in ,

ಕಾಂತಾರ ಸಿನಿಮಾದಲ್ಲಿ ಕೊನೆಯಲ್ಲಿ ಬರುವ ಗುಳಿಗ ದೈವದ ಕಥೆ

ಗುಳಿಗ ದೈವದ ಕಥೆ
ಗುಳಿಗ ದೈವದ ಕಥೆ

ತುಳುನಾಡು ಹಲವಾರು ಜಾನಪದ ಸಾಂಸ್ಕ್ರತಿಕ ಸಂಪನ್ನಗಳ ನೆಲೆಬೀಡು. ತಮ್ಮದೇ ಆದ ವಿಶಿಷ್ಟ ಜಾನಪದ ಕಲೆಗಳನ್ನು, ನಂಬಿಕೆಗಳನ್ನು ಉಳಿಸಿಕೊಂಡು, ಬೆಳೆಸಿಕೊಂಡು ಬಂದಿರುವ ತಾಣ ತುಳುನಾಡೆಂದರೆ ತಪ್ಪಾಗಲಾರದು. ಅದರಲ್ಲಿ ಒಂದು ನಂಬಿಕೆಯ ಅಧಾರದಲ್ಲಿ ಜನಪದ ಕಲೆಯನ್ನು ಮಿಶ್ರಯಿಸಿಕೊಂಡು ಬಂದಿರುವುದೇ ದೈವರಾಧನೆಯಾ ಭೂತಾರಾಧನೆ. ಅಸಂಖ್ಯಾತ ದೈವಗಳನ್ನು ನಂಬಿರುವಂತಹ ನಾಡು ನಮ್ಮ ತುಳುನಾಡು. ಅದನ್ನೇ “ಸಾರಮಂದಿ ದೈವ” ಅಥವಾ ಸಾರಮಾನ್ಯ ದೈವಗಳೆಂದು ಕರೆಯುತ್ತಿದವು. ಒಂದೇ ದೈವವು ಹಲವಾರು ನಾಮಾಂಕಿತದೊಂದಿಗೆ ಕರೆಯಲ್ಪಡುತ್ತದೆ.

ಕಾಂತಾರ ಸಿನಿಮಾದಲ್ಲಿ ಕೊನೆಯಲ್ಲಿ ಬರುವ ಗುಳಿಗ ದೈವದ ಕಥೆ
ಗುಳಿಗ ಹಸಿವೆಯಿಂದ ಪರಶಿವನ ಬಳಿ ಹೋಗುವ ದೃಶ್ಯ

