in ,

ದೇಹವನ್ನು ಗಟ್ಟಿಯಾಗಿಸುವ ಧಾನ್ಯಗಳು

ಧಾನ್ಯಗಳು
ಧಾನ್ಯಗಳು

ಹಣ್ಣು ಮತ್ತು ಸಿಪ್ಪೆಯನ್ನು ಹೊಂದಿರುವ ಅಥವಾ ಹೊಂದದೆ ಇರುವ ಸಣ್ಣ, ಗಟ್ಟಿಯಾದ ಏಕದಳ ಸಸ್ಯಗಳ ಬೀಜವನ್ನು ಧಾನ್ಯವೆಂದು ಕರೆಯುತ್ತಾರೆ. ಅಕ್ಕಿ, ಗೋಧಿ, ಜೋಳ, ರಾಗಿ, ನವಣೆ, ಸಜ್ಜೆ ಮತ್ತು ಇತ್ಯಾದಿಗಳು ಧಾನ್ಯಗಳಿಗೆ ಉದಾಹರಣೆಗಳಾಗಿವೆ.

ಧಾನ್ಯವು ಸಣ್ಣ, ಗಟ್ಟಿಯಾದ, ಒಣ ಬೀಜವಾಗಿದ್ದು, ಲಗತ್ತಿಸಲಾದ ಹಲ್ ಅಥವಾ ಫ್ರುಟ್ ಲೇಯರ್ ನೊಂದಿಗೆ ಅಥವಾ ಇಲ್ಲದೆ, ಮಾನವ ಅಥವಾ ಪ್ರಾಣಿಗಳ ಬಳಕೆಗಾಗಿ ಕೊಯ್ಲು ಮಾಡಲಾಗುತ್ತದೆ. ಧಾನ್ಯ ಬೆಳೆ ಎಂದರೆ ಧಾನ್ಯ ಉತ್ಪಾದಿಸುವ ಸಸ್ಯ. ವಾಣಿಜ್ಯ ಧಾನ್ಯ ಬೆಳೆಗಳ ಎರಡು ಮುಖ್ಯ ವಿಧಗಳು ಏಕದಳ ಧಾನ್ಯಗಳು ಮತ್ತು ದ್ವಿದಳ ಧಾನ್ಯಗಳು.

ಕೊಯ್ಲು ಮಾಡಿದ ನಂತರ, ಒಣ ಧಾನ್ಯಗಳು ಇತರ ಪ್ರಧಾನ ಆಹಾರಗಳಾದ ಪಿಷ್ಟ ಹಣ್ಣುಗಳು ಮತ್ತು ಗೆಡ್ಡೆಗಳು ಅಂದರೆ ಸಿಹಿ ಆಲೂಗಡ್ಡೆ, ಮರಗೆಣಸು ಮತ್ತು ಹೆಚ್ಚಿನವು ಹೆಚ್ಚು ಬಾಳಿಕೆ ಬರುತ್ತವೆ. ಈ ಬಾಳಿಕೆಯು ಧಾನ್ಯಗಳನ್ನು ಕೈಗಾರಿಕಾ ಕೃಷಿಗೆ ಸೂಕ್ತವಾಗಿಸುತ್ತದೆ, ಏಕೆಂದರೆ ಅವುಗಳನ್ನು ಯಾಂತ್ರಿಕವಾಗಿ ಕೊಯ್ಲು ಮಾಡಬಹುದು, ರೈಲು ಅಥವಾ ಹಡಗಿನ ಮೂಲಕ ಸಾಗಿಸಬಹುದು, ಸಿಲೋಗಳಲ್ಲಿ ದೀರ್ಘಕಾಲ ಸಂಗ್ರಹಿಸಬಹುದು, ಮತ್ತು ಹಿಟ್ಟಿಗೆ ಮಿಲ್ಲಿಂಗ್ ಅಥವಾ ಎಣ್ಣೆಗೆ ಒತ್ತಬಹುದು. ಹೀಗಾಗಿ, ಪ್ರಮುಖ ಜಾಗತಿಕ ಸರಕು ಮಾರುಕಟ್ಟೆಗಳು ಮೆಕ್ಕೆಜೋಳ, ಅಕ್ಕಿ, ಸೋಯಾಬೀನ್, ಗೋಧಿ ಮತ್ತು ಇತರ ಧಾನ್ಯಗಳಿಗಾಗಿ ಅಸ್ತಿತ್ವದಲ್ಲಿವೆ ಆದರೆ ಗೆಡ್ಡೆಗಳು, ತರಕಾರಿಗಳು ಅಥವಾ ಇತರ ಬೆಳೆಗಳಿಗೆ ಅಲ್ಲ.

