in

ಸೂರ್ಯಕಿರಣಗಳು ಮೂಡುವ ಮೊದಲೇ ಉದುರುತ್ತದೆ ಪಾರಿಜಾತ ಹೂವು

ಪಾರಿಜಾತ ಹೂವು
ಪಾರಿಜಾತ ಹೂವು

ಪಾರಿಜಾತ – ಒಂದು ಬಗೆಯ ಹೂವು. ಈ ಹೂವನ್ನು ಭಾರತದಲ್ಲಿ ಹೆಚ್ಚಾಗಿ ಕಾಣಬಹುದು.

ಬೇರೆ ಬೇರೆ ಭಾಷೆಗಳಲ್ಲಿ :
ಕನ್ನಡ – ಪಾರಿಜಾತ
ಆಂಗ್ಲ – ನೈಟ್ ಜಾಸ್ಮಿನ್,ಕೊರಲ್ ಜಾಸ್ಮಿನ್
ಹಿಂದಿ – ಹರಸಿಂಗಾರ್, ಷೆಫಾಲಿಕಾ
ತಮಿಳು – ಮಂಜಪೂ, ಪವಳ ಮಲ್ಲಿಗೈ
ತೆಲುಗು – ಪಗಡಮಲ್ಲೆ, ಪಾರಿಜಾತಮು
ಮಲೆಯಾಳಂ -ಪವಿಳಮ್ಮಲ್ಲಿ, ಪಾರಿಜಾತಿಕಂ
ಬಂಗಾಲಿ – ಷಿಯಲಿ
ಒರಿಯಾ – ಗಂಗಾ ಷಿಯಲಿ
ಮರಾಠಿ – ಖುರಸಳಿ, ಪಾರಿಜಾತಕ

ಪುರಾಣಗಳಲ್ಲಿ ಪಾರಿಜಾತ, ಅಗ್ನಿಪುರಾಣದ ಪ್ರಕಾರ :

ಸಮುದ್ರ ಮಥನ ಕಾಲದಲ್ಲಿ ಸುರಭಿ ಮತ್ತು ವಾರಿಣಿಯ ನಂತರ ಜನಿಸಿದ್ದು ಪಾರಿಜಾತ. ಕ್ಷೀರಸಮುದ್ರದಿಂದ ಹುಟ್ಟಿದ ೫ ಕಲ್ಪವೃಕ್ಷಗಳಲ್ಲಿ ಇದೂ ಒಂದು. ನಂತರ ಇಂದ್ರನ ನಂದನವನದಲ್ಲಿ ಪಲ್ಲವಿಸಿತು. ಕೃಷ್ಣಾವತಾರ ಕಾಲದಲ್ಲಿ, ಕೃಷ್ಣನು ಪಾರಿಜಾತವನ್ನು ಸ್ವರ್ಗಲೋಕದಿಂದ ತಂದು ಸತ್ಯಭಾಮೆಯ ಅಂಗಳದಲ್ಲಿ ನೆಟ್ಟನೆಂಬ ಕಥೆ ಇದೆ. ಕೃಷ್ಣಪರಮಾತ್ಮನಿಗೆ ಪಾರಿಜಾತ ಪುಷ್ಪವನ್ನು ಕಂಡರೆ ಪ್ರಾಣ. ಬೌದ್ಧಮಂದಿರಗಳಲ್ಲೂ ಈ ಹೂಗಳನ್ನು ಉಪಯೋಗಿಸುತ್ತಾರೆ. ಪುರಾಣಗಳಲ್ಲಿ ಉಲ್ಲೇಖಗೊಂಡ ಪಾರಿಜಾತದ ಹೂ, ಒಂದು ಕಾಲ್ಪನಿಕ ಪುಷ್ಪ. ಸಸ್ಯಶಾಸ್ತ್ರಜ್ಞರ ಪ್ರಕಾರ, ಇದು ಹೂವಲ್ಲವಂತೆ.

