in

ತಿರುವನಂತಪುರದ ಪದ್ಮನಾಭಸ್ವಾಮಿ ದೇವಾಲಯ

ಪದ್ಮನಾಭಸ್ವಾಮಿ ದೇವಾಲಯ
ಪದ್ಮನಾಭಸ್ವಾಮಿ ದೇವಾಲಯ

ಪದ್ಮನಾಭಸ್ವಾಮಿ ದೇವಾಲಯವು ಒಂದು ಪ್ರಸಿದ್ಧ ಪುರಾತನ ಹಿಂದೂ ದೇವಾಲಯ. ಅದು ಭಾರತದ ಕೇರಳದ ರಾಜ್ಯ ರಾಜಧಾನಿ ತಿರುವನಂತಪುರದಲ್ಲಿದೆ. ಮಲಯಾಳಂನ ‘ತಿರುವನಂತಪುರಂ’ ನಗರದ ಹೆಸರಿನ ಅನುವಾದದ ಅರ್ಥ “ಭಗವಾನ್ ಅನಂತ ನಗರ” ಎಂದು. ಇದು ಪದ್ಮನಾಭಸ್ವಾಮಿ ದೇವಾಲಯದ ದೇವತೆಯನ್ನು ಅನುಸರಿಸಿದ ಹೆಸರು. ಈ ದೇವಾಲಯವನ್ನು ‘ಚೇರಾಶೈಲಿ’ಯ ಮತ್ತು ದ್ರಾವಿಡ ಶೈಲಿಯ ಎತ್ತರದ ಗೋಡೆಗಳು ಮತ್ತು 16 ನೇ ಶತಮಾನದ ಗೋಪುರದ ವಾಸ್ತುಶಿಲ್ಪದಲ್ಲಿ ಸಂಕೀರ್ಣ ಮಿಶ್ರಣದಲ್ಲಿ ನಿರ್ಮಿಸಲಾಗಿದೆ. ಕುಂಬಳದಲ್ಲಿರುವ ಅನಂತಪುರ ದೇವಾಲಯವನ್ನು ದೇವತೆಯ ಮೂಲಸ್ಥಾನವೆಂದು ಪರಿಗಣಿಸಲಾಗಿದೆ. ವಾಸ್ತುಶಿಲ್ಪದ ಮಟ್ಟಿಗೆ ಸ್ವಲ್ಪ ಮಟ್ಟಿಗೆ, ಈ ದೇವಾಲಯವು ತಿರುವತ್ತರದಲ್ಲಿರುವ ಆದಿಕೇಶವ ಪೆರುಮಾಳ್ ದೇವಾಲಯದ ಪ್ರತಿರೂಪವಾಗಿದೆ. ಈ ದೇವಾಲಯದಲ್ಲಿ ಕಂಡು ಬಂದಿರುವ ಸಂಪತ್ತು ಜಗತ್ತಿನ ತಿಹಾಸದಲ್ಲಿ ದಾಖಲಾದ ಅತಿದೊಡ್ಡ ಸಂಗ್ರಹವೆಂದು ಪರಿಗಣಿಸಲಾಗಿದೆ.

ಪ್ರಧಾನ ದೇವತೆ ಪದ್ಮನಾಭಸ್ವಾಮಿ ಆದಿಶೇಷ ಎಂಬ ಸರ್ಪದ ಮೇಲೆ ಶಾಶ್ವತ ಯೋಗನಿದ್ರೆಯ – “ಅನಂತ ಶಯನ” ಭಂಗಿಯಲ್ಲಿ ಪ್ರತಿಷ್ತಷ್ಠಿಸಲಾಗಿದೆ. ಪದ್ಮನಾಭಸ್ವಾಮಿ ತಿರುವಾಂಕೂರಿನ ರಾಜಮನೆತನದ ದೇವರು.

