ಬಾಳೆಹಣ್ಣಿಗೆ ಉಗಮಸ್ಥಾನ ಭಾರತ. ಭಾರತದ ಎಲ್ಲ ರಾಜ್ಯಗಳಲ್ಲೂ ಬಾಳೆಹಣ್ಣು ಬೆಳೆಯುತ್ತಾರೆ. ಹೆಚ್ಚಾಗಿ, ಕರ್ನಾಟಕ, ಕೇರಳ, ಅಸ್ಸಾಂ, ತಮಿಳುನಾಡು, ಆಂಧ್ರ, ಹಾಗೂ ಪಶ್ಚಿಮ ಬಂಗಾಳದಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಯೂರೋಪಿಯನ್ನರಲ್ಲಿ ಅಲೆಗ್ಸಾಂಡರ್, ಬಾಳೆಹಣ್ಣನ್ನು ಸವಿದ ಪ್ರಥಮನು. ಅವನು ತನ್ನ ದೇಶಕ್ಕೆ, ಬಾಳೆಹಣ್ಣನ್ನು ಪರಿಚಯಿಸಿದ. ಆಫ್ರಿಕ, ಇಜಿಪ್ಟ್ ನಿಂದ ಅರಬ್ ವರ್ತಕರು, ವಿಶ್ವದಾದ್ಯಂತ ಬಾಳೆಯನ್ನು ಮಾರಾಟಮಾಡಿ ಪ್ರಸಿದ್ಧಪಡಿಸಿದರು.
ಬಾಳೆ ತಳಿಯ ವಿಧಗಳು :
ಪುಟ್ಟಬಾಳೆ, ಅಥವಾ ಪುಟ್ಟ ಬಿಳೀ ನಂಜನಗೂಡಿನ ರಸಬಾಳೆ, ಈ ತಳಿಯ ಗಿಡಗಳು ಎತ್ತರವಾಗಿ ಬೆಳೆಯುತ್ತವೆ. ನಾಟಿ ಮಾಡಿದ ೧೫ ತಿಂಗಳಲ್ಲಿ ಕೊಯ್ಲಿಗೆ ಬರುತ್ತದೆ.
ರಸಬಾಳೆ : (ಬಿಸ್ ಸುಗಂಧಿ,ಹೂ ಬಾಳೆ) : ಈ ತಳಿಯ ಗಿಡಗಳು ಎತ್ತರವಾಗಿ ಬೆಳೆಯುತ್ತವೆ. ನಾಟಿ ಮಾಡಿದ ೧೫ ತಿಂಗಳಲ್ಲಿ ಕೊಯ್ಲಿಗೆ ಬರುತ್ತದೆ.
ಪಚ್ಚ ಬಾಳೆ : (ಬಸರಾಯಿ ಬಾಳೆ,ಪಚ್ಛ ಬಾಳೆ,ಕ್ಯಾವಂಡಿಷ್) : ಈ ತಳಿಯ ಕಾಯಿಗಳು ಹಣ್ಣಾದರೂ ಹಸಿಯಾಗಿಯೇ ಇರುವುದರಿಂದ ‘ಪಚ್ಛ ಬಾಳೆ’ ಅಂತಲೂ ಕರೆಯುತ್ತಾರೆ. ಇದು ತಿಡ್ದ ತಳಿಯಾದುದರಿಂದ ಆಧರ ಬೇಕಿಲ್ಲ.
ಏಲಕ್ಕಿ ಬಾಳೆ : ಏಲಕ್ಕಿ ಬಾಳೆ ಗಿಡಗಳು ಕನಿಷ್ಠ 8 ರಿಂದ 12 ಅಡಿ ಎತ್ತರ ಬೆಳೆಯುತ್ತವೆ. ಸ್ವಲ್ಪ ಗಾಳಿ ಬೀಸಿದರೂ ಗಿಡಗಳು ಬಾಗುತ್ತವೆ. ಗಾಳಿ ಜಾಸ್ತಿಯಾದರೆ ಮುರಿದು ಬೀಳುತ್ತವೆ.
ನೇಂದ್ರಬಾಳೆ : ಗಿಡಗಳು ಮದ್ಯಮ ಎತ್ತರ,ನಾಟಿ ಮಾಡಿದ ೧೩ ತಿಂಗಳಲ್ಲಿ ಕೊಯ್ಲಿಗೆ ಬರುತ್ತವೆ. ಇದು ಒಂದು ಅಡುಗೆಗೆ ಬಳಸುವ ತಳಿ.
