in ,

ಮಧುರೈ ನಗರ ಈಗ ಹೀಗಿದೆ

ಮಧುರೈ ನಗರ
ಮಧುರೈ ನಗರ

ಭಾರತೀಯ ದ್ವೀಪಕಲ್ಪದ ಜನವಾಸ್ತವ್ಯವಿದ್ದ ಪ್ರಾಚೀನ ನಗರ ಮಧುರೈ. ಭಾರತದ ರಾಜ್ಯವಾದ ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿ ವೈಗೈ ನದಿತೀರದ ಪ್ರಾಚೀನ ಹಾಗೂ ಪ್ರತಿಷ್ಠಿತ ನಗರವಾಗಿದೆ.

ಈ ನಗರವನ್ನು ವ್ಯಾಪಕವಾಗಿ ದೇವಾಲಯಗಳ ನಗರ, ಇದನ್ನು ಕೂದಲ್‌ ಮಾನಗರ್‌ ಎಂದೂ ಕರೆಯುತ್ತಾರೆ, ತಮಿಳುನಾಡಿನ ಸಾಂಸ್ಕೃತಿಕ ರಾಜಧಾನಿ, ಮಲ್ಲಿಗೆಯ ನಗರ, ಥೂಂಗ ನಗರಂ ಅಂದರೆ ನಿದ್ದೆಮಾಡದ ನಗರ, ಪೂರ್ವದ ಅಥೆನ್ಸ್‌ ಎಂಬಿತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. 2001ರ ಜನಗಣತಿಯ ಪ್ರಕಾರ 1,203,095ರಷ್ಟು ಜನಸಂಖ್ಯೆ ಇರುವ ಈ ನಗರ ತಮಿಳುನಾಡಿನಲ್ಲೇ ಮೂರನೇ ಅತಿ ದೊಡ್ಡ ಮಹಾನಗರವಾಗಿದೆ.

ಪ್ರಾಚೀನ ಕಾಲದ ದಕ್ಷಿಣ ನಾಗರೀಕತೆಯ ರಾಜಧಾನಿಯಾಗಿತ್ತು ಮಧುರೈ ಮಹಾನಗರ. ಮಧುರೈನ ಸಾಂಸ್ಕೃತಿಕ ಹಿನ್ನೆಲೆಯು 2,500 ವರ್ಷಗಳಷ್ಟು ಹಿಂದಿನದು ಹಾಗೂ ನಗರವು ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ.

ಮಧುರೈನ ಇತಿಹಾಸವು ಕ್ರಿಸ್ತ-ಯುಗಕ್ಕೂ ಹಿಂದಿನ ಸಂಗಮ್‌ ಅವಧಿಯಷ್ಟು ಹಳೆಯದು. ಇದು ಪ್ರಾಚೀನ ಪಾಂಡ್ಯರ ತಮಿಳಾಕಮ್‌ ಸಾಮ್ರಾಜ್ಯದ ಅಧಿಕಾರ ಕೇಂದ್ರವಾಗಿತ್ತು. ಸಂಗಮ್‌ ಅವಧಿಯ ಕವಿ ನಕ್ಕೀರರ್‌ರನ್ನು ಸುಂದರೇಶ್ವರರ್‌‌ನ ತಿರುವಿಲಾಯದಲ್‌ ಉಪಕಥೆಗಳೊಡನೆ ಸಂಬಂಧಿಸಿ ಹೇಳಲಾಗುತ್ತದೆ. ಇವುಗಳನ್ನು ಈಗಲೂ ದೇಗುಲಗಳ ಸಾಂಪ್ರದಾಯಿಕ ಜಾತ್ರೆ/ಉತ್ಸವಗಳಲ್ಲಿ ಇಟ್ಟು ಪೂಜಿಸಲಾಗುತ್ತದೆ. 3ನೇ ಶತಮಾನ ಪ್ರಾಚೀನ ಕಾಲದಲ್ಲಿ ಮೆಗಾಸ್ತನೀಸ್‌ ಮಧುರೈ ನಗರಕ್ಕೆ ಭೇಟಿ ನೀಡಿದ್ದ. ನಂತರ ರೋಮ್‌ ಮತ್ತು ಗ್ರೀಸ್‌ ದೇಶಗಳಿಂದ ಅನೇಕರು ಮಧುರೈಗೆ ಭೇಟಿ ನೀಡಿದ್ದಲ್ಲದೇ ಪಾಂಡ್ಯ ಅರಸರೊಡನೆ ವಾಣಿಜ್ಯ ವ್ಯವಹಾರಗಳನ್ನು ಆರಂಭಿಸಿದ್ದರು.

