in

ಪೋರ್ಚುಗೀಸರಿಂದ ‘ ದಿ ಕ್ವೀನ್ ಆಫ್ ಪೆಪ್ಪರ್ ‘ ಎಂದು ಕರೆಸಿಕೊಂಡ ರಾಣಿ ಚೆನ್ನಭೈರಾದೇವಿ

ದಿ ಕ್ವೀನ್ ಆಫ್ ಪೆಪ್ಪರ್
ದಿ ಕ್ವೀನ್ ಆಫ್ ಪೆಪ್ಪರ್

ರಾಣಿ ಚೆನ್ನಭೈರಾದೇವಿ, ಪೋರ್ಚುಗೀಸರಿಂದ  ‘ ದಿ ಕ್ವೀನ್ ಆಫ್ ಪೆಪ್ಪರ್ ‘ ಎಂಬ ಹೆಸರನ್ನು ಪಡೆದ ವಿಜಯನಗರ ಸಾಮ್ರಾಜ್ಯದ ಅಡಿಯಲ್ಲಿ ನಗಿರೆ ಪ್ರಾಂತ್ಯದ 16 ನೇ ಶತಮಾನದ ಜೈನ ರಾಣಿ. ಆಕೆಯನ್ನು ಅಧಿಕೃತವಾಗಿ ಮಹಾಮಂಡಲೇಶ್ವರಿ ರಾಣಿ ಚೆನ್ನಭೈರಾದೇವಿ ಎಂದು ಕರೆಯಲಾಗುತ್ತಿತ್ತು.

ವಿಜಯನಗರದ ಸಾಳುವ ರಾಜವಂಶದ ಒಂದು ಶಾಖೆಯ ರಾಜರು ಗೇರುಸೊಪ್ಪೆಯನ್ನು ಆಳಿದರೆ ಮತ್ತೊಂದು ರಾಜವಂಶ ಹಾಡುವಳ್ಳಿಯನ್ನು ಆಳಿತು. ಗೇರುಸೊಪ್ಪೆಯ ರಾಜ ಇಮ್ಮಡಿ ದೇವರಾಯ (1515–50) ಪೋರ್ಚುಗೀಸರ ವಿರುದ್ಧ ಹೋರಾಡಿದ. 1542 ರಲ್ಲಿ ಮಡಗೋವಾ ಬಳಿ ನಡೆದ ಭೀಕರ ಯುದ್ಧದಲ್ಲಿ ಅವನ ಸೋಲಿನ ನಂತರ, ಪೋರ್ಚುಗೀಸರು ಅವನ ರಾಜಧಾನಿ ಭಟ್ಕಳವನ್ನು ಸುಟ್ಟುಹಾಕಿದರು. ಅವನ ಹೆಂಡತಿ ಚೆನ್ನಾದೇವಿ ಚೆನ್ನಭೈರಾದೇವಿಯ ಅಕ್ಕ.

ಮಹಾಮಂಡಲೇಶ್ವರಿ ಚೆನ್ನಭೈರಾದೇವಿ ಉತ್ತಮ ಆಡಳಿತಗಾರ್ತಿ ಎಂದು ಇತಿಹಾಸಕಾರರಿಂದ ಪ್ರಶಂಸೆಗೆ ಪಾತ್ರರಾಗಿದ್ದರು. ಅವಳು 1552 ರಿಂದ 1606 ರವರೆಗೆ ಆಳ್ವಿಕೆ ನಡೆಸಿದಳು. ಭೈರಾದೇವಿಯು ಅಘನಾಶಿನಿ ನದಿಯ ದಡದಲ್ಲಿ ಮಿರ್ಜಾನ್ ಕೋಟೆಯನ್ನು ನಿರ್ಮಿಸಿ ಅದರ ಮೂಲಕ ಕಾಳುಮೆಣಸು ವ್ಯಾಪಾರವನ್ನು ನಿಯಂತ್ರಿಸುತ್ತಿದ್ದಳು. 