ಕದಳಿ ಬಾಳೆ : ಕರಾವಳಿ ಭಾಗದಲ್ಲಿ ಕದಳಿ ಬಾಳೆ ಕೃಷಿ ನೇಂದ್ರ, ಕ್ಯಾವಂಡಿಸ್ನಂತೆ ಮುಖ್ಯಬೆಳೆಯಾಗಿ, ಎಡೆಬೆಳೆಯಾಗಿ ಅಥವಾ ಉಪಬೆಳೆಯಾಗಿ ರೈತರಿಗೆ ಸಹಾಯಕವಾಗಿತ್ತು.
ಕಲ್ಲುಬಾಳೆ : ಕಲ್ಲುಬಾಳೆಗಳ ಕಾಂಡ ದಪ್ಪವಿದ್ದು ಒರಟಾಗಿರುತ್ತದೆ. ಇವುಗಳ ಎಲೆಯು ಸಾಮಾನ್ಯವಾಗಿ ೧೦ ಅಡಿಗಳಿಗಿಂತಲೂ ಹೆಚ್ಚು ಉದ್ದವಾಗಿ ಬೆಳೆಯುತ್ತವೆ. ಇದರ ಹೂವುಗಳು ಕೂಡ ದೊಡ್ಡ ಗಾತ್ರದಲ್ಲಿರುತ್ತದೆ. ಇದರ ಹಣ್ಣುಗಳ ಒಳಗೆ ಕಲ್ಲುಗಳಂತೆ ಕಪ್ಪು ಬಣ್ಣದ ಬೀಜಗಳಿರುತ್ತವೆ. ಇದರ ಹಣ್ಣುಗಳು ಸಿಹಿಯೊಂದಿಗೆ ಸ್ವಲ್ಪ ಕಹಿಯಾಗಿರುತ್ತದೆ. ಹೆಚ್ಚಾಗಿ ಈ ಬಾಳೆಗಳು ಹಾಸಿದಂತಿರುವ ಕಲ್ಲುಗಳ (ಪಾರೆಕಲ್ಲು) ನಡುವೆ ಬೆಳೆಯುತ್ತವೆ. ಕಲ್ಲುಬಾಳೆಗಳಿಗೆ ಬೆಳವಣಿಗೆಗೆ ಹೆಚ್ಚಿನ ನೀರಿನಾಂಶದ ಅಗತ್ಯವಿಲ್ಲ. ಇವುಗಳು ಸುಮಾರು ೪ ವರ್ಷದ ವರೆಗೆ ಬೆಳೆಯುತ್ತವೆ.

ಬೂದುಬಾಳೆ : ಕೆಂಪು ಬಾಳೆಹಣ್ಣು ವಿಟಮಿನ್ ಕನಿಜಗಳು ಲವಣಗಳು ನಾರಿನಂಶ ಹಾಗೂ ಅಧಿಕ ಫೈಬರ್ ಮತ್ತು ಕಾರ್ಬೊಹೈಡ್ರೇಟ್ ಗಳಿಂದ ತುಂಬಿರುತ್ತದೆ, ಅದರಲ್ಲೂ ನಾರಿನ ಅಂಶ ಹೆಚ್ಚಿದ್ದು ಕ್ಯಾಲರಿಯ ಅಂಶ ಕಡಿಮೆ ಇರುತ್ತದೆ ಆದ್ದರಿಂದ ದೇಹದ ಬೇಡದ ವಸ್ತುಗಳನ್ನು ಉಪಯೋಗಿಸಲು ಉತ್ತಮ ಹಣ್ಣು, ಅಜೀರ್ಣ ನಿವಾರಣೆ ಮಾಡಲು ಇದರಲ್ಲಿರುವ ಕಾರ್ಬೋಹೈಡ್ರೇಟ್ಗಳು ಸಹಕಾರಿ ಅಷ್ಟೇ ಅಲ್ಲದೆ ವಾಯು ಪ್ರಕೋಪ ತೊಂದರೆಗಳು ಇದ್ದರೂ ಈ ಹಣ್ಣನ್ನು ತಿನ್ನುವುದರಿಂದ ಗುಣವಾಗುತ್ತದೆ.
ಮೈಸೂರು ಬಾಳೆ : ಹುಳಿ ಹುಳಿ, ಸಿಹಿ ಸಿಹಿಯಾಗಿರುತ್ತದೆ ಇದರ ರುಚಿ, ಆದರೆ ಸ್ವಲ್ಪ ಶೀತ, ಆದರೂ ಕೆಲವೊಂದು ಖಾದ್ಯಗಳನ್ನು ತಯಾರಿಸಬಹುದು ಇದರಲ್ಲಿ.