ಪ್ರಾಚೀನ ಕುಮಾರಿ ಕಂದಂ ಎಂಬ ದಂತಕಥೆ/ಪುರಾಣದ ಪ್ರಕಾರ, ಲೋಕರೂಢಿಯಲ್ಲಿ ಥೆನ್‌ಮಧುರೈ ಅಥವಾ ದಕ್ಷಿಣ ಮಧುರೈ ಎಂದು ಕರೆಯಲಾಗುತ್ತಿದ್ದ ಮೂಲ ಮಧುರೈ ನಗರವನ್ನು ತ್ಸುನಾಮಿ/ಸುನಾಮಿ ಅಲೆಗಳು ದಾಳಿ ಮಾಡಿ ನಾಶವಾಯಿತು. ಹೊಸದಾಗಿ ಕಟ್ಟಿದ ನಗರವು ಕಡೆಯ ಶತಮಾನದ ಮೊದಲ ಭಾಗದಲ್ಲಿ ಕೊನೆಯ ತಮಿಳು ಸಂಗಂ ಸಾಮ್ಯಾಜ್ಯಕ್ಕೆ ನೆಲೆಯಾಗಿತ್ತು. ಪ್ರಸಿದ್ಧ ರಾಷ್ಟ್ರಕವಿ ಸುಬ್ರಮಣ್ಯ ಭಾರತಿಯವರು 20ನೇ ಶತಮಾನದ ಮೊದಲ ಭಾಗದಲ್ಲಿ ಸೇತುಪತಿ ಪ್ರೌಢಶಾಲೆಯ ತಮಿಳು ಭಾಷಾ ಪಂಡಿತರಾಗಿ/ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ನೆರೆಯ ದಿಂಡಿಗಲ್‌ ಜಿಲ್ಲೆಯಲ್ಲಿ ವಡಮಧುರೈ ಎಂಬ ಸಣ್ಣ ಪಟ್ಟಣವಿದೆ ಹಾಗೂ ಮತ್ತೊಂದು ನೆರೆಯ ಜಿಲ್ಲೆ ಸಿ/ಶಿವಗಂಗೈನಲ್ಲಿ ಮತ್ತೊಂದು ಮನಮಧುರೈ ಎಂಬ ಪಟ್ಟಣವಿದೆ.

ಪಾಂಡ್ಯರ ಪ್ರಮುಖ ಶತೃಗಳಾದ ಚೋಳರು 10ನೇ ಶತಮಾನದಲ್ಲಿ ಮಧುರೈಯನ್ನು ವಶಪಡಿಸಿಕೊಳ್ಳುವವರೆಗೆ ನಗರವು ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಇದೇ ಸಹಸ್ರಮಾನದ ಆರಂಭದಲ್ಲಿ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಗೆ ಒಳಪಟ್ಟುದದರಿಂದ ಮಧುರೈಯ ವೈಭವವು ತಗ್ಗಿದ ಪ್ರಮಾಣದಲ್ಲಾದರೂ ಮರಳಿತು ಹಾಗೂ ಮಧುರೈಯನ್ನು ನಾಯಕ್‌ ಚಕ್ರವರ್ತಿಗಳು ಆಳುತ್ತಿದ್ದರು, ಇವರಲ್ಲಿ ಪ್ರಥಮರು ತಿರುಮಲೈ ನಾಯಕರ್‌.

