in ,

ಪಂಚ ಪತಿವೃತೆಯರಲ್ಲಿ ಮೊದಲನೆಯವಳು, ಅಹಲ್ಯಾ

ಅಹಲ್ಯೆ
ಅಹಲ್ಯೆ

ಐದು ಪತಿವೃತೆಯರು ಎಂಬುದು ಹಿಂದೂ ಮಹಾಕಾವ್ಯಗಳ ಐದು ಅಪ್ರತಿಮ ಮಹಿಳೆಯರ ಗುಂಪಾಗಿದ್ದು, ಸ್ತೋತ್ರದಲ್ಲಿ ಶ್ಲಾಘಿಸಲಾಗಿದೆ ಮತ್ತು ಅವರ ಹೆಸರುಗಳನ್ನು ಪಠಿಸಿದಾಗ ಪಾಪವನ್ನು ಹೋಗಲಾಡಿಸುತ್ತದೆ ಎಂದು ನಂಬಲಾಗಿದೆ. ಅವರೇ ಅಹಲ್ಯಾ , ದ್ರೌಪದಿ , ಕುಂತಿ ಅಥವಾ ಸೀತೆ , ತಾರಾ , ಮತ್ತು ಮಂಡೋದರಿ . ದ್ರೌಪದಿ ಮತ್ತು ಕುಂತಿ ಮಹಾಭಾರತದವರಾಗಿದ್ದರೆ,ಅಹಲ್ಯಾ, ಸೀತೆ, ತಾರಾ ಮತ್ತು ಮಂಡೋದರಿ ಮಹಾಕಾವ್ಯ ರಾಮಾಯಣದಿಂದ ಬಂದವರು .

ಪತಿವೃತೆಯರಲ್ಲಿ ಮೊದಲ ಹೆಸರು ಅಹಲ್ಯಾ ಬಗ್ಗೆ ತಿಳಿಯೋಣ.

ಅಹಲ್ಯೆ ಪ್ರಾತಃಸ್ಮರಣೀಯರಾದ ಪಂಚಕನ್ಯೆಯರಲ್ಲಿ ಪ್ರಮುಖಳು. ಗೌತಮ ಮಹರ್ಷಿಯ ಪತ್ನಿ . ಮಹಾಪತಿವ್ರತೆಯೆಂದು ಪ್ರಸಿದ್ಧಳಾದವಳು. ದಾಂಪತ್ಯ ದ್ರೋಹಕ್ಕಾಗಿ ಅವಳ ಗಂಡನಿಂದ ಶಾಪಗ್ರಸ್ತಳಾಗಿದ್ದಳು ಮತ್ತು ರಾಮನಿಂದಾಗಿ (ವಿಷ್ಣು ದೇವರ ಅವತಾರ) ಶಾಪದಿಂದ ವಿಮೋಚನೆಗೊಂಡಳು. ಬ್ರಹ್ಮನು ಸೃಷ್ಟಿಸಿದ ಮಹಿಳೆಯರಲ್ಲಿ ಅತ್ಯಂತ ಸುಂದರವಾದ ಮಹಿಳೆ ಅಹಲ್ಯೆ ಎಂಬ ನಂಬಿಕೆ ಇದೆ.

ಊರ್ವಶಿಯ ಹೆಮ್ಮೆಯನ್ನು ಮುರಿಯುವ ಉದ್ದೇಶದಿಂದ ಬ್ರಹ್ಮ ಅಹಲ್ಯೆಯನ್ನು ಸೃಷ್ಟಿಸಿದ ಎಂದು ಬ್ರಹ್ಮ ಪುರಾಣದಲ್ಲಿ ಉಲ್ಲೇಖವಿದೆ. ಸಪ್ತರ್ಷಿಗಳು ಮಾಡಿದ ತ್ಯಾಗದ ಚಿತಾಭಸ್ಮದಿಂದ ಅಹಲ್ಯೆಯನ್ನು ಸೃಷ್ಟಿಸಿ ಗೌತಮ ಮಹರ್ಷಿಗೆ ಉಡುಗೊರೆ ನೀಡಿದ.

