in ,

ಫೆಬ್ರವರಿ 8 ರಂದು, ಭಾರತೀಯ ಗಜಲ್ ಗಾಯಕ ಮತ್ತು ಸಂಗೀತಗಾರಾದ ಜಗಜಿತ್ ಸಿಂಗ್ ಜನ್ಮದಿನ

ಭಾರತೀಯ ಗಜಲ್ ಗಾಯಕ ಮತ್ತು ಸಂಗೀತಗಾರಾದ ಜಗಜಿತ್ ಸಿಂಗ್ ಜನ್ಮದಿನ
ಭಾರತೀಯ ಗಜಲ್ ಗಾಯಕ ಮತ್ತು ಸಂಗೀತಗಾರಾದ ಜಗಜಿತ್ ಸಿಂಗ್ ಜನ್ಮದಿನ

ಜಗಜಿತ್ ಸಿಂಗ್, ಭಾರತೀಯ ಗಜಲ್ ಗಾಯಕ ಮತ್ತು ಸಂಗೀತಗಾರ. ಅವರನ್ನು ‘ಗಜಲ್ ರಾಜ’ ಎಂದೂ ಕರೆಯಲಾಗುತ್ತದೆ.

‘ಜಗಜಿತ್ ಸಿಂಗ್,’ ಪ್ರಮುಖ ಭಾರತೀಯ ಗಝಲ್ ಗಾಯಕ, ಸಂಯೋಜನೆಕಾರ, ಸಂಗೀತ ನಿರ್ದೇಶಕ, ಸಾಮಾಜಿಕ ಕಾರ್ಯಕರ್ತ ಮತ್ತು ಉದ್ಯಮಿ. ಗಝಲ್ ರಾಜ ಎಂದು ಜನಪ್ರಿಯರಾದ ಜಗಜಿತ್ ಸಿಂಗ್ ಅವರು ಪತ್ನಿ ಚಿತ್ರಾಸಿಂಗ್ ರ ಜತೆಯಲ್ಲಿ ಮನ್ನಣೆಗೆ ಪಾತ್ರರಾಗಿದ್ದಾರೆ. ಚಿತ್ರಾ ಸಿಂಗ್ , ೧೯೭೦ ಮತ್ತು ೧೯೮೦ರ ದಶಕಗಳಲ್ಲಿ ಇನ್ನೊಬ್ಬ ಪ್ರಖ್ಯಾತ ಭಾರತೀಯ ಗಝಲ್ ಗಾಯಕಿಯಾಗಿದ್ದರು. ಇವರಿಬ್ಬರು ಧ್ವನಿಮುದ್ರಿತ ಭಾರತೀಯ ಸಂಗೀತದ ಇತಿಹಾಸದಲ್ಲಿ ಪ್ರಪ್ರಥಮ ಯಶಸ್ವಿ ಜೋಡಿಯಾಗಿದ್ದಾರೆ. ಇವರಿಬ್ಬರನ್ನು ಒಟ್ಟಾಗಿ ಆಧುನಿಕ ಗಝಲ್ ಗಾಯನದ ಪ್ರವರ್ತಕರು ಎಂದು ಪರಿಗಣಿಸಲಾಗಿದೆ. ಭಾರತೀಯ ಚಲನಚಿತ್ರ ಸಂಗೀತ ಪ್ರಪಂಚದ ಹೊರಗೆ ಅತ್ಯಂತ ಯಶಸ್ವಿ ಧ್ವನಿಮುದ್ರಿತ ಗಾಯನದ ಕಲಾವಿದರು ಎಂದು ಪರಿಗಣಿಸಲಾಗಿದೆ. ಅವರು ಪಂಜಾಬಿ, ಹಿಂದಿ, ಉರ್ದು, ಬಂಗಾಳಿ, ಗುಜರಾತಿ, ಸಿಂಧಿ ಮತ್ತು ನೇಪಾಳಿ ಭಾಷೆಗಳಲ್ಲಿ ಹಾಡಿದ್ದಾರೆ.