ಮಧುರೈನಲ್ಲಿ ಹಾಗೂ ಸುತ್ತಮುತ್ತದ ಪ್ರದೇಶಗಳಲ್ಲಿ ತಮಿಳು ಪ್ರಧಾನ ಭಾಷೆಯಾಗಿದೆ. ಮಧುರೈನ ತಮಿಳು ಪ್ರಭೇದವು ಇತರೆ ತಮಿಳು ಪ್ರಭೇದಗಳಾದ ಕೊಂಗು ತಮಿಳು ಮತ್ತು ನೆಲ್ಲೈ ತಮಿಳುಗಳಿಗಿಂತ ಅಲ್ಪ ವ್ಯತ್ಯಾಸ ಹೊಂದಿದೆ. ತಮಿಳಿನೊಂದಿಗೆ ಬಳಕೆಯಲ್ಲಿರುವ ಇತರೆ ಭಾಷೆಗಳೆಂದರೆ ಆಂಗ್ಲ, ತೆಲುಗು, ಸೌರಾಷ್ಟ್ರ ಹಾಗೂ ಉರ್ದು ಭಾಷೆಗಳು. ಆದಾಗ್ಯೂ ಇವುಗಳಲ್ಲಿ ಕೆಲ ಭಾಷೆಗಳ ಪದಗಳು ತಮಿಳು ಪದಗಳನ್ನು ಸೇರಿಸಿಕೊಂಡಿವೆ.

ಮಧುರೈ ನಗರ ಈಗ ಹೀಗಿದೆ
ಮಧುರೈ ನಗರ ಮೀನಾಕ್ಷಿ ಸುಂದರೇಶ್ವರರ್‌ ದೇಗುಲ

ಮಧುರೈ ನಗರವನ್ನು ಮೀನಾಕ್ಷಿ ಸುಂದರೇಶ್ವರರ್‌ ದೇಗುಲವನ್ನು ಸುತ್ತುವರೆದು ಕಟ್ಟಲಾಗಿದೆ. ಬ್ರಹ್ಮಾಂಡದ ರಚನೆಯನ್ನು ಸಂಕೇತಿಸುವಂತೆ ಕೇಂದ್ರಿತ ಚತುಷ್ಕೋನಾಕೃತಿ ರಸ್ತೆಗಳು ದೇಗುಲವನ್ನು ಸುತ್ತುವರೆದಿವೆ. ಇಡೀ ನಗರವನ್ನು ಕಮಲದ ಹೂವಿನ ಆಕೃತಿಯಲ್ಲಿ ಕಟ್ಟಲಾಗಿದೆ. ಚೌಕಾಕಾರದ ರಸ್ತೆಗಳಲ್ಲಿ ಕೆಲವು ರಸ್ತೆಗಳಿಗೆ ತಮಿಳು ತಿಂಗಳುಗಳ ಹೆಸರನ್ನಿಡಲಾಗಿದೆ. ಮೀನಾಕ್ಷಿ ದೇಗುಲವನ್ನು ಸುತ್ತುವರೆದಿರುವ ಆರು ಪ್ರಮುಖ ಚೌಕಾಕಾರದ ರಸ್ತೆಗಳೆಂದರೆ ಆದಿ, ಚಿತಿರೈ, ಆವನಿ ಮೂಲಾ, ಮಾಸಿ, ಮಾರತ್‌ ಮತ್ತು ವೇಲಿ ರಸ್ತೆಗಳು.

