ವಾಮನ ಪುರಾಣದ ಪ್ರಕಾರ, ವಿಷ್ಣು ತನ್ನ ಒಂದು ಪಾದವನ್ನು ಆಕಾಶದ ಕಡೆಗೆ ಎತ್ತಿದಾಗ, ನಂತರ ಬ್ರಹ್ಮ ದೇವನು ತನ್ನ ಕಮಂಡಲದಲ್ಲಿ ನೀರನ್ನು ತುಂಬಿಸಿಕೊಂಡು ಭಗವಾನ್ ವಿಷ್ಣುವಿನ ಪಾದಗಳನ್ನು ತೊಳೆದನು. ಈ ನೀರಿನ ವೇಗದಿಂದ ಗಂಗೆಯು ಬ್ರಹ್ಮನ ಕಮಂಡಲದಲ್ಲಿ ಜನಿಸಿದಳು. ಭಗವಾನ್ ಬ್ರಹ್ಮನು ಗಂಗೆಯನ್ನು ಹಿಮಾಲಯಕ್ಕೆ ಒಪ್ಪಿಸಿದನು, ಹೀಗಾಗಿ ಪಾರ್ವತಿ ದೇವತೆ ಮತ್ತು ಗಂಗಾ ಇಬ್ಬರೂ ಸಹೋದರಿಯರಾದರು. ವಾಮನನ ಪಾದಕ್ಕೆ ಆದ ಗಾಯವು ಆಕಾಶವನ್ನು ಛಿದ್ರಗೊಳಿಸಿತು ಮತ್ತು ಗಂಗೆಯು ಮೂರು ಭಾಗವಾಗಿ ಉಕ್ಕಿ ಹರಿಯಲು ಕಾರಣವಾಯಿತು ಎಂಬ ಕಥೆಯೂ ಇದೆ. ಒಂದು ನೀರಿನ ಹರಿವು ಭೂಮಿಗೆ ಹೋಯಿತು, ಒಂದು ಸ್ವರ್ಗಕ್ಕೆ ಮತ್ತು ಒಂದು ಪಾತಾಳ ಲೋಕಕ್ಕೆ ಹರಿಯಲು ಆರಂಭವಾಯಿತು.
ಮಹಾಭಾರತದ ದಂತಕಥೆಯ ಪ್ರಕಾರ, ಗಂಗಾ ದೇವಿಯು ತನ್ನ ತಂದೆ ಬ್ರಹ್ಮನೊಂದಿಗೆ ಒಮ್ಮೆ ದೇವರಾಜ ಇಂದ್ರನ ಸಭೆಗೆ ಬಂದಳು. ಭೂಮಿಯ ಮಹಾ ರಾಜ ಮಹಾಭಿಷಾ ಕೂಡ ಇಲ್ಲಿ ಉಪಸ್ಥಿತನಾಗಿದ್ದನು. ಮಹಾಭಿಷನನ್ನು ನೋಡಿದ ಗಂಗೆ ಆಕರ್ಷಿತಳಾದಳು ಮತ್ತು ಮಹಾಭಿಷಾ ಕೂಡ ಗಂಗಾಳನ್ನು ನೋಡಿದ ಮೇಲೆ ತನ್ನ ಮನಸ್ಸಿನ ಸ್ಥಿಮಿತವನ್ನು ಕಳೆದುಕೊಂಡನು.
ಗಂಗೆಯು ಸಭೆಯಲ್ಲಿ ನೃತ್ಯ ಮಾಡುತ್ತಿದ್ದಾಗ ಅವಳ ಸೆರಗು ಜಾರುತ್ತದೆ. ಸಭೆಯಲ್ಲಿ ಹಾಜರಿದ್ದ ಎಲ್ಲಾ ದೇವರು-ದೇವತೆಗಳು ಸೌಜನ್ಯದಿಂದ ಕಣ್ಣುಮುಚ್ಚಿದರು, ಆದರೆ ಗಂಗೆಯಲ್ಲಿ ಕಳೆದುಹೋದ ಮಹಾಭಿಷರು ಅವಳನ್ನು ದಿಟ್ಟಿಸುತ್ತಾ ಇದ್ದರು ಮತ್ತು ಗಂಗೆ ಕೂಡ ಅವನನ್ನು ನೋಡುತ್ತಲೇ ಇದ್ದಳು. ಇದನ್ನು ಕಂಡು ಕೋಪಗೊಂಡ ಬ್ರಹ್ಮ ದೇವನು ನೀವು ಘನತೆಗೆ ಅರ್ಹರಾದವರಲ್ಲ ಹಾಗಾಗಿ ನೀವು ಸ್ವರ್ಗ ಲೋಕವನ್ನು ತೊರೆದು ಭೂಮಿಯಲ್ಲಿ ಇರುವಂತಾಗಲಿ ಎಂದು ಶಾಪವನ್ನು ನೀಡುತ್ತಾನೆ. ಆದ್ದರಿಂದ ಗಂಗೆ ಭೂಮಿಗೆ ಬರಬೇಕಾಯಿತು.