ಪೋರ್ಚುಗೀಸರಿಂದ ' ದಿ ಕ್ವೀನ್ ಆಫ್ ಪೆಪ್ಪರ್ ' ಎಂದು ಕರೆಸಿಕೊಂಡ ರಾಣಿ ಚೆನ್ನಭೈರಾದೇವಿ
ಮೀರ್ಜನ್ ಕೋಟೆ

1552 ರಿಂದ 1606 ರವರೆಗಿನ 54 ವರ್ಷಗಳ ಅವಧಿಯ ಭಾರತೀಯ ಇತಿಹಾಸದಲ್ಲಿ ಸುದೀರ್ಘ ಆಡಳಿತ ನಡೆಸಿದ ರಾಣಿ. ಅವರು 1559 ಮತ್ತು 1570 ರಲ್ಲಿ ಪೋರ್ಚುಗೀಸರ ವಿರುದ್ಧದ ಯುದ್ಧಗಳಿಗೆ ಹೆಸರುವಾಸಿಯಾಗಿದ್ದಾರೆ, ಪೋರ್ಚುಗೀಸರೊಂದಿಗೆ ಯುದ್ಧದಲ್ಲಿ ಗೆದ್ದು ವಾಣಿಜ್ಯ ಸಂಬಂಧಗಳನ್ನು ಹೊಂದಿದ್ದರು.

ಭಟ್ಕಳ ಮತ್ತು ಹೊನ್ನಾವರ ಬಂದರುಗಳ ಮೂಲಕ ಯುರೋಪಿಯನ್ ಮತ್ತು ಅರಬ್ ಪ್ರದೇಶಗಳಿಗೆ ಹೆಚ್ಚಿನ ಪ್ರಮಾಣದ ಮೆಣಸು ಮತ್ತು ಇತರ ಮಸಾಲೆಗಳನ್ನು ರಫ್ತು ಮಾಡಿದ ಕಾರಣ ಅವರು ಪೋರ್ಚುಗೀಸರಿಂದ “ಮೆಣಸಿನ ರಾಣಿ” ಎಂಬ ಬಿರುದನ್ನು ಪಡೆದರು.

ಚೆನ್ನಭೈರಾದೇವಿ ನಿರ್ಮಿಸಿದ ಮಿರ್ಜಾನ್ ಕೋಟೆಯು ಇಂದಿನ ಉತ್ತರ ಕನ್ನಡ ಜಿಲ್ಲೆಯಲ್ಲಿದೆ.

ಮೀರ್ಜನ್ ಕೋಟೆಯು ತನ್ನ ಅದ್ಭುತವಾದ ನಿರ್ಮಾಣ ಕೌಶಲ್ಯಕ್ಕೆ ಹೆಸರಾಗಿದೆ. ಇದು ಉತ್ತರ ಕನ್ನಡ ಜಿಲ್ಲೆಯಲ್ಲಿ ಉತ್ತಮ ಸ್ಥಿತಿಯಲ್ಲಿರುವ ಕೆಲವೆ ಕೋಟೆಗಳಲ್ಲಿ ಒಂದು. ಈ ಕೋಟೆಯು ಸುಮಾರು ೧೧.೫ ಎಕರೆಗಳಷ್ಟು ವಿಸ್ತಾರವಾಗಿದೆ ಮತ್ತು ಇದನ್ನು ನಿರ್ಮಿಸಲು ಸ್ಥಳೀಯವಾಗಿ ದೊರೆಯುವ ಕೆಂಪು ಕಲ್ಲುಗಳನ್ನು ಬಳಸಲಾಗಿದೆ. ಕೋಟೆಯು ನಾಲ್ಕು ದ್ವಾರಗಳನ್ನು ಹೊಂದಿದ್ದು, ಪ್ರತಿಯೊಂದು ದ್ವಾರದಲ್ಲು ಅಗಲವಾದ ಮೆಟ್ಟಿಲುಗಳಿವೆ. ಕೋಟೆಯ ಒಳಗಡೆ ಒಂದು ಮುಖ್ಯ ದ್ವಾರ, ಒಂದು ಗುಪ್ತ ದ್ವಾರ, ಒಂಬತ್ತು ಬಾವಿ, ಹಾಳು ಬಿದ್ದ ದೊಡ್ಡ ದರ್ಬಾರ್ ಹಾಲ್ ಮತ್ತು ಬಹಳ ವಿಸ್ತಾರವಾದ ಮಾರುಕಟ್ಟೆ ಜಾಗವಿದೆ. ಕೋಟೆಯ ಸುತ್ತ ೧೨ ಬುರುಜುಗಳಿವೆ.