ಫೆಬ್ರವರಿ 8 ರಂದು, ಭಾರತೀಯ ಗಜಲ್ ಗಾಯಕ ಮತ್ತು ಸಂಗೀತಗಾರಾದ ಜಗಜಿತ್ ಸಿಂಗ್ ಜನ್ಮದಿನ

ಜಗಜಿತ್ ಸಿಂಗ್ ಅವರು ಶ್ರೀ ಗಂಗಾನಗರ್, ರಾಜಸ್ಥಾನದಲ್ಲಿ ಅಮರ್ ಸಿಂಗ್ ದಿಮಾನ್ ಎಂಬುವವರಿಗೆ ಜನಿಸಿದರು. ಅಮರ್ ಸಿಂಗ್ ಸರ್ಕಾರಿ ನೌಕರರಾಗಿದ್ದು, ಭಾರತದ ಪಂಜಾಬಿನ ದಲ್ಲಾ ಗ್ರಾಮದ ನಿವಾಸಿಗಳು. ಅವರ ತಾಯಿ ಸಮ್ರಾಲಾದ ಒಟ್ಟಾಲನ್ ಗ್ರಾಮದ ಬಚ್ಚನ್ ಕೌರ್. ಅವರಿಗೆ ನಾಲ್ವರು ಸಹೋದರಿಯರು ಮತ್ತು ಇಬ್ಬರು ಸಹೋದರರಿದ್ದು, ಅವರ ಕುಟುಂಬದಲ್ಲಿ ‘ಜೀತ್’ ಎಂದೇ ಜಗಜಿತ್ ಹೆಸರಾಗಿದ್ದರು. To ಸಿಖ್ ಧರ್ಮಾಚರಣೆಯಲ್ಲಿ ಬೆಳೆದರು. ಅವರು ಶ್ರೀ ಗಂಗಾನಗರದ ಖಾಲ್ಸಾ ಪ್ರೌಢಶಾಲೆ ಯಲ್ಲಿ ಅಭ್ಯಸಿಸಿದರು ಮತ್ತು ಮೆಟ್ರಿಕ್ಯುಲೇಷನ್ ನಂತರ ಸರ್ಕಾರಿ ಕಾಲೇಜು,ಶ್ರೀ ಗಂಗಾನಗರದಲ್ಲಿ ವಿಜ್ಞಾನವನ್ನು ಅಭ್ಯಸಿಸಿದರು ಮತ್ತು ಜಲಂಧರ್ DAV ಕಾಲೇಜ್‌ನಲ್ಲಿ ಕಲೆಯಲ್ಲಿ ಪದವಿಯನ್ನು ಗಳಿಸಿದರು. ಹರ್ಯಾಣದ ಕುರುಕ್ಷೇತ್ರ ವಿಶ್ವವಿದ್ಯಾನಿಲಯದಿಂದ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದರು.’ಜಗಜಿತ್ ಸಿಂಗ್’ ಅವರು ಬಾಲ್ಯದ ದಿನಗಳಿಂದಲೂ ಸಂಗೀತದ ನಂಟು ಹೊಂದಿದ್ದರು. ಅವರು ಪಂಡಿತ್ ಚಗನ್‌ಲಾಲ್ ಶರ್ಮಾ ನೇತೃತ್ವದಲ್ಲಿ ‘ಗಂಗಾನಗರ’ದಲ್ಲಿ ಎರಡು ವರ್ಷ ಸಂಗೀತವನ್ನು ಕಲಿತರು. ನಂತರ ಅವರು ಖಯಾಲ್, ತುಮ್ರಿ ಮತ್ತು ದ್ರುಪದ್ ಸ್ವರೂಪಗಳ ಭಾರತೀಯ ಶಾಸ್ತ್ರೀಯ ಸಂಗೀತವನ್ನು ಸಾಯ್ನಿಯ ಘರಾನಾ ಶಾಲೆಯ ಉಸ್ತಾದ್ ಜಮಾಲ್ ಖಾನ್ಅವರಿಂದ ಕಲಿಯಲು ಆರು ವರ್ಷಗಳನ್ನು ಮುಡುಪಾಗಿಟ್ಟರು.