ಅಹಲ್ಯೆಯ ಶಾಪಕ್ಕೆ ಕಾರಣ:

ಪಂಚ ಪತಿವೃತೆಯರಲ್ಲಿ ಮೊದಲನೆಯವಳು, ಅಹಲ್ಯಾ
ಅಹಲ್ಯೆಯ ಶಾಪಕ್ಕೆ ಕಾರಣ


ಸುರಾಧಿಪತಿಯಾದ ಇಂದ್ರದೇವನು ಸ್ವರ್ಗಲೋಕದಿಂದ ಭೂಮಿವಯತ್ತ ಬಾಗಿ ನೋಡಲು, ಸ್ತ್ರೀಕುಲದಲ್ಲಿಯೇ ಅತ್ಯಂತ ರೂಪವತಿಯಾಗಿರುವ, ಗೌತಮ ಮಹರ್ಷಿಗಳ ಧರ್ಮಪತ್ನಿಯಾದ ಅಹಲ್ಯಾದೇವಿಯನ್ನು ಕಾಣುತ್ತಾನೆ. ಕೂಡಲೇ, ಅಹಲ್ಯೆಯನ್ನು ಅನುಭವಿಸಬೇಕೆಂಬ ಆಸೆ ಇಂದ್ರನ ಮನಸ್ಸಿನಲ್ಲಿ ಉಂಟಾಗುತ್ತದೆ.
ಕೆಲಕಾಲದವರೆಗೆ ಆಕೆಯ ಚಲನವಲನಗಳನ್ನು ಹಾಗೆಯೇ ಗಮನಿಸತೊಡಗುತ್ತಾನೆ. ಒಂದು ದಿನ ಮುಂಜಾನೆ ಮಹರ್ಷಿ ಗೌತಮರು ನದಿಯಲ್ಲಿ ಸ್ನಾನಕ್ಕೆಂದು ಬೇಗನೆ ಎದ್ದು ಆಶ್ರಮವನ್ನು ಬಿಟ್ಟು ಹೊರನಡೆದಾಗ, ಇಂದ್ರನಿಗೆ ಇದೇ ಅತ್ಯ೦ತ ಸದವಕಾಶದಂತೆ ಕಂಡುಬರುತ್ತದೆ.
ಇಂದ್ರನು ಗೌತಮ ಮುನಿಗಳಂತೆ ಮಾರುವೇಷವನ್ನು ಧರಿಸಿಕೊಳ್ಳುತ್ತಾನೆ ಹಾಗೂ ಅಹಲ್ಯೆಯೋರ್ವಳೇ ಇದ್ದ ಆಶ್ರಮವನ್ನು ಪ್ರವೇಶಿಸುತ್ತಾನೆ. ಗೌತಮ ಮುನಿಗಳ ವೇಷದಲ್ಲಿದ್ದ ಇಂದ್ರನನ್ನು ಕಂಡು ಅಹಲ್ಯೆಯು ಹೀಗೆ ಹೇಳುತ್ತಾಳೆ, “ನಿನ್ನ ವರ್ತನೆಯು ನನ್ನ ಪತಿಯ ನಡವಳಿಕೆಯ ರೀತಿ ಕಂಡುಬರುತ್ತಿಲ್ಲ.