ರಾಣಿ 1559 ಮತ್ತು 1570 ರಲ್ಲಿ ಪೋರ್ಚುಗೀಸರ ವಿರುದ್ಧ ಹೋರಾಡಿದರು ಮತ್ತು ಎರಡೂ ಯುದ್ಧಗಳನ್ನು ಗೆದ್ದರು. ಅವಳು 1571 ರ ಏಕೀಕೃತ ಸೈನ್ಯಕ್ಕೆ ಅಧಿಪತಿಯಾಗಿದ್ದಳು. ಈ ಸಂಯುಕ್ತ ಸೈನ್ಯದಲ್ಲಿ ಗುಜರಾತ್‌ನ ಸುಲ್ತಾನರು, ಬೀದರ್‌ನ ಸುಲ್ತಾನರು, ಬಿಜಾಪುರದ ಆದಿಲ್ ಶಾಹಿಗಳು ಮತ್ತು ಕೇರಳದ ಜಮೋರಿನ್ ಆಡಳಿತಗಾರರು ಸೇರಿದಂತೆ ಅನೇಕ ರಾಜರು ಸೇರಿದ್ದರು. 

ಗೇರುಸೊಪ್ಪದಲ್ಲಿ ಚತುರ್ಮುಖ ಬಸದಿ

ಪೋರ್ಚುಗೀಸರಿಂದ ' ದಿ ಕ್ವೀನ್ ಆಫ್ ಪೆಪ್ಪರ್ ' ಎಂದು ಕರೆಸಿಕೊಂಡ ರಾಣಿ ಚೆನ್ನಭೈರಾದೇವಿ
ಗೇರುಸೊಪ್ಪದಲ್ಲಿ ಚತುರ್ಮುಖ ಬಸದಿ

ಅವಳ ಆಳ್ವಿಕೆಯ ಮಿರ್ಜಾನ್ ಕೋಟೆ ಮತ್ತು ಕಾನೂರು ಕೋಟೆಯ ಅವಶೇಷಗಳನ್ನು ಈಗಲೂ ಕಾಣಬಹುದು. ಅವಳು 1562 ರಲ್ಲಿ ಕಾರ್ಕಳದಲ್ಲಿ ಚತುರ್ಮುಖ ಬಸದಿಯನ್ನು ನಿರ್ಮಿಸಿದಳು . ಪೋರ್ಚುಗೀಸರ ಮತಾಂತರದಿಂದ ತಪ್ಪಿಸಿಕೊಳ್ಳಲು ಚೆನ್ನಭೈರಾದೇವಿಯ ರಾಜ್ಯದಲ್ಲಿ ಆಶ್ರಯ ಪಡೆದಿದ್ದ ಸಾರಸ್ವತ ಬ್ರಾಹ್ಮಣರು ಮತ್ತು ಕೊಂಕಣಿಗರಿಗೆ ರಾಣಿ ತನ್ನ ರಾಜ್ಯದಲ್ಲಿ ಆಶ್ರಯ ನೀಡಿದಳು. ಜೈನ ರಾಣಿಯು ಅನೇಕ ಶೈವ, ವೈಷ್ಣವ ಮತ್ತು ಶಕ್ತಿ ದೇವಾಲಯಗಳನ್ನು ನಿರ್ಮಿಸಲು ಮತ್ತು ನವೀಕರಿಸಲು ಸಹಾಯ ಮಾಡಿದರು. ಬಾಡೇರು ಅಥವಾ ವೇಣುಪುರದಲ್ಲಿರುವ ಯೋಗಾನರಸಿಂಹ ಸ್ವಾಮಿ ದೇವಸ್ಥಾನ ಮತ್ತು ವರ್ಧಮಾನ ಬಸದಿಯ ಜೀರ್ಣೋದ್ಧಾರಕ್ಕೂ ರಾಣಿ ಸಹಾಯ ಮಾಡಿದ್ದಾಳೆ. “ಕರ್ನಾಟಕ ಶಬ್ದಾನುಶಾಸನ” ಎಂಬ ವ್ಯಾಕರಣ ಗ್ರಂಥದ ಕರ್ತೃ ಸ್ವಾದಿ ದಿಗಂಬರ ಜೈನಮಠದ ಅಭಿನವ ಭಟ್ಟಾಕಳಂಕ ಈ ರಾಣಿಯ ಆಶ್ರಯದಲ್ಲಿದ್ದರು.

