in ,

ಕರ್ಪೂರ ತಯಾರಿಕೆ

ಕರ್ಪೂರ
ಕರ್ಪೂರ

ಕರ್ಪೂರವು ಒಂದು ಬಿಳಿ, ಕೊಂಚ ಜಿಗುಟಾದ ತೀಕ್ಷ್ನವಾಸನೆಯುಳ್ಳ ದ್ರವ್ಯ. ರಾಸಾಯನಿಕವಾಗಿ ಇದು ಟರ್ಪೆನಾಯ್ಡ್ ಗುಂಪಿಗೆ ಸೇರಿದೆ. ಕರ್ಪೂರವು ಬೋರ್ನಿಯೋ ಮತ್ತು ಟೈವಾನ್‌ಗಳಲ್ಲಿ ಹೆಚ್ಚಾಗಿರುವ ಕ್ಯಾಂಫರ್ ಲಾರೆಲ್ ಎಂಬ ಮರಗಳ ತಿರುಳಿನಲ್ಲಿ ಸಿಗುತ್ತದೆ. ಅಲ್ಲದೆ ಈಗ ಕರ್ಪೂರವನ್ನು ಸಾಮಾನ್ಯವಾಗಿ ರಾಸಾಯನಿಕ ಸಂಯೋಜನೆಯಿಂದ ಕೃತಕವಾಗಿ ಉತ್ಪಾದಿಸಲಾಗುತ್ತಿದೆ. ಟರ್ಪೆಂಟೈನ್ ತೈಲದಿಂದ ಸಹ ಕರ್ಪೂರವನ್ನು ಉತ್ಪಾದಿಸಬಹುದು.

ಸಾಮಾನ್ಯವಾಗಿ ೫-೬ ವರ್ಷಗಳ ವರೆಗೆ ಬೆಳೆದ ಕರ್ಪೂರದ ಮರದ ಎಲೆ ಹಾಗೂ ಬೊಡ್ಡೆಗಳನ್ನು ಕಡಿದು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿ ಅದರ ಹುಡಿಯನ್ನು ತಯಾರಿಸುತ್ತಾರೆ. ಹುಡಿರಾಶಿಯನ್ನು ದೊಡ್ಡ ಕೊಳಾಯಿಯಲ್ಲಿ ಹಾಕಿ ಕುಲುಮೆಯಲ್ಲಿ ಕಾಯಿಸುತ್ತಾರೆ. ಆಗ ಈ ಹುಡಿ ಬೇಗನೆ ಬಾಷ್ಪೀಭವನ ಹೊಂದುವಂಥ ವಸ್ತುವಾಗುತ್ತದೆ. ತರುವಾಯ ಇದನ್ನು ಹಬೆಯೊಂದಿಗೆ ಆಸವೀಕರಿಸುವುರು. ಹೀಗೆ ದೊರೆತ ದ್ರಾವಣಕ್ಕೆ ತಂಪು ತಗುಲಿಸಲು ಇಚ್ಛಿತ ಕರ್ಪೂರ ಬಣ್ಣರಹಿತ ಸ್ಫಟಿಕದ ರೂಪದಲ್ಲಿ ದೊರೆಯುತ್ತದೆ. ಸ್ಫಟಿಕ ಹಾಗೂ ದ್ರಾವಣದ ಈ ಮಿಶ್ರಣವನ್ನು ಸೋಸುವುದರಿಂದ ಸ್ಫಟಿಕಗಳು ಬೇರ್ಪಟ್ಟು ಎಣ್ಣೆಯಂಥ ಪದಾರ್ಥ ಉಳಿಯುತ್ತದೆ. ಇದರಲ್ಲಿ ಅಶುದ್ಧ ಕರ್ಪೂರ ಹೆಚ್ಚಿನ ಮೊತ್ತದಲ್ಲಿ ಇರುವುದು. ಈ ಎಣ್ಣೆಯಂಥ ಪದಾರ್ಥವನ್ನು ಆಂಶಿಕ ಆಸವೀಕರಣಕ್ಕೊಳಪಡಿಸಿ ೧೮೦ಲಿ-೧೯೦ಲಿ ಸೆಂ. ಉಷ್ಣತಾಮಾನದ ವರೆಗೆ ದೊರೆಯುವ ದ್ರಾವಣವನ್ನು ತಂಪಾಗಿಸುವುದರಿಂದ ಕರ್ಪೂರದ ಸ್ಫಟಿಕಗಳು ಪುನಃ ರೂಪುಗೊಳ್ಳುತ್ತವೆ. ಸ್ಫಟಿಕಗಳಿಂದ ಬೇರ್ಪಟ್ಟ ಎಣ್ಣೆಯಂಥ ಪದಾರ್ಥದಲ್ಲಿರುವ ಕರ್ಪೂರದ ಅಂಶ ಕಡಿಮೆ. ಇದರಿಂದ ಮತ್ತೆ ಕರ್ಪೂರದ ಸ್ಫಟಿಕಗಳನ್ನು ತಯಾರಿಸಲಾಗುವುದಿಲ್ಲ. ಇದನ್ನು ಸಾಬೂನು ತಯಾರಿಕೆಯಲ್ಲಿ ಉಪಯೋಗಿಸುವುದುಂಟು. ಇಂಥ ಸಾಬೂನು ಪರಿಮಳಯುಕ್ತವಾಗಿರುವುದು.