ಅಹಲ್ಯೆಯು ಇಂದ್ರದೇವನ ದೇಹದಿಂದ ಹೊರಹೊಮ್ಮುತ್ತಿದ್ದ ಸುರಲೋಕದ ಸುಗಂಧವನ್ನು ಗುರುತಿಸಲು ಸಮರ್ಥಳಾಗುತ್ತಾಳೆ ಹಾಗೂ ಆ ಮೂಲಕ ಆಕೆ ತಾನು ಮೋಸ ಹೋಗುತ್ತಿರುವೆನೆಂದು ಊಹಿಸುತ್ತಾಳೆ ಎಂದು ಕೂಡ ಹೇಳಲಾಗುತ್ತದೆ. ಇಂದ್ರನು ತನ್ನ ಅಭಿಲಾಷೆಯನ್ನು ಪೂರೈಸಿಕೊಂಡ ಬಳಿಕ ಆಶ್ರಮದಿಂದ ಹೊರಬರುತ್ತಾನೆ.
ಗೌತಮ ಋಷಿಗಳು ಆಗತಾನೇ ಸ್ನಾನವನ್ನು ಪೂರೈಸಿಕೊಂಡು ನದಿಯಿಂದ ಹಿಂದುರುಗಿ ಆಶ್ರಮದತ್ತ ಬರುತ್ತಿರುತ್ತಾರೆ. ಗೌತಮ ಮುನಿಗಳು ತನ್ನ ಆಶ್ರಮದ ದ್ವಾರದಲ್ಲಿ ತನ್ನದೇ ರೂಪವನ್ನು ಹೊಂದಿರುವ ವ್ಯಕ್ತಿಯು ಹೊರಬರುತ್ತಿರುವುದನ್ನು ಕಂಡು ಏನೋ ಎಡವಟ್ಟಾಗಿದೆ ಎಂದು ಊಹಿಸುತ್ತಾರೆ. ಕೋಪಗೊಂಡ ಗೌತಮ ಮುನಿ ಬೊಗಸೆಯಲ್ಲಿ ನೀರನ್ನು ಹಿಡಿದುಕೊಂಡು “ನಿಜವಾಗಿಯೂ ನೀನು ಯಾರು ಹೇಳು ?” ಎಂದು ಆ ವ್ಯಕ್ತಿಯನ್ನು ಗದರಿಸುತ್ತಾರೆ.
ಆಗ ಇಂದ್ರನು ತನ್ನ ನಿಜಸ್ವರೂಪದಲ್ಲಿ ಪ್ರಕಟಗೊಳ್ಳುತ್ತಾನೆ. ಅದನ್ನು ಕಂಡ ಗೌತಮ ಮಹರ್ಷಿಗಳು, ಇಂದ್ರನಿಂದ ನಡೆದಿರಬಹುದಾದ ಅನಾಹುತವೆಲ್ಲವನ್ನೂ ಊಹಿಸಿಕೊಂಡು ಕೋಪಾವಿಷ್ಟರಾಗುತ್ತಾರೆ. ಅವರು ಇಂದ್ರನ ಕುರಿತು ಹೀಗೆ ಹೇಳುತ್ತಾರೆ, “ನೀನು ನಪುಂಸಕನಾಗು ಎಂದು ನಾನು ನಿನ್ನನ್ನು ಶಪಿಸುವೆ”. ಹೀಗೆ ಹೇಳುತ್ತಾ ಬೊಗಸೆಯಲ್ಲಿ ಹಿಡಿದುಕೊಂಡಿದ್ದ ಜಲವನ್ನು ಇಂದ್ರನತ್ತ ಎರಚುತ್ತಾರೆ.
ಆಶ್ರಮದ ಹೊರಭಾಗದಿ೦ದ ಗದ್ದಲವನ್ನು ಆಲಿಸಿದ ಅಹಲ್ಯೆಯು ಧಾವಿಸಿ ಹೊರಬರುತ್ತಾಳೆ ಹಾಗೂ ಇಬ್ಬರು ವ್ಯಕ್ತಿಗಳು ಒಂದೇ ತೆರನಾದ ಉಡುಪುಗಳನ್ನು ಧರಿಸಿರುವುದನ್ನು ಕಂಡು ಅವಾಕ್ಕಾಗುತ್ತಾಳೆ. ಅವಳ ಬಾಯಿಯಿಂದ ಈ ಮಾತು ಹೊರಬೀಳುತ್ತದೆ, “ನನ್ನ ಊಹೆ ನಿಜವಾಯಿತು. ನಾನು ಮೋಸ ಹೋದೆ”, ಎಂದು ಬಿಕ್ಕಿ, ಬಿಕ್ಕಿ ಅಳಲಾರಂಭಿಸಿದಳು.
ಇದನ್ನು ಕೇಳಿದ ಗೌತಮರು ಕೋಪದಿ೦ದ ಕಿಡಿಕಿಡಿಯಾದರು. “ನೀನು ಮೋಸ ಹೋಗುತ್ತಿರುವೆ ಎಂದು ನಿನಗೆ ಅನುಮಾನವಿದ್ದಲ್ಲಿ, ನೀನೇಕೆ ಅವನಿಗೆ ಅವಕಾಶವನ್ನು ನೀಡಿದೆ ?” ಎಂದು ಕೋಪದಿಂದ ಅಹಲ್ಯೆಯನ್ನು ಪ್ರಶ್ನಿಸುತ್ತಾರೆ. ಅದಕ್ಕೆ ಅಹಲ್ಯೆಯು, “ಆತನು ತದ್ರೂಪು ನಿಮ್ಮಂತೆ ಕ೦ಡುಬಂದನು” ಎಂದು ಉತ್ತರಿಸುತ್ತಾಳೆ.
ಆಗ ಗೌತಮರು ಹೇಳುತ್ತಾರೆ, “ಆದರೂ ಕೂಡ, ನೀನು ಈತನ ಅಂತರಂಗ ಚರ್ಯೆಗಳನ್ನು ಗಮನಿಸಬೇಕಾಗಿತ್ತು. ಈತನು ಅಂತರಂಗದಲ್ಲಿ ಓರ್ವ ಮಹಾಧೂರ್ತನಾಗಿರುವನು. ಈ ಕಾರಣದಿಂದ ತಿಳಿದೂ ತಿಳಿದೂ ಈತನ ವಿಚಾರದಲ್ಲಿ ಮೃದುಭಾವವನ್ನು ತಳೆದು ಅವನೊಡನೆ ಸೇರಿದ ನಿನ್ನನ್ನು ನಾನು ಶಪಿಸುತ್ತಿದ್ದೇನೆ. ನೀನು ಈತನ ಅಂತರಂಗ ಅರಿಯದಾದೆ ಆದ್ದರಿಂದ ನೀನೊಂದು ಶಿಲೆಯಾಗು ಎಂದು, ನಾನು ನಿನ್ನನ್ನು ಶಪಿಸುತ್ತಿದ್ದೇನೆ”. ಹೀಗೆ ಹೇಳುತ್ತಾ ಗೌತಮರು ಬೊಗಸೆಯಲ್ಲಿ ನೀರನ್ನು ತುಂಬಿಕೊಂಡು ಅದನ್ನು ಅಹಲ್ಯೆಯತ್ತ ಎರಚಿದರು. ತತ್‍ಕ್ಷಣವೇ ಆಕೆಯು ಶಿಲೆಯಾಗಿ ಮಾರ್ಪಟ್ಟಳು. ಹೇಗೆ ಅಹಲ್ಯಾ ಶಾಪಗ್ರಸ್ತಗೊಂಡಳು.