ದೇಹವನ್ನು ಗಟ್ಟಿಯಾಗಿಸುವ ಧಾನ್ಯಗಳು
ಧಾನ್ಯಗಳು

ಮಾರುಕಟ್ಟೆಗಳಲ್ಲಿ ಧಾನ್ಯಗಳು ಸುಲಭವಾಗಿ ಲಭ್ಯವಿವೆ ಮತ್ತು ಈಗ ಆನ್‌ಲೈನ್ ಮಳಿಗೆಗಳು ಲಭ್ಯವಿದ್ದು ಅಲ್ಲಿಂದಲೂ ಸಹ ನೀವು ಧಾನ್ಯಗಳನ್ನು ಖರೀದಿಸಬಹುದು. ಈಗ ಧಾನ್ಯಗಳನ್ನು ಖರೀದಿಸುವುದು ತುಂಬಾ ಅನುಕೂಲಕರವಾಗಿದೆ.

ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಿರಿ ಧಾನ್ಯಗಳು ಸಹಾಯ ಮಾಡುತ್ತವೆ. ಏಕೆಂದರೆ ಇವುಗಳಲ್ಲಿ ಕಡಿಮೆ ಕ್ಯಾಲೋರಿಗಳಿವೆ.

ದೇಹದ ತೂಕವನ್ನು ನಿಮ್ಮ ಆರೋಗ್ಯಕ್ಕೆ ಯಾವುದೇ ಹಾನಿ ಆಗದಂತೆ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತವೆ.
ಪ್ರತಿ ದಿನವೂ ತಾವು ಸೇವಿಸುತ್ತಿರುವ ಕ್ಯಾಲೋರಿಗಳ ಬಗ್ಗೆ ಹೆಚ್ಚು ಗಮನ ಹೊಂದಿದ ಜನರಿಗೆ ಹೇಳಿ ಮಾಡಿಸಿದ ಆಹಾರಗಳು ಎಂದರೆ ಅದು ಸಿರಿ ಧಾನ್ಯಗಳು ಎಂದು ಹೇಳಬಹುದು.

ಇಡೀ ದಿನ ಚುರುಕುತನದಿಂದ ಕೂಡಿರಲು ಮತ್ತು ದೇಹ ಸದೃಢತೆಯಿಂದ ನಡೆದುಕೊಳ್ಳಲು ಸಿರಿ ಧಾನ್ಯಗಳು ತುಂಬಾ ಸಹಕಾರಿ.

ರೋಗ – ನಿರೋಧಕ ಶಕ್ತಿ ಹೆಚ್ಚಾಗುತ್ತದೆ
ರೋಗ – ನಿರೋಧಕ ಶಕ್ತಿ ಕಡಿಮೆ ಇದ್ದಷ್ಟೂ ಹೆಚ್ಚು ಅನಾರೋಗ್ಯಕ್ಕೆ ಗುರಿ ಆಗುವ ಸಾಧ್ಯತೆ ಇರುತ್ತದೆ.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವ ಸಿರಿ ಧಾನ್ಯಗಳನ್ನು ಸೇವಿಸುವುದು ಒಳ್ಳೆಯದು.