ಪೂವನ್ : ಈ ತಳಿಯ ಗಿಡಗಳು ನೀಳವಾಗಿದ್ದು,ಹಣ್ಣುಗಳು ತಿಳಿಹಳದಿ ಮತ್ತು ತೆಳು ಸಿಪ್ಪೆ ಹೊಂದಿರುತ್ತವೆ.
ರೊಬಸ್ಟಾ : ಈ ತಳಿಯ ಗೊನೆ ಭಾರವಾಗಿದ್ದು ಹೆಚ್ಚು ಇಳ್ಯುವರಿ ಕೊಡುವ ಈ ತಳಿ ಕೊಯ್ಲಿಗೆ ಬರಲು ೧೩ ತಿಂಗಳು ತೆಗೆದುಕೊಳ್ಳುತ್ತದೆ.
ಕರಿಬಾಳೆ : ಇದು ಕರ್ನಾಟಕದ ಎಲ್ಲೆಡೆ ಬೆಳೆಯುವ ತಳಿ. ಇವು ರಸಭರಿತವಾಗಿದ್ದು, ತಿರುಳು ರುಚಿಯಾಗಿ ಸುವಾಸನೆಯಾಗಿರುತ್ತದೆ.
ಇನ್ನೂ ಹಲವು ವಿಧಗಳ ಬಾಳೆಹಣ್ಣುಗಳು ಇವೆ.
ನಮ್ಮ ದೇಶ ಉತ್ಪಾದನೆಯಲ್ಲಿ ಎರಡನೆಯ ಸ್ಥಾನ ಪಡೆದಿರುವ ಹಣ್ಣು ಬಾಳೆ. ಭಾರತದಲ್ಲಿ ವಾರ್ಷಿಕ ಸುಮಾರು 29.7 ಮಿಲಿಯನ್ ಮೆಟ್ರಿಕ್ ಟನ್ ಬಾಳೆ ಹಣ್ಣು ಉತ್ಪಾದನೆಯಾಗುತ್ತದೆ.ಇದು ವರ್ಷವಿಡೀ ಲಭ್ಯ ಮಾತ್ರವಲ್ಲದೇ ಅನೇಕ ಔಷಧೀಯ ಗುಣಗಳನ್ನು ಇದು ಹೊಂದಿರುವುದು ವಿಶೇಷ.
ಇದು ವಿಶ್ವಾದ್ಯಂತದ ಬೆಳೆಗೆ ಭಾರತವು ಸುಮಾರು 20% ಬಾಳೆಹಣ್ಣು ಬೆಳೆದು, ಉತ್ಪಾದನೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನಪಡೆದಿದೆ. ಉಗಾಂಡಾ ಸುಮಾರು 8% ಬೆಳೆದು ಎರಡನೇ ತಯಾರಿಕೆಯ ದೇಶವಾಗಿದೆ.
ಆರೋಗ್ಯಕರ ಲಾಭಗಳು :
ಇತ್ತೀಚೆಗೆ ನಡೆಸಿದ, ಸರ್ವೇಕ್ಷಣೆಯ ಪ್ರಕಾರ, ಖಿನ್ನತೆಗೆ ಒಳಗಾದವರು ಒಂದು ಬಾಳೆಹಣ್ಣನ್ನು ಸೇವಿಸಿದ ಬಳಿಕ, ಹೆಚ್ಚಿನವರಲ್ಲಿ ಸುಧಾರಣೆ ಕಂಡುಬಂದಿದೆ.