ಒಣಗಿಸಿದ ಕರಿ ಮೆಣಸಿಗೆ ಬದಲಾಗಿ ಬಿಳಿ ಮೆಣಸಿಗೆ ಬೇಡಿಕೆ ಬಂದಾಗ, ಘಟ್ಟದ ಮೇಲಿನ ಪ್ರದೇಶಗಳಲ್ಲಿ ಬೆಳೆದ ಹಸಿಮೆಣಸಿನ ಕಾಳುಗಳನ್ನು ಕೊಂಡು ಶೀಘ್ರದಲ್ಲಿ ಕಾನೂರು ಅಥವಾ ಗೇರುಸೊಪ್ಪೆಗೆ ದಾಟಿಸಲು ಆಕೆ ತನ್ನ ತನ್ನ ಆಡಳಿತವಿದ್ದ ಆವಿನಹಳ್ಳಿಯಿಂದ ಮಡೇನೂರು ಮೂಲಕ ಮೆಣಸುಗಾರಿಗೆ ಮತ್ತು ಭಾರಂಗಿಯಿಂದ ಮರಬಿಡಿ, ಹುಕ್ಕಲು ಮೂಲಕ ವಟ್ಟಕ್ಕಿ ಸಮೀಪದ ಸುಂಕದಮನೆ ಮೂಲಕ ಗೇರುಸೊಪ್ಪೆಗೆ ಹೆದ್ದಾರಿಯೊಂದನ್ನು ನಿರ್ಮಿಸಿದ್ದಳು. ಹಾಗಾಗಿಯೇ ಹುಕ್ಕಲಿನಲ್ಲಿರುವ ದಟ್ಟ ಅರಣ್ಯವನ್ನು ಇಂದಿಗೂ ಹೆದ್ದಾರಿ ಕಾನು ಎಂದು ಕರೆಯುವುದು. ಗೇರುಸೊಪ್ಪೆಗೂ ಮೊದಲು ಸುಂಕ ವಸೂಲು ಮಾಡುತ್ತಿದ್ದ ತಾಣವನ್ನು ಇಂದಿಗೂ ಸುಂಕದಮನೆ ಎಂದು ಕರೆಯುವುದು.