ಜಗಜಿತ್ ಸಿಂಗ್ ಅವರಿಗೆ ಗುಜರಾತಿ ಚಲನಚಿತ್ರದಲ್ಲಿ ಹಾಡುವಂತೆ ಆಹ್ವಾನಿಸಲಾಯಿತು. ಗುಜರಾತಿ ಚಲನಚಿತ್ರ ಧರತಿ ನಾ ಚೋರು ವನ್ನು ಸುರೇಶ್ ಅಮೀನ್ ನಿರ್ಮಾಣ ಮಾಡಿದ್ದರು. ಸುರೇಶ್ ಅಮೀನ್ ಅವರು ಜಗಜಿತ್ ಸಿಂಗ್ ಅವರಿಂದ “ಜೋಲಿ ವಾಲೆ ಬಾಬಾ” ಎಂದೇ ಪ್ರಖ್ಯಾತರಾಗಿದ್ದರು. ಏಕೆಂದರೆ ಅವರು ಹೋದ ಕಡೆಯೆಲ್ಲ ಹೆಗಲಿಗೆ ಕೆಂಪು ಬಣ್ಣದ ಚೀಲವನ್ನು ಒಯ್ಯುತ್ತಿದ್ದರು. ಸುರೇಶ್ ಅಮಿನ್ ಬರೋಡ-ಗುಜರಾತ್‌ ಮೂಲದವರಾಗಿದ್ದು, ಸ್ಕಾಡ್ ಕನ್ಸಲ್ಟೆಂಟ್ಸ್ ಪ್ರೈ. ಲಿ ಜತೆ ಸಂಬಂಧ ಹೊಂದಿದ್ದರು. ಸುರೇಶ್ ಅಮಿನ್ ಅವರು ೧೯೯೮ರಲ್ಲಿ ನಿಧನರಾದಾಗ, ಬರೋಡದ ಸ್ಕಾಡ್ ಕನ್ಸಲ್ಟೆಂಟ್ಸ್ ೧೯೯೮ಡಿಸೆಂಬರ್‌ನಲ್ಲಿ ಜಗಜಿತ್ ಸಿಂಗ್ ಅವರಿಂದ ನೇರ ಪ್ರಸಾರದ ಗಾನಗೋಷ್ಠಿಯನ್ನು ಆಯೋಜಿಸಿತು. ಜಗಜಿತ್ ಸಿಂಗ್ ಸ್ನೇಹಿತರು ಮಹಾರಾಜ್ ಎಂದು ಕರೆಯುತ್ತಿದ್ದರು. ಸುರೇಶ್ ಅಮಿನ್ ಅವರಿಗೆ ವಿಶೇಷ ಗೌರವ ಸಲ್ಲಿಸಿದರು ಹಾಗು ಸ್ಕಾಡ್ ಕನ್ಸಲ್ಟೆಂಟ್ಸ್ ಗಾನಗೋಷ್ಠಿಯಲ್ಲಿ “ಚಿಟ್ಟಿ ನ ಕೋಯಿ ಸಂದೇಶ್” ಎಂಬ ಗೀತೆಯನ್ನು ಹಾಡುವ ಮೂಲಕ ಸುರೇಶ್ ಅಮಿನ್ ಅವರಿಗೆ ಮುಡುಪಾಗಿಟ್ಟರು. ಸುರೇಶ್ ಅಮೀನ್ ಸಾವಿನ ಪರಿವೆಯಿಲ್ಲದಿರುವುದಕ್ಕೆ ಈ ಗೀತೆಯು ಸೂಕ್ತವಾಗಿ ಹೊಂದಾಣಿಕೆಯಾಗುತ್ತದೆ.

‘ಜಗಜಿತ್ ಸಿಂಗ್’ ಜನಪ್ರಿಯ ಗಾಯಕಿ ‘ಚಿತ್ರಾ ಸಿಂಗ್’ ಅವರನ್ನು ೧೯೬೯ರಲ್ಲಿ ವಿವಾಹವಾಗಿದ್ದು. ೧೯೯೦ರ ದಶಕದ ಆದಿಭಾಗದಲ್ಲಿ ಅವರ ಏಕೈಕ ಪುತ್ರ, ‘ವಿವೇಕ್’ ರಸ್ತೆ ಅಪಘಾತದಲ್ಲಿ ಅಸುನೀಗಿದ್ದ. ಜಗಜಿತ್ ಸಿಂಗರು, ‘ಮುಂಬೈನ ಬ್ರೀಚ್ ಕ್ಯಾಂಡಿ’ಯಲ್ಲಿ ವಿವೇಕ್ ಸಿಂಗ್ ಬೀದಿ(ಅವರ ಪುತ್ರನ ನೆನಪಿಗಾಗಿ ಮುಡುಪಾಗಿಟ್ಟ ರಸ್ತೆ)ಯಲ್ಲಿ ವಾಸಿಸುತ್ತಾರೆ. ೧೯೯೮ರ ಜನವರಿಯಲ್ಲಿ ಜಗಜಿತ್ ಸಿಂಗ್ ಅವರಿಗೆ ಪ್ರಥಮ ಹೃದಯಕ್ಕೆ ರಕ್ತಪೂರೈಕೆ ಕೊರತೆಯ ಹೃದಯಾಘಾತ ಉಂಟಾಗಿದ್ದರಿಂದ ಅವರು ಧೂಮಪಾನವನ್ನು ತ್ಯಜಿಸಬೇಕಾಯಿತು. ೨೦೦೭ರ ಅಕ್ಟೋಬರ್‌ನಲ್ಲಿ ರಕ್ತ ಪರಿಚಲನೆ ಸಮಸ್ಯೆಗಳಿಂದಾಗಿ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಹೀಗೆ ಮಾನಸಿಕವಾಗಿ,ದೈಹಿಕವಾಗಿ, ಝರ್ಝರಿತರಾಗಿದ್ದ ೭೦ ರ ಪ್ರಾಯದ ‘ಜಗಜಿತ್ ಸಿಂಗ್’, ೨೦೧೧ ರ ಅಕ್ಟೋಬರ್, ೧೦ ರ, ಬೆಳಿಗ್ಯೆ, ‘ಮುಂಬೈನ ಲೀಲಾವತಿ ಆಸ್ಪತ್ರೆ’ಯಲ್ಲಿ ಅಸುನೀಗಿದರು.