ದೇಹದಲ್ಲಿ ಪ್ರೋಟೀನ್ ಅಂಶವನ್ನು ಹೆಚ್ಚು ಮಾಡುವುದರಿಂದ ಹಿಡಿದು ಮಳೆಗಾಲದ ಈ ಸಮಯದಲ್ಲಿ ಎದುರಾಗುವ ಬಗೆ ಬಗೆಯ ಸೋಂಕುಗಳಿಂದ ಆರೋಗ್ಯವನ್ನು ರಕ್ಷಣೆ ಮಾಡುತ್ತದೆ.

ಪ್ರತಿ ದಿನ ಸೇವಿಸುವ ಯಾವುದೇ ಆಹಾರದಲ್ಲಿ ಕಾರ್ಬೋಹೈಡ್ರೆಟ್ ಅಂಶ ಇದ್ದೇ ಇರುತ್ತದೆ. ಬೆಳಗಿನ ಸಮಯದಲ್ಲಿ ಸೇವನೆ ಮಾಡುವ ಆಹಾರ ಮಧ್ಯಾಹ್ನದ ಹೊತ್ತಿಗೆ ಜೀರ್ಣವಾಗಿ ಅದಾಗಲೇ ಹೊಟ್ಟೆ ಹಸಿವು ಪ್ರಾರಂಭ ಆಗಿರುತ್ತದೆ. ಆಗ ಕೈಗೆ ಸಿಕ್ಕ ಅನಾರೋಗ್ಯಕರ ಆಹಾರಗಳ ಸೇವನೆಗೆ ಮುಂದಾಗುತ್ತೀರಿ. ಇದರಿಂದ ಆರೋಗ್ಯ ಹಾಳಾಗುತ್ತದೆ. ಆದರೆ ಸಿರಿ ಧಾನ್ಯಗಳ ವಿಚಾರದಲ್ಲಿ ಹಾಗಾಗುವುದಿಲ್ಲ. ಹೊಟ್ಟೆ ಹಸಿವನ್ನು ನಿವಾರಣೆ ಮಾಡಿ ತುಂಬಾ ಹೊತ್ತಿನ ತನಕ ಮತ್ತೊಮ್ಮೆ ಹೊಟ್ಟೆ ಹಸಿವು ಉಂಟಾಗದಂತೆ ನೋಡಿಕೊಂಡು ದೇಹದಲ್ಲಿ ವಿಪರೀತ ಬೊಜ್ಜು ಮತ್ತು ಕೊಬ್ಬಿನ ಅಂಶ ಜೊತೆಗೆ ಕೊಲೆಸ್ಟ್ರಾಲ್ ಅಂಶ ತುಂಬಿಕೊಳ್ಳುವುದನ್ನು ತಪ್ಪಿಸುತ್ತದೆ.

ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ
ಸಿರಿ ಧಾನ್ಯಗಳಲ್ಲಿ ಕಂಡು ಬರುವ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಸಕ್ಕರೆ ಕಾಯಿಲೆಯಿಂದ ತಕ್ಕಮಟ್ಟಿಗೆ ಪಾರು ಮಾಡುತ್ತದೆ ಎಂದು ಹೇಳಬಹುದು.

ಯಾವುದೇ ಸಿರಿಧಾನ್ಯವು ಅತ್ಯಧಿಕ ಕ್ಯಾಲ್ಸಿಯಂ ಅಂಶವನ್ನು ಹೊಂದಿರುತ್ತದೆ ಮತ್ತು ಶುಷ್ಕ ಪ್ರದೇಶಗಳಲ್ಲಿ ಸುಲಭವಾಗಿ ಬೆಳೆಯುತ್ತದೆ. ಹೆಚ್ಚಾಗಿ ಮಧುಮೇಹ ನಿರೋಶಕ ಧಾನ್ಯ ಎಂದು ಕರೆಯಲ್ಪಡುವ ಇದರ ಹೆಚ್ಚಿನ ನಾರಿನಂಶವು ಮಲಬದ್ಧತೆ, ಕೊಲೆಸ್ಟ್ರಾಲ್ ಮತ್ತು ಕರುಳಿನ ಕ್ಯಾನ್ಸರ್ ಅನ್ನು ಸಹ ನಿಯಂತ್ರಣದಲ್ಲಿರಿಸುತ್ತದೆ.

