in

ಕೃಷ್ಣನ ಪತ್ನಿಯರನ್ನು ಅಷ್ಟಭಾರ್ಯರೆನ್ನಲು ಕಾರಣ ಹೀಗಿದೆ 

ಕೃಷ್ಣನ ಪತ್ನಿಯರನ್ನು ಅಷ್ಟಭಾರ್ಯರೆನ್ನಲು ಕಾರಣ
ಕೃಷ್ಣನ ಪತ್ನಿಯರನ್ನು ಅಷ್ಟಭಾರ್ಯರೆನ್ನಲು ಕಾರಣ

ಶ್ರೀಕೃಷ್ಣನ ಬಾಲ್ಯದ ಅನೇಕ ರೋಚಕ ಕಥೆಗಳು ಭಾಗವತದಲ್ಲಿವೆ. ಶಕಟಾಸುರನ ವಧೆ, ಪೂತನಿಯ ವಧೆ, ಗೋಪಿಕಾ ಸ್ತ್ರೀಯರ ವಸ್ತ್ರಾಪಹರಣ, ಕಾಳಿಂಗಮರ್ದನ, ಗೋವರ್ಧನ ಗಿರಿಯ ರಕ್ಷಣೆ ಮೊದಲಾದ ಅನೇಕ ಕಥೆಗಳಿವೆ.

ಶ್ರೀಕೃಷ್ಣನಿಗೆ ಬಾಲ್ಯದಲ್ಲಿ ರಾಧೆ ಎಂಬ ಪ್ರೇಯಸಿ ಇದ್ದಳು. ಶ್ರೀಕೃಷ್ಣ ಗೊಲ್ಲಕುಲವನ್ನು ತೊರೆದು ಮಥುರಾ ನಗರಕ್ಕೆ ಹೊರಟಾಗ ರಾಧೆಯನ್ನೂ ತೊರೆಯಬೇಕಾಗುತ್ತದೆ. ಆದರೆ ಭಾರತದಲ್ಲಿ, ವಿಶೇಷವಾಗಿ ಉತ್ತರಭಾರತದಲ್ಲಿ, ಇಂದಿಗೂ ಶ್ರೀಕೃಷ್ಣನ ಜೊತೆ ರಾಧೆಗೇ ಪೂಜೆ ಸಲ್ಲುತ್ತದೆ.

ಜರಾಸಂಧ ಎಂಬ ರಾಕ್ಷಸನೊಂದಿಗೆ ಕೃಷ್ಣನಿಗೆ ಅನೇಕ ಸಲ ಯುದ್ಧವಾಗುತ್ತದೆ. ಜರಾಸಂಧನನ್ನು ಸೋಲಿಸುವ ಬದಲು, ಕೃಷ್ಣ ತನ್ನ ಬಂಧು-ಬಾಂಧವರನ್ನೆಲ್ಲ ಗಂಗಾತೀರದ ಮಥುರೆಯಿಂದ, ಸಾಗರತೀರದ ದ್ವಾರಕೆಗೆ ಬಂದು, ನಗರವನ್ನು ನಿರ್ಮಿಸಿ ಮಥುರೆಯ ದೊರೆ ಉಗ್ರಸೇನನನ್ನೇ ರಾಜನಾಗಿ ನಿಲ್ಲಿಸುತ್ತಾನೆ.

ಕೃಷ್ಣನ ಪತ್ನಿಯರನ್ನು ಅಷ್ಟಭಾರ್ಯರೆನ್ನಲು ಕಾರಣ ಹೀಗಿದೆ 
ಶ್ರೀಕೃಷ್ಣ ಹಾಗೂ ರಾಜಕುಮಾರಿ ರುಕ್ಮಣಿ

ನರಕಾಸುರ 16 ಸಾವಿರದ 100 ಮಂದಿ ಯುವತಿಯರನ್ನು ಅಪಹರಿಸಿ ಕೂಡಿ ಹಾಕಿದ್ದ ಅಲ್ಲದೆ ನರಕಾಸುರನ ಅತ್ಯಾಚಾರ ಅನಾಚಾರದಿಂದ ಎಲ್ಲಾ ದೇವತೆಗಳು ಕಂಗೆಟ್ಟು ಹೋಗಿದ್ದರು ಹೀಗಾಗಿ ಇಂದ್ರಾ ಸೇರಿದಂತೆ ಋಷಿ ಮುನಿಗಳು ಎಲ್ಲರೂ ಕೃಷ್ಣನ ಬಳಿ ಬಂದು ಹೇಗಾದರೂ ಮಾಡಿ ಈ ಸಂಕಟದಿಂದ ಪಾರುಮಾಡಿ ಎಂದು ಕೇಳಿ ಕೊಳ್ಳುತ್ತಾರೆ.

