in ,

ಬೆಂಗಳೂರು ಅರಮನೆ: ಬೆಂಗಳೂರು ಪ್ಯಾಲೇಸ್ ಎಂದೇ ಪ್ರಸಿದ್ಧ

ಬೆಂಗಳೂರು ಅರಮನೆ
ಬೆಂಗಳೂರು ಅರಮನೆ

ಬೆಂಗಳೂರು ಅರಮನೆಯು ಸದಾಶಿವನಗರ ಮತ್ತು ಜಯಮಹಲ್ ಮಧ್ಯದ, ನಗರದ ಹೃದಯ ಭಾಗವಾದ ಪ್ಯಾಲೇಸ್ ಗಾರ್ಡನನಲ್ಲಿದೆ. ಈ ಕಟ್ಟಡ ನಿರ್ಮಾಣದ ಹಿಂದಿನ ಉದ್ದೇಶವು, ಇದನ್ನು ಇಂಗ್ಲೆಂಡಿನ ವಿನ್ಸರ ಕ್ಯಾಸಲನ ಹಾಗೆ ನಿರ್ಮಿಸಬೇಕೆಂದಿದ್ದು, ಇದರ ಕಾಮಗಾರಿಯು 1862 ರಲ್ಲಿ ರೆವ್.ಗಾರೆಟ್ ಅವರಿಂದ ಪ್ರಾರಂಭವಾಯಿತು. ನಂತರ 1884 ರಲ್ಲಿ ಒಡೆಯರ್ ರಾಜವಂಶಸ್ಥರಾದ ಚಾಮರಾಜ ಒಡೆಯರ್ ಅವರಿಂದ ಇದು ಖರೀದಿಸಲ್ಪಟ್ಟಿತು.

ಒಂದು ಕಾಲದಲ್ಲಿ ಮೈಸೂರು ಮಹಾರಾಜರ ನೆಚ್ಚಿನ ಬೇಸಿಗೆ ಮನೆಯಾಗಿದ್ದ ಬೆಂಗಳೂರು ಅರಮನೆ ಇಂದು ಅದ್ಧೂರಿ ಮದುವೆಗಳಿಗೆ ಸಾಕ್ಷಿಯಾಗುತ್ತಾ, ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿ ಉಳಿದಿದೆ. ಈಗ ಕೂಡಾ ಮೈಸೂರು ರಾಜ ಮನೆತನದ ಆಸ್ತಿಯಾಗಿಯೇ ಉಳಿದಿದೆ.

ರೆವ್ ಜೆ ಗ್ಯಾರೆಟ್, ಸೆಂಟ್ರಲ್ ಹೈ ಸ್ಕೂಲ್ ನ ಮೊದಲ ಮುಖ್ಯೋಪಾದ್ಯರಾಗಿದ್ದರು , 45,000 ಚದರ ಅಡಿ ಒಂದು ಮಹಡಿ ಪ್ರದೇಶದೊಂದಿಗೆ ಈ ಅರಮನೆಯನ್ನು ಕಟ್ಟಿದರು. ಅರಮನೆ ಮತ್ತು ಸುತ್ತಮುತ್ತಲಿನ ಮೈದಾನಗಳಲ್ಲಿ 454 ಎಕರೆ (183 ಹೆ) ಅಷ್ಟು ಭೂಮಿ ಹೊಂದಿದೆ. ಯುವ ರಾಜಕುಮಾರ ಎಚ್ ಚಾಮರಾಜ ಒಡೆಯರ್ ಅವರಿಂದ ರೂ.40,000 ವೆಚ್ಚದಲ್ಲಿ ಅವರ ಶಿಕ್ಷಣ ಉಸ್ತುವಾರಿ ಹೊಂದಿದ್ದ ಬ್ರಿಟಿಷ್ ಅಧಿಕಾರಿಗಳು 1873ರಲ್ಲಿ ಅರಸರ ಅರಮನೆ ಖರೀದಿಸಿತು ಮತ್ತು ನಂತರ ಅರಮನೆಯನ್ನು ನವೀಕರಿಸಿದರು.