ಇಡೀ ಮಧುರೈ ಜಿಲ್ಲೆಯು ಮಧುರೈ ಜಿಲ್ಲಾಧಿಕಾರಿಗಳ ಆಡಳಿತಕ್ಕೊಳಪಟ್ಟಿದೆ ಹಾಗೂ ನಗರಸಭೆಯ ಪರಿಧಿಯಲ್ಲಿನ ಪ್ರದೇಶಗಳು ಮಧುರೈ ನಗರಸಭೆಯ ಆಡಳಿತಕ್ಕೊಳಪಟ್ಟಿವೆ. 1971ರಲ್ಲಿ ಚೆನ್ನೈ ನಂತರ ರಚಿಸಲಾದ ಎರಡನೇ ನಗರಸಭೆಯಾಗಿತ್ತು. ಈ ನಗರಸಭೆಯು ಅಭಿವೃದ್ಧಿ ಕೆಲಸಗಳನ್ನು ಉತ್ತಮ ರೀತಿಯಲ್ಲಿ ಕೈಗೊಂಡಿದ್ದಕ್ಕಾಗಿ 2008ನೇ ಸಾಲಿನ ಅನೇಕ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದೆ ಅಲ್ಲಿನ ಮೇಯರ್‌/ನಗರಸಭಾದ್ಯಕ್ಷರು ಪುರಸಭೆಯ ಶಾಲಾ ಮಂಡಳಿ, ನಗರ ಸಾರಿಗೆ ವ್ಯವಸ್ಥೆ, ಪುರಸಭೆಯ ಆಸ್ಪತ್ರೆ ಮತ್ತು ನಗರದ ಗ್ರಂಥಾಲಯಗಳ ದೈನಂದಿನ ಚಟುವಟಿಕೆಗಳಿಗೆ ಬಾಧ್ಯಸ್ಥರಾಗಿರುತ್ತಾರೆ. ನಗರವು ಮಧುರೈ ಜಿಲ್ಲಾ ಕೇಂದ್ರವಾಗಿ ಹಾಗೂ ಮದ್ರಾಸ್‌ ಉಚ್ಚನ್ಯಾಯಾಲಯದ ಮಧುರೈ ಪ್ರಾಂತ್ಯದ ಪೀಠವಾಗಿ ಕಾರ್ಯನಿರ್ವಹಿಸುತ್ತದೆ.

ಉಚ್ಚನ್ಯಾಯಾಲಯದ ಪೀಠವು 24-07-2004ರಿಂದ ಜಾರಿಗೆ ಬರುವಂತೆ ಕನ್ಯಾಕುಮಾರಿ, ತಿರುನಲ್ವೇಲಿ, ತೂತುಕುಡಿ, ಮಧುರೈ, ದಿಂಡಿಗಲ್‌, ರಾಮನಾಥಪುರಂ, ವಿರುಧುನಗರ್‌, ಶಿವಗಂಗೆ/ಶಿವಗಂಗಾ, ಪುದುಕ್ಕೊಟ್ಟೈ, ತಂಜಾವೂರು, ತಿರುಚಿರಾಪಳ್ಳಿ/ತಿರುಚಿನಾಪಳ್ಳಿ ಮತ್ತು ಕರೂರು ಜಿಲ್ಲೆಗಳ ಕಾರ್ಯವ್ಯಾಪ್ತಿಯನ್ನು ಹೊಂದಿದೆ.

ನಗರದಲ್ಲಿ ಪಾಸ್‌ಪೋರ್ಟ್‌ ಕಛೇರಿಯಿದೆ ಮತ್ತು ಮಧುರೈ, ಥೇಣಿ, ಶಿವಗಂಗೆ/ಶಿವಗಂಗಾ, ವಿರುಧುನಗರ್‌, ರಾಮನಾಥಪುರಂ, ತೂತುಕುಡಿ, ತಿರುನಲ್ವೇಲಿ, ಕನ್ಯಾಕುಮಾರಿ & ದಿಂಡಿಗಲ್‌‌/ದಿಂಡುಗಲ್‌ ಜಿಲ್ಲೆಗಳು ಇದರ ಕಾರ್ಯವ್ಯಾಪ್ತಿಗೆ ಒಳಪಡುತ್ತವೆ.