ಆಗ ಶ್ರೀ ಕೃಷ್ಣ ಇಂದ್ರ ಮತ್ತು ಋಷಿ ಮುನಿಗಳಿಗೆ ಧೈರ್ಯ ಹೇಳಿ ಎಲ್ಲವನ್ನೂ ನೋಡಿಕೊಳ್ಳುತ್ತೇನೆ ಎಂದು ಮಾತು ಕೊಟ್ಟು ಕಳುಹಿಸಿದರು. ಭೂದೇವಿಯ ಅವತಾರವಾದ ಸತ್ಯಭಾಮ ಜೊತೆ ತನ್ನ ವಾಹನ ಗರುಡನ ಮೇಲೆ ಕುಳಿತು ಶ್ರೀ ಕೃಷ್ಣ ಪ್ರಜ್ಯೊತಿಷ್ ಪುರಕ್ಕೆ ತೆರಳುತ್ತಾನೆ ಅಲ್ಲಿ ಅಟ್ಟಹಾಸದಿಂದ ಮೆರೆಯುತ್ತಿದ್ದ ನರಕಾಸುರನನ್ನು ಯುದ್ಧಕ್ಕೆ ಕರೆಯುತ್ತಾರೆ ನರಕಾಸುರ ಬ್ರಹ್ಮನ ಬಳಿ ಪಡೆದಿದ್ದ ವರದಿಂದ ಕೃಷ್ಣನ ಬಳಿ ಯುದ್ಧಕ್ಕೆ ನಿಲ್ಲುತ್ತಾನೆ ಭಯಂಕರ ಅತಿ ಭಯಂಕರ ಅಸ್ತ್ರ ಪ್ರಯೋಗಿಸಿದರು ನರಕಾಸುರನನ್ನು ಕೊಲ್ಲಲು ಸಾಧ್ಯ ಆಗಲಿಲ್ಲ ಸತ್ಯಭಾಮ ಒಂದು ಅಸ್ತ್ರಡಿಂದ ಬಾಣ ಬಿಡುತ್ತಾಳೆ ಈಗ ನರಕಾಸುರ ಸತ್ತು ಹೋಗುತ್ತಾನೆ. ಆಗ ಶ್ರೀ ಕೃಷ್ಣ ಈ 16 ಸಾವಿರ ಮಂದಿಯನ್ನು ಮದುವೆ ಆಗಿ ಅವರೆಲ್ಲರಿಗೂ ಒಂದು ಸ್ಥಾನ ಕೊಡುತ್ತಾನೆ.

ರುಕ್ಮ ಎಂಬ ರಾಜನ ತಂಗಿ ರುಕ್ಮಿಣಿಯನ್ನು ಮದುವೆಯಾಗಲು ಶ್ರೀಕೃಷ್ಣ ಬಯಸುತ್ತಾನೆ. ರುಕ್ಮನಿಗೆ ಶ್ರೀಕೃಷ್ಣನನ್ನು ಕಂಡರೆ ದ್ವೇಷ. ಹೀಗಾಗಿ ರುಕ್ಮಿಣಿಯನ್ನು ಅಪಹರಿಸಿಕೊಂಡು ಬಂದು ಕೃಷ್ಣ ಮದುವೆಯಾಗುತ್ತಾನೆ. ಮುಂದೆ ಜಾಂಬವತಿ ಮತ್ತು ಸತ್ಯಭಾಮೆ ಎಂಬ ಕನ್ಯೆಯರನ್ನೂ ಕೃಷ್ಣ ವಿವಾಹವಾಗುತ್ತಾನೆ.

