in

ಪುನೀತ್ ಪರ್ವ ಅದ್ದೂರಿಯಾಗಿ ನಡೆಯಿತು

ಪುನೀತ್ ಪರ್ವ ಅದ್ದೂರಿಯಾಗಿ ನಡೆಯಿತು

ಡಾ. ರಾಜ್​ ಕುಟುಂಬದ ಎಲ್ಲರೂ ಸೇರಿ ‘ಪುನೀತ ಪರ್ವ’ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಶಿವರಾಜ್​ಕುಮಾರ್​, ಗೀತಾ ಶಿವರಾಜ್​ಕುಮಾರ್​, ಅಶ್ವಿನಿ ಪುನೀತ್​ ರಾಜ್​ಕುಮಾರ್​ ಸೇರಿದಂತೆ ಎಲ್ಲರೂ ಇದರಲ್ಲಿ ಭಾಗಿ ಆಗಿದ್ದಾರೆ.

ಬಹಳ ಅದ್ದೂರಿಯಾಗಿ ‘ಪುನೀತ ಪರ್ವ’ಕಾರ್ಯಕ್ರಮ ನಡೆದಿದೆ. ಡಾ. ರಾಜ್​ಕುಮಾರ್​ ಕುಟುಂಬದ ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಎಲ್ಲರೂ ಸೇರಿ ‘ಬೊಂಬೆ ಹೇಳುತೈತೆ..’ ಗೀತೆಯನ್ನು ಹೇಳುವ ಮೂಲಕ ಪುನೀತ್​ ರಾಜ್​ಕುಮಾರ್​​ಗೆ ನಮನ ಸಲ್ಲಿಸಿದರು. ಈ ವೇಳೆ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರು ಕಣ್ಣೀರು ಹಾಕಿದರು. ಇಡೀ ವಾತಾವರಣ ತುಂಬ ಭಾವುಕವಾಗಿತ್ತು. ಅ.28 ರಂದು ಚಿತ್ರಮಂದಿರದಲ್ಲಿ ‘ಗಂಧದ ಗುಡಿ’ ಸಾಕ್ಷ್ಯಚಿತ್ರ ಬಿಡುಗಡೆ ಆಗಲಿದೆ.

ಪುನೀತ್ ಪರ್ವ ಅದ್ದೂರಿಯಾಗಿ ನಡೆಯಿತು
ಗಂಧದ ಗುಡಿ ಪೋಸ್ಟರ್

ಪುನೀತ್​ ರಾಜ್​ಕುಮಾರ್​ ಅವರಿಗೆ ‘ಪುನೀತ ಪರ್ವ’ ಕಾರ್ಯಕ್ರಮದಲ್ಲಿ ಗೌರವ ಸಲ್ಲಿಸಲಾಯಿತು. ಸೂರ್ಯ, ಅಖಿಲ್​ ಅಕ್ಕಿನೇನಿ, ರಾಣಾ ದಗ್ಗುಬಾಟಿ, ಸಿದ್ದಾರ್ಥ್​ ಸೇರಿದಂತೆ ಅನೇಕ ನಟರ ಈ ಕಾರ್ಯಕ್ರಮಕ್ಕೆ ಹಾಜರಿ ಹಾಕಿದರು. ಕಮಲ್​ ಹಾಸನ್​ ಮತ್ತು ಅಮಿತಾಭ್​ ಬಚ್ಚನ್​​ ಅವರು ವಿಡಿಯೋ ಮೂಲಕ ಶುಭ ಹಾರೈಸಿದರು. ರಮ್ಯಾ, ಪ್ರಭುದೇವ, ಶಿವರಾಜ್​ಕುಮಾರ್​ ಮುಂತಾದವರು ವೇದಿಕೆ ಮೇಲೆ ಡ್ಯಾನ್ಸ್​ ಮಾಡಿ ಪುನೀತ್​ಗೆ ನಮನ ಸಲ್ಲಿಸಿದರು. ಲಕ್ಷಾಂತರ ಅಭಿಮಾನಿಗಳು ಇದರಲ್ಲಿ ಭಾಗಿ ಆದರು. ತುಂಬ ಅಚ್ಚುಕಟ್ಟಾಗಿ ದೊಡ್ಮನೆ ಕುಟುಂಬದವರು ಈ ಕಾರ್ಯಕ್ರಮ ನಡೆಸಿಕೊಟ್ಟರು.