ಬ್ರಹ್ಮ ದೇವನ ಶಾಪದಿಂದಾಗಿ, ಗಂಗಾ ನದಿಯ ರೂಪದಲ್ಲಿ ಭೂಮಿಗೆ ಬಂದಳು ಮತ್ತು ಮಹಾಭಿಷನು ಹಸ್ತಿನಾಪುರದ ರಾಜ ಶಾಂತನು ಆಗಿ ಹುಟ್ಟಬೇಕಾಯಿತು. ಒಮ್ಮೆ, ಬೇಟೆಯನ್ನು ಆಡುವಾಗ ಶಾಂತನು ಗಂಗಾ ತೀರವನ್ನು ತಲುಪಿದಾಗ, ಗಂಗಾ ಮಾನವ ರೂಪದಲ್ಲಿ ಶಾಂತನುಗೆ ಕಾಣಿಸಿಕೊಂಡಳು ಮತ್ತು ಇಬ್ಬರೂ ಪ್ರೀತಿಯಲ್ಲಿ ಸಿಲುಕಿದರು.
ಶಾಂತನು ಮತ್ತು ಗಂಗೆಯ ಪ್ರೀತಿ ಸಂಕೇತವಾಗಿ ಅವರಿಬ್ಬರಿಗೆ 8 ಜನ ಮಕ್ಕಳಿದ್ದರು, ಅದರಲ್ಲಿ ಗಂಗೆ ತನ್ನ ಏಳು ಜನ ಮಕ್ಕಳಿಗೆ ಜಲ ಸಮಾಧಿಯನ್ನು ನೀಡಿದಳು ಮತ್ತು ದೇವವ್ರತ ಭೀಷ್ಮ ಎಂಟನೇ ಮಗುವಾಗಿ ಜನಿಸಿದನು. ಆದರೆ ಗಂಗೆಗೆ ದೇವವ್ರತ ಭೀಷ್ಮನಿಗೆ ಜಲ ಸಮಾಧಿಯನ್ನು ನೀಡಲು ಸಾಧ್ಯವಾಗಲಿಲ್ಲ. ಗಂಗೆಯ ಎಂಟು ಮಕ್ಕಳನ್ನು ವಸು ಎಂದು ಹೇಳಲಾಗುತ್ತದೆ. ಶಾಪವನ್ನು ಮುಕ್ತಗೊಳಿಸಲು ಗಂಗೆ ಅವರಿಗೆ ನೀರಿನ ಸಮಾಧಿಯನ್ನು ನೀಡುತ್ತಿದ್ದಳು. ಆದರೆ ಎಂಟನೇ ಮಗುವನ್ನು ಶಾಪದಿಂದ ಮುಕ್ತಗೊಳಿಸಲು ಗಂಗೆ ವಿಫಲಳಾದಳು.
ಇದಿಷ್ಟು ಗಂಗೆ ಒಬ್ಬ ಮಾನವನನ್ನು ಮದುವೆಯಾದಳು ಎನ್ನುವುದಕ್ಕೆ ಕಾರಣವಾಗಿದೆ.
ಗಂಗೆ ಶಿವನ ಪತ್ನಿ ಎಂದು ಯಾಕೆ ಕರೆಯುತ್ತಾರೆ? ಇದರಲ್ಲಿ ಭಗೀರಥನ ಪ್ರಯತ್ನ ಏನು?
ಪರಶಿವನನ್ನು ಗಂಗಾಧರ ಎಂದು ಕರೆಯುತ್ತೇವೆ .ಅದಕ್ಕೆ ಕಾರಣ ಶಿವನು ಗಂಗಾ ದೇವಿಯನ್ನು ಕೇವಲ ತನ್ನ ಜಟೆಯಲ್ಲಿ ಹಿಡಿದಿರುವುದು. ಸ್ವರ್ಗ ಲೋಕದಿಂದ ಪಾತಾಳ ಲೋಕ, ಭೂಲೋಕ ಎಲ್ಲಾ ಮೂರು ಲೋಕವನ್ನು ಆವರಿಸಿಕೊಂಡಿರುವ ಗಂಗೆಯನ್ನು ಪರಶಿವ ತನ್ನ ಜಡೆಯಲ್ಲೇ ಹಿಡಿದು ಇಟ್ಟುಕೊಂಡಿದ್ದ ಶಿವನು.