ಸೂರ್ಯಕಿರಣಗಳು ಮೂಡುವ ಮೊದಲೇ ಉದುರುತ್ತದೆ ಪಾರಿಜಾತ ಹೂವು
ಕೃಷ್ಣ ಸತ್ಯಭಾಮೆ

ಜೀರ್ಣಾಂಗಗಳ ತೊಂದರೆಗೆ ಬೀಜದ ಪುಡಿಯನ್ನೂ ಜಾಂಡಿಸ್ ಹಾಗೂ ಮಲಬದ್ಧತೆಯ ತೊಂದರೆಗಳಿಗೆ, ಎಲೆಗಳ ರಸವನ್ನು ಔಷಧಿಯಾಗಿ ಉಪಯೋಗಿಸುತ್ತಾರೆ. ಕೀಲು ನೋವು, ತಲೆ ಹೊಟ್ಟು, ಮೂಲವ್ಯಾಧಿ, ಚರ್ಮರೋಗ, ನಾನಾರೀತಿಯ ಜ್ವರ, ಯಕೃತ್ತಿನ ರೋಗ, ಕರುಳಿನ ಹುಳು ನಿವಾರಣೆಗೆ ಪಾರಿಜಾತವನ್ನು ಔಷಧಿಯಾಗಿ ಬಳಸುತ್ತಾರೆ.

ಪಂಚ ವೃಕ್ಷವೃಕ್ಷಗಳಲ್ಲಿ ಒಂದು. ಮಂದಾರ, ಸಂತಾನ, ಕಲ್ಪವೃಕ್ಷ, ಹರಿಚಂದನಗಳೇ ಉಳಿದ ನಾಲ್ಕು ವೃಕ್ಷಗಳು. ಪಾರಿಜಾತದ ಕೆಂಪು ತೊಟ್ಟಿನಿಂದ ಪೂರ್ವಜರು ಬಟ್ಟೆಗೆ ಹಾಕುವ ಕಾವಿ ಬಣ್ಣವನ್ನು ತಯಾರಿಸುತ್ತಿದ್ದರು. ಪಾರಿಜಾತವನ್ನು ತಿಳಿವಳಿಕೆ ಮತ್ತು ಜ್ಞಾನದ ಸಂಕೇತವೆಂದು ಭಾವಿಸುತ್ತಿದ್ದರು. ನೆಲದ ಮೇಲೆ ಉದುರಿದ ಹೂವನ್ನು ದೇವರಿಗೆ ಸಮರ್ಪಿಸುವುದಿಲ್ಲ. ಆದರೆ ಪಾರಿಜಾತ ಮತ್ತು ಬಕುಳದ ಹೂವುಗಳಿಗೆ ಮಾತ್ರ ಇದರಿಂದ ವಿನಾಯಿತಿ ಉಂಟು. ನಮ್ಮ ದೇಶದ ಸುಗಂಧಿತ ಪುಷ್ಪಗಳಲ್ಲಿ ‘ಪಾರಿಜಾತ,’ ಒಂದು ವಿಶಿಷ್ಟ ಸ್ಥಾನವನ್ನು ಪಡೆದಿದೆ. ಕನ್ನಡದ ಆದಿಕವಿ ಪಂಪ, ತನ್ನ ಕಾವ್ಯಗಳಲ್ಲಿ ಪಾರಿಜಾತದ ಹೂವಿನ ವರ್ಣನೆಯನ್ನು ಬಹಳವಾಗಿ ಮಾಡಿದ್ದಾನೆ. ಪಾರಿಜಾತದ ಕಂಪು ಮೂಗಿಗೆ ಹಿತ. ಹೆಚ್ಚಿನ ತೀಕ್ಷ್ಣತೆಯಿಲ್ಲದ ಕೋಮಲವಾದ ಹೂವನ್ನು ಎಲ್ಲರೂ ಪ್ರೀತಿಸುತ್ತಾರೆ. ಪಾರಿಜಾತ, ‘ನೈಕ್ಟಾಂಥೆಸ್ ಆರ್ಬರ್-ಟ್ರಿಸ್ಟಿಸ್’, ಎಂಬ ಸಸ್ಯಶಾಸ್ತ್ರೀಯವರ್ಗಕ್ಕೆ ಸೇರುತ್ತದೆ. ಅಂದರೆ ರಾತ್ರಿಯಲ್ಲಿ ಅರಳುವ ಹೂ ಎಂದರ್ಥ. ಇದರ ಇನ್ನೊಂದು ಹೆಸರು, ಸೊರಗಿದ ಮರವೆಂದು ಪಾರಿಜಾತವೆಂಬ ಹೆಸರು ಬರಲು ಕಾರಣವಿದೆ.