ಬಾಲ್ಯದಲ್ಲಿ ಆಕೆ ಅಡವಿ ಸುತ್ತುತ್ತಿದ್ದ ಕಾಲದಿಂದಲೂ ಚೆನ್ನಭೈರಾದೇವಿಯ ಕಣ್ಸೆಳೆದಿದ್ದ ಕಾನೂರು, ಅವಳ ಆಳ್ವಿಕೆ ಆರಂಭಗೊಳ್ಳುತ್ತಿದ್ದಂತೆ ಪುನರ್ನಿರ್ಮಾಣಗೊಂಡಿತ್ತು. ಸಾಂತರಸರ ಮಣ್ಣುದಿಬ್ಬಗಳ ಹೊದ್ದಿನಲ್ಲಿ ರಾಣಿ ಉರುಟುಗಲ್ಲು ಜಂಬಿಟ್ಟಿಗೆ ಮತ್ತು ಗ್ರಾನೈಟ್ ಶಿಲೆಗಳನ್ನು ಬಳಸಿ ಎತ್ತರವಾದ ದಪ್ಪ ಕಲ್ಲಿನ ಸುಭದ್ರ ಕೋಟೆ ಕಟ್ಟಿಸಿದಳು. ಗೋಡೆಯ ಮೇಲೆ ರಕ್ಷಣಾದಳದ ಸೈನಿಕರು ಸುಲಭದಲ್ಲಿ ಓಡಾಡಿ ತಮ್ಮ ಆಯುಧಗಳನ್ನು ಉಪಯೋಗಿಸಲು ಸಾಧ್ಯವಾಗುವಂತೆ ಮುನ್ನೆಚ್ಚರಿಕೆ ವಹಿಸಿದ್ದಳು. ವಿಶಾಲವಾದ ಗೋಡೆ ಕಟ್ಟೆಯ ಉದ್ದಕ್ಕೂ ಅಲ್ಲಲ್ಲಿ ಕಾವಲುಗೋಪುರಗಳು, ಬುರುಜುಗಳು ಪಹರೆ ಬಿಡಾರಗಳು ನಿರ್ಮಾಣಗೊಂಡವು.

ನಗಿರೆ, ಹದಿನಾರನೆಯ ಶತಮಾನದಲ್ಲಿ ದಕ್ಷಿಣ ಭಾರತದ ಅತ್ಯಂತ ಶ್ರೀಮಂತ ಸಂಸ್ಥಾನವೆಂದು ಹೆಸರಾಗಲು ಚೆನ್ನಭೈರಾದೇವಿಯ ವ್ಯವಹಾರ ಕೌಶಲವೇ ಕಾರಣವಾಗಿತ್ತು. ವರ್ತಕರು ಅನ್ಯ ರಾಜ್ಯಗಳಲ್ಲಿ ಖರೀದಿಸಿದ ವಸ್ತುಗಳನ್ನು ತನ್ನ ರಾಜ್ಯದಲ್ಲಿ ಮಾರಿ ಲಾಭಗಳಿಸಲು ಮುಕ್ತ ಪರವಾನಗಿ ಕೊಟ್ಟು ವ್ಯವಹಾರ ನೈಪುಣ್ಯವನ್ನು ಮೆರೆದ ರಾಣಿ, ತನ್ನ ರಾಜ್ಯದ ವರ್ತಕರಿಗೆ ವಿಧಿಸುವ ಅಗ್ಗದ ಸುಂಕವನ್ನೇ ಅನ್ಯ ರಾಜ್ಯಗಳ ವರ್ತಕರಿಗೂ ವಿಸ್ತರಿಸಿ, ಭಟ್ಕಳ, ಬೈಂದೂರು, ಹೊನ್ನಾವರ, ಕುಮುಟ, ಮಿರ್ಜಾನ, ಅಂಕೋಲ, ಕಾರವಾರ, ಹಳ್ಳಿಕೇರಿ ರೇವುಗಳನ್ನು ವ್ಯಾಪಾರ ಕೇಂದ್ರಗಳಾಗಿ ಪರಿವರ್ತಿಸಿ, ರಾಜ್ಯದಲ್ಲಿ ಸದಾ ವಾಣಿಜ್ಯ ಚಟುವಟಿಕೆ ನಡೆಯುವಂತೆ ನೋಡಿಕೊಂಡ ಚತುರೆ.