ಕರ್ಪೂರ ತಯಾರಿಕೆ
ಕರ್ಪೂರದ ತಯಾರಿಕೆ

ನಿಸರ್ಗದಿಂದ ದೊರೆಯುವ ಕರ್ಪೂರ ಸಾರ್ವಜನಿಕ ಬೇಡಿಕೆಯನ್ನು ಪೂರೈಸಲಾರದು. ಆದ್ದರಿಂದ ಇದನ್ನು ರಾಸಾಯನಿಕ ಸಂಯೋಜನೆಯಿಂದ ಉತ್ಪಾದಿಸಬೇಕಾಗುತ್ತದೆ. ರಾಸಾಯನಿಕ ರೀತಿಯಿಂದ ಕರ್ಪೂರ ಅಣುವಿನ ರಚನೆಯನ್ನು ಕಂಡುಹಿಡಿಯಲು ದೀರ್ಘ ಕಾಲ ಬೇಕಾಯಿತು. ಕೊನೆಗೆ ಈ ಕಾರ್ಯದಲ್ಲಿ ವಿಜ್ಞಾನಿ ಬ್ರೆಟ್ ಎಂಬಾತ ಸಫಲನಾದ (೧೯೦೩).

ಆಮೇಲೆ ರಾಸಾಯನಿಕ ಸಂಯೋಜನೆಯ ಆಧಾರದ ಮೇಲಿಂದ ಅನೇಕ ವಿಧಾನಗಳು ಬಳಕೆಯಲ್ಲಿ ಬಂದವು. ಆದರೆ ಅವುಗಳಲ್ಲಿ ಬಲು ಕಡಿಮೆ ವೆಚ್ಚ ತಗಲುವ ವಿಧಾನ ಈ ಕೆಳಗಿನಂತಿದೆ. ದೇವದಾರು ಮರದ ಟರ್ಪೆಂಟೈನ್ ತೈಲದಿಂದ ಇದು ಪ್ರಾರಂಭವಾಗುತ್ತದೆ. ಟರ್ಪೆಂಟೈನ್ ತೈಲದ ಆಂಶಿಕ ಆಸವೀಕರಣದಲ್ಲಿ ೧೫೦೦-೧೬೦೦ ಸೆಂ. ಉಷ್ಣತಾ ಮಾನದಲ್ಲಿ ದೊರೆಯುವ ದ್ರವ ಪದಾರ್ಥ ಪೈನೀನ್ ಇದನ್ನು ಒಣ ಹೈಡ್ರೊಕ್ಲೋರಿಕ್ ಆಮ್ಲ ವಾಯುವಿನೊಂದಿಗೆ ಸಂಯೋಗಿಸುವುದರಿಂದ ದೊರೆಯುವ ಮಿಶ್ರಣದ ಉಷ್ಣತಾಮಾನವನ್ನು ೧೮೦ ಸೆಂ.ಗೆ ಇಳಿಸುವುದರಿಂದ ಬೋರ್ನಿಲ್ ಕ್ಲೋರೈಡ್ ದೊರೆಯುತ್ತದೆ. ಇದನ್ನು ಸೋಡಿಯಂ ಫಿನಾಕ್ಸೈಡಿನೊಂದಿಗೆ ಸಂಯೋಗಿಸಿ ಆ ಮಿಶ್ರಣವನ್ನು ೧೮೦೦ ಸೆಂ. ಉಷ್ಣತಾಮಾನದಲ್ಲಿ ಕಾಯಿಸು ವುದರಿಂದ ಕ್ಯಾಂಫೀನ್ ತಯಾರಾಗುತ್ತದೆ. ಇದನ್ನು ಗ್ಲೇಸಿಯಲ್ ಅಸಿಟಿಕ್ ಆಮ್ಲ ಮತ್ತು ಸಲ್ಫ್ಯೂರಿಕ್ ಆಮ್ಲದೊಂದಿಗೆ ಸಂಯೋಜಿತಗೊಳಿಸುವುದರಿಂದ ಬೋರ್ನಿಲ್ ಮತ್ತು ಐಸೋ ಬೋರ್ನಿಯೋಲ್ ಅಸಿಟೇಟುಗಳ ಮಿಶ್ರಣ ತಯಾರಾಗುತ್ತದೆ. ಈ ಮಿಶ್ರಣವನ್ನು ಮದ್ಯಾರ್ಕ ದಲ್ಲಿ ಕರಗಿಸಿದ ಪೊಟಾಸಿಯಂ ಹೈಡ್ರಾಕ್ಸೈಡಿನೊಂದಿಗೆ ಜಲ ವಿಶ್ಲೇಷಣೆ ಮಾಡಲಾಗಿ ಬೋರ್ನಿಯೋಲ್ ಮತ್ತು ಐಸೊ ಬೋರ್ನಿಯೋಲು ಗಳ ಮಿಶ್ರಣ ದೊರೆಯುತ್ತದೆ. ಇದನ್ನು ನೈಟ್ರೊ ಬೆಂಝೀನ್ ಅಸ್ತಿತ್ವದಲ್ಲಿ ಉತ್ಕರ್ ಷಿಸಲಾಗಿ ತಯಾರಾಗುವ ವಸ್ತುವೇ ರಾಸಾಯನಿಕ ಸಂಯೋಚಿತ ಕರ್ಪೂರ.