ರುಕ್ಮಿಣಿ ಕೃಷ್ಣನನ್ನು ಪ್ರೀತಿಸಿದರು ಹೀಗಾಗಿ ರುಕ್ಮಿಣಿಯನ್ನು ಶ್ರೀ ಕೃಷ್ಣ ಮದುವೆ ಆದರೂ ರುಕ್ಮಿಣಿ ಗೆ ಒಟ್ಟು 10 ಮಂದಿ ಮಕ್ಕಳು ಇದ್ದರು. ಶ್ರೀ ಕೃಷ್ಣನಿಗೆ ರುಕ್ಮಿಣಿ ಬಿಟ್ಟು ಇನ್ನೂ 7 ಮಂದಿ ಪ್ರಮುಖ ಹೆಂಡತಿಯರು ಇದ್ದರು ಸತ್ಯಭಾಮ ಜಾಂಬವತಿ ಸೂರ್ಯ ದೇವನ ಪುತ್ರಿ ಕಾಲಿಂದಿ ಮಿತ್ರವೃಂದ ನಗ್ನಜಿತಿ ಲಕ್ಷಣ ಮತ್ತು ಭದ್ರ ಹೀಗೆ ಒಟ್ಟು 8 ಮಂದಿ ಇದ್ದರು ಪ್ರತಿಯೊಬ್ಬರಿಗೆ ತಲಾ 10 ಮಂದಿ ಮಕ್ಕಳು ಇದ್ದರು ಈ ರೀತಿ 8 ಮಂದಿ ಪತ್ನಿಯರಿಂದ ಶ್ರೀ ಕೃಷ್ಣನಿಗೆ 80 ಮಂದಿ ಮಕ್ಕಳು ಇದ್ದರು. ಹೀಗೆ ಶ್ರೀ ಕೃಷ್ಣ 8 ಮದುವೆ ಆಗಿ ದ್ವಾರಕಾ ದಲ್ಲಿ ರಾಜ್ಯಭಾರ ಮಾಡಿಕೊಂಡು ಆರಾಮಾಗಿ ಇರುತ್ತಾರೆ.

ಕೃಷ್ಣನ ಪತ್ನಿಯರನ್ನು ಅಷ್ಟಭಾರ್ಯರೆನ್ನಲು ಕಾರಣ ಹೀಗಿದೆ 
ಗೋವರ್ಧನಧಾರಿ ಶ್ರೀಕೃಷ್ಣ

ಶ್ರೀಕೃಷ್ಣನ ಪತ್ನಿಯರನ್ನು ಅಷ್ಟಭಾರ್ಯರೆನ್ನಲು ಕಾರಣ :

ಸಾಮಾನ್ಯವಾಗಿ ಎಲ್ಲರೂ ಭಗವಾನ್‌ ಶ್ರೀಕೃಷ್ಣನಿಗೆ 16,108 ಪತ್ನಿಯರೆಂದು ಹೇಳುತ್ತಾರೆ. ಆದರೆ ಶ್ರೀಕೃಷ್ಣನ ಕೇವಲ 8 ಜನ ಪತ್ನಿಯರನ್ನು ಮಾತ್ರ ಅಷ್ಟಭಾರ್ಯರೆಂದು ಕರೆಯಲಾಗುತ್ತದೆ.  

ಅಷ್ಟ ಎಂದರೆ 8, ಭಾರ್ಯ ಎಂದರೆ ಪತ್ನಿ. ಆದರೆ ಶ್ರೀಕೃಷ್ಣನಿಗೆ ರಾಧೆಯನ್ನು ವಿವಾಹವಾಗಲು ಮನಸ್ಸು ಮಿಡಿಯುತ್ತಿತ್ತು. ರಾಧೆಯೆಂದರೆ ಕೃಷ್ಣನಿಗೆ ಬಹಳ ಪ್ರೀತಿ. ಕೊನೆಗೂ ಕೃಷ್ಣನಿಗೆ ರಾಧೆಯನ್ನು ವಿವಾಹವಾಗಲು ಸಾಧ್ಯವಾಗಲಿಲ್ಲ. ನರಕಾಸುರನು ಅಪಹರಿಸಿದ 16,000 ಮಹಿಳೆಯರನ್ನು ಸಮಾಜ ಶಂಕಿಸಿದಾಗ ಕೃಷ್ಣ ವಿವಾಹವಾಗುತ್ತಾನೆ. ಆದರೆ ಕೃಷ್ಣನಿಗೆ ಕೇವಲ 8 ಪತ್ನಿಯರ ಮೇಲೆ ಮಾತ್ರ ಮನಸ್ಸಿತ್ತು. ಆ 8 ಪತ್ನಿಯರು ಅಥವಾ ಅಷ್ಟಭಾರ್ಯರು.