ಸಕ್ಕರೆ ಕಾಯಿಲೆ ಇಲ್ಲದವರಿಗೆ ಮುಂಬರುವ ದಿನಗಳಲ್ಲಿ ಸಕ್ಕರೆ ಕಾಯಿಲೆ ಬರದಂತೆ ನೋಡಿಕೊಳ್ಳುತ್ತದೆ. ಈಗಾಗಲೇ ಮಧುಮೇಹದ ನಿಯಂತ್ರಣ ಮೀರಿ ಹೋಗಿರುವವರಿಗೆ ತಾವು ತೆಗೆದುಕೊಳ್ಳುತ್ತಿರುವ ಔಷಧಿಗಳ ಜೊತೆಗೆ ಸಿರಿ ಧಾನ್ಯಗಳನ್ನು ಸೇವನೆ ಮಾಡುತ್ತಾ ಬಂದರೆ ಕ್ರಮೇಣವಾಗಿ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.

ದೇಹವನ್ನು ಗಟ್ಟಿಯಾಗಿಸುವ ಧಾನ್ಯಗಳು
ಸಿರಿ ಧಾನ್ಯ

ಸಿರಿ ಧಾನ್ಯಗಳಲ್ಲಿ ಹೆಚ್ಚಿನ ಪ್ರಮಾಣದ ನೈಸರ್ಗಿಕ ಕೊಬ್ಬಿನ ಅಂಶ ಇರುವುದರಿಂದ ಸೇವಿಸುವ ಇತರ ಆಹಾರ ಪದಾರ್ಥಗಳಿಂದ ಒದಗುವ ಅನಾರೋಗ್ಯಕರ ಕೊಬ್ಬಿನ ಅಂಶ ಮತ್ತು ಕೊಲೆಸ್ಟ್ರಾಲ್ ಅಂಶ ದೇಹದ ಮಾಂಸ – ಖಂಡಗಳ ಮೇಲೆ ಮತ್ತು ಇತರ ಅಂಗಾಂಗಗಳ ಮೇಲೆ ಶೇಖರಣೆ ಆಗ ಹೃದಯಾಘಾತ, ಪಾರ್ಶ್ವವಾಯು ಮತ್ತು ಇನ್ನಿತರ ಹೃದಯ ರಕ್ತ ನಾಳಗಳಿಗೆ ಸಂಬಂಧ ಪಟ್ಟ ಆರೋಗ್ಯ ಸಮಸ್ಯೆಗಳು ಎದುರಾಗದಂತೆ ನೋಡಿಕೊಳ್ಳುತ್ತವೆ.

ಸಜ್ಜೆ
ಪ್ರಾಚೀನ ಕಾಲದಿಂದಲೂ ಆಫ್ರಿಕನ್ ಮತ್ತು ಭಾರತದ ಉಪಖಂಡದಲ್ಲಿ ವ್ಯಾಪಕವಾಗಿ ಬೆಳೆಯಲಾಗುವ ಮತ್ತು ಸೇವಿಸಲಾಗುವ ಸಜ್ಜೆಯು ರಂಜಕದಿಂದ ಸಮೃದ್ಧವಾಗಿದೆ, ಇದು ಜೀವಕೋಶಗಳು ಶಕ್ತಿ ಮತ್ತು ಇತರ ಅನೇಕ ಪ್ರಮುಖ ಖನಿಜಗಳನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ ಹೆಚ್ಚಾಗಿ ಸೇವಿಸುವುದರಿಂದ, ಸಜ್ಜೆ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ ಮತ್ತು ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ.

