in

ಪುರಾಣದಲ್ಲಿ ತಂದೆಯ ಸಹಾಯವಿಲ್ಲದೆ ತನ್ನ ಮಕ್ಕಳನ್ನು ಸಾಕಿ ಸಲಹಿದ ತಾಯಂದಿರು

ತಂದೆಯ ಸಹಾಯವಿಲ್ಲದೆ ತನ್ನ ಮಕ್ಕಳನ್ನು ಸಾಕಿ ಸಲಹಿದ ತಾಯಂದಿರು
ತಂದೆಯ ಸಹಾಯವಿಲ್ಲದೆ ತನ್ನ ಮಕ್ಕಳನ್ನು ಸಾಕಿ ಸಲಹಿದ ತಾಯಂದಿರು

ಸೀತೆ

ಹಿಂದೂ ಧಾರ್ಮಿಕ ಗ್ರಂಥಗಳ ಪ್ರಕಾರ ಸೀತೆ ಭೂಮಿಯಿಂದ ಹುಟ್ಟಿದವಳು. ಈಕೆ ಭೂಮಿಯಷ್ಟೇ ಸಹನಶೀಲಳು ಹಾಗೂ ಗಂಭೀರಳು. ಹಿಂದೂ ಧರ್ಮಗ್ರಂಥಗಳಲ್ಲಿ ಒಂದಾದ ರಾಮಾಯಣದಲ್ಲಿನ ಶ್ರೀ ರಾಮನ ಹೆಂಡತಿ ಮತ್ತು ಮಿಥಿಲೆಯ ರಾಜನಾದ ಜನಕನ ಮಗಳು. ಸೀತೆಯು ಸ್ತ್ರೀ ಸಚ್ಚಾರಿತ್ರ್ಯದ ಪ್ರತಿರೂಪವಾಗಿದ್ದವಳು. ಸೀತೆಯು ರಾಮನನ್ನು ಹಿಂಬಾಲಿಸಿ ವನವಾಸಕ್ಕೆ ಹೊರಡುತ್ತಾಳೆ. ಅಲ್ಲಿ ರಾವಣನಿಂದ ಅಪಹರಣಕ್ಕೆ ಒಳಗಾಗುತ್ತಾಳೆ. ರಾವಣನು ಸೀತೆಯನ್ನು ಲಂಕೆಯಲ್ಲಿ ಬಂಧನದಲ್ಲಿರಿಸಿರುತ್ತಾನೆ. ಮುಂದೆ ರಾಮ ರಾವಣನನ್ನು ಕೊಂದು ಅವನ ಸೆರೆಯಲ್ಲಿದ್ದ ಸೀತೆಯನ್ನು ಕರೆದೊಯ್ಯುತ್ತಾನೆ. ರಾಮಯಣ ಮೂಲವನ್ನ ಅರಸುತ್ತ ಹೋದರೆ ಸೀತೆಯು ರಾವಣನ ಮಗಳೆಂದು ತಿಳಿಸುತ್ತದೆ ಜನಕ ರಾಜನ ಮಗಳಾದುದರಿಂದ ಸೀತೆಯನ್ನು ಜಾನಕಿ ಎಂದೂ ಕರೆಯುತ್ತಾರೆ. ಸೀತೆಯು ಪತಿವ್ರತೆ. ಸೀತಾ ತನ್ನ ಸಮರ್ಪಣೆ, ಸ್ವಯಂ ತ್ಯಾಗ, ಧೈರ್ಯ ಮತ್ತು ಶುದ್ಧತೆಗೆ ಹೆಸರುವಾಸಿಯಾಗಿದ್ದಾಳೆ. ಅವಳು ಅಯೋಧ್ಯೆಯ ರಾಜಕುಮಾರ ರಾಮನನ್ನು ಮದುವೆಯಾಗುತ್ತಾಳೆ. ಮದುವೆಯ ನಂತರ, ಪತಿ ಮತ್ತು ಭಾವ ಲಕ್ಷ್ಮಣ ಜೊತೆ ದೇಶಭ್ರಷ್ಟ ಹೋಗುತ್ತಾಳೆ. ಸೀತಾ ಜನ್ಮಸ್ಥಳ ವಿವಾದಗಳಿವೆ. ಮಿತಿಲದ ಜನಕಪುರ ಮತ್ತು ಸೀತಾಮರ್ಹಿ ಸೀತೆಯ ಜನ್ಮಸ್ಥಳಗಳೆಂದು ವಿವರಿಸಲಾಗಿದೆ.