ಕರ್ಪೂರವು ಸುವಾಸಿತ ದ್ರವ್ಯವಾಗಿದ್ದು ಧಾರ್ಮಿಕ ಕ್ರಿಯೆಗಳಲ್ಲಿ, ಔಷಧಿಗಳಲ್ಲಿ ಮತ್ತು ಕೆಲವೊಮ್ಮೆ ಅಡುಗೆಯಲ್ಲಿ ಸಹ ಬಳಸುವರು. ಅಲ್ಲದೆ ಪಟಾಕಿಗಳಲ್ಲಿ, ಶರೀರ ಲೇಪನದಲ್ಲಿ ಸಹ ಕರ್ಪೂರದ ಉಪಯೋಗವಿದೆ. ಕರ್ಪೂರದಲ್ಲಿ ತುಕ್ಕನ್ನು ವಿರೋಧಿಸುವ ಗುಣವಿರುವುದರಿಂದ ಅದನ್ನು ಉಕ್ಕಿನ ಸಲಕರಣೆಗಳನ್ನಿಡುವ ಪೆಟ್ಟಿಗೆಗಳಲ್ಲಿ ಬಳಸುವರು. ನೆಗಡಿ, ಕೆಮ್ಮುಗಳ ಉಪಶಮನಕ್ಕಾಗಿ ಬಳಸುವ ಕೆಲ ಔಷಧಿಗಳಲ್ಲಿ ಇದರ ಉಪಯೋಗವಿದೆ. ಕರ್ಪೂರದ ಒಂದು ಭಿನ್ನರೂಪವಾದ ಪಚ್ಚ ಕರ್ಪೂರವನ್ನು ಭಾರತೀಯರು ಸಿಹಿಪದಾರ್ಥಗಳ ತಯಾರಿಕೆಯಲ್ಲಿ ಬಳಸುವರು. ಬಲು ಸಣ್ಣ ಪ್ರಮಾಣದಲ್ಲಿ ಕರ್ಪೂರವನ್ನು ಅಹಾರದಲ್ಲಿ ಅಥವಾ ಔಷಧಿಯಾಗಿ ಸೇವಿಸಬಹುದಾದರೂ ಹೆಚ್ಚಿನ ಪ್ರಮಾಣದ ಸೇವನೆಯು ಶರೀರಕ್ಕೆ ವಿಷಕಾರಿ.