ಇದರ ಬಗ್ಗೆ ಒಂದು ಸುಂದರ ಕಥೆಯ ಪ್ರಕಾರ, ಪಾರಿಜಾತವೆಂಬ ಹೆಸರಿನ ರಾಜಕುವರಿಯೊಬ್ಬಳು, ಸೂರ್ಯನನ್ನು ಪ್ರೀತಿಸಿದಳಂತೆ. ಸೂರ್ಯ ಸ್ವಲ್ಪಸಮಯದಲ್ಲೇ ಅವಳನ್ನು ತೊರೆದುಬಿಟ್ಟ. ಪ್ರಿಯಕರನ ವಿರಹವನ್ನು ತಾಳಲಾರದೆ ಆಕೆ ಆತ್ಮಹತ್ಯೆ ಮಾಡಿಕೊಂಡಳಂತೆ. ಅವಳ ದೇಹವನ್ನು ಸುಟ್ಟಬೂದಿಯಿಂದ ಪಾರಿಜಾತದ ಗಿಡವು ಹುಟ್ಟಿತಂತೆ. ಆದ್ದರಿಂದಲೇ ಸೂರ್ಯ ಭಗವಾನನ ಪ್ರಖರ ಕಿರಣಗಳನ್ನು ಇದು ತಡೆದುಕೊಳ್ಳಲಾರದು. ಪಾರಿಜಾತ ಅದಕ್ಕಾಗಿಯೇ ಸೂರ್ಯಕಿರಣಗಳು ಮೂಡುವ ಮೊದಲೇ ಹೂ ಉದುರಿಸಿತ್ತವೆ. ಇಂತಹ ನೋವಿನ ಕಥೆಯಿಂದಾಗಿ ಸೊರಗಿದ ಮರವೆಂಬ ಹೆಸರು ಬಂದಿದೆ. ರಾತ್ರಿಅರಳುವ ಹೂವಾದ್ದರಿಂದ ನೈಟ್ ಜ್ಯಾಸ್ಮಿನ್ ಎನ್ನುವ ಹೆಸರೂ ಇದಕ್ಕೆ ಅನ್ವಯಿಸುತ್ತದೆ.