ಬ್ರಹ್ಮ ಪುರಾಣ, ಮತ್ಸ್ಯ ಪುರಾಣ, ವರಾಹ ಪುರಾಣ, ಸ್ಕಂದ ಪುರಾಣ, ಪದ್ಮ ಪುರಾಣ, ವಾಯು ಪುರಾಣ, ಭಾಗವತ ಪುರಾಣ ಮತ್ತು ಮಹಾಭಾರತದಂತಹ ಹಲವಾರು ಹಿಂದೂ ಗ್ರಂಥಗಳು ಈ ದೇವಾಲಯದ ಅನಂತಶಯನ ವಿಷ್ಣುವನ್ನು ಉಲ್ಲೇಖಿಸುತ್ತವೆ. ದೇವಾಲಯವನ್ನು , ಕ್ರಿ.ಪೂ 500 ಮತ್ತು ಕ್ರಿ.ಶ 300 ರ ನಡುವಿನ ಸಾಹಿತ್ಯದ ಅವಧಿಯ ಕಾಲದ ‘ಸಂಗಮ’ ಸಾಹಿತ್ಯದಲ್ಲಿ ಹಲವಾರು ಬಾರಿ ಉಲ್ಲೇಖಿಸಲಾಗಿದೆ. ಅನೇಕ ಸಾಂಪ್ರದಾಯಿಕ ಇತಿಹಾಸಕಾರರು ಮತ್ತು ವಿದ್ವಾಂಸರು ಈ ದೇವಾಲಯದ ಹೆಸರನ್ನು “ಗೋಲ್ಡನ್ ಟೆಂಪಲ್” ಎಂದು ಕರೆಯುತ್ತಾರೆ. ಅಕ್ಷರಶಃ ದೇವಾಲಯವು ಆ ಹೊತ್ತಿಗಾಗಲೆ ಊಹಿಸಲಾಗದಷ್ಟು ಶ್ರೀಮಂತವಾಗಿದೆ ಎಂಬ ಅಂಶವನ್ನು ಅಕ್ಷರಶಃ ಗುರುತಿಸಿಕೊಂಡಿದೆ.

ತಿರುವನಂತಪುರದ ಪದ್ಮನಾಭಸ್ವಾಮಿ ದೇವಾಲಯ
ಪದ್ಮನಾಭಸ್ವಾಮಿ ದೇವಾಲಯ

ಸಂಗಮ್ ತಮಿಳು ಸಾಹಿತ್ಯ ಮತ್ತು ಕಾವ್ಯದ ಅನೇಕ ತುಣುಕುಗಳು ಮತ್ತು ನಂತರದ 9 ನೇ ಶತಮಾನದ ತಮಿಳು ಕವಿ-ಸಂತರಾದ ನಮ್ಮಲ್ವಾರ್ ಅವರ ಕೃತಿಗಳು ದೇವಾಲಯ ಮತ್ತು ನಗರವನ್ನು ಶುದ್ಧ ಚಿನ್ನದ ಗೋಡೆಗಳನ್ನು ಹೊಂದಿವೆ ಎಂದು ಉಲ್ಲೇಖಿಸುತ್ತವೆ. ಕೆಲವು ಸ್ಥಳಗಳಲ್ಲಿ, ದೇವಾಲಯ ಮತ್ತು ಇಡೀ ನಗರವು ಚಿನ್ನದಿಂದ ಮಾಡಲ್ಪಟ್ಟಿದೆ ಮತ್ತು ದೇವಾಲಯವನ್ನು ಸ್ವರ್ಗವೆಂದು ಪ್ರಶಂಸಿಸಲಾಗಿದೆ.
ಈ ದೇವಾಲಯವು ವೈಷ್ಣವ ಧರ್ಮದಲ್ಲಿನ 108 ಪ್ರಮುಖ ದಿವ್ಯ ದೇವಾಲಯಗಳಲ್ಲಿ ಒಂದು ಮತ್ತು ‘ದಿವ್ಯ ಪ್ರಬಂಧದಲ್ಲಿ’ ವೈಭವೀಕರಿಸಲ್ಪಟ್ಟಿದೆ. ದಿವ್ಯ ಪ್ರಬಂಧವು ಈ ದೇವಾಲಯವನ್ನು ಮಲೈನಾಡಿನ 13 ದಿವ್ಯ ದೇಶಗಳಲ್ಲಿ ಒಂದಾಗಿದೆ. ಇಂದಿನ ಕೇರಳಕ್ಕೆ ಕನ್ಯಾಕುಮಾರಿ ಜಿಲ್ಲೆಯೊಂದಿಗೆ ಸೇರಿದೆ. 8 ನೇ ಶತಮಾನದ ತಮಿಳು ಕವಿ ಅಲ್ವಾರ್ ನಮ್ಮಲ್ವರ್ ಅವರು ಪದ್ಮನಾಭದ ವೈಭವವನ್ನು ಹಾಡಿದ್ದಾರೆ. ಕಾಸರಗೋಡಿನ ಅನಂತಪುರಂ ದೇವಾಲಯವು ಪದ್ಮನಾಭಸ್ವಾಮಿಯ “ಮೂಲಸ್ಥಾನ”ವೆಂದು ನಂಬಲಾಗಿದೆ.