ಸಾಮಾನ್ಯವಾಗಿ ನರಗಳ ಉಳುಕುವಿಕೆ. ಉರಿ ಬಾವು ಮತ್ತು ವಾತಗ್ರಸ್ತ ನೋವುಗಳಿಗೆ ಲೇಪಿ ಸಲು ಇದನ್ನು ಉಪಯೋಗಿಸುತ್ತಾರೆ. ಅತಿಸಾರದಂಥ ರೋಗ ಗಳಲ್ಲಿ ಶಮನಕಾರಿ ಯಾಗಿ ಹೃದಯವನ್ನು ಉತ್ತೇಜನಗೊಳಿಸುವಲ್ಲಿ ಉತ್ತೇಜನಕಾರಿ ಯಾಗಿ ಇದರ ಉಪಯೋಗವಿದೆ. ಸೌಮ್ಯ ನಂಜುನಿರೋಧಕ ಹಾಗೂ ಸುಗಂಧಗುಣಯುಕ್ತವಾದ್ದರಿಂದ ಇದನ್ನು ಸೌಂದರ್ಯವರ್ಧಕ ವನ್ನಾಗಿಯೂ ಬಳಸುತ್ತಾರೆ. ಪೂಜಾಸಮಾರಂಭದಲ್ಲಿ ದೇವರ ಮುಂದೆ ಉರಿಸಲು ಉಪಯೋಗಿಸುವ ಕರ್ಪುರದಲ್ಲಿ ಶುದ್ಧ ಕರ್ಪುರದ ಪ್ರಮಾಣ ಅತ್ಯಲ್ಪ ; ಏನೂ ಇರುವುದಿಲ್ಲವೆಂದರೂ ತಪ್ಪಾಗಲಾರದು. ಸೆಲ್ಯುಲೋಸ್ ಅಸಿಟೇಟ್ ಮತ್ತು ಸೆಲ್ಯುಲೋಸ್ ನೈಟ್ರೇಟ್ ಎಂಬ ಪ್ಲಾಸ್ಟಿಕುಗಳಲ್ಲಿ ಕರ್ಪುರವನ್ನು ಬಳಸುವುದರಿಂದ ಅವು ಮೃದುತ್ವ ಪಡೆಯುತ್ತವೆ. ಇಂಥ ಮೃದು ಪ್ಲಾಸ್ಟಿಕುಗಳಿಂದ ಬೇಕಾದ ಆಟಿಕೆಗಳನ್ನು ಹಾಗೂ ಜೀವನದ ನಿತ್ಯೋಪಯೋಗಿ ವಸ್ತುಗಳನ್ನು ತಯಾರಿಸಬಹುದು.

ವೈದ್ಯಕೀಯವಾಗಿ ಕರ್ಪೂರದ ಲಕ್ಷಣಗಳಿಷ್ಟು. ಚರ್ಮ, ಲೋಳೆ ಪರೆಗಳಿಗೆ ಇದು ತಾಕಿದರೆ ಕೆರಳಿಸಿ ನೋವಿಡುತ್ತದೆ. ಹಚ್ಚಿದೆಡೆಯಲ್ಲಿ ರಕ್ತನಾಳ ಹಿಗ್ಗಿ ಕೆಂಪೇರಿ ಕೊಂಚ ನೋವು ಕಳೆಯುವುದು. ಈ ಕಾರಣದಿಂದ ಮೈ ಕೈ ಕಾಲು ಕೀಲು ನೋವುಗಳಿಗಾಗಿ ಮೇಲೆ ಹಚ್ಚುವ ಲೇಪನಗಳಲ್ಲಿ ಕರ್ಪೂರದ ಬಳಕೆ ಹೆಚ್ಚು. ಕಫವನ್ನು ಹೊರಗೆಡಹುವುದೆಂಬ ಆಸೆಯಿಂದ ಇದನ್ನು ಕೆಮ್ಮಿನ ಮದ್ದುಗಳಲ್ಲಿ ಸೇರಿಸುವುದುಂಟು. ಉಸಿರಾಟ, ಗುಂಡಿಗೆ ಬಡಿತ ನಿಂತುಹೋಗುವ ತುರ್ತಿನ ಹೊತ್ತಿನಲ್ಲಿ ವಾಯುಹರವಾಗಿ ಹೊಟ್ಟೆಗೆ ಕೊಡುವುದುಂಟು. ಕಡಲೆಕಾಯಿ ಎಣ್ಣೆಯಲ್ಲಿ ಹಾಕಿದ ಚುಚ್ಚುಮದ್ದಾಗಿ ಬಹುಕಾಲ ಬಳಕೆಯಲ್ಲಿತ್ತು.