ಅಹಲ್ಯಾ ಶಾಪವಿಮೋಚನೆ:

ಪಂಚ ಪತಿವೃತೆಯರಲ್ಲಿ ಮೊದಲನೆಯವಳು, ಅಹಲ್ಯಾ
ಅಹಲ್ಯಾ ಶಾಪವಿಮೋಚನೆ


ಶ್ರೀರಾಮ ಅಯೋಧ್ಯಾನಗರಿಯ ರಾಜಕುಮಾರನಾದ ಶ್ರೀರಾಮನು ಮಹರ್ಷಿ ವಿಶ್ವಾಮಿತ್ರರೊಡನೆ ಮಿಥಿಲೆಗೆ ಆಗಮಿಸುತ್ತಿದ್ದಾಗ, ಅವರು ನಿರ್ಜನವಾಗಿದ್ದ ಆಶ್ರಮವೊಂದನ್ನು ತಲುಪುತ್ತಾರೆ. ಆ ಆಶ್ರಮದ ಮಧ್ಯಭಾಗದಲ್ಲಿ ಶಿಲೆಯೊಂದಿರುತ್ತದೆ. ಆ ಶಿಲೆಯಿಂದ ತುಳಸೀ ಗಿಡವೊಂದು ಬೆಳೆಯುತ್ತಿರುತ್ತದೆ.
ಆಗ ರಾಮನು ಹೀಗೆ ಹೇಳುತ್ತಾನೆ, “ಮಹರ್ಷಿ ವಿಶ್ವಾಮಿತ್ರರೇ, ಇದು ನಿಜಕ್ಕೂ ವಿಸ್ಮಯಕರವಾಗಿದೆ. ಈ ಆಶ್ರಮದಲ್ಲಿ ಯಾರೂ ವಾಸವಿರುವಂತೆ ಕಾಣುತ್ತಿಲ್ಲ. ಆದರೂ ಸಹ ತುಳಸಿ ಗಿಡ ಅದರಲ್ಲೂ ಶಿಲೆಯೊಂದರಲ್ಲಿ ಬೆಳೆಯುತ್ತಿದೆ”, ಎಂದು ಉದ್ಗರಿಸುತ್ತಾನೆ.
ಆಶ್ಚರ್ಯಗೊಂಡ ಭಗವಾನ್ ಶ್ರೀರಾಮಚಂದ್ರ ಆಶ್ಚರ್ಯಗೊಂಡ, ಆಗ ವಿಶ್ವಾಮಿತ್ರರು ಹೀಗೆ ಹೇಳುತ್ತಾರೆ, “ಈ ಶಿಲೆಯ ಒಳಭಾಗದಲ್ಲಿ ಸ್ತ್ರೀಯೋರ್ವಳ ಆತ್ಮವು ನೆಲೆಯಾಗಿದೆ. ಆ ಸ್ತ್ರೀಯು ಓರ್ವನಿಂದ ಶಪಿಸಲ್ಪಟ್ಟು, ಮತ್ತೋರ್ವನಿಂದ ಮೋಸಹೋದವಳಾಗಿರುತ್ತಾಳೆ.
ಎಲೈ ರಾಮನೇ, ತಪ್ಪುಮಾಡಿದವರನ್ನು ದೂಷಿಸಿ, ಶಿಕ್ಷಿಸುವುದನ್ನು ಎಲ್ಲರೂ ಬಲ್ಲರು. ಆದರೆ, ಕೇವಲ ವಿಶೇಷರಾದ ಮಹಾನ್ ವ್ಯಕ್ತಿಗಳಿಗೆ ಮಾತ್ರವೇ ತಪ್ಪಿತಸ್ಥರನ್ನೂ ಕ್ಷಮಿಸುವ ಸಾಮರ್ಥ್ಯವಿರುತ್ತದೆ ಹಾಗೂ ಅಂತಹವರನ್ನೇ ಪತಿತಪಾವನ ಎಂದು ಕರೆಯುತ್ತಾರೆ.