ಟ್ರಿಪ್ಟೋಪ್ಯಾನ್ ಎಂಬ ಪ್ರೋಟೀನ್ ಇದಕ್ಕೆ ಕಾರಣ. ಕ್ಯಾಂಡಿಸ್ನಮ್ಮ ದೇಹ ಈ ಪ್ರೋಟೀನ್ ನನ್ನು ಸೆರೋಟಿನ್ ಆಗಿ ಪರಿವರ್ತಿಸುತ್ತದೆ. ಇದರಿಂದ ಉದ್ವೇಗಶಮನಗೊಂಡು ಪ್ರಪುಲ್ಲಚಿತ್ತರನ್ನಾಗಿಸುವ ಅಂಶವೆಂದು ಪರಿಗಣಿತವಾಗಿದೆ. ಕಾಡುವ ನಮ್ಮೆಲ್ಲರ ಖಿನ್ನತೆಗೆ ಮಾತ್ರೆಗಳ ಮೊರೆಹೋಗುವಬದಲು, ದಿನಕ್ಕೊಂದು ಬಾಳೆಹಣ್ಣಿನ ಸೇವನೆಯಿಂದ ಉಪಶಮನಪಡೆಯಬಹುದು. ಬಾಳೆಹಣ್ಣಿನಲ್ಲಿರುವ ಬಿ-೬ ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣವನ್ನು ಸಮಸ್ಥಿತಿಯಲ್ಲಿರಿಸಿ, ನಮ್ಮ ಮನಸ್ಥಿತಿಯ ಮೇಲೆ ಪರಿಣಾಮವನ್ನುಂಟುಮಾಡುತ್ತದೆ. ಬಾಳೆಹಣ್ಣು ನಮ್ಮ ದೇಹದಲ್ಲಿ ತ್ವರಿತ ಶಕ್ತಿ ವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಗ್ಲೂಕೋಸ್ ಮಟ್ಟವು ತುಂಬಾ ಹೆಚ್ಚಾಗಿದೆ, ಇದರಿಂದಾಗಿ ನಮ್ಮ ದೇಹವು ಶಕ್ತಿಯನ್ನು ಪಡೆಯುತ್ತದೆ. ಆದ್ದರಿಂದ, ಪ್ರತಿದಿನ ತಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಸೇರಿಸಿದರೆ, ಉತ್ತಮ ಶಕ್ತಿ ಮಟ್ಟವನ್ನು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ, ಇದು ದೇಹದಲ್ಲಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ರಕ್ತಹೀನತೆ :
ಬಾಳೆಹಣ್ಣಿನಲ್ಲಿ ಕಬ್ಬಿಣದ ಅಂಶ ಸಮೃದ್ಧವಾಗಿರುವುದರಿಂದ ದೇಹದಲ್ಲಿ ಕೆಂಪು ರಕ್ತಕಣಗಳ ಉತ್ಪಾದನೆಯನ್ನು ಪ್ರಚೋದಿಸಿ, ರಕ್ತಹೀನತೆಯನ್ನು ನೀಗಿಸುತ್ತದೆ.
ರಕ್ತದೊತ್ತಡ :
ಪೊಟಾಷಿಯಮ್, ಲವಣ ಸಮೃದ್ಧಿಯಾಗಿದ್ದು, ಉಪ್ಪಿನ ಅಂಶ ತೀರಾ ಕಡಿಮೆ. ಇದರಿಂದ ಬಾಳೆಹಣ್ಣು ರಕ್ತದೊತ್ತಡವನ್ನು ತಡೆಗಟ್ಟಲು ಸೂಕ್ತ ಅಸ್ತ್ರ. “ಅಮೆರಿಕದ ಆಹಾರ ಮತ್ತು ಔಷಧಿಗಳ ಆಡಳಿತ ಮಂಡಲಿ” ಕೂಡ ಇತ್ತೀಚೆಗೆ ಅಧಿಕೃತವಾಗಿ ಜಾಹೀರುಗೊಳಿಸಲು, ಅನುಮತಿ ನೀಡಿದೆ.
ಬುದ್ಧಿಮತ್ತೆ :
ಅಧ್ಯಯನದ ಪ್ರಕಾರ, ಪೊಟಾಷಿಯಮ್ ಜಾಗೃತಗೊಳಿಸುವ ಕೆಲಸದಲ್ಲಿ ನೆರವಾಗಿದೆ.
ಮಲಬದ್ಧತೆ :
ನಾರಿನ ಅಂಶ ಯತೇಚ್ಛ. ಕೃತಕ ವಿರೇಚಕಗಳಿಲ್ಲದೆ, ಮಲಬದ್ಧತೆಯ ಸಮಸ್ಯೆಯನ್ನು, ಹೋಗಲಾಡಿಸಲು ಅತ್ಯಂತ ಸಹಾಯಕಾರಿ.
ಜಡತೆ, ಹಾಗೂ ಆಲಸ್ಯ :
ಜೇನುತುಪ್ಪವನ್ನು ಸೇರಿಸಿದ ಬಾಳೆಹಣ್ಣಿನ ಮಿಲ್ಕ್ ಶೇಕ್ ಒಂದು ದಿವ್ಯ ಪಾನಕ. ತಣ್ಣಗಾಗಿಸುವ ಕ್ರಿಯೆ ಬಾಳೆಹಣ್ಣು ಮಾಡಿದರೆ, ಜೇನುತುಪ್ಪ, ರಕ್ತದ ಸಕ್ಕರೆ ಪ್ರಮಾಣವನ್ನು ಸರಿದೂಗಿಸುತ್ತದೆ.
