಟ್ರಿಯಾನಿಕ ಎಂಬ ಇನ್ನೊಂದು ಕೀಟ ಗೆಡ್ಡೆಕೋಸಿಗೆ ತಗಲುತ್ತದೆ. ಇದರ ನಿವಾರಣೆ ಪ್ರಯಾಸದ ಕೆಲಸ. ಸಸಿಗಳು ಎಳೆಯವಾಗಿದ್ದಾಗಲೇ ಡಿ.ಡಿ.ಟಿ.ಯನ್ನು ಸಿಂಪಡಿಸುವುದರ ಮೂಲಕ ಕೀಟವನ್ನು ನಾಶಪಡಿಸಬಹುದು. ಆದರೆ ಗಿಡ ಬಲಿಯುತ್ತ ಬಂದಂತೆ ಈ ಕ್ರಮವನ್ನು ಅನುಸರಿಸುವುದು ಯೋಗ್ಯವಲ್ಲ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಪದ್ಮನಾಭಸ್ವಾಮಿ ದೇವಾಲಯ

ತಿರುವನಂತಪುರದ ಪದ್ಮನಾಭಸ್ವಾಮಿ ದೇವಾಲಯ

ಅಡಿಗೆ ಪಾತ್ರೆಗಳು

ವಿವಿಧ ಶೈಲಿಯ ಅಡಿಗೆ ಪಾತ್ರೆಗಳು