ಬರೋಬ್ಬರಿ 14 ವರ್ಷಗಳ ಕಾಲ ತನ್ನ ಪತಿ ಶ್ರೀ ರಾಮನೊಂದಿಗೆ ವನವಾಸವನ್ನು ಕಳೆದ ಮಹಾನ್ ಪತಿವ್ರತೆ ಈಕೆ. ತನ್ನ ಪತಿ ರಾಮನಿಂದ ರಾವಣನ ಬಂಧನದಿಂದ ಸೀತಾ ಮಾತೆ ಮುಕ್ತಳಾದರೂ ಸಮಾಜದಲ್ಲಿನ ಕೆಟ್ಟ ಮನಸ್ಸಿನ ಮನುಷ್ಯರ ಅಪಹಾಸ್ಯ, ಅವಮಾನ, ಅನುಮಾನದಿಂದ ಮುಕ್ತಳಾಗಿರಲಿಲ್ಲ. ಸೀತೆ ಅದೇ ಸಂದರ್ಭದಲ್ಲಿ ಗರ್ಭಿಣಿಯಾಗಿದ್ದರಿಂದ ರಾಮನು ಆಕೆಯನ್ನು ವಾಲ್ಮಿಕಿ ಋಷಿಯ ಆಶ್ರಮದಲ್ಲಿ ಇರಿಸುತ್ತಾನೆ. ಸೀತಾ ದೇವಿ ಅಲ್ಲಿ ಲವ – ಕುಶ ಎನ್ನುವ ಅವಳಿ ಮಕ್ಕಳಿಗೆ ಜನ್ಮ ನೀಡುತ್ತಾಳೆ ಹಾಗೂ ತನ್ನ ಎರಡೂ ಮಕ್ಕಳನ್ನು ಆಶ್ರಮದಲ್ಲಿ ಬೆಳೆಸುತ್ತಾಳೆ. ಸೀತಾ ಮಾತೆಯ ಇಬ್ಬರು ಮಕ್ಕಳಾದ ಲವ-ಕುಶ ರು ತಮ್ಮ ಬಾಲ್ಯದಲ್ಲೇ ಲಕ್ಷಣ ಹಾಗೂ ಭರತರೊಂದಿಗೆ ಸೇರಿ ಅಯೋಧ್ಯೆಯ ಚತುರಂಗಿನಿ ಸೇನೆಯನ್ನು ಸೋಲಿಸುತ್ತಾರೆ.

​ದೇವಿ ಶಾಕುಂತಲಾ

ಪುರಾಣದಲ್ಲಿ ತಂದೆಯ ಸಹಾಯವಿಲ್ಲದೆ ತನ್ನ ಮಕ್ಕಳನ್ನು ಸಾಕಿ ಸಲಹಿದ ತಾಯಂದಿರು
ಶಾಕುಂತಲಾ ಮತ್ತು ದುಶ್ಯಂತ

ರಿಷಿ ಕಣ್ವ ಮಹರ್ಷಿಗಳಿಗೆ ಶಕುಂತಪಕ್ಷಿಗಳ ಮಧ್ಯೆ ಇರುವ ಪುಟ್ಟ ಮಗುವೊಂದು ಕಾಡಿನಲ್ಲಿ ಸಿಗುತ್ತದೆ. ಕಾಡಿನಲ್ಲಿ ಸಿಕ್ಕಿದ ಮಗುವನ್ನು ಕಣ್ವ ಋಷಿಗಳು ತಮ್ಮ ಆಶ್ರಮಕ್ಕೆ ತಂದು ಬೆಳೆಸುತ್ತಾರೆ. ಶಕುಂತ ಪಕ್ಷಿಗಳ ಮಧ್ಯೆ ದೊರಕಿದ ಕಾರಂ ಮಗುವಿಗೆ ಶಕುಂತಲೆ ಎಂದು ಹೆಸರಿಟ್ಟು ಕರೆಯುತ್ತಾರೆ. ಶಕುಂತ ಅಂದರೆ ಸುರಕ್ಷಿತ ಎಂದು ಆದಿ ಪರ್ವದಲ್ಲಿ ಕಣ್ವ ಮಹರ್ಷಿಗಳು ವಿವರಿಸಿದ್ದಾರೆ.