ದೈವದ ಹೆಸರಿನೊಂದಿಗೆ ವಿಶೇಷ ಸ್ಥಳನಾಮ ಅಥವಾ ಕಾರ್ನಿಕದ ಹೆಸರು ಸೇರಿಕೊಂಡು ಕರೆಯಲ್ಪಡುತ್ತದೆ. ಗುಳಿಗ ದೈವವು ಕ್ಷೇತ್ರ ರಕ್ಷಣ ದೈವ ಎನ್ನುವುದಕ್ಕೆ ಹಲವಾರು ಪುರಾವೆಗಳನ್ನು ಒದಗಿಸಬಹುದು. ತುಳುನಾಡ ಜನರು ನಂಬಿಕೊಂಡು ಬರುವಂತಹ ಮಾರ್ಣಮಿಕಟ್ಟೆ ದೇವಿಯ ಸಾನಿಧ್ಯದಲ್ಲಿ ಆಯ್ ಗುಳಿಗ ಅಥವಾ ಐ ಗುಳಿಗ ಎಂದು ನಂಬಿಕೊಂಡು ಬಂದ ದೈವವೆ ಈ ಗುಳಿಗ. ಇದಕ್ಕೆ ಪೌರಾಣಿಕ ಕಥೆ ಬರೆದವರ ಕಲ್ಪನೆ ಈ ರೀತಿ ಯಕ್ಷಗಾನದಲ್ಲಿ ತಿಳಿಸುತ್ತಾರೆ.ಯಕ್ಷ ಅಧಾರವಾಗಿ ಆದಿಶಕ್ತಿ ಪಾರ್ವತಿ ದೇವಿ ಸಪ್ತ ಕನ್ನಿಕೆಯರ ರೂಪತಾಳಿ ಭೂಲೋಕ ಸಂಚಾರಕ್ಕೆ ಹೊರಟಾಗ ಕರ್ಮಭೂಮಿಗೆ ಬರಲು ಸುರಗಂಗೆಯ ಮಾರ್ಗವಾಗಿ ಪಯಣವನ್ನು ಪ್ರಾರಂಭಿಸುತ್ತಾಳೆ. ಆಗ ಶಿವಗಣದಲ್ಲಿದ್ದ ಈ ಗಿಳಗನನ್ನು ನಾವಿಕನನ್ನಾಗಿ ನಿಯಮಿಸಿ ಶಿವಗಂಗೆಯಿಂದ ಹೊರಟು ಸಪ್ತ ಸಾಗರವನ್ನು ದಾಟಿ ಪವಿತ್ರವಾದ ಪರಶುರಾಮ ಸೃಷ್ಟಿ ತುಳುನಾಡಿಗೆ ಬರುವಾಗ ಇಲ್ಲಿಯ ಪವಿತ್ರತೆಯನ್ನು ಕಂಡು ವಿವಿಧ ಸ್ಥಳಗಳಲ್ಲಿ ಲಿಂಗರೂಪಿಯಾಗಿ ಕೊನೆ ನಿಲ್ಲುತ್ತಾಳೆ. ಆವಾಗ ಸ್ವಾಮಿ ಭಕ್ತಿ ಗುಳಿಗನಿಗೆ ತಾನಿರುವ ಕಡೆಯಲ್ಲಿ ಕ್ಷೇತ್ರ ರಕ್ಷಕನಾಗಿ ನೀನು ನೆಲೆ ನಿಲ್ಲು ಎಂದು ಅಪ್ಪಣೆ ಮಾಡುತ್ತಾಳೆ. ಈ ಹಿನ್ನಲೆಯಲ್ಲೂ ದೇವಿಯ ಸನ್ನಿಧಿಯ ಕ್ಷೇತ್ರಪಾಲನನ್ನು ಕೂಡ “ಗುಳಿಗ” ಎಂದು ನಂಬುತ್ತಾರೆ. ಇನ್ನು ಗುಳಿಗನ ಆಹಾರ ಆಚಾರಗಳೆಲ್ಲ ವಿಚಿತ್ರವಾದುದು. ಅವನನ್ನು “ಅಂಬರಮಲ್ಲೆ” ಬಯಕುನ ಸಂಚಾರದ ದೈವ ಎಂದು ನಂಬುತ್ತಾರೆ. “ಮಧುಮಾಂಸ”ವನ್ನು ಬಯಸುವವರು ದೂರ್ತದೈವ ಎಂದು ಕೂಡಾ ನಂಬುತ್ತಾರೆ ಗುಳಿಗನಿಗೆ ಹೇಳುತ್ತಾರೆ. ಇವನ ಕೃಪೆಯನ್ನು ಪಡೆಯಲು ನಂಬಿಕೆ ವರ್ಗದವರು ಬಂಟ ಕೋಳಿಯ ಹರಕೆಯನ್ನು ಹೇಳುತ್ತಾರೆ.