ಕರ್ಪೂರ ತಯಾರಿಕೆ
ಕರ್ಪೂರದ ಮರ

ಲಾರೇಸೀ ಕುಟುಂಬಕ್ಕೆ ಸೇರಿದ ಸಿನಮೋಮಮ್ ಕ್ಯಾಂಪೊರ ಎಂಬ ವೈಜ್ಞಾನಿಕ ಹೆಸರಿನ ನಿತ್ಯಹರಿದ್ವರ್ಣದ ದೊಡ್ಡ ಮರ. ಇದು ಚೀನ, ಜಪಾನ್ ಮತ್ತು ಫಾರ್ಮೋಸಗಳ ಮೂಲವಾಸಿ. ಭಾರತ ಮತ್ತು ಇತರ ಕೆಲವು ದೇಶಗಳಲ್ಲಿ ಈಚೆಗೆ ಇದನ್ನು ಬೆಳೆಸಲಾಗುತ್ತಿದೆ. ಇದು ತನ್ನ ಮೂಲ ನಾಡಿನಲ್ಲಿ ಬೆಳೆಯುವ ಎತ್ತರ ಸುಮಾರು ೧೦೦’, ಬುಡದ ಸುತ್ತಳತೆ ೬’-೮’ ಭಾರತದಲ್ಲಿ ಇದು ಅಷ್ಟು ಎತ್ತರಕ್ಕೆ ಬೆಳೆಯುತ್ತಿಲ್ಲ. ೫೦’-೬೦’ ಎತ್ತರಕ್ಕೆ ಬೆಳೆದರೆ ಅದೇ ದೊಡ್ಡದು. ಎಲೆಗಳ ಉದ್ದ ೨-೪ ಅವಕ್ಕೆ ಹೊಳಪು ಹಾಗೂ ತೀಕ್ಷ್ಣ ವಾಸನೆ (ಆರೋಮಾ) ಇವೆ. ಫೆಬ್ರುವರಿ ಮಾರ್ಚಿ ತಿಂಗಳಲ್ಲಿ ಎಲೆಗಳು ಉದುರಿದರೂ ಜೊತೆಯಲ್ಲಿ ಹೊಸ ಎಲೆಗಳು ಮೂಡುತ್ತವೆ. ೦.೩ ದಪ್ಪವಾಗಿರುವ ಇದರ ಹಣ್ಣುಗಳು ತೀವ್ರ ಹಸುರು ಬಣ್ಣವಾಗಿದ್ದು ಅಂಡಾಕಾರವಾಗಿವೆ. ಮಾಗಿದಂತೆ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ೨೫ ವರ್ಷ ವಯಸ್ಸಿನ ಮರಗಳು ಉತ್ಪತ್ತಿಮಾಡುವ ಜೀಜಗಳಿಗೆ ಮಾತ್ರ ಪುನರುತ್ಪತ್ತಿ ಶಕ್ತಿ ಇದೆ.

ಕರ್ಪೂರದ ಮರಗಳಲ್ಲಿ ಅನೇಕ ವಿಧಗಳುಂಟು. ಇವುಗಳಲ್ಲಿ ಕೆಲವನ್ನು ಮಾತ್ರ ಕರ್ಪೂರವನ್ನು ಉತ್ಪತ್ತಿ ಮಾಡಲು ಬಳಸುವರು. ಮಿಕ್ಕವು ತೀಕ್ಷ್ಣವಾಸನೆಯ ತೈಲವನ್ನು ಮಾತ್ರ ನೀಡಬಲ್ಲವು. ಹಲವರು ಇವೆಲ್ಲ ಬೇರೆ ಬೇರೆ ಪ್ರಭೇದಗಳೆಂದು ವಾದಿಸುವರಾದರೂ ಅವೆಲ್ಲ ಒಂದೇ ಪ್ರಭೇದಕ್ಕೆ ಸೇರಿದವೆಂದು ಈಚಿನ ಅಭಿಪ್ರಾಯ. ಮಾರಿಷಸ್ ದ್ವೀಪದಲ್ಲಿ ಬೆಳೆಯುವ ಸಿನಮೋಮಮ್ ಕಾಂಫೊರದ ಮರದಿಂದ ಮಾತ್ರ ಕರ್ಪೂರವನ್ನು ಉತ್ಪತ್ತಿ ಮಾಡಲಾಗುತ್ತಿದೆ. ಆ ಗಿಡದ ಬೇರೆ ಬೇರೆ ಭಾಗಗಳಲ್ಲಿರುವ ತೈಲಕೋಶಗಳಲ್ಲಿ ಕರ್ಪೂರ ಸಂಗ್ರಹವಾಗಿರುತ್ತದೆ. ಸಸ್ಯದ ಜೀವನದ ಆರಂಭ ಕಾಲದಲ್ಲಿ ಅದು ಎಲೆಗಳಲ್ಲಿ ಹಳದಿ ತೈಲದೋಪಾದಿಯಲ್ಲಿ ಸಂಗ್ರಹವಾಗಲು ಆರಂಭಿಸಿ ಆ ತೈಲ ಕಾಲಕ್ರಮದಲ್ಲಿ ವರ್ಣರಹಿತವಾಗಿ ಕರ್ಪೂರದ ಕಣಗಳಾಗಿ ಸಸ್ಯದ ಇತರ ಭಾಗಗಳಿಗೆಲ್ಲ ಸಾಗಿಹೋಗುತ್ತದೆ. ಬೇರಿನಲ್ಲಿ ಅದು ಅತ್ಯಂತ ಹೆಚ್ಚಾಗಿ ಸಂಗ್ರಹವಾಗಿರುತ್ತದೆ. ಹಾಗೆ ಸಂಗ್ರಹವಾಗಿರುವ ಬಲಿತ ಮರದ ಭಾಗಗಳನ್ನು ಕಾಸಿಬಟ್ಟಿಯಿಳಿಸಿ ಕರ್ಪುರವನ್ನು ತಯಾರಿಸುವರು. ಎಲೆಗಳನ್ನೊಳಗೊಂಡ ಕೊಂಬೆಗಳನ್ನು ಕಾಸಿ ಬಟ್ಟಿಯಿಳಿಸುವುದು ಅಮೆರಿಕದಲ್ಲಿ ಅಭ್ಯಾಸದಲ್ಲಿದೆ. ಚಿಗುರೆಲೆಗಳು ಹಳೆಯ ಎಲೆಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಕರ್ಪೂರವನ್ನು ನೀಡುತ್ತವೆ.