ಮಧುರೈ ನಗರ ಈಗ ಹೀಗಿದೆ
ಮದ್ರಾಸ್‌ ಉಚ್ಚನ್ಯಾಯಾಲಯ

ನಗರವು ಉದ್ಯೋಗ ಮಾಹಿತಿ ಕಚೇರಿಯನ್ನು ಸಹಾ ಹೊಂದಿದ್ದು, ಮಧುರೈ ಜಿಲ್ಲೆಯ ಶಿಕ್ಷಿತ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ದಾಖಲೆಗಳೊಂದಿಗೆ ತಮಿಳುನಾಡು ಸರ್ಕಾರದ ಉದ್ಯೋಗಾವಕಾಶಗಳಿಗಾಗಿ ನೋಂದಣಿ ಮಾಡಿಸುತ್ತಾರೆ. ಇದೇ ಕಚೇರಿಯು ತಮಿಳುನಾಡಿನ ಎಲ್ಲಾ ದಕ್ಷಿಣ ಜಿಲ್ಲೆಗಳ ಹಾಗೂ ಕೆಲ ಪಶ್ಚಿಮ ಜಿಲ್ಲೆಗಳ ದಕ್ಷಿಣ ಸ್ನಾತಕೋತ್ತರ ಪದವೀಧರರ ಮತ್ತು ವೃತ್ತಿಪರ ಪದವೀಧರರ ನೋಂದಣಿ ಕೇಂದ್ರವಾಗಿ ಸಹ ಕಾರ್ಯನಿರ್ವಹಿಸುತ್ತದೆ.

ಅತ್ಯಂತ ಪ್ರಾಚೀನ ಜನವಸತಿಯ ನಗರವಾಗಿರುವ ಕಾರಣ, ಮಧುರೈ ನಗರವು ತನ್ನ ವೈವಿಧ್ಯಮಯ ಸಂಸ್ಕೃತಿ ಮತ್ತು ಧಾರ್ಮಿಕ ಸಾಮರಸ್ಯಕ್ಕೆ ಪ್ರಸಿದ್ಧವಾಗಿದೆ. ಮುಮ್ಮದ ತಲೈವರ್‌ಗಳ್, ಮೂರು ಧರ್ಮಗಳ ಮುಖಂಡರು ಎಂಬ ಪ್ರಸಿದ್ಧ ಹೆಸರಿನಿಂದ ಕರೆಯಲಾಗುವ ಮೂರು ಮಂದಿ ಧಾರ್ಮಿಕ ಮುಖಂಡರು ಮಧುರೈಯನ್ನು ಶಾಂತಿಯಿಂದಿರಿಸಲು ಪ್ರಯತ್ನಿಸುತ್ತಿರುತ್ತಾರೆ.