ಬೆಂಗಳೂರು ಅರಮನೆ: ಬೆಂಗಳೂರು ಪ್ಯಾಲೇಸ್ ಎಂದೇ ಪ್ರಸಿದ್ಧ
ಬೆಂಗಳೂರು ಅರಮನೆ

ಅರಮನೆಯ ಕೆಳಮಹಡಿಯು ತೆರೆದ ಅಂಗಳವನ್ನು ಹೊಂದಿದ್ದು, ಕೂಡಲು ಗ್ರಾನೈಟ್ ಕಲ್ಲಿನ ಕಟ್ಟೆಗಳನ್ನು ಕೆತ್ತಲಾಗಿದೆ.ಇವುಗಳು ತಮ್ಮ ಮೆಲ್ಮೈ ಮೇಲೆ ನೀಲಿ ಬಣ್ಣದ ಟಾಯಿಲಗಳನ್ನು ಹೊಂದಿದ್ದು ರಾತ್ರಿಯಲ್ಲಿ ನೋಡಲು ಸೊಗಸಾಗಿರುತ್ತವೆ. ರಾಜನು ಸಭೆ ನಡೆಸುತ್ತಿದ್ದ ವಿಶಾಲವಾದ ದರ್ಬಾರ ಹಾಲ್ ಅನ್ನು ಮೆಲ್ಮಹಡಿಯಲ್ಲಿ ಕಾಣಬಹುದು. ಅರಮನೆಯ ಒಳಗೊಡೆಗಳು ಗ್ರೀಕ್,ಡಚ್ ಮತ್ತು ಪ್ರಸಿದ್ಧನಾದ ರಾಜಾ ರವಿವರ್ಮನ ಚಿತ್ರಕಲೆಗಳಿಂದ ಅಲಂಕೃತಗೊಂಡಿದ್ದು ನೋಡಲು ಸುಂದರವಾಗಿವೆ.

ಅರಮನೆ ಮೈದಾನವು ಬರೋಬ್ಬರಿ 453 ಎಕರೆ ಅಗಲಕ್ಕೆ ಹರಡಿದ್ದು, ತೀರಾ ಇತ್ತೀಚಿನವರೆಗೆ ಅಂತಾರಾಷ್ಟ್ರೀಯ ಸಂಗೀತ ಕಾರ್ಯಕ್ರಮಗಳ ಕೇಂದ್ರ ಬಿಂದುವಾಗಿತ್ತು. ಬ್ಯಾಕ್‌ಸ್ಟ್ರೀಟ್ ಬಾಯ್ಸ್, ಮೆಟಾಲಿಕಾ, ಡೀಪ್ ಪರ್ಪಲ್ ಹಾಗೂ ಇತರೆ ಪ್ರಖ್ಯಾತ ಬ್ಯಾಂಡ್‌ಗಳು ಇಲ್ಲಿ ತಮ್ಮ ಕನ್ಸರ್ಟ್ಸ್ ನೀಡಿವೆ. 1990 ಹಾಗೂ 2000ದ ದಶಕದಲ್ಲಿ ರಾಕ್ ಸಂಸ್ಕೃತಿ ಉತ್ತುಂಗದಲ್ಲಿದ್ದಾಗ ಈ ಪ್ಯಾಲೇಸ್ ಗ್ರೌಂಡ್ ರಾಕ್ ಅಭಿಮಾನಿಗಳ ಸ್ವರ್ಗವಾಗಿತ್ತು. ಅಂತಾರಾಷ್ಟ್ರೀಯ ರಾಕ್‌ಸ್ಟಾರ್‌ಗಳು ಇಲ್ಲಿ ಪರ್ಫಾರ್ಮೆನ್ಸ್ ನೀಡಲು ಕಾತರದಿಂದ ಕಾಯುತ್ತಿದ್ದರು. ದಿ ಐರನ್ ಮೈಡನ್ ಕನ್ಸರ್ಟ್ ಸುಮಾರು 38,000 ಜನರನ್ನು ಅರಮನೆ ಮೈದಾನಕ್ಕೆ ಎಳೆತಂದಿತ್ತು. ಆದರೆ, ಕೆಲ ವರ್ಷಗಳಿಂದೀಚೆಗೆ ಇಲ್ಲಿ ವಾಣಿಜ್ಯ ಕಾರ್ಯಕ್ರಮಗಳಿಗೆ ನಿಷೇಧ ಹೇರಲಾಗಿದೆ.

ಅರಮನೆಗೆ ಪ್ರವೇಶ
ಮುಂಚೆ ಬೆಂಗಳೂರು ಅರಮನೆಯನ್ನು ಕೆಲ ಚಲನಚಿತ್ರಗಳಲ್ಲಿ, ಅದೂ ಹೌದೋ ಅಲ್ಲವೋ ಎಂಬಂತೆ ಕಣ್ತುಂಬಿಕೊಂಡು ಜನ ಹೋ ಎಂದು ಸಂತೋಷ ಪಡಬೇಕಿತ್ತು. ಏಕೆಂದರೆ, ಇಲ್ಲಿಗೆ ಸಾರ್ವಜನಿಕರಿಗೆ ಪ್ರವೇಶವಿರಲಿಲ್ಲ. ಆದರೆ, ಮುಂಚಿನ ಮೈಸೂರು ಮಹಾರಾಜ ಶ್ರೀಕಂಠದತ್ತ ಒಡೆಯರ್ ಈ ಅರಮನೆಯನ್ನು ಸಾರ್ವಜನಿಕರ ದರ್ಶನಕ್ಕೆ ಮುಕ್ತವಾಗಿಸಿದರು. ಈಗ ಅರಮನೆಗೆ ಹೋಗಬೇಕೆಂದರೆ ಎಂಟ್ರೆನ್ಸ್ ಫೀ ಕಟ್ಟಿ, ಕ್ಯಾಮೆರಾ, ಫೋನ್‌ಗೆ ಎಕ್ಸ್ಟ್ರಾ ಫೀ ಕಟ್ಟಿದರಾಯಿತು. ಪ್ರವೇಶದ್ವಾರದಲ್ಲಿ ಹುಲ್ಲು ತುಂಬಿದ ಆನೆಯ ತಲೆಯನ್ನು ಕಾಣಬಹುದು.