ದುಶ್ಯಂತನು ತನ್ನ ಸೇನೆಯೊಂದಿಗೆ ಕಾಡಿನ ಮೂಲಕ ತನ್ನ ಶಸ್ತ್ರಾಸ್ತ್ರದಿಂದ ಗಾಯಗೊಂಡಂತಹ ಗಂಡು ಜಿಂಕೆಯನ್ನು ಹಿಂಬಾಲಿಸುತ್ತಾ ಪ್ರಯಾಣಿಸುತ್ತಿರುವಾಗ ರಾಜ ಮೊದಲು ಶಕುಂತಲೆಯನ್ನು ಎದುರಾಗುತ್ತಾನೆ. ಕಣ್ವ ಮಹರ್ಷಿಗಳ ಆಶ್ರಮಕ್ಕೆ ಬಂದ ದುಷ್ಯಂತ ಶಕುಂತಲೆಯನ್ನು ಪ್ರೇಮಿಸಿ ಗಾಂಧರ್ವ ವಿವಾಹವಾಗುತ್ತಾನೆ. ಅವನ ಸಾಮ್ರಾಜ್ಯಕ್ಕೆ ಹಿಂದಿರುಗುವ ಮೊದಲು ದುಷ್ಯಂತ ತನ್ನ ವೈಯಕ್ತಿಕ ಉಂಗುರವನ್ನು ಅವಳಿಗೆ ಕೊಟ್ಟು ತನ್ನ ಅರಮನೆಗೆ ಕರೆದುಕೊಂಡು ಹೋಗುವ ಭರವಸೆಯನ್ನು ನೀಡಿರುತ್ತಾನೆ. ಶಕುಂತಲೆ ತನ್ನ ಗಂಡನ ನೆನಪಿನಲ್ಲಿ ಸದಾ ಮಗ್ನಳಾಗಿರುತ್ತಿದ್ದಳು.

ಒಂದು ಬಾರಿ ದೂರ್ವಾಸಮುನಿ ಎಂಬ ಪ್ರಬಲ ಋಷಿ, ಆಶ್ರಮಕ್ಕೆ ಬಂದರು ಆದರೆ ದುಶ್ಯಾಂತನ ಆಲೋಚನೆಗಳಲ್ಲಿ ಕಳೆದಹೋಗಿದ್ದ ಶಕುಂತಲೆಗೆ ಅವರಿಗೆ ಸರಿಯಾಗಿ ಸ್ಪಂದಿಸುವಲ್ಲಿ ವಿಫಲವಾದಳು. ಈ ಕಾರಣದಿಂದಾಗಿ ಋಷಿಗಳು ಕೋಪಗೊಂಡು ಅವಳಿಗೆ ನೀನು ಕನಸು ಕಾಣುತ್ತಿದ್ದ ವ್ಯಕ್ತಿಯು ನಿನ್ನನ್ನು ಸಂಪೂರ್ಣವಾಗಿ ಮರೆತುಬಿಡಲಿ ಎಂದು ಹೇಳಿ ಶಾಪವನ್ನು ನೀಡಿ ಕೋಪದಿಂದ ಹೊರಟುಹೋದರು. ಅವಳು ಅವರಲ್ಲಿ ಕ್ಷಮೆಯಾಚಿಸುತ್ತಾಳೆ. ನಂತರ ಮುನಿಗಳ ಕೋಪ ಹೊರಟುಹೋದ ಮೇಲೆ ನಿನ್ನನ್ನು ಮರೆತಿದ್ದ ವ್ಯಕ್ತಿಯು ನಿನಗೆ ನೀಡಲಾದ ವೈಯಕ್ತಿಕ ಸಂಕೇತವಾದ ಉಂಗುರವನ್ನು ತೋರಿಸಿದ್ದಲ್ಲಿ ಅವನು ಎಲ್ಲವನ್ನೂ ನೆನಪಿಸಿಕೊಳ್ಳುತ್ತಾನೆ ಎಂದು ತಾವು ಕೊಟ್ಟ ಶಾಪವನ್ನು ಮಾರ್ಪಡಿಸುತ್ತಾರೆ.