ಸಾಗರನೆಂಬ ರಾಜನು ಅಯೋಧ್ಯೆಯನ್ನು ಆಳುತ್ತಿದ್ದನು. ಆತನಿಗೆ ಸುಮತಿ ಮತ್ತು ಕೇಶಿನಿ ಇಬ್ಬರು ಪತ್ನಿಯರಿದ್ದರು .ಅವನಿಗೆ ಮಕ್ಕಳಿರಲಿಲ್ಲ. ಈ ಕಾರಣದಿಂದ ಸಾಗರನು ಹಿಮಾಲಯದ ಮೇಲೆ ಹೋಗಿ ತಪಸ್ಸನ್ನು ಕೈಗೊಂಡನು. ತಪಸ್ಸಿನ ಫಲವಾಗಿ ಸಾಗರನು 61,000 ಮಕ್ಕಳನ್ನು ಪಡೆದನು. ಒಂದು ಸೈನ್ಯಕ್ಕೆ ಸಮವಾಗಿತ್ತು ಅವನ ಸಂತಾನಗಳು. ಆದರೆ ಆತನ ಎಲ್ಲಾ ಮಕ್ಕಳು ದುರ್ಜನರಾಗಿದ್ದರು. ಸಾಗರನು 99 ಅಶ್ವಮೇಧ ಯಾಗವನ್ನು ಯಶಸ್ವಿಯಾಗಿ ಪೂರೈಸಿದ್ದು, ಇನ್ನು ಕೇವಲ ಒಂದು ಅಶ್ವಮೇಧ ಯಾಗ ಮಾತ್ರ ಬಾಕಿಯಿತ್ತು. ಆತನು ಒಂದು ಅಶ್ವಮೇಧ ಯಾಗವನ್ನು ಮಾಡಿದರೆ ಅವನು ಸ್ವರ್ಗದ ಅಧಿಪತಿಯಾಗುವ ಸಾಮರ್ಥ್ಯವನ್ನು ಹೊಂದುತ್ತಿದ್ದನು. ಸಾಗರನು ಇನ್ನು ಒಂದು ಅಶ್ವಮೇಧ ಯಾಗವನ್ನು ಮಾಡಿದರೆ ಸಂಪೂರ್ಣವಾಗುತ್ತದೆ ಎಂದು ತಿಳಿದು ತನ್ನ 100 ನೇ ಅಶ್ವಮೇಧ ಯಾಗವನ್ನು ಕೈಗೊಳ್ಳಲು ಕುದುರೆಯನ್ನು ನಗರ ಸಂಚಾರಕ್ಕೆ ಬಿಡುತ್ತಾನೆ.
ಇತ್ತ ಇಂದ್ರನಿಗೆ ಸಾಗರ 100 ಅಶ್ವಮೇಧ ಯಾಗ ಮಾಡಿದರೆ ತನ್ನ ಸ್ವರ್ಗ, ಸ್ವರ್ಗದ ಅಧಿಪತ್ಯ ಎಲ್ಲವೂ ನಾಶವಾಗುತ್ತದೆ ಎನ್ನುವ ಭಯದಿಂದ ಸಾಗರ ಕಳುಹಿಸಿದ್ದ ಅಶ್ವಮೇಧ ಕುದುರೆಯನ್ನು ತಾನು ಕದ್ದು ಪಾತಾಳದಲ್ಲಿ ಧ್ಯಾನ ಮಾಡುತ್ತಿದ್ದ ಕಪಿಲ ಮಹರ್ಷಿಗಳ ಹಿಂದೆ ಕಟ್ಟುತ್ತಾನೆ. ಆಗ ಅಶ್ವಮೇಧ ಯಜ್ಞಕ್ಕೆ ಬಳಸಬೇಕಾಗಿದ್ದ ತ್ಯಾಗದ ಕುದುರೆಯನ್ನು ಕಪಿಲನು ಕದ್ದಿದ್ದಾನೆಂದು ತಪ್ಪಾಗಿ ತಿಳಿದು ಸಾಗರ ಕಪಿಲನ ಮೇಲೆ ಕೋಪಗೊಳ್ಳುತ್ತಾನೆ. ಸಾಗರನು ತನ್ನ ಮೇಲೆ ಕಳ್ಳನ ಆಪಾಧನೆ ಮಾಡಿದನೆಂದು ಕೋಪಗೊಂಡ ಕಪಿಲ ಮಹರ್ಷಿಗಳು ಸಾಗರನಿಗೆ ಮತ್ತು ಆತನ ಕುಟುಂಬಕ್ಕೆ ನೀವು ಪಾತಾಳದಿಂದ ಗಂಗೆಯನ್ನು ಭೂಮಿಗೆ ತರುವವರೆಗೆ ಮೋಕ್ಷ ಸಿಗಲಾರದು ಎಂದು ಶಪಿಸುತ್ತಾನೆ.