ಕಾಂತಾರ ಸಿನಿಮಾದಲ್ಲಿ ಕೊನೆಯಲ್ಲಿ ಬರುವ ಗುಳಿಗ ದೈವದ ಕಥೆ
ಗುಳಿಗ ಕೋಲ

ಹರಕೆಯ ಕೋಳಿಗಳನ್ನು ಹಸಿಯಾಗಿಯೇ ಕೊಂದು ರಕ್ತ ಹೀರಿ ಮಾಂಸ ತಿನ್ನುವ ದೈವ ಇದಾಗಿದೆ. ಈ ಹರಕೆಯ ಫಲವಾಗಿ ಹೊರಗಿರುವ ಸಾಕು ಪಶು ಪಕ್ಷಿಗಳನ್ನು ಮತ್ತು ನಂಬಿದವರನ್ನು ಹೊರಗಿನ ಕೆಟ್ಟ ಶಕ್ತಿಗಳು ಬಾಧಿಸದಂತೆ ರಕ್ಷಣೆ ಕೊಡುತ್ತೇನೆಂಬುದು ನಂಬಿಕೊಂಡು ಬಂದಿರುವವರ ಧೃಡ ವಿಶ್ವಾಸ. ಭಕ್ತ ಜನರನ್ನು ಒಟ್ಟುಗೂಡಿಸಿ “ಗಡುಪಾಡಿಗೆ” ಹೋಗಿ ಮಾರಿಯಮ್ಮನಿಗೆ ಭೇಟಿ ನೀಡಿ ಅವಳಿಗೆ(ಒಡತಿಗೆ) ಸಲ್ಲುವ ದ್ರವ್ಯಗಳನನ್ನು ಅರ್ಪಿಸಿ ಅವಳ ಕೃಪೆಯನ್ನು ಯಾಚಿಸಿ “ಮಾರಿ ದಂಡ್ಗ್ ಎದೆ ಕೊರ್ಪಿನ” ದೈವವಾಗಿ, ರೋಗ ರುಜಿನದಿಂದ ಊರನ್ನು ಪಾರುಮಾಡುವ ದೈವವೆಂದು ನಂಬಿಕೊಂಡು ಬಂದಿರುವ ದೈವ ಗುಳಿಗ. ತನ್ನ ಕಲೆಯ ಕಾರ್ಣಿಕದ ಮೂಲಕ ಜಾಗ ಜಾಗೆಯ ಹೆಸರನ್ನು ತನ್ನ ಹೆಸರೊಂದಿಗೆ ವಿಶೇಷಣವನ್ನಾಗಿ ಪಡೆದ, ಒಡೆಯನಿಗೆ(ಶಿವ) ದೂತನಾಗಿ, ನಂಬಿದ ಭಕ್ತರಿಗೆ ದಾತನಾಗಿ ಒಡತಿಯ ನಮ್ರ ಸೇವಕನಾಗಿ ಇಂದಿಗೂ ದುಷ್ಟ ಜನರ ಎದೆ ನಡುಗಿಸುವ ಭಕ್ತರ ಎದೆಯಾಂತರಾಳದ ಆಶೆಗಳನ್ನು ಪೂರೈಸುವ ಶಕ್ತಿದೈವವಾಗಿ ಮೆರೆಯುತ್ತಿರುವ ದೈವವೇ “ಗುಳಿಗ”. ಗುಳಿಗ ದೈವದ ವಿಧಗಳು : *ಜಾಗದ ಗುಳಿಗ *ಭೂಮಿ ಗುಳಿಗ *ಸಂಕೊಲಿಗೆ ಗುಳಿಗ *ಜೋಡು ಗುಳಿಗ *ಮಂತ್ರ ಗುಳಿಗ *ಪಾತಾಳ ಗುಳಿಗ *ಒರಿಮಾಣಿ ಗುಳಿಗ *ಆಕಾಶ ಗುಳಿಗ *ಚಾಮುಂಡಿ ಗುಳಿಗ *ರಾಜನ್ ಗುಳಿಗ *ಮಾರಣ ಗುಳಿಗ* ಅಂತ್ರ ಗುಳಿಗ *ನೆತ್ತೆ ಗುಳಿಗ *ಮುಳ್ಳು ಗುಳಿಗ *ಮಂತ್ರವಾದಿ ಗುಳಿಗ *ಬಂಡಾರಿ ಗುಳಿಗ *ಚೌಕಾರು ಗುಳಿಗ *ಗುಳಿಗ ಕೊರಗಜ್ಜ *ಮುಕಾಂಬಿ ಗುಳಿಗ

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಶ್ರೀ ಕ್ಷೇತ್ರ ಪಣೋಲಿಬೈಲು

ಶ್ರೀ ಕ್ಷೇತ್ರ ಪಣೋಲಿಬೈಲು

ಪದ್ಮಶ್ರೀ ಮಂಜಮ್ಮ ಜೋಗತಿ

ಜನಪದ ಅಕಾಡೆಮಿ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಿದ ಪದ್ಮಶ್ರೀ ಮಂಜಮ್ಮ ಜೋಗತಿ