ಪೋರ್ಚುಗೀಸರಿಂದ ' ದಿ ಕ್ವೀನ್ ಆಫ್ ಪೆಪ್ಪರ್ ' ಎಂದು ಕರೆಸಿಕೊಂಡ ರಾಣಿ ಚೆನ್ನಭೈರಾದೇವಿ
ಹೊನ್ನಾವರದ ಕಾನೂರು

ಎತ್ತರವಾದ ಸ್ಥಳದಲ್ಲಿ ನೇಮೀಶ್ವರ ಚೈತ್ಯಾಲಯವನ್ನೂ ಪಕ್ಕದಲ್ಲೊಂದು ಶಿವಾಲಯವನ್ನೂ ಕಟ್ಟಿಸಿದಳು. ಚೈತ್ಯಾಲಯದ ಎದುರು ನಗಿರೆಯ ಹಿರಿಯ ವ್ಯಾಪಾರಿಯಾಗಿದ್ದ ಯೋಜನೆ ಶೆಟ್ಟಿಯ ಮೊಮ್ಮಗನು ಒಂದು ಸುಂದರ ಮಾನಸ್ತಂಭವನ್ನೂ ಅದರ ತುದಿಯಲ್ಲಿ ಸುವರ್ಣ ಕಳಶವನ್ನೂ ಇಡಿಸಿದನು. ಈ ಮಾನಸ್ತಂಭದ ತುದಿಯಲ್ಲಿ ದೀಪ ಬೆಳಗಿದರೆ ಅದು ಗೇರುಸೊಪ್ಪೆಗೆ ಕಾಣುವಷ್ಟು ಎತ್ತರವಾಗಿತ್ತು ಎನ್ನಲಾಗುತ್ತಿತ್ತು.

ಕೋಟೆಯ ಬಾಗಿಲಿನಲ್ಲಿ ವಿಶಾಲವಾದ ಕೋಟೆ ಆಂಜನೇಯ ಸ್ವಾಮಿ ದೇಗುಲವನ್ನೂ ಅದರ ಪಕ್ಕದಲ್ಲಿ ಶತ್ರುಗಳು ಹಠಾತ್ ದಾಳಿ ನಡೆಸಿದರೆ ರಕ್ಷಣೆ ಪಡೆಯಲು ನೆಲಮಾಳಿಗೆಯನ್ನೂ ಅಲ್ಲಿಂದ ಗೇರುಸೊಪ್ಪೆಗೆ ಗುಪ್ತಮಾರ್ಗವನ್ನೂ ನಿರ್ಮಿಸಿದಳು. ತನಗೆ ಅತ್ಯಂತ ಪ್ರಿಯವಾದ ಏಳು ಸುತ್ತಿನ ಕೋಟೆಯ ಕಾನೂರಿನಲ್ಲಿ ಒಂದು ಸುಂದರವಾದ ರಾಣಿವಾಸವನ್ನು ನಿರ್ಮಿಸಿ ಆಗಾಗ ಬಂದು ಅದರಲ್ಲಿ ವಾಸ್ತವ್ಯ ಹೂಡುತ್ತಿದ್ದಳು.

ರಾಜ್ಯದುದ್ದಕ್ಕೂ ಕೋಟೆ, ಕೆರೆ ಬಾವಿ ರಸ್ತೆ ಕಾಲುವೆ ಸಂತೆಕಟ್ಟೆಗಳನ್ನು ನಿರ್ಮಿಸಿ ಅಥವಾ ದುರಸ್ತಿಗೊಳಿಸಿ ರಾಜ್ಯದ ಸಮೃದ್ಧಿಗೆ ಕಾರಣಳಾದವಳು. ನಾಡಿನ ಹಲವೆಡೆ ದೇವಾಲಯ, ಬಸಿದಿ ಚೈತ್ಯಾಲಯಗಳನ್ನು ನಿರ್ಮಿಸಿದವಳು. ಚತುರ್ಮುಖ ಬಸಿದಿಯಂತಹ ಅಪರೂಪದ ನಿರ್ಮಾಣಕ್ಕೆ ಇಂಬುಗೊಟ್ಟು ನಗಿರೆಯನ್ನು ನಗಿರೆ- ಬಸ್ತಿಕೇರಿಯಾಗಿಸಿದವಳು. ನೂರಾರು ದೇಗುಲ ಮತ್ತು ಬಸಿದಿಗಳಿಗೆ ದಾನ ಧರ್ಮ ದತ್ತಿ ಉಂಬಳಿಗಳನ್ನಿತ್ತು ಸಮಾಜದಲ್ಲಿ ಧರ್ಮಕಾರ್ಯ ಸುಸ್ಥಿರವಾಗುವಂತೆ ನಡೆದುಕೊಂಡವಳು.