೧.ರುಕ್ಮಿಣಿ :

ರುಕ್ಮಿಣಿ ವಿದರ್ಭ ರಾಜ್ಯದ ರಾಜ, ಭೀಷ್ಮನ ಮಗಳು. ಭಗವಾನ್‌ ಶ್ರೀಕೃಷ್ಣ ಹಾಗೂ ರಾಜಕುಮಾರಿ ರುಕ್ಮಣಿಯು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು ಆದರೆ ಕೃಷ್ಣನ ಸಹೋದರ ಅವರಿಬ್ಬರ ಪ್ರೀತಿಯನ್ನು ವಿರೋಧಿಸುತ್ತಾನೆ ಆಗ ಕೃಷ್ಣ ಮತ್ತು ರುಕ್ಮಿಣಿ ಓಡಿಹೋಗಿ ಮದುವೆಯಾಗುತ್ತಾನೆ. ರುಕ್ಮಿಣಿಯು ಭಗವಾನ್‌ ಶ್ರೀಕೃಷ್ಣನ ಮೊದಲ ಹೆಂಡತಿ ಹಾಗೂ ಲಕ್ಷ್ಮಿ ದೇವಿಯ ಸುಂದರ ಅವತಾರ ಈಕೆ. ರುಕ್ಮಿಣಿ ರಾಜಕುಮಾರಿಯಾಗಿದ್ದಳು ಹಾಗೂ ಶ್ರೀಕೃಷ್ಣನ ಹೃದಯದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದ್ದಳು.

೨.​ಸತ್ಯಭಾಮ :

ಸತ್ಯಭಾಮ ಭೂಮಿಯ ಅವತಾರ. ಈಕೆ ಸತ್ರಾಜಿತನ ಮಗಳಾಗಿದ್ದಳು. ಸತ್ರಾಜಿತನು ಅಮೂಲ್ಯವಾದ ಮಣಿಗಳನ್ನು ಕದಿಯುತ್ತಿದ್ದನು. ಒಮ್ಮೆ ಮಣಿಗಳನ್ನು ಕದಿಯುವಾಗ ಶ್ರೀಕೃಷ್ಣನ ಕೈಗೆ ಸಿಕ್ಕಿ ಹಾಕಿಕೊಳ್ಳುತ್ತಾನೆ. ಇದರಿಂದ ಸತ್ರಾಜಿತನಿಗೆ ಅವಮಾನವಾಗುತ್ತದೆ. ಹಾಗೂ ಭಗವಾನ್‌ ಕೃಷ್ನನ ಬಳಿ ಕ್ಷಮೆಯನ್ನು ಯಾಚಿಸಿ ತಾನು ಮಾಡಿದ ತಪ್ಪಿಗೆ ತನ್ನ ಮಗಳನ್ನು ವಿವಾಹವಾಗುವಂತೆ ಕೇಳಿಕೊಳ್ಳುತ್ತಾನೆ. ಸತ್ಯಭಾಮನ ತಂದೆ ಸತ್ರಾಜಿತನ ಬಳಿ ಸ್ಯಮಂತಕ ಎನ್ನುವ ಧೈವಿಕ ಗುಣವುಳ್ಳ ಆಭರಣವನ್ನು ಹೊಂದಿರುತ್ತಾನೆ. ಇದನ್ನು ಕಂಡು ಕೃಷ್ಣನು ಈ ದೈವಿಕ ಆಭರಣವನ್ನು ಉಗ್ರಸೇನನಲ್ಲಿ ಕೊಡು ಅವನು ಇದನ್ನು ಸುರಕ್ಷಿತವಾಗಿಟ್ಟುಕೊಳ್ಳುತ್ತಾನೆಂದು ಹೇಳುತ್ತಾನೆ. ಒಮ್ಮೆ ಸತ್ರಾಜಿತನ ಸಹೋದರ ಪ್ರಸೇನ ಆ ಆಭರಣವನ್ನು ತೆಗೆದುಕೊಂಡು ಕಾಡಿಗೆ ಭೇಟೆಗೆಂದು ಹೋಗುತ್ತಾನೆ. ಅಲ್ಲಿ ಪ್ರಸೇನನು ಸಿಂಹದ ಹಲ್ಲೆಯಿಂದ ಸಾವನ್ನಪ್ಪುತ್ತಾನೆ. ಆ ಸಂದರ್ಭದಲ್ಲಿ ಜಾಂಬವನಿಗೆ ಸತ್ರಾಜಿತನ ದೈವಿಕ ಆಭರಣ ಸಿಗುತ್ತದೆ ಅವನು ತನ್ನ ಮಗಳಿಗೆ ಆಟವಾಡಲು ಆ ಆಭರಣವನ್ನು ನೀಡುತ್ತಾನೆ.