ಪರಶುರಾಮನು ದ್ವಾಪರ ಯುಗದಲ್ಲಿ ಶ್ರೀ ಪದ್ಮನಾಭ ವಿಗ್ರಹವನ್ನು ಪ್ರತಿಷ್ಠಾಪಿಸಿದನೆಂದು ನಂಬಲಾಗಿದೆ. ಪರಶುರಾಮನು ಏಳು ‘ಪೊಟ್ಟಿ ಕುಟುಂಬ’ಗಳಿಗೆ ‘ಕ್ಷೇತ್ರ ಕಾರ್ಯಂ’ ವನ್ನು ಒಪ್ಪಿಸಿದನು; ಅವರು ಕೂಪಕ್ಕರ ಪೊಟ್ಟಿ, ವಂಚಿಯೂರ್ ಅಥಿಯಾರಾ ಪೊಟ್ಟಿ, ಕೊಲ್ಲೂರು ಅಥಿಯಾರ ಪೊಟ್ಟಿ, ಮುತ್ತವಿಲಾ ಪೊಟ್ಟಿ, ಕರುವಾ ಪೊಟ್ಟಿ, ನೇತಸ್ಸೇರಿ ಪೊಟ್ಟಿ ಮತ್ತು ಶ್ರೀಕಾರ್ಯತು ಪೊಟ್ಟಿ. ಪರಶುರಾಮನು ವಾಂಚಿ ರಾಜ ಆದಿತ್ಯ ವಿಕ್ರಮನನ್ನು ದೇವಾಲಯದ ‘ಪರಿಪಲನಂ’ ಮಾಡಲು ನಿರ್ದೇಶಿಸಿದನು. ಪರಶುರಾಮನು ದೇವಾಲಯದ ತಂತ್ರವನ್ನು ತರಣನಲ್ಲೂರು ನಂಬೂತಿರಿಪಾಡ್ ಅವರಿಗೆ ನೀಡಿದನು. ಈ ದಂತಕಥೆಯನ್ನು ‘ಬ್ರಹ್ಮಂಡ ಪುರಾಣ’ದ ಭಾಗವಾಗಿರುವ’ ಕೇರಳ ಮಹಾತ್ಮ್ಯಂ ‘ನಲ್ಲಿ ವಿವರವಾಗಿ ನಿರೂಪಿಸಲಾಗಿದೆ.