ಬೆಂಗಳೂರು ಅರಮನೆ: ಬೆಂಗಳೂರು ಪ್ಯಾಲೇಸ್ ಎಂದೇ ಪ್ರಸಿದ್ಧ
ಬೆಂಗಳೂರು ಅರಮನೆ

ಅರಮನೆ ಕೋಟೆಯ ಗೋಪುರಗಳು, ಕೋಟೆ ಮತ್ತು ಗೋಪುರಗಳನ್ನೊಳಗೊಂಡ ಟ್ಯೂಡರ್ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾಯಿತು. ಒಳಾಂಗಣದಲ್ಲಿ ಸೊಗಸಾದ ಮರದ ಕೆತ್ತನೆಗಳು, ಹೂವಿನ ಅಲಂಕಾರ, ಸುಂದರ ಕಮಾನುಗಳು ಮತ್ತು ಸೂಕ್ಷ್ಮ ಕೆತ್ತೆನೆ ಒಳಗೊಂಡ ವರ್ಣಚಿತ್ರಗಳು ಮೇಲ್ಛಾವಣಿಯ ಮೇಲೆ ಅಲಂಕರಿಸಲಾಗಿತ್ತು. ನವ-ಶಾಸ್ತ್ರೀಯ, ವಿಕ್ಟೋರಿಯನ್ ಮತ್ತು ಎಡ್ವರ್ಡಿಯನ್ ಶೈಲಿಯ ರೀತಿಯಲ್ಲಿ ಪೀಠೋಪಕರಣಗಳನ್ನು, ಜಾನ್ ರಾಬರ್ಟ್ಸ್ ಮತ್ತು ಲಾಜರ್ ಅವರು ಖರೀದಿ ಮಾಡಿದರು. ಉದ್ಯಾನಗಳ ಸಂರಕ್ಷಣೆ ಮತ್ತು ತೋಟಗಾರಿಕೆ ಗುಸ್ತಾವ್ ಹರ್ಮನ್ ಕ್ರುಮ್ಬಿಎಗೆಲ್ ಅವರ ಕರ್ತವ್ಯವಾಗಿದೆ. ಒಟ್ಟು 35 ಕೊಠಡಿಗಳನ್ನು ಅರಮನೆಯಲ್ಲಿ ನಿರ್ಮಿಸಲಾಗಿತ್ತು ಮತ್ತು ಅವುಗಳಲ್ಲಿ ಬಹುಪಾಲು ಮಲಗುವ ಕೋಣೆಗಳಾಗಿದ್ದವು .ಈ ನವೀಕರಿಸುವಿಕೆ, ವಿಶೇಷವಾಗಿ ಇಂಗ್ಲೆಂಡ್ ಆಮದು ಮಾಡಿಕೊಂಡ ಬಣ್ಣದ ಗಾಜು ಮತ್ತು ಕನ್ನಡಿಗಳು ಅಳವಡಿಕೆ, ಜನರಲ್ ಎಲೆಕ್ಟ್ರಿಕ್ ಒಂದು ಕೈಪಿಡಿ ಲಿಫ್ಟ್ ಮತ್ತು ಮರದ ಪಂಖಗಳ ಖರ್ಚನ್ನು ಒಳಗೊಂಡಿತ್ತು. 1970 ರಲ್ಲಿ, ಎಚ್ ಜಯಚಾಮರಾಜೇಂದ್ರ ಒಡೆಯರ್ ಅವರು,ಎರಡು ವಿದ್ಯುತ್ ಕಂಪನಿಗಳಿಗೆ ಅಂದಿನ ಗುತ್ತಿಗೆದಾರ ಚಾಮರಾಜು ಎಂಬುವವರ ಹೆಳಿಕೆಯಮೇಲೆ ಆಸ್ತಿ ಸ್ವಾಧೀನವನ್ನು ವರ್ಗಾಯಿಸಿಕೊಟ್ಟಿದ್ದರೆಂದು ಹೇಳಲಾಗುತ್ತದೆ. ಈ ಕಂಪನಿಗಳು ಚಾಮುಂಡಿ ಹೊಟೇಲ್ ಲಿಮಿಟೆಡ್ ಮತ್ತು ಶ್ರೀ ವೆಂಕಟೇಶ್ವರ ವಸತಿ ಎಂಟರ್ಪ್ರೈಸಸ್ ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು. ಆದರೆ ನಮೂದಿಸಿರುವ ದಿನಾಂಕದಲ್ಲಿ ಕಂಪನಿಗಳು