ಗಾಳಿ, ಬೆಂಕಿ, ಸಿಡಿಲು ಅಥವಾ ಬೇರಾವುದೇ ಕಾರಣದಿಂದ ತೂಗಟೆಗೆ ಹಾನಿಯಾದಾಗ ಮರದಲ್ಲಿ ಕರ್ಪುರರಾಳ ಸೃಷ್ಟಿಯಾಗುತ್ತದೆ. ಪ್ರಾರಂಭದಲ್ಲಿ ಈ ಸ್ರಾವ ದ್ರವರೂಪದ್ದಾಗಿದ್ದು ತೈಲರಾಳ ಅಥವಾ ಗುಗ್ಗುಲದಂತೆ ಕಾಣುತ್ತದೆ. ಗಾಳಿಯ ಸಂಪರ್ಕದಲ್ಲಿ ಬಾಷ್ಪಶೀಲ ಘಟಕಗಳು ಆವಿಯಾಗುತ್ತವೆ. ಉಳಿದ ಘನವಸ್ತು ಉತ್ಕರ್ಷಣ ಹೊಂದಿ, ಬಹ್ವಂಗೀಕರಿಸಿ ಕ್ರಮೇಣ ಮೆದುವಾದ ಕರ್ಪುರರಾಳವಾಗಿ ಮಾರ್ಪಡುತ್ತದೆ. ವೃಕ್ಷದಲ್ಲಿ ಕರ್ಪೂರರಾಳಧಾರೆ ವಿಪುಲವಾಗಿದ್ದಾಗ ಅದರ ಕೆಲವಂಶ ಭೂಮಿಯನ್ನು ಸೇರುತ್ತದೆ. ಪರಿಣಾಮವಾಗಿ ಅನೇಕ ಪಳೆಯುಳಿಕೆ ಕರ್ಪೂರರಾಳಗಳು ಇಂದು ಭೂಮಿಯಲ್ಲಿ ನಿಕ್ಷೇಪಗಳಾಗಿ ದೊರೆಯುತ್ತಿವೆ. ಇತ್ತೀಚಿನ ಪಳೆಯುಳಿಕೆಯಾಗಿದ್ದರೂ ಅದರ ನಿರ್ಮಾಣಕ್ಕೆ ಕಾರಣವಾದ ರಸಾಯನಕ್ರಿಯೆ ಸಾವಿರಾರು ವರ್ಷಗಳವರೆಗೂ ನಡೆದಿರಬೇಕು. ಉದಾಹರಣೆಗೆ ಕೌರಿಪೈನ್ ಮರಗಳ ಆಯುಷ್ಯ ಸರಾಸರಿ ೧೦೦೦ ವರ್ಷಗಳು. ಹಿಂದಿನ ಅರಣ್ಯಗಳೆಲ್ಲವೂ ಸಂಪೂರ್ಣವಾಗಿ ನಾಶವಾಗಿರುವೆಡೆಗಳಲ್ಲಿ ಇಂದು ಕರ್ಪುರರಾಳ ಸಿಕ್ಕುತ್ತಿರುವುದನ್ನು ಗಮನಿಸಿದರೆ ಅದು ಅತಿ ಪ್ರಾಚೀನವಾದುದು ಎಂಬುದು ಸ್ಪಷ್ಟ. ಅದೂ ಕೂಡ ದ್ರಾವ್ಯ. ಪಳೆಯುಳಿಕೆ ಕರ್ಪುರರಾಳವಾದ ಶಿಲಾರಾಳ ಅಷ್ಟಾಗಿ ದ್ರಾವ್ಯವಲ್ಲ. ತೈಲರಾಳ ಕಾಲಕ್ರಮೇಣ ಕರ್ಪೂರರಾಳ, ಇತ್ತೀಚಿನ ಪಳೆಯುಳಿಕೆ, ಕರ್ಪೂರರಾಳ ಅಂತಿಮವಾಗಿ ಪಳೆಯುಳಿಕೆ ಕರ್ಪೂರರಾಳವಾಗಿ ಬಹ್ವಂಗೀಕರಣಗೊಳ್ಳಲು ಅಗತ್ಯವಾದ ಕಾಲವನ್ನು ಭೂ ಇತಿಹಾಸ ಕಾಲಮಾನದಲ್ಲಿ ಗಣಿಸಬೇಕೆಂಬುದನ್ನು ಶಿಲಾರಾಳದ ಅಸ್ತಿತ್ವವೇ ಶ್ರುತಪಡಿಸುತ್ತದೆ.