ದಿನಕ್ರಮೇಣ ರಾಜನಿಗೆ ಅಸಮಂಜಸ ಎಂಬ ಮಗನು ಜನಿಸಿದ. ಇವನ ಮಗನೇ ಅಂಶುಮಂತ. ತಾತನ ಯಾಗ ಪೂರೈಸದಿರುವುದನ್ನು ಕಂಡು, ದುಃಖಿತನಾದ ಅವನು ಕುದುರೆಯನ್ನು ಹುಡುಕುತ್ತಾ ಕಪಿಲನ ಆಶ್ರಮಕ್ಕೆ ಬಂದ. ಅಲ್ಲಿ ಮುಗಿಲೆತ್ತರಕ್ಕೆ ಬಿದ್ದಿರುವ ಭಸ್ಮರಾಶಿ ಹಾಗೂ ಕುದುರೆಯನ್ನು ಕಂಡ. ಕಪಿಲ ಮಹರ್ಷಿಯಿಂದ ಸಕಲ ಸಂಗತಿಯನ್ನೂ ತಿಳಿದ. ಋಷಿಯೊಂದಿಗೆ ವಿನಯ ವಿನಮ್ರತೆಯೊಂದಿಗೆ ವರ್ತಿಸಿ ಕುದುರೆಯೊಂದಿಗೆ ರಾಜಧಾನಿಗೆ ಹಿಂದಿರುಗಿದ, ಹಿಂದಿರುಗುವಾಗ ಕಪಿಲ ಹೇಳಿದ:
“ರಾಜಕುಮಾರಾ, ಆದದ್ದಾಯಿತು. ಈಗಲೂ ಈ ಬೂದಿಯ ಮೇಲೆ ಸುರನದಿಯಾದ ಗಂಗೆಯನ್ನು ಹರಿಸಿದರೆ ನಿನ್ನ ಪಿತೃಗಳು ಸದ್ಗತಿ ಹೊಂದುವರು. ಯಾಗಾಶ್ವವನ್ನು ರಾಜಧಾನಿಗೆ ತಂದನಂತರ, ತಾತನಾದ ಸಾಗರ ಯಾಗವನ್ನೇನೋ ಮಾಡಿ ಮುಗಿಸಿದ. ಆದರೆ ಈಗ ಅವನ ಮನಸ್ಸು ಸಂತೋಷದಿಂದ ಇರಲಿಲ್ಲ. ರಾಜ್ಯವನ್ನು ತನ್ನ ಮಗನಾದ ಅಸಮಂಜಸನಿಗೆ ವಹಿಸಿದ. ಅಸಮಂಜಸನು ತನ್ನ ಪಿತೃಗಳಿಗೆ ಒದಗಿರುವ ದುರ್ಗತಿಯಿಂದ ವ್ಯಥಿತನಾಗಿ ರಾಜ್ಯಭಾರದ ಹೊರೆಯನ್ನು ತನ್ನ ಮಗನಾದ ಅಂಶುಮಂತನಿಗೆ ವಹಿಸಿ, ತಾನು ತಪಸ್ಸು ಮಾಡಿ ಜೀವ ಕಳೆಯಲು ಕಾಡಿಗೆ ಹೋದ. ಅಂಶುಮಂತನೂ ತನ್ನ ಪಿತೃಗಳಿಗೆ ಸಂಭವಿಸಿರುವ ದುರ್ಗತಿಯ ವಿಚಾರ ಕಾಡುತ್ತಲೇ ಇತ್ತು. ಆ ಗಂಗೆಯನ್ನು ಭೂಲೋಕಕ್ಕೆ ತರಲು ಸಾಕಷ್ಟು ಶ್ರಮಿಸಿದರೂ, ಸಾರ್ಥಕ ಆಗಲಿಲ್ಲ. ಭಗೀರಥ ಸಾಗರನ ಮೊಮ್ಮಗ, ಹೇಗಾದರೂ ಮಾಡಿ ಗಂಗೆಯನ್ನು ಭೂಮಿಗೆ ತರುವಂತೆ, ತನ್ನ ವಂಶಕ್ಕೆ ಅಂಟಿದ ಶಾಪ ನಿವಾರಣೆಗೆ, ಭಗೀರಥನು ಬ್ರಹ್ಮದೇವನ ಸಹಾಯವನ್ನು ಕೇಳುತ್ತಾನೆ. ಆಗ ಬ್ರಹ್ಮನು ಗಂಗೆಯ ಬಳಿ ಹೋಗಿ ಭೂಮಿಗೆ ಬರುವಂತೆ ಕೇಳಿಕೊಳ್ಳುತ್ತಾನೆ. ಆಗ ಗಂಗೆಯು ತನಗೆ ಭೂಮಿಗೆ ಬರಲು ಯಾವುದೇ ಅಭ್ಯಂತರವಿಲ್ಲ. ಆದರೆ ನಾನು ಭೂಮಿಗೆ ನನ್ನ ಪ್ರಬಲವಾದ ಶಕ್ತಿಯಿಂದ ಸಂಪೂರ್ಣ ಭೂಮಿಯೇ ಕೊಚ್ಚಿ ಹೋಗಬಹುದು. ಸೃಷ್ಟಿಯ ನಾಶವಾಗಬಹುದು ಎಂದು ಹೇಳುತ್ತಾಳೆ.