ಎಲೈ ರಾಮನೇ, ನೀನು ಅಂತಹ ವಿಶೇಷವಾದ ವ್ಯಕ್ತಿಯು. ಹೀಗಾಗಿ, ನೀನು ನಿನ್ನ ಪಾದದಿ೦ದ ಆ ಶಿಲೆಯನ್ನು ಸ್ಪರ್ಶಿಸಿದಲ್ಲಿ, ನೀನು ಅಹಲ್ಯೆಯನ್ನು ಶಾಪದಿಂದ ಮುಕ್ತಗೊಳಿಸಿದಂತೆ ಅಗುವುದು” ಎಂದು ಹೇಳುತ್ತಾರೆ. ಶ್ರೀ ರಾಮ ತನ್ನ ಪಾದವನ್ನು ಆ ಶಿಲೆಯ ಮೇಲಿರಿಸುತ್ತಾನೆ. ಆಗ, ಶಿಲೆಯು ಅಹಲ್ಯೆಯಾಗಿ ಪರಿವರ್ತಿತವಾಯಿತು.
ಅರ್ಥಾತ್, ಶ್ರೀರಾಮನ ಪಾದಸ್ಪರ್ಶದಿಂದ ಅಹಲ್ಯೆಯು ಶಾಪವಿಮೋಚನೆಗೊಳ್ಳುತ್ತಾಳೆ. ಶಾಪವಿಮೋಚನೆಗೊಂಡ ಅಹಲ್ಯಾದೇವಿ ಶ್ರೀ ರಾಮಚಂದ್ರನ ಕಣ್ಣುಗಳಲ್ಲಿ ತನ್ನ ದೃಷ್ಟಿಯನ್ನಿರಿಸಿ ಹೀಗೆ ಹೇಳುತ್ತಾಳೆ, “ನನ್ನ ಪತಿಯು ನನ್ನನ್ನು ಶಪಿಸಿದರೆಂದು ನಾನು ಭಾವಿಸಿದ್ದೆ.
ಆದರೆ ಆ ಶಾಪವು ಇಂದಿಗೆ ಮಹಾಪ್ರಸಾದವಾಗಿ ಪರಿವರ್ತಿತವಾಯಿತು. ನಾನು ವರ್ಷಗಟ್ಟಲೆಯಿಂದ ಶಿಲೆಯ ರೂಪದಲ್ಲಿ ಕೈಗೊಂಡಿಡದ್ದ ರಾಮನಾಮ ಜಪದ ಫಲದಿಂದಾಗಿ ಇಂದು ನನಗೆ ಭಗವಂತನ ದರ್ಶನಭಾಗ್ಯವು ಪ್ರಾಪ್ತಿಯಾಯಿತು. ನಿಜಕ್ಕೂ ನನ್ನ ಪಾಲಿಗೆ ಇದು ವರ. ನನ್ನ ಪತಿಯು ನನಗಾಗಿ ನೀಡಬಹುದಾಗಿದ್ದ ಪರಮ ಸೌಭಾಗ್ಯವೆಂದರೆ ದೇವರ ಮುಖದರ್ಶನವನ್ನು ಮಾಡುವ ಮಹಾಭಾಗ್ಯವನ್ನು ನನಗೆ ಒದಗಿಸಿ ಕೊಟ್ಟದ್ದು., ಅದು ಇಂದು ನೆರವೇರಿತು. ಒ೦ದು ವೇಳೆ ನನ್ನ ಪತಿದೇವರು ನನ್ನನ್ನು ಶಪಿಸದೇ ಹೋಗಿದ್ದಲ್ಲಿ, ನನಗೆ ಇಂತಹ ಅವಕಾಶ ಎಂದಿಗೂ ಒದಗಿಬರುತ್ತಿರಲಿಲ್ಲ” ಎಂದು ಹೇಳುತ್ತಾ ಭಗವಾನ್ ಶ್ರೀ ರಾಮನ ಪಾದಕಮಲಗಳಿಗೆ ಎರಗುತ್ತಾಳೆ.