ಪ್ರಪಂಚದ ಅನೇಕ ಭಾಗಗಳಲ್ಲಿ ಕರ್ಪೂರರಾಳದ ನಿಕ್ಷೇಪಗಳು ದೊರೆತಿವೆ. ಅನೇಕವನ್ನು ಅವು ದೊರೆತ ಪ್ರದೇಶಗಳ ಹೆಸರುಗಳಿಂದಲೇ ಕರೆಯಲಾಗಿದೆ. ಚೈನೀಯರು ಮತ್ತು ಜಪಾನೀಯರು ಮೆರುಗೆಣ್ಣೆಗಳ ತಯಾರಿಕೆಯಲ್ಲಿ ಈ ಉತ್ಪನ್ನಗಳನ್ನು ಉಪಯೋಗಿಸುತ್ತಿದ್ದರು. ಇಂಕಾಗಳು ಮತ್ತು ಈಜಿಪ್ಟಿಯನ್ನರು ವಾರ್ನಿಷುಗಳನ್ನು ಬಳಸುತ್ತಿದ್ದರೆನ್ನುವುದಕ್ಕೆ ಸಾಕ್ಷ್ಯಗಳಿವೆ. ಫಿನೀಷಿಯನ್ನರು ಮತ್ತು ಗ್ರೀಕರು ಕರ್ಪೂರರಾಳಗಳ ಪರಿಚಯ ಪಡೆದಿದ್ದರು. ಶಿಲಾರಾಳವನ್ನು ಗ್ರೀಕರು ಬೆರೀನೀಸ್ ಎನ್ನುತ್ತಿದ್ದರು. ಅದರ ಅಪಭ್ರಂಶವೇ ಇಂದಿನ ವಾರ್ನಿಷ್.