ನವಣೆ
ಪ್ರಾಯಶಃ ಇದು ಬಹಳ ಪ್ರಾಚೀನ ಕಾಲದಿಂದ ಬೇಸಾಯ ಮಾಡಲಾಗುತ್ತಿರುವ ಸಿರಿಧಾನ್ಯ, ಇದರ ಮೂಲ ಉತ್ತರ ಚೀನಾ ಎಂದು ಭಾವಿಸಲಾಗಿದೆ, ಅಲ್ಲಿ ಇದು ಪ್ರಸವಾನಂತರ ಮತ್ತು ಜೀರ್ಣಕಾರಿ ಆರೋಗ್ಯಕ್ಕೆ ಗುಣಕಾರಿ ಆಹಾರವೆಂದು ಪರಿಗಣಿಸಲ್ಪಟ್ಟಿದೆ. ನವಣೆಯು ಸಮೃದ್ಧ ಖನಿಜಾಂಶವನ್ನು ಹೊಂದಿದೆ, ಮತ್ತು ವಿಶೇಷವಾಗಿ ಕಬ್ಬಿಣದಂಶ ಇದರಲ್ಲಿ ಅಧಿಕವಾಗಿರುತ್ತದೆ. ಭಾರತದ ಕೆಲವು ಭಾಗಗಳಲ್ಲಿ ಇದು ಜನಪ್ರಿಯ ಉಪವಾಸದ ಆಹಾರ, ಕುತೂಹಲಕಾರಿಯಾಗಿ ಇದನ್ನು ಶಿಯೋಮಿ ಅಥವಾ ಚೀನೀ ಭಾಷೆಯಲ್ಲಿ ಸಣ್ಣ ಅಕ್ಕಿ ಎಂದು ಕರೆಯಲಾಗುತ್ತದೆ.

ಸಾಮೆ
ಸಿರಿಧಾನ್ಯ ಕುಟುಂಬದಲ್ಲಿಯೇ ಚಿಕ್ಕದಾದ, ಈ ಪುಟ್ಟ ಸಿರಿಧಾನ್ಯವು ಭಾರತದಾದ್ಯಂತ ಬೆಳೆಯುವ ಮತ್ತೊಂದು ವಿಶ್ವಾಸಾರ್ಹ ಬೆಳೆಯಾಗಿದೆ. ಇದನ್ನು ಬೇಯಿಸುವುದು ತುಂಬಾ ಸುಲಭ ಮತ್ತು ಇದನ್ನು ಸಾಮಾನ್ಯವಾಗಿ ಅನ್ನದಂತೆಯೇ ಬಳಸಲಾಗುತ್ತದೆ ಮತ್ತು ಅಕ್ಕಿಯನ್ನು ಬಳಸುವ ಯಾವುದೇ ಪಾಕವಿಧಾನದಲ್ಲಿ ಇದನ್ನು ಬಳಸಬಹುದು. ಇದರಲ್ಲಿರುವ ಹೆಚ್ಚಿನ ಕಬ್ಬಿಣದ ಅಂಶವು ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ವಿಶೇಷವಾಗಿ ಅಕ್ಕಿಗಿಂತಲೂ ಒಂದಂಶ ಹೆಚ್ಚು ಸಹಾಯ ಮಾಡುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಮುಂದಿನ 24 ಗಂಟೆಯೊಳಗೆ 5 ರಾಶಿಯವರಿಗೆ ಕುಬೇರನ ಕೃಪೆ ದುಡ್ಡಿನ ಸುರಿಮಳೆ ಗುರುಬಲ ಗಜಕೇಸರಿ ಯೋಗ…

ಮುಂದಿನ 24 ಗಂಟೆಯೊಳಗೆ 5 ರಾಶಿಯವರಿಗೆ ಕುಬೇರನ ಕೃಪೆ ದುಡ್ಡಿನ ಸುರಿಮಳೆ ಗುರುಬಲ ಗಜಕೇಸರಿ ಯೋಗ…