ನಟನಾಗಿ ಮಾತ್ರವಲ್ಲದೇ ಸಾಮಾಜಿಕ ಕಾರ್ಯಗಳ ಮೂಲಕವೂ ಪುನೀತ್​ ರಾಜ್​ಕುಮಾರ್ ಅವರು​​ ಜನರ ಆಶೀರ್ವಾದ ಪಡೆದಿದ್ದರು. ಅವರು ಮಾಡಿದ ಕಾರ್ಯಗಳು ಎಲ್ಲರಿಗೂ ಮಾದರಿ ಆಗಿವೆ. ಅವರನ್ನೇ ಸ್ಫೂರ್ತಿಯಾಗಿ ಇಟ್ಟುಕೊಂಡು ಅನೇಕರು ಹಲವು ಜನಪರ ಕಾರ್ಯಗಳನ್ನು ಮಾಡುತ್ತಾ ಇದ್ದಾರೆ. ಅದೇ ರೀತಿ ನಟ ಪ್ರಕಾಶ್​ ರೈ ಅವರು ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಆಂಬ್ಯುಲೆನ್ಸ್ ಸೇವೆ ನೀಡಲು ತೀರ್ಮಾನಿಸಿದರು. ಅದಕ್ಕಾಗಿ ದೊಡ್ಮನೆ ಕುಟುಂಬ ಕೂಡ ಸಾಥ್​ ನೀಡಿದೆ. ಶಿವರಾಜ್​ಕುಮಾರ್​ ಫ್ಯಾಮಿಲಿಯಿಂದ ಒಂದು ಆಂಬ್ಯುಲೆನ್ಸ್ ನೀಡಲಾಗಿದೆ. ಅದೇ ರೀತಿ ‘ಮೆಗಾ ಸ್ಟಾರ್​’ ಚಿರಂಜೀವಿ, ಕಾಲಿವುಡ್​ ನಟ ಸೂರ್ಯ ಕೂಡ ಆಂಬ್ಯುಲೆನ್ಸ್ ನೀಡುವ ಮೂಲಕ ತಮ್ಮ ಸಹಾಯ ಹಸ್ತ ಚಾಚಿದ್ದಾರೆ. ‘ಪುನೀತ ಪರ್ವ’ ಕಾರ್ಯಕ್ರಮದ ವೇಳೆ ಯಶ್​ ಕೂಡ ಇದಕ್ಕೆ ತಮ್ಮ ಸಹಕಾರ ಇದೆ ಎಂಬುದನ್ನು ಘೋಷಿಸಿದರು.

ಪುನೀತ್ ಪರ್ವ ಅದ್ದೂರಿಯಾಗಿ ನಡೆಯಿತು
ಶಿವಣ್ಣ ನೃತ್ಯ ಪ್ರದರ್ಶನ ನೀಡಿದರು

ಅಪ್ಪು​ ಹೆಸರಿನಲ್ಲಿ ರಾಜ್ಯಾದ್ಯಂತ ಆಂಬ್ಯುಲೆನ್ಸ್ ಸೇವೆ; ಕೈ ಜೋಡಿಸಿದ ಯಶ್​, ಸೂರ್ಯ, ಪ್ರಕಾಶ್​ ರೈ
ಬಡವರಿಗಾಗಿ ಕರ್ನಾಟಕದಾದ್ಯಂತ ‘ಅಪ್ಪು ಎಕ್ಸ್​ಪ್ರೆಸ್​ ಆಂಬ್ಯುಲೆನ್ಸ್’ ಓಡಾಡಲಿದೆ. ಅದಕ್ಕಾಗಿ ಯಶ್​, ಪ್ರಕಾಶ್​ ರೈ, ಸೂರ್ಯ, ಚಿರಂಜೀವಿ, ಶಿವಣ್ಣ ಮುಂತಾದವರು ಕೈ ಜೋಡಿಸಿದ್ದಾರೆ.