ಹಿರಿಯರು ಆಕೆಯನ್ನು ಶರಾವತಿ ಕಣಿವೆಯ ಒಡತಿಯೆಂದೇ ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತಿದ್ದರು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

2 Comments

  1. Z reguły najważniejsze zasady wypłat i gry krupiera napisane są na stole do blackjacka, pomiędzy boxami graczy a kartami krupiera. Udało Ci się znaleźć niższą cenę? Daj nam znać. Wprawdzie nie zawsze możemy zaoferować zgłoszoną cenę, jednak weźmiemy Twoją opinię pod uwagę, aby zagwarantować konkurencyjność naszych cen. Postawmy się w sytuacji, kiedy to nie my próbujemy blefować kogoś, a po prostu nie chcemy dać się zmanipulować. Jak się bronić i jak rozczytywać przeciwnika? Chciałbym rozbić tę sekcję na dwie podsekcje: wnioskowanie tego, co oponent ma w ręce oraz zagrywki psychologiczne. Inną możliwością jest wypełnienie kwestionariusza, w którym podajesz swój e-mail oraz problem. Działa on dokładnie tak samo, jak wysłanie maila, który również jest dostępny. Możesz więc kierować swoje pytania na wiele sposobów, a odpowiedź na nie powinna pojawić się bardzo szybko. Pracownicy kasyna są znani z tego, że są mili, odpowiadają na pytania nawet niezarejestrowanych użytkowników i starają się być jak najbardziej życzliwi
    https://asatan.com/users/2709
    W miejscowościach do 250 000 mieszkańców może być tylko jedno kasyno, a z każdą kolejną rozpoczętą ćwiartką miliona limit powiększa się o 1 miejsce. W Internecie istnieją tysiące kasyn online. Wszystkie one są konkurencją, ponieważ wszystkie chcą, abyś był ich graczem. Kasyna te wykorzystują bonusy, promocje, gry, programy lojalnościowe i cashback, aby przyciągnąć nowych graczy. Bonusy są bardzo ważne dla nowych graczy i dlatego właśnie kasyna online je oferują. Używają one bonusów, aby przyciągnąć graczy. IceCasino 50 darmowych spinów przy rejestracji jest bardzo atrakcyjnym bonusem, ponieważ można wygrać prawdziwe pieniądze bez dokonywania wpłaty. Gry hazardowe za darmo 77777 to jedne z najpopularniejszych rozgrywek wybieranych przez graczy na automatach do gier we wszystkich kasynach online. Niegdyś święciły triumfy w naziemnych salonach gier, pubach i knajpach. Dzisiaj jednorękich bandytów ze szczęśliwymi siódemkami można spotkać w każdym kasynie internetowym. Darmowe gry hot spot 77777 cieszą się uznaniem wśród użytkowników ze wszystkich grup wiekowych, bez względu na stopień zaawansowania i doświadczenie w graniu. Hotspoty gwarantują przypływ pozytywnych emocji i wzrost adrenaliny. Podpowiemy Ci, dlaczego tak jest.

ಗರ್ಭಕೋಶದ ಆರೋಗ್ಯಕ್ಕೆ ಹಲವಾರು ಪರಿಹಾರ

ಗರ್ಭಕೋಶದ ಆರೋಗ್ಯಕ್ಕೆ ಹಲವಾರು ಪರಿಹಾರಗಳು

ಭಾರತೀಯ ಸೇನಾ ದಿನಾಚರಣೆ

ಜನವರಿ 15ರಂದು, ಭಾರತೀಯ ಸೇನಾ ದಿನಾಚರಣೆಯನ್ನಾಗಿ ಆಚರಿಸುತ್ತೇವೆ