ತಿರುಜ್ಞಾನ ಸಂಬಾಂತರ್‌ ಅವಧಿಯಲ್ಲಿ ರಚಿಸಲಾದ ಭಾರತದಲ್ಲಿಯೇ ಅತ್ಯಂತ ಹಳೆಯದಾದ ಮಠಗಳಲ್ಲಿ ಒಂದಾಗಿದೆ. ಇದರ ಸ್ಥಾಪನೆಯ ಕಾಲದಿಂದಲೇ ಬಹಳ ಸ್ಥಿರಾಸ್ಥಿಗಳನ್ನು ದಾನವಾಗಿ ನೀಡಲಾಗಿದೆ. ಮಧುರೈ ಆಧೀನಮ್‌ನ ಐತಿಹ್ಯವು 1300 ವರ್ಷಗಳಷ್ಟು ಹಳೆಯದಾದುದು ಹಾಗೂ ತಿರುಜ್ಞಾನ ಸಂಬಾಂತರ್‌ರು ಮಧುರೈ ಆಧೀನಮ್‌ನ 1ನೇ ಮಗಾ/ಮಹಾ ಸನ್ನಿಧಾನಂ ಆಗಿದ್ದರು. ಮಧುರೈನ ಆಧೀನಮ್‌ ಮಠದ ಮುಖಂಡತ್ವವನ್ನು/ಮುಖ್ಯಸ್ಥ ಸ್ಥಾನವನ್ನು ಗುರು ಮಗಾ/ಮಹಾ ಸನ್ನಿಧಾನಮ್‌ರವರು ವಹಿಸಿರುತ್ತಾರೆ. ಶೈವ ಪಂಥಕ್ಕೆ ಸೇರಿದ್ದರೂ ಆಧೀನಮ್‌ರನ್ನು ಮಧುರೈನ ಎಲ್ಲಾ ಶೈವರು ಹಾಗೂ ವೈಷ್ಣವ ಹಿಂದೂಗಳ ಧಾರ್ಮಿಕ ಮುಖಂಡರನ್ನಾಗಿ ಪರಿಗಣಿಸಲಾಗುತ್ತದೆ. ಗುರು ಮಗಾ ಸನ್ನಿಧಾನಂರಾದ ಅರುಣಾಚಲಂ ಸ್ವಾಮಿ ಯವರು ಪ್ರಸ್ತುತ ಆಧೀನಂರಾಗಿರುವ ತಮ್ಮ ವಂಶಾವಳಿಯ 292ನೇ ಆಧೀನಂರಾಗಿದ್ದಾರೆ. ಪ್ರಸಕ್ತ ಆಧೀನಂರು ವೇದಗಳು, ಕುರಾನ್‌‌ ಮತ್ತು ಬೈಬಲ್‌ಗಳಲ್ಲಿ ಪಾರಂಗತರಾಗಿದ್ದಾರೆ. ಹಿಂದೂ ಧರ್ಮಕ್ಕೆ ಸೇರಿದ ಎಲ್ಲಾ ಪ್ರಮುಖ ಹಬ್ಬಗಳು/ಉತ್ಸವಗಳಲ್ಲಿ ಭಾಗವಹಿಸುವ ಆಧೀನಂರು ಧಾರ್ಮಿಕ ಸಾಮರಸ್ಯದ ಸಭೆಗಳಲ್ಲಿ ಕೂಡಾ ಭಾಗವಹಿಸುತ್ತಾರೆ. ನಗರದಲ್ಲಿ ನಡೆಯುವ ಕುಂಭಾಭಿಷೇಕಗಳು, ಮೀನಾಕ್ಷಿ-ಷೊಕ್ಕರ್‌ ವಿವಾಹಮಹೋತ್ಸವ, ವೈಗೈಗೆ ಅಜಗರ್‌ನ ಪ್ರವೇಶ ಹಾಗೂ ಇನ್ನಿತರ ಹಿಂದೂ ಮಹೋತ್ಸವಗಳಲ್ಲಿ ಆಧೀನಮ್‌ರ ಮುಖಂಡತ್ವದಲ್ಲಿ ನಡೆಯುತ್ತದೆ. ಪ್ರಸಕ್ತ ಆಧೀನಂರು ತಮ್ಮ ಜೀವಿತಾವಧಿಯಲ್ಲಿಯೇ ತಮ್ಮ ಉತ್ತರಾಧಿಕಾರಿಯನ್ನು ನೇಮಕ ಮಾಡುತ್ತಾರೆ, ಹಾಗೆ ನೇಮಕರಾದವರು ಅವರ ನಂತರ ಅಧಿಕಾರ ಪಡೆಯುತ್ತಾರೆ.

ಮಧುರೈನಲ್ಲಿ ಖಾಝಿ ಎಂದರೆ ಮುಸ್ಲಿಮರ ಧಾರ್ಮಿಕ ಮುಖಂಡ ಹಾಗೂ ನ್ಯಾಯಾಧೀಶರನ್ನು ತಮಿಳುನಾಡು ಸರಕಾರವು ನೇಮಿಸುತ್ತದೆ. ಮಧುರೈನಲ್ಲಿನ ಖಾಜಿಗಳ ಐತಿಹ್ಯವು 750 ವರ್ಷಗಳಷ್ಟು ಹಳೆಯದು. ಸೈಯದ್‌ ತಜುದ್ದೀನ್‌ರು ಆಗಿನ ಸುಲ್ತಾನರ ಸರ್ಕಾರದ 1ನೇ ಖಾಝಿ/ಜಿಯಾಗಿದ್ದರು. ಮಧುರೈನಲ್ಲಿ ತಮಿಳುನಾಡು ಸರ್ಕಾರದ ಮೂಲಕ ಇಂದಿಗೂ ಆತನ ವಂಶಸ್ಥರನ್ನೇ ಖಾಜಿಯನ್ನಾಗಿ ನೇಮಿಸಲಾಗುತ್ತದೆ. ಹಝರತ್‌ ಮೌಲಾನಾ ಮೌಲ್ವಿ, ಮೀರ್‌ ಅಹಮದ್‌ ಇಬ್ರಾಹಿಂ ರಹಮುತುಲ್ಲಾಹಿ ಅಲೈಹಿ, ಮಧುರೈನ ಮಕಬರಾ ಹಝರತ್‌ಗಳಲ್ಲಿ ಮೊದಲನೆಯವರು, ಮೌಲಾನಾ ಆಗಿದ್ದ ಸೈಯೆದ್‌ ಅಬ್ದುಲ್‌ ಖಾದಿರ್‌ ಇಬ್ರಾಹಿಂ, ಮೌಲ್ವಿಯವರಾದ ಸೈಯೆದ್‌ ಅಮ್ಜದ್‌ ಅಹಮದ್‌ ಇಬ್ರಾಹಿಂ ಮತ್ತು ಮೌಲ್ವಿಯವರಾದ ಸೈಯೆದ್‌ ಅಬ್ದುಸ್‌‌ ಸಲಾಂ ಇಬ್ರಾಹಿಂ ಸಾಹಿಬ್‌ ಹಝರತ್‌ರವರುಗಳು ತಮ್ಮ ಅವಧಿಯಲ್ಲಿ ಸರಕಾರದ ಪರವಾಗಿ ಗಣನೀಯ ಸೇವೆ ಸಲ್ಲಿಸಿದ್ದಾರೆ.