ಗಂಗೆಯ ಮಾತುಗಳನ್ನು ಕೇಳಿ ಭಗೀರಥನಿಗೆ ಚಿಂತೆಯಾಗುತ್ತದೆ. ಆಗ ಅವನು ಶಿವನ ಬಳಿ ಗಂಗೆಯನ್ನು ಭೂಮಿಗೆ ತರುವಂತೆ ಕೇಳಿಕೊಳ್ಳುತ್ತಾನೆ. ಶಿವನ ಭಗೀರಥನಿಗೆ ಸಹಕರಿಸಲು ಒಪ್ಪಿಗೆ ನೀಡಿ ಭೂಮಿಗೆ ಬರುತ್ತಾನೆ. ಶಿವನ ಪರಾಕ್ರಮವನ್ನು ತಿಳಿಯದ ಗಂಗೆ ತನ್ನ ಪ್ರಾಬಲ್ಯದಿಂದ ಶಿವನನ್ನು ಕೂಡ ತೊಳೆದುಕೊಂಡು ಹೋಗಲು ನಿರ್ಧರಿಸಿ, ಪ್ರಾಬಲ್ಯತೆಯಿಂದ ಭೂಮಿಗಿಳಿಯುತ್ತಾಳೆ. ಕಪಿಲಾಶ್ರಮದ ಕಡೆ ಹರಿದು ಬಂದಳು. ಭಸ್ಮದಲ್ಲಿ ಕಲೆತಳು. ಕೂಡಲೇ ನರಕದಲ್ಲಿದ್ದ ಸಗರಪುತ್ರರೆಲ್ಲರೂ ಸದ್ಗತಿ ಪಡೆದು, ಸ್ವರ್ಗ ಸೇರಿದರು. ಭಗೀರಥನ ಸಾಹಸದಿಂದ ಸುರನದಿಯಾದ ಗಂಗೆ ಭೂಲೋಕದಲ್ಲಿ ಹರಿದುಬಂದ ಕಾರಣ, ಈ ಪ್ರಯತ್ನವನ್ನು ಇಂದಿಗೂ ಭಗೀರಥ ಪ್ರಯತ್ನ ಎಂದೇ ಕರೆಯುತ್ತಾರೆ.
ಗಂಗೆಯ ಹರಿವು ನಿಲ್ಲದಾಗ ಶಿವನು ಆಕೆಯನ್ನು ತನ್ನ ಜಡೆಯಲ್ಲಿ ಹಿಡಿದು ಆಕೆಯ ಶಕ್ತಿಯನ್ನು ನಿಯಂತ್ರಿಸುತ್ತಾನೆ. ಗಂಗೆಗೆ ತಾನು ಮಾಡಿದ ತಪ್ಪಿನ ಅರಿವಾಗುತ್ತದೆ. ಶಿವನು ನನಗಿಂತ ಸಾವಿರ ಪಟ್ಟು ಪರಾಕ್ರಮಿ ಎನ್ನುವುದು ತಿಳಿಯುತ್ತದೆ. ಅಂದಿನಿಂದ ಶಿವನನ್ನು ಗಂಗಾಧರಾ ಎಂದು ಕರೆಯಲಾಗುತ್ತದೆ.
GIPHY App Key not set. Please check settings