೩.​ಜಾಂಬವತಿ :

ಕೃಷ್ಣನ ಪತ್ನಿಯರನ್ನು ಅಷ್ಟಭಾರ್ಯರೆನ್ನಲು ಕಾರಣ ಹೀಗಿದೆ 
ಜಾಂಬವ ಮಗಳಾದ ಜಾಂಬವತಿಯನ್ನು ವಿವಾಹವಾಗುವಂತೆ ಬೇಡಿಕೊಳ್ಳುವುದು

ಸತ್ರಾಜಿತನು ತನ್ನ ಸಹೋದರನ ಸಾವು ಮತ್ತು ಸ್ಯಮಂತಕ ಎನ್ನುವ ದೈವಿಕ ಆಭರಣ ಕಳೆದುಹೋಗಿರುವುದರ ಹಿಂದೆ ಶ್ರೀಕೃಷ್ಣನ ಕೈವಾಡವಿದೆಯೆಂದು ಅನುಮಾನಿಸುತ್ತಾನೆ. ಆಗ ಶ್ರೀಕೃಷ್ಣನು ತನ್ನ ಮೇಲೆ ಬಂದಿರುವ ಅವಮಾನವನ್ನು, ಸಂಶಯವನ್ನು ತಾನೇ ಸರಿಪಡಿಸಿಕೊಳ್ಳುತ್ತೇನೆಂದು ಆಭರಣವನ್ನು ಮತ್ತು ಸತ್ರಾಜಿತನ ಸಹೋದರನನ್ನು ಹುಡುಕಿಕೊಂಡು ಹೋಗುತ್ತಾನೆ. ಆಗ ಶ್ರೀಕೃಷ್ಣನಿಗೆ ಜಾಂಬವನ ಬಳಿ ಆಭರಣ ಇದೆಯೆಂಬುದೂ ತಿಳಿಯುತ್ತದೆ. ಆದರೆ ಆಭರಣವನ್ನು ಜಾಂಬವ ಹಿಂದಿರುಗಿಸಲು ಒಪ್ಪುವುದಿಲ್ಲ. ಆಗ ಕೃಷ್ಣನಿಗೂ ಜಾಂಬವನಿಗೂ ಸುಮಾರು 28 ದಿನಗಳ ಕಾಲ ಯುದ್ಧ ನಡೆಯುತ್ತದೆ. ಯುದ್ಧದಲ್ಲಿ ಜಾಂಬವ ಸೋಲನ್ನು ಅನುಭವಿಸುತ್ತಾನೆ. ಅವನಿಗೆ ಕೃಷ್ಣನು ರಾಮನ ಅವತಾರವೆಂದು ತಿಳಿಯುತ್ತದೆ ತಕ್ಷಣ ಆಭರಣವನ್ನು ಕೃಷ್ಣನಿಗೆ ಒಪ್ಪಿಸಿ ಕ್ಷಮೆಯನ್ನು ಕೇಳಿ, ತನ್ನ ಮಗಳಾದ ಜಾಂಬವತಿಯನ್ನು ವಿವಾಹವಾಗುವಂತೆ ಬೇಡಿಕೊಳ್ಳುತ್ತಾನೆ. ಹೀಗೆ ಕೃಷ್ಣ ಜಾಂಬವತಿಯನ್ನು ವಿವಾಹವಾದನು.