ಮರದಿಂದ ಒಸರುವ ಯಾವುದೇ ಅಂಟುದ್ರವಕ್ಕೆ ಗೋಂದು ಎಂದು ಹೆಸರು. ಅರಗು ಕೀಟಸ್ರಾವವಾದುದರಿಂದ ಇದರಿಂದ ಬೇರೆಯಾಗಿದೆ. ಸಹಜ ಗೋಂದುಗಳು ನೀರಿನಲ್ಲಿ ಕರಗುತ್ತವೆ, ವಾರ್ನಿಷ್ ಗೋಂದುಗಳು ಹೀಗಲ್ಲ. ಶರ್ಕರಷಿಷ್ಟ ಪದಾರ್ಥಗಳಿಗೆ ಸಂಬಂಧಿಸಿದ ಸಹಜಗೋಂದುಗಳು ನೀರಿನಲ್ಲಿ ದ್ರಾವ್ಯ. ಆಗಾರ್ಯ್‌ನಿಕ್ ದ್ರವಗಳಲ್ಲಿ ಅದ್ರಾವ್ಯ. ಕಾಯಿಸಿದಾಗ ದ್ರವಿಸದೆ ವಿಭಜನೆ ಹೊಂದುತ್ತವೆ. ವಾರ್ನಿಷ್ ಗೋಂದುಗಳು, ಟರ್ಪೀನ್ ಮತ್ತು ಸುಗಂಧತೈಲಗಳಿಗೆ ಸಂಬಂಧಿಸಿದ ಕರ್ಪುರರಾಳಗಳು ಎಣ್ಣೆಗಳಲ್ಲಿ ಮತ್ತು ಆಗಾರ್ಯ್‌ನಿಕ್ ದ್ರವಗಳಲ್ಲಿ ದ್ರಾವ್ಯ, ಆದರೆ ನೀರಿನಲ್ಲಿ ಅದ್ರಾವ್ಯ. ಕಾಯಿಸಿದಾಗ ಇವು ಕರಗಿ ವಿಭಜನೆ ಹೊಂದುತ್ತವೆ. ವಾರ್ನಿಷ್ ರಾಳಗಳಿಗೆ ಗೋಂದು ಎನ್ನುವ ಮಾತು ಸರಿಯಲ್ಲ. ಆದರೂ ದೀರ್ಘ ಬಳಕೆಯಿಂದಾಗಿ ಅದನ್ನು ತೊಡೆದು ಹಾಕುವುದು ಅಸಾಧ್ಯವಾಗಿದೆ. ಅಲ್ಲದೆ ಕೆಲವು ನೈಸರ್ಗಿಕ ಉತ್ಪನ್ನಗಳು ವಾರ್ನಿಷ್ ರಾಳ ಮತ್ತು ಗೋಂದು ಎರಡರ ಗುಣಗಳನ್ನೂ ತಳೆಯುತ್ತವೆ. ಭಾರತದ ಸಾಂಬ್ರಾಣಿಯಿಂದ ಗೋಂದು ಟರ್ಪೀನುಗಳು ಮತ್ತು ಕರ್ಪೂರರಾಳವನ್ನು ಬೇರ್ಪಡಿಸಲಾಗಿದೆ. ಕರ್ಪುರರಾಳಗಳನ್ನು ಪಾರದರ್ಶಕತ್ವ, ಭೀದುರತೆ, ಶಂಕಾವಿನಾಕೃತಿಯ ಬಿರುಕುಗಳು ಮತ್ತು ಅವುಗಳ ಬಣ್ಣವಾದ ಕಂದು ಅಥವಾ ಹಳದಿಯಿಂದ ಗುರುತಿಸಬಹುದು. ಘನಸ್ಥಿತಿಯಲ್ಲಿ ಅವಕ್ಕೆ ಯಾವ ರುಚಿ ಮತ್ತು ವಾಸನೆ ಇಲ್ಲ. ಕಾಯಿಸಿದಾಗ ವಿಶಿಷ್ಟವಾದ ಪರಿಮಳವನ್ನು ಹೊರಚೆಲ್ಲುತ್ತವೆ. ಧೂಮಮಯ ಜ್ವಾಲೆಯಿಂದ ಉರಿಯುತ್ತವೆ. ಕರ್ಪುರರಾಳಗಳ ವರ್ಗೀಕರಣಕ್ಕೆ ಕರಗುವಿಕೆ ಮತ್ತು ಕಠಿಣತೆಗಳೇ ನಿರ್ಣಾಯಕ ಗುಣಗಳು. ಕರಗುವಿಕೆಯ ಆಧಾರದ ಮೇಲೆ ಕರ್ಪುರರಾಳಗಳನ್ನು ಆಲ್ಕೊಹಾಲ್ದ್ರಾವ್ಯ ಮತ್ತು ತೈಲದ್ರಾವ್ಯಗಳೆಂದು ವಿಂಗಡಿಸಬಹುದು. ಸೆಲ್ಯುಲೋಸ್ ಮೆರುಗೆಣ್ಣೆಗಳ ತಯಾರಿಕೆಗೆ ಉಪಯೋಗಿಸುವ ಆಧುನಿಕ ಲೀನಕಾರಿಗಳನ್ನು ಕರ್ಪೂರರಾಳ ದ್ರಾವಣಗಳ ತಯಾರಿಕೆಗೂ ಉಪಯೋಗಿಸಬಹುದು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಸೈಮಾ ಫಿಲ್ಮ್‌ ಅವಾರ್ಡ್

ಈ ಬಾರಿಯ ಸೈಮಾ ಫಿಲ್ಮ್‌ ಅವಾರ್ಡ್ ಪುನೀತ್ ಅವರ ಹೆಸರಿನಲ್ಲಿ ಬೆಂಗಳೂರಿನಲ್ಲಿ ನಡೆಯಿತು

ವಿಶ್ವೇಶ್ವರಯ್ಯನವರ ಸ್ಮರಣಾರ್ಥ ದಿನ

ವಿಶ್ವೇಶ್ವರಯ್ಯನವರ ಸ್ಮರಣಾರ್ಥ ಇಂಜಿನಿಯರ್ ದಿನವನ್ನು ಆಚರಿಸಲಾಗುತ್ತದೆ