ಪುನೀತ್​ ರಾಜ್​ಕುಮಾರ್​ ಬಗ್ಗೆ ಬರೀ ಮಾತನಾಡುವುದಲ್ಲ. ಏನಾದರೂ ಮಾಡಬೇಕು ಎಂಬುದು ಪ್ರಕಾಶ್​ ರಾಜ್​ ಅವರು ಆಶಯ. ಅದರ ಫಲವಾಗಿಯೇ ಕಾರ್ಯರೂಪಕ್ಕೆ ಬಂದಿರುವುದು ಅಪ್ಪು ಹೆಸರಿನ ಆಂಬ್ಯುಲೆನ್ಸ್ ಸೇವೆ. ಅದಕ್ಕೆ ಅನೇಕ ಸ್ಟಾರ್​ ನಟರ ಕೈ ಜೋಡಿಸಿರುವುದು ಶ್ಲಾಘನೀಯ. ‘ಬಡವರಿಗೋಸ್ಕರ ಕರ್ನಾಟದಲ್ಲಿ ಅಪ್ಪು ಎಕ್ಸ್​ಪ್ರೆಸ್​ ಎಂಬ ಆಂಬ್ಯುಲೆನ್ಸ್ ಓಡಬೇಕು ಎಂಬ ಆಸೆ ನನ್ನದು ಎಂದು ಶಿವಣ್ಣನ ಬಳಿ ಹೇಳಿದೆ. ಅವರ ಕುಟುಂಬದ ಕಡೆಯಿಂದ ಒಂದು ಆಂಬ್ಯುಲೆನ್ಸ್ ನೀಡಿದರು’ ಎಂದಿದ್ದಾರೆ ಪ್ರಕಾಶ್​ ರೈ.

ಯಶ್​ ಅವರು ಈ ಬಗ್ಗೆ ವೇದಿಕೆಯಲ್ಲೇ ಮಾತಾಡಿದರು. ‘ಇಡೀ ಕರುನಾಡಿಗೆ ಪ್ರಕಾಶ್​ ರಾಜ್​ ಅವರು ಆಂಬ್ಯುಲೆನ್ಸ್ ನೀಡಲು ಮುಂದಾಗಿರುವುದು ಈಗ ಗೊತ್ತಾಯಿತು. ಈಗ ಎಷ್ಟು ಆಂಬ್ಯುಲೆನ್ಸ್ ಆಗಿದೆಯೋ ಅದನ್ನು ಬಿಟ್ಟು ಇನ್ನುಳಿದ ಎಲ್ಲ ಜಿಲ್ಲೆಗೂ ನಾನು ಮತ್ತು ಕೆವಿಎನ್​ ಪ್ರೊಡಕ್ಷನ್​ನವರು ಜೊತೆ ಸೇರಿ ಆಂಬ್ಯುಲೆನ್ಸ್ ನೀಡುತ್ತೇನೆ’ ಎಂದು ಯಶ್​ ಘೋಷಿಸಿದರು.

‘ಬೊಂಬೆ ಹೇಳುತೈತೆ..’ ಗೀತೆಯನ್ನು ಹೇಳುವ ಮೂಲಕ ಪುನೀತ್​ ರಾಜ್​ಕುಮಾರ್​​ಗೆ ನಮನ ಸಲ್ಲಿಸಿದರು. ಈ ವೇಳೆ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರು ಕಣ್ಣೀರು ಹಾಕಿದರು.