ಇನ್ನೂ ಒಂದುಗೂಡಿಸಬೇಕಾಗಿದ್ದು ಮತ್ತು ಯಾವುದೇ ಮಾರಾಟ ಪತ್ರ ಯಾವುದು ಸಿಕ್ಕಿಲ್ಲ. ಇದು ಒಂದು ಮೋಸದ ವಹಿವಾಟು ಆಗಿತ್ತು. ಮಹಾರಾಜರ ಏಕೈಕ ಪುತ್ರ ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ ಈ ಒಪ್ಪಂದದ ವಿರುದ್ಧ ಸಿವಿಲ್ ದಾವೆ ಹೂಡಿದ್ದರು. ಆದರೆ ಮಹಾರಾಜ ಎಚ್ ಎಚ್ ಜಯಚಾಮರಾಜೇಂದ್ರ ಒಡೆಯರ್ 1974 ರಲ್ಲಿ ನಿಧನರಾದರು ಆದರೂ ಕಾನೂನು ಹೋರಾಟ ಮುಂದುವರಿಸಿದರು ಮತ್ತು ಸರಾಸರಿ ಸಮಯದಲ್ಲಿ ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ 1983 ರಲ್ಲಿ ತನ್ನ ಐದು ಸಹೋದರಿಯರಿಗೆ ರಮಣ ಮಹರ್ಷಿ ರಸ್ತೆಯಲ್ಲಿ ತಲ 28 ಎಕರೆ ನೀಡಿದರು (110,000 ಮೀ 2) ಅವರುಗಳ ಹೆಸರು ಇಂತಿವೆ, ಲೇಟ್ ಗಾಯತ್ರಿ ದೇವಿ, ಮೀನಾಕ್ಷಿ ದೇವಿ, ಕಾಮಾಕ್ಷಿ ದೇವಿ, ಇನ್ದ್ರಾಕ್ಷಿ ದೇವಿ ಮತ್ತು ವಿಶಾಲಾಕ್ಷಿ ದೇವಿಯವರು.ಶ್ರೀಕಂಠ ದತ್ತ ನರಸಿಂಹ ರಾಜ ಒಡೆಯರ್ ಅಂತಿಮವಾಗಿ 1990 ಮತ್ತು 1994 ರಲ್ಲಿ ಚಾಮರಾಜು ಗ್ರೂಪ್ ಅವರೊಂದಿಗೆ ರಾಜಿ ಮಾಡಿಕೊಂಡು, 45 ಎಕರೆ (180,000 ಮೀ 2) ಭೂಮಿಯನ್ನು ಜಯಮಹಲ್ ರಸ್ತೆಯಲ್ಲಿ ಹೊರತುಪಡಿಸಿ ಮುಖ್ಯ ಅರಮನೆ ಸೇರಿದಂತೆ ಎಲ್ಲಾ ಆಸ್ತಿಯನ್ನು ತನ್ನ ಭಾಗವಾಗಿ ಮರಳಿ ಪಡೆದರು.

ಏನೇ ಇರಲಿ ಬೆಂಗಳೂರಿಗರಿಗೆ ಇದೊಂದು ವೀಕೆಂಡ್ ವೀಕ್ಷಣೀಯ ಸ್ಥಳವಾಗಿದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಸಾಲ ಕೇಳಿದ ಹಾಲು ಮಾರುವ ಮಹಿಳೆಗೆ ಬ್ಯಾಂಕ್ ಮ್ಯಾನೇಜರ್ ಮಾಡಿದ್ದೇನು ಗೊತ್ತಾ.

ಸಾಲ ಕೇಳಿದ ಹಾಲು ಮಾರುವ ಮಹಿಳೆಗೆ ಬ್ಯಾಂಕ್ ಮ್ಯಾನೇಜರ್ ಮಾಡಿದ್ದೇನು ಗೊತ್ತಾ.

ಒಂದು ಮತ್ತು ಎರಡನೇ ಪಾಣಿಪತ್ ಯುದ್ಧ

ಒಂದು ಮತ್ತು ಎರಡನೇ ಪಾಣಿಪತ್ ಯುದ್ಧ