in ,

ಜನವರಿ 1, ಕಲ್ಪತರು ದಿನ

ಕಲ್ಪತರು ದಿನ
ಕಲ್ಪತರು ದಿನ

ಜನವರಿ 1 ರಂದು ಏನು ವಿಶೇಷವೆಂದು ಕೇಳಿದರೆ, ಸಣ್ಣ ಮಕ್ಕಳೂ ‘ಹೊಸ ವರ್ಷ’ ಎಂದು ಹೇಳುತ್ತಾರೆ. ಅನೇಕರು ಇದನ್ನೊಂದು ಹಬ್ಬವನ್ನಾಗಿಯೂ ಆಚರಿಸಿ, ಹೊಸ ವರ್ಷವನ್ನು ಸ್ವಾಗತಿಸುವುದು ತಿಳಿದಿರುವ ಸಂಗತಿಯೇ.

ಜನವರಿ ಒಂದನೇ ತಾರೀಖನ್ನು ಶ್ರೀರಾಮಕೃಷ್ಣರ ಭಕ್ತರು ಕಲ್ಪತರು ದಿನವನ್ನಾಗಿ ಪ್ರತಿವರ್ಷ ಆಚರಿಸಿಕೊಂಡು ಬರುತ್ತಿದ್ದಾರೆ. ಶ್ರೀರಾಮಕೃಷ್ಣ ಆಶ್ರಮಗಳಲ್ಲಿ ಈ ಒಂದು ಹಬ್ಬವನ್ನು ಮಾತ್ರ ಗ್ರೆಗೇರಿಯನ್ ಕ್ಯಾಲೆಂಡರ್ ಪ್ರಕಾರ ಆಚರಿಸಲಾಗುತ್ತದೆ; ಇನ್ನುಳಿದ ಹಬ್ಬಗಳನ್ನು ಹಿಂದೂ ಪಂಚಾಂಗದ ರೀತಿ ಆಚರಿಸಲಾಗುವುದು. 1886ರ ಜನವರಿ 1ರಂದು ಭಗವಾನ್ ಶ್ರೀರಾಮಕೃಷ್ಣ ಪರಮಹಂಸರು ಸಾರ್ವತ್ರಿಕವಾಗಿ ತಮ್ಮ ಭಕ್ತರ ಎಲ್ಲ ಆಕಾಂಕ್ಷೆಗಳನ್ನು, ಪ್ರಾರ್ಥನೆಗಳನ್ನು ಈಡೇರಿಸಿದ ಶುಭದಿನ; ಇದೇ ‘ಕಲ್ಪತರು ದಿನ’. 

ಕಲ್ಪತರು ದಿವಸ್ ಅಥವಾ ಕಲ್ಪತರು ಉತ್ಸವ ಎಂದೂ ಕರೆಯಲ್ಪಡುವ ಕಲ್ಪತರು ದಿನವು ಹಿಂದೂ ಧರ್ಮದ ರಾಮಕೃಷ್ಣ ಮಠದ ಸನ್ಯಾಸಿಗಳ ಸನ್ಯಾಸಿಗಳು ಮತ್ತು ಸಂಬಂಧಿತ ರಾಮಕೃಷ್ಣ ಮಿಷನ್‌ನ ಸಾಮಾನ್ಯ ಅನುಯಾಯಿಗಳು ಮತ್ತು ವಿಶ್ವಾದ್ಯಂತ ವೇದಾಂತ ಸಮಾಜಗಳು ಆಚರಿಸುವ ವಾರ್ಷಿಕ ಧಾರ್ಮಿಕ ಹಬ್ಬವಾಗಿದೆ , . ಈ ಸಂಸ್ಥೆಗಳು 19 ನೇ ಶತಮಾನದ ಭಾರತೀಯ ಅತೀಂದ್ರಿಯ ಮತ್ತು ಬಂಗಾಳಿ ಪುನರುಜ್ಜೀವನದ ವ್ಯಕ್ತಿಯಾದ ರಾಮಕೃಷ್ಣ ಅವರ ಬೋಧನೆಗಳನ್ನು ಅನುಸರಿಸುತ್ತವೆ.