ದೇವಾಲಯದ ಮುಖ್ಯ ವಿಗ್ರಹದ ಪಾವಿತ್ರ್ಯತೆ ಸಂಬಂಧಿಸಿದ ಮತ್ತೊಂದು ಆವೃತ್ತಿಯು ಪೌರಾಣಿಕ ಋಷಿ ವಿಲ್ವಮಂಗಲತು ಸ್ವಾಮಿಯಾರ್‌ಗೆ ಸಂಬಂಧಿಸಿದೆ. ಕಾಸರಗೋಡು ಜಿಲ್ಲೆಯ ಅನಂತಪುರಂ ದೇವಸ್ಥಾನದ ಬಳಿ ವಾಸವಾಗಿದ್ದ ಸ್ವಾಮಿಯಾರ್, ವಿಷ್ಣುವಿನ ದರ್ಶನ ಅಥವಾ “ಶುಭ ದೃಶ್ಯ” ಕ್ಕಾಗಿ ಪ್ರಾರ್ಥಿಸಿದರು. ಚೇಷ್ಟೆಯ ಸ್ವಭಾವದ ಪುಟ್ಟ ಹುಡುಗನ ವೇಷದಲ್ಲಿ ಭಗವಂತ ಬಂದಿದ್ದನೆಂದು ನಂಬಲಾಗಿದೆ. ಆ ಹುಡುಗ ಪೂಜೆಗೆ ಇಡಲಾಗಿದ್ದ ವಿಗ್ರಹವನ್ನು ಅಪವಿತ್ರಗೊಳಿಸಿದನು. ಇದರಿಂದ ಋಷಿ ಕೋಪಗೊಂಡು ಹುಡುಗನನ್ನು ಓಡಿಸಿದನು. ಹುಡುಗನು ಅವನ ಮುಂದೆ ಕಣ್ಮರೆಯಾದನು. ಹುಡುಗ ಸಾಮಾನ್ಯ ಮನುಷ್ಯನಲ್ಲ ಎಂದು ಅರಿತುಕೊಂಡ ಋಷಿ ಕ್ಷಮೆ ಬೇಡಿ ಕಣ್ಣೀರಿಟ್ಟನು ಮತ್ತು ಮತ್ತೊಂದು ಸಂಕೇತ ದರ್ಶನವನ್ನು ಕೇಳಿದನು. “ನೀನು ನನ್ನನ್ನು ನೋಡಲು ಬಯಸಿದರೆ ಅನಂತವನಕ್ಕೆ ಬರಲು ಅಶರೀರ ವಾಣಿ ಹೇಳಿತು. ಒಂದು ಸುದೀರ್ಘ ಹುಡುಕಾಟದ ನಂತರ, ಅವರು ಲಕ್ಕಾಡಿವ್ ಸಮುದ್ರದ ತೀರದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಒಂದು ಪುಲಯ(ನಿಮ್ನವರ್ಗದ) ಮಹಿಳೆ ತನ್ನ ಮಗುವಿಗೆ, ಅವನನ್ನು ಅನಂತಂಕಾಡಿನಲ್ಲಿ ಎಸೆಯುವುದಾಗಿ ಗದರಿಸುವುದನ್ನು ಅವನು ಕಂಡನು. ಸ್ವಾಮಿ ಅನಂತಂಕಾಡು ಎಂಬ ಪದವನ್ನು ಕೇಳಿದ ಕ್ಷಣ ಅವನು ಖುಶಿಪಟ್ಟನು. ಅವನು ವಿಚಾರಿಸಿದ ಮಹಿಳೆಯ ನಿರ್ದೇಶನದ ಆಧಾರದ ಮೇಲೆ ಅವನು ಅನಂತಂಕಾಡಿಗೆ ಹೊರಟನು. ಋಷಿ ಹುಡುಗನನ್ನು ಹುಡುಕುತ್ತಾ ಅನಂತಂಕಾಡು ತಲುಪಿದನು. ಅಲ್ಲಿ ಅವನು ಹುಡುಗನು ಇಲುಪ್ಪ ಮರದಲ್ಲಿ ವಿಲೀನಗೊಳ್ಳುವುದನ್ನು ನೋಡಿದನು. ಮರ ಕೆಳಗೆ ಬಿದ್ದು ಅನಂತಶಯನ ಮೂರ್ತಿ (ವಿಷ್ಣುವು ಅನಂತಹಾವಿನ ಮೇಲೆ ಒರಗಿಕೊಂಡ ಭಂಗಿಯ ಮೂರ್ತಿ ಆಯಿತು. ಆದರೆ ಭಗವಂತನು ಧರಿಸಿದ ಮೂರ್ತಿ ಅಸಾಧಾರಣವಾಗಿ ದೊಡ್ಡ ಗಾತ್ರದ್ದಾಗಿತ್ತು. ಅವನ ತಲೆಯು ತುಕ್ಕಲೆ ಬಳಿಯ ತಿರುವತ್ತರದಲ್ಲಿ= ತಮಿಳುನಾಡು, ತಿರುವನಂತಪುರಂನಲ್ಲಿ ದೇಹ ಅಥವಾ ಉಡಾಲ್, ಮತ್ತು ಕುಲತೂರು ಮತ್ತು ಟೆಕ್ನೋಪಾರ್ಕ್ (ತ್ರಿಪ್ಪಪ್ಪೂರ್) ಬಳಿಯ ತ್ರಿಪ್ಪದಪುರಂನಲ್ಲಿ ಪಾದಕಮಲಗಳು, ಮೂರ್ತಿ ರೂಪದ ಅವನ ದೇಹ ಎಂಟು ಮೈಲುಗಳಷ್ಟು ಉದ್ದವಾಗಿತ್ತು. ಋಷಿಯು ಭಗವಂತನನ್ನು ಒಂದು ಸಣ್ಣ ಪ್ರಮಾಣದ ಗಾತ್ರಕ್ಕೆ ತನ್ನ ಊರುಗೋಲಿನ(ದೊಣ್ಣೆ) ಮೂರು ಪಟ್ಟು ಉದ್ದಕ್ಕೆ ಮೂರ್ತಿಯನ್ನು ಕುಗ್ಗಿಸುವಂತೆ ವಿನಂತಿಸಿದನು. ದೇವಾಲಯದಲ್ಲಿ ಪ್ರಸ್ತುತ ಕಂಡುಬರುವ ವಿಗ್ರಹದ ರೂಪಕ್ಕೆ ತಕ್ಷಣ ಭಗವಂತ ಕುಗ್ಗಿದನು.