ಪುನೀತ್ ಪರ್ವ ಅದ್ದೂರಿಯಾಗಿ ನಡೆಯಿತು
ಅನೇಕ ಗಣ್ಯರು ಪುನೀತ್ ಬಗ್ಗೆ ಭಾವುಕರಾದರು

ಸುಧಾಮೂರ್ತಿ ಅವರ ಬಗ್ಗೆ ಪುನೀತ್​ ರಾಜ್​ಕುಮಾರ್​ ಅವರಿಗೆ ಅಪಾರ ಗೌರವ ಇತ್ತು. ಆ ಘಟನೆಗಳನ್ನು ‘ಪುನೀತ ಪರ್ವ’ ವೇದಿಕೆ ಮೇಲೆ ಸುಧಾಮೂರ್ತಿ ನೆನಪಿಸಿಕೊಂಡರು.

ಬಹುಭಾಷಾ ನಟ ಶರತ್​ ಕುಮಾರ್​ ಅವರಿಗೂ ಪುನೀತ್​ ರಾಜ್​ಕುಮಾರ್​ ಜೊತೆ ಒಡನಾಟ ಇತ್ತು. ಅಪ್ಪು ಬಗ್ಗೆ ಅವರು ಕೂಡ ವೇದಿಕೆಯ ಮೇಲೆ ಪ್ರೀತಿಯ ಮಾತುಗಳನ್ನು ಆಡಿದರು. ಹಾಡಿನ ಮೂಲಕ ನಮನ ಸಲ್ಲಿಸಿದರು.

ಬಹುಭಾಷಾ ನಟ ಶರತ್​ ಕುಮಾರ್​ ಅವರಿಗೂ ಪುನೀತ್​ ರಾಜ್​ಕುಮಾರ್​ ಜೊತೆ ಒಡನಾಟ ಇತ್ತು. ಅಪ್ಪು ಬಗ್ಗೆ ಅವರು ಕೂಡ ವೇದಿಕೆಯ ಮೇಲೆ ಪ್ರೀತಿಯ ಮಾತುಗಳನ್ನು ಆಡಿದರು. ಹಾಡಿನ ಮೂಲಕ ನಮನ ಸಲ್ಲಿಸಿದರು.

ಗಾಯಕ ವಿಜಯ್​ ಪ್ರಕಾಶ್​ ಅವರು ವೇದಿಕೆಯಲ್ಲಿ ಪುನೀತ್​ ನೆನಪಿನಲ್ಲಿ ಕವಿತೆ ಓದಿದರು. ಬಳಿಕ ‘ಬೊಂಬೆ ಹೇಳುತೈತೆ..’ ಗೀತೆಯನ್ನು ಹಾಡಿ ಎಲ್ಲರನ್ನೂ ರಂಜಿಸಿದರು.

ಧ್ರುವ ಸರ್ಜಾ, ರಾಜ್​ ಬಿ. ಶೆಟ್ಟಿ, ದುನಿಯಾ ವಿಜಯ್​ ಮುಂತಾದ ಕಲಾವಿದರು ಕೂಡ ಪುನೀತ್​ ರಾಜ್​ಕುಮಾರ್​ ಜೊತೆಗಿನ ನೆನಪುಗಳನ್ನು ಮೆಲುಕು ಹಾಕಿದರು. ಮಾತನಾಡುತ್ತ ದುನಿಯಾ ವಿಜಯ್​ ಭಾವುಕರಾದರು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಸೂರ್ಯವಾದ್ಯ ಮತ್ತು ಚಂದ್ರವಾದ್ಯ

ಸೂರ್ಯವಾದ್ಯ ಮತ್ತು ಚಂದ್ರವಾದ್ಯ

ಡೊಳ್ಳು ಕುಣಿತ

ಡೊಳ್ಳು ಕುಣಿತದ, ಡೊಳ್ಳಿನ ಇತಿಹಾಸ