ಜನವರಿ 1, ಕಲ್ಪತರು ದಿನ
ಶ್ರೀರಾಮಕೃಷ್ಣ

ಶ್ರೀರಾಮಕೃಷ್ಣ ಪರಮಹಂಸರು ತಮ್ಮ ಕೊನೆಯ ದಿನಗಳನ್ನು ಕಲ್ಕತ್ತದ ಕಾಶಿಪುರದ ಉದ್ಯಾನಗ್ರಹದಲ್ಲಿ ಕಳೆದರು. ಅದು ವಿವೇಕಾನಂದರಾದಿ ಶಿಷ್ಯರ ಪಾಲಿಗೆ ಒಂದು ದೇವಾಲಯವು ಆಗಿದೆ; ಒಂದು ವಿಶ್ವವಿದ್ಯಾನಿಲಯವೂ ಆಗಿದೆ. ಕೆಲವೊಮ್ಮೆ ಅಲ್ಲಿ ತತ್ತ್ವಶಾಸ್ತ್ರಗಳ ಅಧ್ಯಯನ ನಡೆದರೆ, ಇನ್ನು ಕೆಲವೊಮ್ಮೆ ಭಕ್ತಿಭಾವದ ಹೊನಲು ಹರಿಯುತ್ತದೆ. ನರೇಂದ್ರನೂ ಅವನ ಸ್ನೇಹಿತರೂ ಸೇರಿ ಭಜನೆ ಪ್ರಾರ್ಥನೆ-ಧ್ಯಾನ ಮಾಡುತ್ತಾರೆ. ಶಿಷ್ಯರೆಲ್ಲ ಹೀಗೆ ಸಾಧನೆ ಮಾಡಿ ಭಗವಂತನ ಕೃಪೆಯನ್ನು ಬೇಡಿದಾಗ, ಆ ದೇವಾಲಯದ ದೇವಮೂರ್ತಿ ಶ್ರೀರಾಮಕೃಷ್ಣರು ಅನುಗ್ರಹ ಮಾಡುವ ರೀತಿ ಅಪೂರ್ವ.

ಅನೇಕ ಭಕ್ತರು ಶ್ರೀರಾಮಕೃಷ್ಣರ ದರ್ಶನವನ್ನು ಪಡೆಯಲು ಬಂದಿದ್ದರು. ಹಲವರು ಜನರ ಮೇಲೆ ಕೃಪೆ ಮಾಡಿ, ಅವರ ಪಾಪಗಳನ್ನು ಸ್ವೀಕರಿಸಿದ್ದರ ಫಲವಾಗಿ ಶ್ರೀರಾಮಕೃಷ್ಣರ ಗಂಟಲಿನಲ್ಲಿ ನೋವು ಉಂಟಾಗಿ ಅವರು ಊಟವನ್ನೂ ಮಾಡಲು ಆಗದೆ, ಶರೀರವು ಕೃಶವಾಗಿತ್ತು. ಅಂದು ಅವರು ತುಸು ಚೇತರಿಸಿಕೊಂಡಿದ್ದರಿಂದ ಮಧ್ಯಾಹ್ನ ಸುಮಾರು ಮೂರು ಗಂಟೆಯ ಹೊತ್ತಿಗೆ ತೋಟದಲ್ಲಿ ಸ್ವಲ್ಪ ಓಡಾಡಲು ಹೊರ ಬಂದರು. ಭಕ್ತರು ಗುಂಪುಗಳಲ್ಲಿ ಕುಳಿತು ಮಾತನಾಡುತ್ತಿದ್ದರು. ಅವರು ನಡೆದುಬರುತ್ತಿರುವುದನ್ನು ಕಂಡ ಭಕ್ತರಿಗೆ ಆನಂದ ಉಂಟಾಯಿತು. ಕಲ್ಕತ್ತೆಯ ಪ್ರಸಿದ್ಧ ನಾಟಕಕಾರ, ಸಾಹಿತಿ ಗಿರೀಶ್ ಚಂದ್ರ ಘೋಷನು ಶ್ರೀರಾಮಕೃಷ್ಣರ ಪರಮ ಭಕ್ತ. ಅವನ ಬಳಿ ಬಂದು ಶ್ರೀರಾಮಕೃಷ್ಣರು, ‘ಏನು ತನ್ನ ಬಗ್ಗೆ ಅವತಾರಪುರುಷ, ದೇವರು ಎಂದು ಹೇಳುತ್ತಿದ್ದೀಯಂತೆ! ತನ್ನಲ್ಲಿ ಅಂತಹದ್ದು ಏನು ಕಂಡೆ,” ಎಂದರು.