ಎದೆಯುರಿ :
ಜಠರದಲ್ಲಿ, ಸಹಜ ಪ್ರತ್ಯಾಮ್ಲೀಯಪರಿಣಾಮವನ್ನುಂಟುಮಾಡಿ . ಎದೆಯುರಿಯಿಂದ ಪರಿತಪಿಸುತ್ತಿರುವವರಿಗೂ ಬಾಳೆಹಣ್ಣು ದಿವ್ಯೌಷಧ.
ಬೆಳಗಿನ ಆನಾರೋಗ್ಯ :
ಎರಡು ಊಟಗಳ ಮಧ್ಯೆ ಒಂದು ಬಾಳೆಹಣ್ಣನ್ನು ಗರ್ಭಿಣಿಸ್ತ್ರೀಯರಿಗೆ ಕೊಡುವುದರಿಂದ ವಾಕರಿಕೆ, ವಾಂತಿ ತಡೆಗಟ್ಟಬಹುದು. ಈ ಹಣ್ಣು, ಬೆಳಗಿನ ಆರೋಗ್ಯದ ಏರುಪೇರುಗಳನ್ನು ನಿಯಂತ್ರಣದಲ್ಲಿಡುತ್ತದೆ.
ಸೊಳ್ಳೆಕಡಿತ :
ಸಿಪ್ಪೆಯ ಒಳಭಾಗವನ್ನು ಸೊಳ್ಳೆ ಕಡಿದ ಜಾಗಕ್ಕೆ ಚೆನ್ನಾಗಿ ಉಜ್ಜಿ ತುರಿಕೆ ಕಮ್ಮಿ ಆಗುತ್ತೆ.
ನರವ್ಯೂಹ :
ಬಿ ವಿಟಮಿನ್ ಸಮೃದ್ಧಿಯಾಗಿರುವುದರಿಂದ ನರವ್ಯೂಹದ ಶಾಂತತೆ ಕಾಪಾಡುವುದರಲ್ಲಿ ಸಹಕಾರಿ.
ಬೊಜ್ಜು :
ಅತೀವ ಒತ್ತಡದಲ್ಲಿ ಕೆಲಸಮಾಡುವವರು, ಬೊಜ್ಜಿನ ಸಮಸ್ಯೆಗೆ ಹೆಚ್ಚಾಗಿ ಒಳಗಾಗುವರು. ಸುಮಾರು , ೫೦೦೦ ಒಳರೋಗಿಗಳ ಆರೋಗ್ಯಸಮೀಕ್ಷೆಯಿಂದ ದ್ರಡ ಪಟ್ಟಿದೆ. ಹೆಚ್ಚುಒತ್ತಡದಲ್ಲಿ ಕೆಲಸಮಾಡುವವರಿಗೆ, ಊಟಸೇರುವುದಿಲ್ಲ. ಅದಕ್ಕಾಗಿ ಅವರು ಜಂಕ್ ಫುಡ್ ಎಂದು ಕರೆಯಲಾಗುವ, ಚಿಪ್ಸ್, ಚಾಕೊಲೆಟ್, ಮುಂತಾದ ಅಡ್ಡತಿಂಡಿಗಳನ್ನು ತಿನ್ನುತ್ತಾರೆ. ಇದರಿಂದ ಬೊಜ್ಜುಬೆಳೆಯಲು ಸಹಾಯವಾಗುತ್ತದೆ. ಕಾರ್ಬೋಹೈಡ್ರೇಟ್ ಹೆಚ್ಚಾಗಿರುವ ಹಣ್ಣುಗಳ ಸೇವನೆಯಿಂದ ರಕ್ತದ ಸಕ್ಕರೆಯ ಪ್ರಮಾಣವನ್ನು ಕಾಯ್ದುಕೊಂಡು ಅಂತಹ ಅಡ್ಡತಿಂಡಿಗಳ ವಾಂಛೆಯಿಂದ ಮುಕ್ತರಾಗಬಹುದು.
ಅಲ್ಸರ್ :
ಆಮ್ಲೀಯತೆಯನ್ನು ತಗ್ಗಿಸುತ್ತದೆ. ಜಠರದ ಪೊರೆಯನ್ನು ಮರುಲೇಪಿಸುವ ಮೂಲಕ, ಅಲ್ಸರ್ ತೊಂದರೆಯನ್ನು ಶಮನಗೊಳಿಸುತ್ತದೆ.