ತಿರುವನಂತಪುರದ ಪದ್ಮನಾಭಸ್ವಾಮಿ ದೇವಾಲಯ
ಪದ್ಮನಾಭಸ್ವಾಮಿ ದೇವಾಲಯ

ಆದರೆ ಆಗಲೂ ಅನೇಕ ಇಲುಪ್ಪ ಮರಗಳು ಭಗವಂತನನ್ನು ಋಷಿಯ ದೃಷ್ಟಿಗೆ ಸಂಪೂರ್ಣವಾಗಿ ಕಾಣದಂತೆ ಅಡ್ಡಬಂದವು. ಋಷಿ ಭಗವಂತನನ್ನು ತಿರುಮುಖಂ, ತಿರುವುಡಾಲ್ ಮತ್ತು ತ್ರಿಪ್ಪದಂ ಎಂದು ಮೂರು ಭಾಗಗಳಲ್ಲಿ ನೋಡಿದನು. ಸ್ವಾಮಿ ಪದ್ಮನಾಭನನ್ನು ಕ್ಷಮಿಸುವಂತೆ ಪ್ರಾರ್ಥಿಸಿದರು. ಸ್ವಾಮಿ ಅವರು ಪುಲಯ ಮಹಿಳೆಯಿಂದ ಪಡೆದ ದೇವರಿಗೆ ತೆಂಗಿನ ಚಿಪ್ಪಿನಲ್ಲಿ ಅಕ್ಕಿ ಗಂಜಿ ಮತ್ತು ಉಪ್ಪುಮಂಗ ಉಪ್ಪಿನಕಾಯಿ, ಉಪ್ಪುಸಹಿತ ಮಾವಿನ ತುಂಡುಗಳನ್ನು ಅರ್ಪಿಸಿದರು. ಋಷಿಯು ಭಗವಂತನ ದರ್ಶನ ಪಡೆದ ಸ್ಥಳ ‘ಕೂಪಕ್ಕರ ಪೊಟ್ಟಿ’ ಮತ್ತು ‘ಕರುವಾ ಪೊಟ್ಟಿ’ಗೆ ಸೇರಿತ್ತು. ಆಳುವ ರಾಜ ಮತ್ತು ಕೆಲವು ಬ್ರಾಹ್ಮಣ ಮನೆಗಳ ಸಹಾಯದಿಂದ ದೇವಾಲಯವನ್ನು ನಿರ್ಮಿಸಲಾಯಿತು. ಪದ್ಮನಾಭಸ್ವಾಮಿ ದೇವಾಲಯದ ವಾಯುವ್ಯ ದಿಕ್ಕಿನಲ್ಲಿ ‘ಅನಂತಕಾಡು ನಾಗರಾಜ ದೇವಸ್ಥಾನ’ ಇಂದಿಗೂ ಇದೆ.

1750 ರ ಜನವರಿ 17 ರಂದು ಅನಿಜಮ್‍ ತಿರುನಾಲ್ ಅವರು ತಿರುವಾಂಕೂರು ಸಾಮ್ರಾಜ್ಯವನ್ನು ದೇವಾಲಯದ ದೇವತೆಯಾದ ಪದ್ಮನಾಭ ಸ್ವಾಮಿಗೆ ಒಪ್ಪಿಸಿದರು ಮತ್ತು ಅವರು ಮತ್ತು ಅವರ ವಂಶಸ್ಥರು ಪದ್ಮನಾಭನ ದಾಸರಾಗಿ ರಾಜ್ಯದ ಆಡಳಿತವನ್ನು ನೆಡೆಸುವ ದೇವತೆಯ ಏಜೆಂಟರು ಎಂದು ಪ್ರತಿಜ್ಞೆ ಮಾಡಿದರು. ಅಂದಿನಿಂದ, ಪ್ರತಿಯೊಬ್ಬ ತಿರುವಾಂಕೂರು ರಾಜನ ಹೆಸರಿನ ಮೊದಲು ಶ್ರೀ ಪದ್ಮನಾಭ ದಾಸ ಎಂಬ ಬಿರುದು ನೀಡಲಾಯಿತು; ರಾಜಮನೆತನದ ಮಹಿಳಾ ಸದಸ್ಯರನ್ನು ಶ್ರೀ ಪದ್ಮನಾಭ ಸೇವಿನಿಗಳು ಎಂದು ಕರೆಯಲಾಯಿತು. ಪದ್ಮನಾಭಸ್ವಾಮಿಗೆ ರಾಜನ ಕೊಡಿಗೆಯನ್ನು ‘ತ್ರಿಪ್ಪಡಿ-ದಾನಮ್’ ಎಂದು ಕರೆಯಲಾಗುತ್ತಿತ್ತು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಹೃದಯಾಘಾತ

ಹೃದಯಾಘಾತ ಅಂದರೆ ಏನು?

ನವಿಲುಕೋಸು ಬೆಳೆ

ನವಿಲುಕೋಸು ಬೆಳೆ