ಈಕೆ ಕೂಡ ತಾಯಿ ಸೀತಾಮಾತೆಯಂತೆ ತನ್ನ ಗಂಡನಿಂದ ದೂರಿದ್ದು, ತನ್ನ ಮಕ್ಕಳನ್ನು ಸಾಕಿ ಸಲುಹಿದ ಮಹಾನ್‌ ತಾಯಿ. ದುರ್ವಾಸ ಮುನಿಯ ಶಾಪದಿಂದ ಶಾಕುಂತಲಾಳ ಪತಿ ದುಶ್ಯಂತ ಮಹಾರಾಜ ಈಕೆಯನ್ನು ವಿವಾಹವಾಗಿರುವುದನ್ನೇ ಮರೆತಿರುತ್ತಾನೆ. ಶಾಕುಂತಲಾ ದೇವಿ ತನ್ನ ಪತಿ ದುಶ್ಯಂತ ಮಹಾರಾಜನಿಗೆ ಎಷ್ಟು ಬಾರಿ ತಿಳಿ ಹೇಳಿದರೂ, ವಿವಾಹವಾದ ಕ್ಷಣಗಳನ್ನು ನೆನಪಿಸಲು ಪ್ರಯತ್ನಿಸಿದರೂ ಕೂಡ ದುಶ್ಯಂತ ಮಹಾರಾಜನಿಗೆ ಆಕೆಯ ನೆನಪು ಮರುಕಳಿಸುವುದಿಲ್ಲ. ದುಶ್ಯಂತ ಈಕೆಯನ್ನು ಪತ್ನಿಯೆಂದು ಸ್ವೀಕರಿಸದ ಕಾರಣ ಈಕೆ ತನ್ನ ಗರ್ಭಾವಸ್ಥೆಯ ದಿನಗಳನ್ನು ಋಷಿಯ ಆಶ್ರಮದಲ್ಲೇ ಕಳೆದಳು. ತದನಂತರ ಈಕೆ ‘ಭರತ’ ಎನ್ನುವ ಗಂಡು ಮಗುವಿಗೆ ಜನ್ಮನೀಡುತ್ತಾಳೆ. ಈ ಮಗುವೇ ಮುಂದೆ ಭಾರತದ ಮೊದಲ ಚಕ್ರವರ್ತಿ ಸಾಮ್ರಾಟನಾಗುತ್ತಾನೆ.

​ಜಬಾಲಾ

ಹಿಂದೂ ಸಂಪ್ರದಾಯದ ಪ್ರಕಾರ ಸತ್ಯಕಾಮ ಪದವಿ ಪಡೆದು ಪ್ರಸಿದ್ಧ ಋಷಿಯಾಗುತ್ತಾನೆ. ಒಂದು ವೇದ ಪಾಠಶಾಲೆಗೆ ಅವನ ಹೆಸರನ್ನು ಇಡಲಾಗಿದೆ, ಅದರಂತೆ ಪ್ರಭಾವಶಾಲಿ ಪ್ರಾಚೀನ ಪಠ್ಯ ಜಬಾಲ ಉಪನಿಷದ್ – ಸಂನ್ಯಾಸ  ಕುರಿತ ಗ್ರಂಥ ಉಪಕೋಸಲ ಕಮಲಾಯನ ಸತ್ಯಕಾಮ ಜಬಲದ ವಿದ್ಯಾರ್ಥಿಯಾಗಿದ್ದು, ಅವರ ಕಥೆಯನ್ನು ಛಾಂದೋಗ್ಯ ಉಪನಿಷತ್‌ನಲ್ಲಿ ಸಹ ಪ್ರಸ್ತುತಪಡಿಸಲಾಗಿದೆ. ಸತ್ಯಕಾಮ ಜಬಾಲನ ಗುರು ಗೌತಮನು ಅವನಿಗೆ ಪಟನ್ ಎಂಬ ಹೆಸರನ್ನು ನೀಡುತ್ತಾನೆ.