ಫೆಬ್ರವರಿ 8 ರಂದು, ಭಾರತೀಯ ಗಜಲ್ ಗಾಯಕ ಮತ್ತು ಸಂಗೀತಗಾರಾದ ಜಗಜಿತ್ ಸಿಂಗ್ ಜನ್ಮದಿನ
ಸಾದ್ಗಿಯ ಆಡಿಯೋ ಬಿಡುಗಡೆಯಲ್ಲಿ ಲತಾ ಮಂಗೇಶ್ಕರ್ ಅವರೊಂದಿಗೆ ಸಿಂಗ್

ದುರದೃಷ್ಟವಶಾತ್, ಅವರು ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ, ಜಗಜಿತ್ ಅವರ ಜೀವನದ ಅತ್ಯಂತ ಕೆಟ್ಟ ಹಿನ್ನಡೆಯನ್ನು ಎದುರಿಸಿದರು. 1990 ರಲ್ಲಿ, ಅವರು ಕಾರು ಅಪಘಾತದಲ್ಲಿ ಕೇವಲ 18 ವರ್ಷ ವಯಸ್ಸಿನ ತಮ್ಮ ಏಕೈಕ ಪುತ್ರ ವಿವೇಕ್ ಅನ್ನು ಕಳೆದುಕೊಂಡರು. ಅವರ ಪತ್ನಿ ಚಿತ್ರಾ ಸಿಂಗ್ ಅದರ ನಂತರ ವೃತ್ತಿಪರ ಗಾಯನವನ್ನು ತೊರೆದರು ಮತ್ತು ಜಗಜಿತ್ ಅವರು ತಮ್ಮ ಮೊದಲ ಪ್ರೀತಿ, ಸಂಗೀತಕ್ಕೆ ಮರಳಲು ಹಲವಾರು ವರ್ಷಗಳನ್ನು ತೆಗೆದುಕೊಂಡರು.

ವಾಸ್ತವವಾಗಿ ಹುಟ್ಟಿನಿಂದಲೇ ಜಗಮೋಹನ್ ಎಂದು ಹೆಸರಿಸಲಾಯಿತು, ಜಗಜಿತ್ ಸಿಂಗ್ ಅವರ ಧರ್ಮನಿಷ್ಠ ಸಿಖ್ ತಂದೆ ಅವರ ನಾಮಧಾರಿ ಗುರುಗಳ ಸಲಹೆಯ ಮೇರೆಗೆ ಅವರಿಗೆ ಜಗಜಿತ್ ಎಂದು ಮರುನಾಮಕರಣ ಮಾಡಿದರು.

ಜಗಜಿತ್ ಸಿಂಗ್ ಅವರು ಅನೇಕ ಗಜಲ್‌ಗಳನ್ನು ಹಾಡಿದರು ಮತ್ತು ಅವರ ಕ್ರೆಡಿಟ್‌ಗೆ ರೋಮಾಂಚಕ, ಶ್ರೀಮಂತ ಚಲನಚಿತ್ರವಲ್ಲದ ಧ್ವನಿಮುದ್ರಿಕೆಯನ್ನು ಹೊಂದಿದ್ದರು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

2 Comments

ಭಾರತೀಯ ಕರಕುಶಲ ಕಲೆಗಳು

ಕೆಲವೊಂದು ಭಾರತೀಯ ಕರಕುಶಲ ಕಲೆಗಳು

ಪ್ರಸಿದ್ದ ಪಕ್ಷಿ ವೀಕ್ಷಣಾ ತಾಣಗಳು

ಕರ್ನಾಟಕದ ಪ್ರಸಿದ್ದ ಪಕ್ಷಿ ವೀಕ್ಷಣಾ ತಾಣಗಳು