ರಾಮಾಯಣವು ಅಹಲ್ಯಾಳ ಮಗ ಶತಾನಂದ ಕುಟುಂಬ ಅರ್ಚಕ ಮತ್ತು ಮಿಥಿಲಾ ರಾಜ ಜನಕನ ಉಪದೇಶಕನನ್ನು ಉಲ್ಲೇಖಿಸುತ್ತದೆ. ಈ ಆವೃತ್ತಿಯಲ್ಲಿ, ಶತಾನಂದ ವಿಶ್ವಮಿತ್ರನನ್ನು ತನ್ನ “ಹೆಸರಾಂತ” ತಾಯಿಯ ಯೋಗಕ್ಷೇಮದ ಬಗ್ಗೆ ಆತಂಕದಿಂದ ಕೇಳುತ್ತಾನೆ. ಇದಕ್ಕೆ ತದ್ವಿರುದ್ಧವಾಗಿ, ಮಹಾಭಾರತವು ಇಬ್ಬರು ಗಂಡುಮಕ್ಕಳನ್ನು ಉಲ್ಲೇಖಿಸುತ್ತದೆ.
ಕೈಯಲ್ಲಿ ಬಾಣಗಳೊಂದಿಗೆ ಜನಿಸಿದ ಶರದ್ವಾನ್ ಮತ್ತು ಚಿರಕರಿ, ಅವರ ಕಾರ್ಯಗಳ ಬಗ್ಗೆ ವ್ಯಾಪಕವಾದ ಸಂಸಾರವು ಮುಂದೂಡುವಿಕೆಗೆ ಕಾರಣವಾಗುತ್ತದೆ. ಇವುಗಳಲ್ಲದೆ, ಹೆಸರಿಸದ ಮಗಳನ್ನು ಸಹ ನಿರೂಪಣೆಯಲ್ಲಿ ಉಲ್ಲೇಖಿಸಲಾಗಿದೆ. ವಾಮನ ಪುರಾಣದಲ್ಲಿ ಜಯ, ಜಯಂತಿ ಮತ್ತು ಅಪರಾಜಿ ಎಂಬ ಮೂವರು ಹೆಣ್ಣು ಮಕ್ಕಳಿದ್ದಾರೆ.


ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಕಿತ್ತೂರು ರಾಣಿ ಚೆನ್ನಮ್ಮ

ವೀರ ನಾರಿ ಕಿತ್ತೂರು ರಾಣಿ ಚೆನ್ನಮ್ಮ

ತಲೆ ಹೊಟ್ಟಿನ ಸಮಸ್ಯೆ

ತಲೆ ಹೊಟ್ಟಿನ ಸಮಸ್ಯೆಗೆ ಇಲ್ಲಿದೆ ಉಪಾಯಗಳು