ಚಂದೋಗ್ಯೋಪನಿಷತ್ತಿನಲ್ಲಿನ ಜಬಾಲಾ ಸತ್ಯಕಾಮ ಋಷಿಯ ಕಥೆಯೂ ಕೂಡ ಕರುಳು ಕಿತ್ತು ಬರುವಂತಹುದ್ದಾಗಿದೆ. ಜಬಾಲಾ ಸತ್ಯಕಾಮ ನ ತಾಯಿ ಜಬಾಲಾ. ಈಕೆ ಕೂಡ ಒಂಟಿ ತಾಯಿ. ಉಪನಿಷತ್ತಿನಲ್ಲಿ ಹೇಳಿರುವ ಹಾಗೇ ಸತ್ಯಕಾಮ ತನ್ನ ತಾಯಿ ಜಬಾಲಾಳಲ್ಲಿ ತನ್ನ ಗೋತ್ರ ಯಾವುದೆಂದು ಕೇಳುತ್ತಾನೆ. ಆಗ ಮಹಾತಾಯಿ ಜಾಬಾಲ ತನ್ನ ಯೌವನವನ್ನು ಅನೇಕ ಮನೆಗಳಲ್ಲಿ ಸೇವಕಿಯಾಗಿ ಕೆಲಸ ಮಾಡುವ ಮೂಲಕ ಕಳೆದಿದ್ದೇನೆ ಅಷ್ಟೇ ಅಲ್ಲ, ನಿನ್ನ ಗರ್ಭಾವಸ್ಥೆಯಲ್ಲೂ ಕೂಡ ನಾನು ಸೇವಕಿಯಾಗಿಯೇ ಕೆಲಸ ಮಾಡಿದ್ದೇನೆಂದು ಹೇಳುತ್ತಾಳೆ. ತಾಯಿಯ ಈ ಕರುಣಾಜನಕ ಕಥೆ ಕೇಳಿದ ಸತ್ಯಕಾಮ ತನ್ನ ಹೆಸರನ್ನು ಸತ್ಯಕಾಮ ಜಬಾಲಾ ಋಷಿಯೆಂದು ಹೆಸರನ್ನು ಬದಲಾಯಿಸಿಕೊಳ್ಳುತ್ತಾನೆ.

ಕಯಾಧು

ಭಕ್ತ ಪ್ರಹ್ಲಾದನ ತಾಯಿ, ಹಿರಣ್ಯಕಶಿಪುವಿನ ಹೆಂಡತಿ, ಜಂಭಾಸುರನ ಮಗಳು.

ಪುರಾಣದಲ್ಲಿ ತಂದೆಯ ಸಹಾಯವಿಲ್ಲದೆ ತನ್ನ ಮಕ್ಕಳನ್ನು ಸಾಕಿ ಸಲಹಿದ ತಾಯಂದಿರು
ಪ್ರಹ್ಲಾದ, ನಾರದ ಮುನಿ

ಗರ್ಭಧರಿಸಿದ್ದ ಈಕೆಯನ್ನು ಸಮಯ ಕಾದು ಹಿರಣ್ಯ ಕಶ್ಶಪ್ಪು ತಪಸ್ಸಿಗೆ ಹೋಗಿದ್ದಾಗ ಇಂದ್ರ ಸೆರೆಹಿಡಿಯುತ್ತಾನಾದರೂ ನಾರದನ ಸಲಹೆಯಂತೆ, ಪೀಡಿಸದೆ ಅವನ ಬಳಿಯೇ ಬಿಡುತ್ತಾನೆ. ನಾರದ ಆಕೆಗಾಗಿ ಗಂಗಾತೀರದ ಬಳಿ ಒಂದು ಆಶ್ರಮವನ್ನು ನಿರ್ಮಿಸಿ ಅಲ್ಲಿ ಈಕೆಗೆ ಮಂತ್ರೋಪದೇಶ ಮಾಡುತ್ತಾನೆ. ಮಂತ್ರೋಪದೇಶ ಪಡೆದ ಈಕೆ ಮಹಾವಿಷ್ಣುವಿನ ಧ್ಯಾನದಲ್ಲಿ ನಿರತಳಾಗುತ್ತಾಳೆ. ಅಷ್ಟರಲ್ಲಿ ಹಿರಣ್ಯಕಶಿಪು ತಪಸ್ಸಿನಿಂದ ಹಿಂತಿರುಗುತ್ತಾನಾಗಿ ನಾರದ ಕಯಾಧುವನ್ನು ಒಪ್ಪಿಸುತ್ತಾನೆ. ಇವರ ಮಗ ಪ್ರಹ್ಲಾದ ನಾರದನ ಮಂತ್ರೋಪದೇಶದಿಂದಾಗಿ ಮುಂದೆ ಮಹಾವಿಷ್ಣುಭಕ್ತನಾಗುತ್ತಾನೆ.