ಇದು ಮಧ್ಯಮ ಗಾತ್ರದ ಹೊದರು. ಅಥವಾ ಚಿಕ್ಕಮರವೆಂದು ಹೇಳಬಹುದು. ಪಾರಿಜಾತದ ಹೂಗಳನ್ನು ಮಲ್ಲಿಗೆ ಹೂವಿಗೆ ಹೋಲಿಸಬಹುದು. ಆದರೆ ಸುವಾಸನೆಯಲ್ಲಿ ಇವು ಬಹಳ ನಾಜೂಕು. ಗೊಂಚಲಿನ ರೂಪದಲ್ಲಿ ಅರಳುತ್ತವೆ. ೫ ರಿಂದ ೮ ದಳಗಳ ಬಿಳಿಹೂವಿಗೆ, ಹವಳಗೆಂಪಿನನಾಳ ಆಕರ್ಷಕವಾಗಿ ಜೋಡಿಸಲಾಗಿದೆ. ಮನಕ್ಕೆ ಮುದಕೊಡುವ ಹಿತ-ಮಿತವಾದ ಸುಗಂಧ ಪಾರಿಜಾತದ ಕೆಲವು ವಿಶೇಷಶತೆಗಳಲ್ಲೊಂದು. ಕೋಮಲವಾದ ಹೂಗಳನ್ನು ಮುಟ್ಟಿದರೆ ಗಿಡದಿಂದ ಕಳಚಿಕೊಳ್ಳುವ ಸಾಧ್ಯತೆಗಳಿವೆ. ಜುಲೈ ತಿಂಗಳಿನಿಂದ ನವೆಂಬರ್ ಮಾಸದವರೆಗೆ ದಂಡಿಯಾಗಿ ಹೂ ಸುರಿಸುತ್ತವೆ. ಸೂರ್ಯ ಮುಳುಗಿದಮೇಲೆ ಅರಳಿದ ಹೂವುಗಳು, ರಾತ್ರಿಯೇ ಉದುರಿ, ಬೆಳಿಗ್ಗೆ ಗಿಡದ ಕೆಳಭಾಗದಲ್ಲಿ, ಹೂವಿನ ಹಾಸಿಗೆಯಂತೆ ಕಾಣಿಸುತ್ತವೆ. ಈ ಹೂವುಗಳನ್ನು ಆಯ್ದು ಮನೆಯಲ್ಲಿಟ್ಟರೆ, ಜೇನಿನಂತಹ ಪರಿಮಳದ ಅನುಭವವಾಗುತ್ತದೆ. ಇದು ಎಲೆ ಉದುರಿಸುವ ಮರ. ಪಾರಿಜಾತದ ಹೂವಿನ ಕಾಲಮುಗಿದ ಮೇಲೆ ಕೊಂಬೆಯನ್ನು ಕತ್ತರಿಸಬೇಕು. ಗಿಡದ ರೆಂಬೆಗಳು ನಾಲ್ಕುಮೂಲೆ, ಎಲೆಗಳ ಆಕಾರ ಹೃದಯವನ್ನು ಹೋಲುತ್ತವೆ. ತುದಿ ಮೊನಚು. ಒರಟಾದ ಎಲೆಗಳು, ಬೂದಿಮಿಶ್ರಿತ ಹಸಿರುಬಣ್ಣ. ಉಪ್ಪುಕಾಗದದಂತೆ ಒರಟು. ಎಲೆತೊಟ್ಟು ಮೋಟಾಗಿರುತ್ತದೆ. ಕೊಂಬೆಗಳು ಸಾಮಾನ್ಯವಾಗಿ ಬಾಗಿರುತ್ತವೆ. ೪ ಮೀಟರ್ ಎತ್ತರ ಬೆಳೆಯುತ್ತವೆ. ಗಿಡ ವಿಶಾಲವಾಗಿ ಹಬ್ಬಿಕೊಂಡು ಎಲ್ಲಾ ಭಾಗದಲ್ಲೂ ಹರಡಿಕೊಂಡಿರುತ್ತದೆ. ಕಾಯಿಗಳು ಗುಂಡಾಗಿರುತ್ತವೆ. ದಕ್ಷಿಣಭಾರತದ ಉದ್ಯಾನವನಗಳಿಗೆ ಬಹಳ ಹಿಂದೆಯೇ ಬಂದಿದೆ. ಮಹಾರಾಷ್ಟದ ಮಣ್ಣು ಹಾಗೂ ಪರಿಸರ ಇದಕ್ಕೆ ಅನುಕೂಲಕರವಾಗಿದೆ. ರಸ್ತೆಯ ಅಕ್ಕ ಪಕ್ಕಗಳಲ್ಲೂ ಇದು ಮಹಾರಾಷ್ಟ್ರದಲ್ಲಿ ಬೆಳೆಯುತ್ತದೆ.

ಸೂರ್ಯಕಿರಣಗಳು ಮೂಡುವ ಮೊದಲೇ ಉದುರುತ್ತದೆ ಪಾರಿಜಾತ ಹೂವು
ಪಾರಿಜಾತ ಹೂವು

ರುಕ್ಮಿಣಿಯ ಮೊಂಡುತನವನ್ನು ಪೂರೈಸಲು ಭಗವಾನ್‌ ಕೃಷ್ಣನು ದೇವಲೋಕದ ಮೇಲೆ ದಾಳಿ ಮಾಡಬೇಕಾಯಿತು. ಒಂದೆಡೆ ಸ್ವರ್ಗದ ಸಂಪತ್ತು ಭೂಮಿ ಪಾಲಾಗುವುದು ಇಂದ್ರನಿಗೆ ಇಷ್ಟವಿರುವುದಿಲ್ಲ. ಇನ್ನೊಂದೆಡೆ ಕೃಷ್ಣನನ್ನು ತಡೆಯಲು ಇಂದ್ರನಿಂದ ಸಾಧ್ಯವಾಗಲಿಲ್ಲ. ಕೊನೆಗೂ ಕೃಷ್ಣ ತನ್ನ ಪತ್ನಿಗಾಗಿ ಸ್ವರ್ಗದಲ್ಲಿನ ಪಾರಿಜಾತವನ್ನು ಭೂಮಿಗೆ ತರುತ್ತಾನೆ. ಇದರಿಂದ ಕೋಪಗೊಂಡ ಇಂದ್ರನು ಪಾರಿಜಾತ ಹೂವು ರಾತ್ರಿ ಸಮಯದಲ್ಲಿ ಅರಳುವಂತಾಗಿ ಸೂರ್ಯೋದಯಕ್ಕೂ ಮುನ್ನ ನೆಲಕ್ಕೆ ಬೀಳುವಂತಾಗಲಿ ಎಂದು ಪಾರಿಜಾತ ಮರಕ್ಕೆ ಶಾಪವನ್ನು ನೀಡುತ್ತಾನೆ.