ಉಷ್ಣ ನಿಯಂತ್ರಕ :
ದೇಹಕ್ಕೆ ತಂಪು, ಎಂಬ ನಂಬಿಕೆ ವಿಶ್ವದ ಬಹುತೇಕ ಜನಾಂಗಗಳಲ್ಲಿ ಇದೆ. ಥಾಯ್ ಲ್ಯಾಂಡ್ ನಲ್ಲಿ ಗರ್ಭಿಣಿ ಸ್ತ್ರೀಯರು ಬಾಳೆಹಣ್ಣಿನ ಸೇವನೆಯನ್ನು ಮಾಡುವುದು ಸಾಮಾನ್ಯ. ಇದರಿಂದ ಅವರ ದೇಹ ಮತ್ತು ಮನಸ್ಸುಗಳೆರಡರ ಉಷ್ಣತೆ ಕಡಿಮೆಯಾಗಿ, ಹುಟ್ಟಿದ ಮಗುವಿನ ದೇಹಮತ್ತು-ಮನಸ್ಸುಗಳು ಶಾಂತವಾಗಿರಲೆಂಬ ನಂಬಿಕೆ ಇದೆ.
ಧೂಮಪಾನ ಹಾಗೂ ತಂಬಾಕುಸೇವನೆ :
ಬಿ-೬, ಬಿ-೧೨ ವಿಟಮಿನ್ ಗಳು ಹಾಗೂ ಪೊಟ್ಯಾಶಿಯಮ್, ಮೆಗ್ನೀಶಿಯಮ್ ಅಂಶಗಳು, ನಿಕೊಟಿನ್ನ ಸೆಳೆತದಿಂದ ಹೊರಬರುವಾಗ, ದೇಹದ ಮೇಲಾಗುವ ಪರಿಣಾಮಗಳನ್ನು ನಿಭಾಯಿಸಲು ದೇಹಕ್ಕೆ ಸಹಾಯಮಾಡುತ್ತವೆ.
ಒತ್ತಡ :
ಪೊಟಾಸಿಯಂ ಪ್ರಮುಖ ಖನಿಜ. ಹೃದಯದ ಬಡಿತವನ್ನು ನಿಯಂತ್ರಿಸುತ್ತದೆ. ಮೆದುಳಿಗೆ ಆಮ್ಲಜನಕವನ್ನು ಪೂರೈಸುತ್ತದೆ. ದೇಹದ ನೀರಿನ ಪ್ರಮಾಣವನ್ನು ಸರಿದೂಗಿಸುತ್ತದೆ. ಪ್ರಪಂಚದ ಮಂಚೂಣಿಯಲ್ಲಿರುವ ಕ್ರೀಡಾಳುಗಳ ಪ್ರಥಮ ಆದ್ಯತೆ- ಸೇಬು. ನಂತರ ಬಾಳೆಹಣ್ಣು. ಇದರಲ್ಲಿ, ೪ ರಷ್ಟು ಪ್ರೋಟಿನ್, ಎರಡುಪಟ್ಟು ಕಾರ್ಬೊ ಹೈಡ್ರೇಟ್, ೩ ಪಟ್ಟು ಫಾಸ್ಫರಸ್, ೫ ಪಟ್ಟು ವಿಟಮಿನ್ ಎ, ಮತ್ತು ಕಬ್ಬಿಣಾಂಶ ಹಾಗೂ ಎರಡುಪಟ್ಟು ಇತರ ವಿಟಮಿನ್, ಹಾಗೂ ಖನಿಜಗಳಿವೆ. ಪೊಟಾಷಿಯಮ್ ಅಂಶಕೂಡ ಸಮೃದ್ಧವಾಗಿದೆ. “ಹೊತ್ತಲ್ಲದ ಹೊತ್ತಿನಲ್ಲಿ ಅದೂ-ಇದು ತಿನ್ನುವಬದಲು ಬಾಳೆಹಣ್ಣಿನಸೇವನೆ ಮಾಡಿದರೆ ಖಂಡಿತವಾಗಿಯೂ ನಮ್ಮ ದೇಹ, ಸುಸ್ಥಿತಿಯಲ್ಲಿರುವುದು ಎಂದು ವೈದ್ಯರು ಹೇಳುತ್ತಾರೆ.
ಧನ್ಯವಾದಗಳು.
GIPHY App Key not set. Please check settings