ಕಯಾಧು ನಾರದ ಮುನಿಗಳ ಆಶ್ರಮದಲ್ಲೇ ಪ್ರಹ್ಲಾದನಿಗೆ ಜನ್ಮ ನೀಡುತ್ತಾಳೆ ಈ ಮಗುವೇ ಮುಂದೆ ವಿಷ್ಣುವಿನ ಪರಮ ಭಕ್ತನಾಗಿ ತನ್ನ ತಂದೆಗೆ ವಿರೋಧಿಯಾಗುತ್ತಾನೆ.

ತಾಯಿ ಜೀಜಾಬಾಯಿ

ಐತಿಹಾಸಿಕ ಕಥೆಗಳ ಪ್ರಕಾರ ವೀರ ಶಿವಾಜಿಯ ತಾಯೇ ಈ ಜೀಜಾಬಾಯಿ. ಒಬ್ಬಂಟಿಯಾಗೇ ತನ್ನ ಮಗನನ್ನು ಎತ್ತರಕ್ಕೆ ಬೆಳೆಸಿದ ಮಹಾನ್‌ ತಾಯಿ ಈಕೆ. ಶಿವಾಜಿಗೆ ಚಿಕ್ಕ ವಯಸ್ಸಿನಿಂದಲೇ ಜೀಜಾಬಾಯಿ ಯುದ್ಧತಂತ್ರಗಳನ್ನು, ಕುದುರೆ ಓಡಿಸುವುದನ್ನು ಕಲಿಸುತ್ತಾಳೆ. ಎಲ್ಲಕ್ಕಿಂತ ಮಿಗಿಲೆಂದರೆ ಜೀಜಾಬಾಯಿ ಶಿವಾಜಿಯ ಮನಸ್ಸಿನಲ್ಲಿ ಹಿಂದೂ ರಾಷ್ಟ್ರವೆನ್ನುವ ದೊಡ್ಡ ರಾಷ್ಟ್ರದ ನಿರ್ಮಾಣಕ್ಕೆ ಬೀಜವನ್ನು ಬಿತ್ತಿದ್ದ ತಾಯಿ. ಇದನ್ನು ಶಿವಾಜಿ ಮಹಾರಾಜ್‌ ಕೂಡ ಅನುಸರಿಸುತ್ತಲೇ ಬಂದರು. ಜೀಜಾಬಾಯಿಗೆ ರಾಷ್ಟ್ರಮಾತೆ ಎನ್ನುವ ಬಿರುದನ್ನು ನೀಡಲು ಇದು ಸಹಕಾರಿಯಾಯಿತು.

ಪುರಾಣದಲ್ಲಿ ತಂದೆಯ ಸಹಾಯವಿಲ್ಲದೆ ತನ್ನ ಮಕ್ಕಳನ್ನು ಸಾಕಿ ಸಲಹಿದ ತಾಯಂದಿರು
ಜೀಜಾಬಾಯಿ, ಶಿವಾಜಿ

ಶಿವಾಜಿಗೆ ೧೪ ವರ್ಷ ವಯಸ್ಸಾಗಿದ್ದಾಗ, ಶಹಾಜಿ ರಾಜೆ ಅವರಿಗೆ ಪುಣೆಯ ಜಾಗೀರ್ ಅನ್ನು ಹಸ್ತಾಂತರಿಸಿದರು. ಸಹಜವಾಗಿಯೇ ಜಾಗೀರ್ ನಿರ್ವಹಣೆಯ ಜವಾಬ್ದಾರಿ ಜೀಜಾಬಾಯಿಯ ಮೇಲೆ ಬಿತ್ತು. ಜೀಜಾಬಾಯಿ ಮತ್ತು ಶಿವಾಜಿ ನುರಿತ ಅಧಿಕಾರಿಗಳೊಂದಿಗೆ ಪುಣೆಗೆ ಬಂದರು. ನಿಜಾಮಶಾ, ಆದಿಲ್‌ಶಾ ಮತ್ತು ಮೊಘಲರ ನಿರಂತರ ಹಿತಾಸಕ್ತಿಗಳಿಂದಾಗಿ ಪುಣೆಯ ಸ್ಥಿತಿ ತುಂಬಾ ಕೆಟ್ಟದಾಗಿತ್ತು. ಅಂತಹ ಪ್ರತಿಕೂಲ ಪರಿಸ್ಥಿತಿಗಳಲ್ಲಿ, ಅವರು ಪುಣೆ ನಗರವನ್ನು ಪುನರಾಭಿವೃದ್ಧಿ ಮಾಡಿದರು. ಕೃಷಿ ಭೂಮಿಯನ್ನು ಚಿನ್ನದ ನೇಗಿಲಿನಿಂದ ಉಳುಮೆ ಮಾಡಿದಳು. ಸ್ಥಳೀಯರಿಗೆ ಅಭಯ ನೀಡಿದಳು. ರಾಜರ ಶಿಕ್ಷಣದ ಜವಾಬ್ದಾರಿಯನ್ನು ಅವಳು ಹೊಂದಿದ್ದಳು. 