ಪಾರಿಜಾತ ಮರ ಹಾಗೂ ಹೂವಿನ ಉಪಯೋಗಗಳು

ಸುಗಂಧವನ್ನು ತಯಾರಿಸುತ್ತಾರೆ. ಹೂವಿನ ಕಿತ್ತಳೆ ಗೆಂಪಿನ ನಾಳ ಬಣ್ಣ ಕಟ್ಟಲು ಉಪಯೋಗಕ್ಕೆ ಬರುತ್ತದೆ. ಎಲೆಗಳನ್ನು ನಾಟವನ್ನು ಪಾಲಿಷ್ ಮಾಡಲು ಉಪಯೋಗಿಸುತ್ತಾರೆ.

ಮಂಡಿನೋವಿದ್ದಾಗ ಪಾರಿಜಾತದ ಎಲೆಗಳನ್ನು ಪೇಸ್ಟ್ ಮಾಡಿ ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿ ಹಚ್ಚಿಕೊಳ್ಳುವುದರಿಂದ ಉಪಶಮನ ದೊರೆಯುತ್ತದೆ.

ಪಾರಿಜಾತ ಸಹಜವಾಗಿ ಅಸ್ಸಾಮ್ ಈಶಾನ್ಯ ಭಾರತದ ಕಾಡುಗಳಲ್ಲಿ ಬೆಳೆಯುತ್ತದೆ. ಮರದ ತೊಗಟೆಯಿಂದ ಟ್ಯಾನಿನ್ ಅನ್ನು ತಯಾರಿಸುತ್ತಾರೆ.

ಮನೆಯ ಹತ್ತಿರದಲ್ಲಿ ಅಂಗಳದ ಮೂಲೆಯಲ್ಲಿ ಒಂದು ಪಾರಿಜಾತದ ಮರವಿದ್ದರೆ ಸಾಕು, ಪ್ರದೇಶದ ಗಾಳಿಯಲ್ಲಿ ನವಿರಾದ ಸುಗಂಧದ ಎಳೆಗಳು ತೇಲಿಬರುವ ಅನುಭವನ್ನು ಸವಿಯುತ್ತೀರಿ.

ಪಾರಿಜಾತದ ಎಲೆಗಳು ತಂಪಾಗಿರುವ ಕಾರಣ ದೇಹದ ಎಲ್ಲೇ ಉರಿ, ಗಾಯ, ಊತಗಳಿದ್ದರೂ ಇದರಿಂದ ತಯಾರಿಸಿದ ಎಣ್ಣೆ ಬಳಸುವುದರಿಂದ ಉರಿ ತಗ್ಗುತ್ತದೆ. ಇದರಲ್ಲಿರುವ ಬೆಂಜೋಯಿಕ್ ಆ್ಯಸಿಡ್ ಹಾಗೂ ಕೆರೋಟಿನ್ ಪಾರಿಜಾತದ ಎಲೆಗೆ ಈ ಗುಣ ನೀಡಿದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಮೂಸಂಬಿ ಹಣ್ಣಿನ ಲಾಭಗಳು

ಮೂಸಂಬಿ ಹಣ್ಣಿನ ಲಾಭಗಳು

ಚಕ್ಕೋತ ಹಣ್ಣು

ಕಹಿ ಮಿಶ್ರಿತ ಹುಳಿಯ ರುಚಿ ಹೊಂದಿರುವ ಚಕ್ಕೋತ ಹಣ್ಣು