ಜನವರಿ 1, ಕಲ್ಪತರು ದಿನ
ದಕ್ಷಿಣೇಶ್ವರ ಕಲ್ಪತರು ಉತ್ಸವ್

ಗಿರೀಶನು ಮಂಡಿಯೂರಿ ಗದ್ಗದಿತನಾಗಿ, ‘ವಾಲ್ಮೀಕಿ, ವ್ಯಾಸ ಮಹರ್ಷಿಗಳಂತಹ ಮಹಾಮಹಿಮರು ತಮ್ಮನ್ನು ರಾಮನಾಗಿ, ಕೃಷ್ಣನಾಗಿ ಅವತರಿಸಿ ಬಂದಾಗ ವರ್ಣಿಸಲು ಸಂಪೂರ್ಣವಾಗಿ ಸಾಧ್ಯವಾಗಲಿಲ್ಲ. ಈಗ ಅವರೇ ಶ್ರೀರಾಮಕೃಷ್ಣರಾಗಿ ಬಂದಿದ್ದಾರೆ. ಇನ್ನು ಈ ಪಾಮರ ಏನು ತಾನೇ ಹೇಳಲು ಸಾಧ್ಯ’ ಎಂದು ನಮಸ್ಕರಿಸಿದ. ಅವನ ನಿಷ್ಕಲ್ಮಶ, ಸರಳ ಭಕ್ತಿಯನ್ನು ಕಂಡ ಶ್ರೀರಾಮಕೃಷ್ಣರು ಭಾವಾವಿಷ್ಟರಾದರು, ಭಾವಸಮಾಧಿಗೆ ಹೋದರು. ಆ ಉನ್ನತ ಭಾವದಲ್ಲಿ ಅವರು ಭಕ್ತರನ್ನು ಉದ್ದೇಶಿಸಿ, ‘ನಿಮಗೆ ನಾನಿನ್ನೇನು ತಾನೆ ಹೇಳಲಿ? ನೀವು ಚೈತನ್ಯವಂತರಾಗಿ’ ಎಂದು ಹರಸಿದರು. ಅತ್ಯುನ್ನತ ಆಧ್ಯಾತ್ಮಿಕದ ಭಾವದಲ್ಲಿ ಆಡಿದ ಮಾತುಗಳು ವಿದ್ಯುಚ್ಛಕ್ತಿಯಂತೆ ಎಲ್ಲರ ಮನಸ್ಸನ್ನು ಉನ್ನತ ಮಟ್ಟಕ್ಕೆ ಏರಿಸಿತು. ಅಲ್ಲೆಲ್ಲ ಒಂದು ದಿವ್ಯ ವಾತಾವರಣ ನಿರ್ಮಾಣವಾಯಿತು. ಗಿರೀಶನು ‘ಜೈ ರಾಮಕೃಷ್ಣ! ಜೈ ರಾಮಕೃಷ್ಣ!’ ಎಂದು ಕೂಗುತ್ತಾ ಶ್ರೀರಾಮಕೃಷ್ಣರಿಗೆ ಸಾಷ್ಟಾಂಗ ಪ್ರಾಣಾಮ ಮಾಡಿದ. ಅಲ್ಲಿ ನೆರದಿದ್ದ ಪ್ರತಿಯೊಬ್ಬ ಭಕ್ತನಿಗೂ ಅಲೌಕಿಕ ಅನುಭವಗಳಾದವು. ಎಲ್ಲರೂ ಅವರಿಗೆ ನಮಸ್ಕರಿಸಿದರು, ಕೆಲವರು ಅವರ ಪಾದಕ್ಕೆ ಹೂಗಳನ್ನು ಸಮರ್ಪಿಸಿದರು. ಭಕ್ತರ ಆಸೆಗಳು ಪೂರ್ಣಗೊಳ್ಳಲಿ – ಎಂದು ಶ್ರೀರಾಮಕೃಷ್ಣರು ಪ್ರತಿಯೊಬ್ಬರನ್ನೂ ಆಶೀರ್ವದಿಸಿದರು. 

ಅಂದು ಅಹೇತುಕ ಕೃಪೆಗೆ ಪಾತ್ರನಾಗಿದ್ದ ರಾಮಕುಮಾರನು ತನ್ನ ಅನುಭವವನ್ನು ಮುಂದೆ ಹೀಗೆ ಹೇಳುತ್ತಾನೆ: ‘ನನಗೆ ಧ್ಯಾನಕ್ಕೆ ಕುಳಿತಾಗ ನನ್ನ ಇಷ್ಟದೇವರ ಮೂರ್ತಿಯ ಯಾವುದಾದರೂ ಒಂದು ಭಾಗ ಮಾತ್ರ ಕಾಣುತ್ತಿತ್ತು. ಧ್ಯಾನ ಮಾಡಲು ತುಂಬಾ ಶ್ರಮಿಸುತ್ತಿದ್ದೆ. ಆದರೆ ಅಂದು ಶ್ರೀರಾಮಕೃಷ್ಣರ ಕೃಪೆ ದೊರೆತ ಮೇಲೆ ಧ್ಯಾನಕ್ಕೆ ಕುಳಿತಾಗ ನನ್ನ ಇಷ್ಟದೇವರ ಮೂರ್ತಿ ಸಂಪೂರ್ಣವಾಗಿ ಕಾಣಲು ಪ್ರಾರಂಭವಾಯಿತು. ಅದು ಚಿನ್ಮಯವಾಗಿ, ಜೀವಂತವಾಗಿರುವ ಅನುಭವವೂ ಉಂಟಾಯಿತು. ಅಂದಿನಿಂದ ಇಂದಿಗೂ ನಾನು ಧ್ಯಾನದ ಸಮಯದಲ್ಲಿ ಅಲೌಕಿಕ ಆನಂದವನ್ನು ಅನುಭವಿಸುತ್ತಿದ್ದೇನೆ’.

ಧನ್ಯವಾದಗಳು..

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಅನೇಕ ರೀತಿಯ ಹೊಟ್ಟೆನೋವುಗಳಿಗೆ ಪರಿಹಾರ

ಅನೇಕ ರೀತಿಯ ಹೊಟ್ಟೆನೋವುಗಳಿಗೆ ಪರಿಹಾರಗಳು

ಶಿವನ ನಾನಾ ಅವತಾರಗಳು

ಶಿವನ ನಾನಾ ಅವತಾರಗಳು