ಜೀಜಾಬಾಯಿ ಶಿವಾಜಿಗೆ ರಾಮಾಯಣ, ಮಹಾಭಾರತದ ಕಥೆಗಳನ್ನು ಹೇಳಿದರು, ಇದು ಸ್ವಾತಂತ್ರ್ಯದಲ್ಲಿ ಪ್ರಾರಂಭವಾಯಿತು ಮತ್ತು ಕೊನೆಗೊಂಡಿತು. ಸೀತೆಯನ್ನು ಕಸಿದುಕೊಳ್ಳುತ್ತಿದ್ದ ರಾವಣನನ್ನು ಕೊಂದ ರಾಮ ಎಷ್ಟು ಪರಾಕ್ರಮಶಾಲಿ, ಬಕಾಸುರನನ್ನು ಕೊಂದು ದುರ್ಬಲರನ್ನು ರಕ್ಷಿಸಿದ ಭೀಮ ಎಷ್ಟು ಪರಾಕ್ರಮಶಾಲಿ, ಇತ್ಯಾದಿಯಾಗಿ ಮಗನನ್ನು ಹುರಿದುಂಬಿಸುತ್ತಿದ್ದಳು. ಜೀಜಾಬಾಯಿ ನೀಡಿದ ಈ ವಿಧಿಗಳಿಂದ ಶಿವಾಜಿ ರಾಜೇ ಸಂಭವಿಸಿದರು. ಜೀಜಾಬಾಯಿ ಕಥೆ ಹೇಳುವುದಷ್ಟೇ ಅಲ್ಲ ಕುರ್ಚಿಯ ಪಕ್ಕದಲ್ಲಿ ಕೂತು ರಾಜಕೀಯದ ಮೊದಲ ಪಾಠವನ್ನೂ ನೀಡಿದರು. 

ಅವಳು ನುರಿತ ಕುದುರೆ ಸವಾರಿಯೂ ಆಗಿದ್ದಳು. ಹಾಗೆಯೇ ಬಹಳ ಕೌಶಲ್ಯದಿಂದ ಕತ್ತಿ ಹಿಡಿಯಬಲ್ಲಳು. ಪುಣೆಯಲ್ಲಿ ತನ್ನ ಗಂಡನ ಜಾಗೀರ್ ಅನ್ನು ನಿರ್ವಹಿಸಿ ಅದನ್ನು ಅಭಿವೃದ್ಧಿಪಡಿಸಿದಳು. ಹಾಗೆಯೇ ಕಸ್ಬಾ ಗಣಪತಿ ಮಂದಿರವನ್ನು ಸ್ಥಾಪಿಸಿದಳು. ಅವರು ಕೇವರೇಶ್ವರ ದೇವಸ್ಥಾನ ಮತ್ತು ತಂಬಾಡಿ ಜೋಗೇಶ್ವರಿ ದೇವಸ್ಥಾನವನ್ನು ನವೀಕರಿಸಿದರು. 

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಅನಿಲ್ ಕಪೂರ್ ಅವರ ಜನ್ಮದಿನದ ವಿಶೇಷ

ಇನ್ನೂ ಚಿರ ಯುವಕನಂತೆ ಕಾಣುವ ಅನಿಲ್ ಕಪೂರ್ ಅವರ ಜನ್ಮದಿನದ ವಿಶೇಷ

ಎಲ್ಲೆಡೆ ಕ್ರಿಸ್ಮಸ್ ಸಂಭ್ರಮ

ಎಲ್ಲೆಡೆ ಕ್ರಿಸ್ಮಸ್ ಸಂಭ್ರಮ ಇನ್ನೂ ನಡೆಯುತ್ತಿದೆ, ಕ್ರಿಸ್ಮಸ್ ಹಬ್ಬದ ವಿಶೇಷತೆ ಏನು?