೪.​ಕಳಿಂದಿ :

ಸೂರ್ಯದೇವನ ಮಗಳಾದ ಕಳಿಂದಿಯು ಭಗವಾನ್‌ ಶ್ರೀಕೃಷ್ಣನ ನಾಲ್ಕನೇ ಉತ್ತಮ ಪತ್ನಿಯಾಗಿದ್ದಳು. ತಾನು ಮದುವೆಯಾದರೆ ಅದು ಭಗವಾನ್‌ ಶ್ರೀಕೃಷ್ಣನನ್ನು ಮಾತ್ರವೆಂಬುದೂ ಆಕೆಯ ಮನಸ್ಸಿನಲ್ಲಿತ್ತು. ಆದ್ದರಿಂದ ಆಕೆ ಶ್ರೀಕೃಷ್ಣನನ್ನು ವಿವಾಹವಾಗಲು ಕಠಿಣ ತಪಸ್ಸನ್ನು ಕೈಗೊಳ್ಳುತ್ತಾಳೆ. ಈಕೆಯ ಕಠಿಣ ತಪಸ್ಸಿನಿಂದ ಶ್ರೀಕೃಷ್ಣನನ್ನೇ ವಿವಾಹವಾಗುತ್ತಾಳೆ. ಕಳಿಂದಿಯು ಖಾಂಡವ ವನದಲ್ಲಿ ವಾಸವಾಗಿದ್ದಳು. ಇದೇ ವನದಲ್ಲಿ ಪಾಂಡವರು ತಮ್ಮ ಇಂದ್ರಪ್ರಸ್ಥವನ್ನು ಕಳೆದಿದ್ದರು.

೫.ನಗ್ನಜಿತಿ :

ಕೋಸಲ ರಾಜ ನಗ್ನಜಿತನ ಮಗಳು, ಭಗವಾನ್‌ ಕೃಷ್ಣನ 5ನೇ ಪತ್ನಿಯೇ ಈ ನಗ್ನಜಿತಿ. ಈಕೆಯನ್ನು ಸತ್ಯ ಎಂದು ಕೂಡ ಕರೆಯುತ್ತಿದ್ದರು. ನಗ್ನಜಿತಿಯು ಕೋಸಲ ನಗರದ ರಾಜ, ನಗ್ನಜಿತನ ಮಗಳಾಗಿದ್ದಳು. ರಾಜ ನಗ್ನಜಿತನು ತನ್ನ ಪುತ್ರಿಯ ವಿವಾಹಕ್ಕಾಗಿ ಕಠಿಣ ಸ್ವಯಂವರವನ್ನು ಆಯೋಜಿಸಿದನು. ಆತನಿಗೆ ಕೃಷ್ಣನನ್ನು ಹೊರತುಪಡಿಸಿ ಬೇರಾರಿಂದಲೂ ಸ್ವಯಂವರವನ್ನು ಗೆಲ್ಲಲು ಸಾಧ್ಯವಿಲ್ಲವೆಂಬುದೂ ತಿಳಿದಿತ್ತು. ನಗ್ನಜಿತನು ಯಾರು 7 ಭಯಂಕರವಾದ ಎತ್ತುಗಳೊಂದಿಗೆ ಹೋರಾಡಿ ಜಯಶಾಲಿಯಾಗುತ್ತಾರೋ ಅವರು ಮಾತ್ರ ತನ್ನ ಮಗಳನ್ನು ವಿವಾಹವಾಗಲು ಸಾಧ್ಯವೆಂದು ಸ್ವಯಂವರವನ್ನು ಏರ್ಪಡಿಸಿದ್ದನು. ಶ್ರಿಕೃಷ್ಣನು ಸ್ವಯಂವರದಲ್ಲಿ ರಾಜ ನಗ್ನಜಿತನ ಷರತ್ತನ್ನು ಪೂರೈಸಿದನು ಹಾಗೂ ಆತನ ಮಗಳು ಸತ್ಯಳನ್ನು ಅಂದರೆ ನಗ್ನಜಿತಿಳನ್ನು ವಿವಾಹವಾದನು.