ಅರಸರದಿಯ ಈದ್ಗಾ ಮೈದಾನದಲ್ಲಿ ನಡೆಯುವ ಈದ್‌ ಉಲ್‌-ಫಿತರ್‌ ಮತ್ತುಈದ್‌ ಅಲ್‌-ಅದಾಗಳ ಸಾಮೂಹಿಕ ಪ್ರಾರ್ಥನೆಗಳ ಮುಂದಾಳತ್ವ ವಹಿಸುತ್ತಾರೆ. ಇಷ್ಟೇ ಅಲ್ಲದೇ, ಇಸ್ಲಾಮಿನ ಮುಹರ್ರಮ್‌ ತಿಂಗಳಲ್ಲಿ ನಡೆಸಲಾಗುವ ಸುನ್ನಿ ಮುಸ್ಲಿಮರ 23 ದಿನಗಳ ಆಷುರಾ ಧಾರ್ಮಿಕ ಕೂಟದ ಮುಂದಾಳತ್ವವನ್ನೂ ಅವರೇ ವಹಿಸುತ್ತಾರೆ. ಮಧುರೈನಲ್ಲಿ ಬಹುಪಾಲು ಮುಸ್ಲಿಮ್‌ ವಿವಾಹಗಳನ್ನು ವಿಧಿಪೂರ್ವಕವಾಗಿ ನಡೆಸಿಕೊಡುವುದಲ್ಲದೇ, ಆ ನಂತರ ಬರಬಹುದಾದ ಸಮಸ್ಯೆಗಳಿಗೆ ಪರಿಹಾರವನ್ನೂ ಅವರು ನೀಡುತ್ತಾರೆ. ಸೂಕ್ತ ದರ್ಗಾಗಳಲ್ಲಿ ನಡೆಸಲಾಗುವ ಬಹಳಷ್ಟು ಝಿಕ್ರ್‌ ಮಜ್ಲಿಗಳು ಮತ್ತು ಉರುಸ್‌ ಉತ್ಸವಗಳನ್ನು ಖಾಜಿಯಾರ್‌‌ ಅಥವಾ ಖಾಜಿಯಾರ್‌ ಕುಟುಂಬದ ಇತರೆ ಮೌಲ್ವಿಗಳ ಮುಂದಾಳತ್ವದಲ್ಲಿ ನಡೆಸಲಾಗುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಶೃಂಗೇರಿ

ಶೃಂಗೇರಿ ಶಾರದಾಂಬೆ : ತುಂಗಾ ನದಿ ತಟದಲ್ಲಿರುವ ಚಿಕ್ಕ ಊರು

ಕೊಡಗಿನ ಸಂಪ್ರದಾಯ

ಕೊಡಗಿನ ಸಂಪ್ರದಾಯ