೬.ಮಿತ್ರಾವಿಂದ : 

ಜಯಸೇನನ ಮಗಳು, ಉಜೈಯನಿಯ ಪ್ರಖ್ಯಾತ ರಾಜರಾದ ವಿಂದ ಮತ್ತು ಅನುವಿಂದರ ಮುದ್ದಿನ ಸಹೋದರಿ ಹಾಗೂ ಏಕೈಕ ಸಹೋದರಿ ಮಿತ್ರಾವಿಂದ. ಈ ಇಬ್ಬರೂ ಕೂಡ ದುರ್ಯೋದನನ ಅನುಯಾಯಿಗಳಾಗಿದ್ದರು. ಮಿತ್ರಾವಿಂದಳಿಗೆ ಶ್ರೀಕೃಷ್ಣನನ್ನು ವಿವಾಹವಾಗಬೇಕೆಂಬ ಆಸೆಯಿತ್ತು ಆದರೆ ಆಕೆಯ ಸಹೋದರರಾದ ವಿಂದ ಮತ್ತು ಅನುವಿಂದರು ಇದಕ್ಕೆ ಅವಕಾಶ ನೀಡುವುದಿಲ್ಲ. ಆಗ ಶ್ರೀಕೃಷ್ಣನು ಸ್ವಯಂವರದಲ್ಲಿ ಮಿತ್ರಾವಿಂದನನ್ನು ಒಲಿಸಿ ವಿವಾಹವಾಗುತ್ತಾನೆ.

೭.​ಭದ್ರ :

ದ್ರಿಷ್ಟಿ ಕೇತುನ ಮಗಳು, ಭದ್ರಳು ಭಗವಾನ್‌ ಕೃಷ್ಣನ 7ನೇ ಪತ್ನಿ. ಈಕೆ ರಾಜ ದ್ರಿಷ್ಟಿಕೇತು ಮತ್ತು ಶ್ರುತಕೀರ್ತಿ ದಂಪತಿಗಳ ಮಗಳಾಗಿದ್ದಳು. ಸಂತಾರ್ದನ ಸೇರಿದಂತೆ ಆಕೆಯ 5 ಜನ ಸಹೋದರರು ಸೇರಿ ಭದ್ರಳನ್ನು ಕೃಷ್ಣನೊಂದಿಗೆ ವಿವಾಹ ಮಾಡಿಸಿದರು.

೮.ಲಕ್ಷ್ಮಣ : 

ಬೃಹತ್‌ಸೇನನ ಮಗಳು, ಶ್ರೀಕೃಷ್ಣನ ಎಂಟನೇ ಹಾಗೂ ಕೊನೆಯ ಪತ್ನಿ ಲಕ್ಷ್ಮಣ. ಆಕೆ ಅದ್ಭುತ ಗುಣಗಳನ್ನು ಹೊಂದಿದ್ದಳು. ಈಕೆ ಮದ್ರಾ ಸಾಮ್ರಾಜ್ಯದ ರಾಜನ ಮಗಳಾಗಿದ್ದಳು. ಭಗವಾನ್‌ ಕೃಷ್ಣನು ಈಕೆಯನ್ನು ಎಲ್ಲಾ ದೈವಿಕ ಸಂಸ್ಕಾರಗೊಳೊಂದಿಗೆ ವಿವಾಹವಾಗಿದ್ದಾನೆ. 

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಕಣ್ಣಿನ ಸುತ್ತ ಕಪ್ಪು ತಡೆಗಟ್ಟಲು ಈ ಕ್ರಮಗಳನ್ನು ಅನುಸರಿಸಿ

ಕಣ್ಣಿನ ಸುತ್ತ ಕಪ್ಪು ತಡೆಗಟ್ಟಲು ಈ ಕ್ರಮಗಳನ್ನು ಅನುಸರಿಸಿ

ಪಾಕಿಸ್ತಾನ ಸೈನ್ಯದ ಶರಣಾಗತಿ

ಇತಿಹಾಸದಲ್ಲಿ ಇಂದು “ಭಾರತ-ಪಾಕಿಸ್ತಾನ ಯುದ್ಧವು”, ಪಾಕಿಸ್ತಾನ ಸೈನ್ಯದ ಶರಣಾಗತಿಯೊಂದಿಗೆ ಕೊನೆಗೊಂಡಿತು